ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ…


Team Udayavani, Mar 23, 2021, 4:42 PM IST

ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ…

ಹರಪನಹಳ್ಳಿಯ ನಾಗರಿಕರೇ, ಸುತ್ತಮುತ್ತಲಿನ ಹಳ್ಳಿಯ ರೈತ ಬಾಂಧವರೇ,ಇದು ನಿಮ್ಮ ನೆಚ್ಚಿನ ಬಸವರಾಜ ಚಿತ್ರಮಂದಿರದ ಪ್ರಚಾರ. ಇಂದಿನಿಂದ ರಾಜ್‌ಕುಮಾರ್‌, ಲೀಲಾವತಿ, ಉದಯ ಕುಮಾರ್‌ ನಟಿಸಿರುವ ವೀರ ಕೇಸರಿಸಿನಿಮಾ. ನೋಡಲು ಮರೆಯದಿರಿ, ಮರೆತು ಮರುಗದಿರಿ..

ಹೀಗೆ ಹೇಳುತ್ತಾ ಒಂಟೆತ್ತಿನ ಗಾಡಿಯಲ್ಲಿಮೈಕ್‌ ಹಿಡಿದು ಖಾಸಿಂ ಅಲಿ ಪ್ರಚಾರಕ್ಕೆಬಂದರೆ ನಮಗೇನೋ ಪುಳಕ. ಅವನುಪುರ್ರೆಂದು ತೂರುವ ಹ್ಯಾಂಡ್‌ಬಿಲ್‌ಸಂಗ್ರಹಿಸುವ ತವಕ, ಯಾವಾಗ ವೀರಕೇಸರಿ ನೋಡುವೆವೆಂಬ ತಹತಹ ಆರಂಭ.

ನಾನಾಗ 3ನೇ ತರಗತಿಯಲ್ಲಿದ್ದೆ. ಬಸವರಾಜ ಟಾಕೀಸಿನ ಹೆಗ್ಗಳಿಕೆಯೆಂದರೆ ಇತ್ತೀಚಿನವರೆಗೂ ಶೇ.95ರಷ್ಟು ಕನ್ನಡಚಿತ್ರಗಳನ್ನೇ ಪ್ರದರ್ಶಿಸಿದ್ದು! ಕಾರಣಮಾಲೀಕ ವರ್ಗದವರ ಕನ್ನಡ ಪ್ರೀತಿ. ಆದಿನಗಳಲ್ಲಿ ನಾವು ಸಿನೆಮಾ ನೋಡುತ್ತಿದ್ದುದಾದರೂ ಹೇಗೆ ಗೊತ್ತೆ? ನಾಲ್ಕಾಣೆ, ಎಂಟಾಣೆ, ಹನ್ನೆರಡಾಣೆಯ ಕ್ಲಾಸ್‌ಗಳಲ್ಲಿ ಮನೆಯವರೆಲ್ಲ ವಿರಾಜಮಾನರಾಗುತ್ತಿದ್ದೆವು. ನಮೋ ವೆಂಕಟೇಶ…ಘಂಟ ಸಾಲರ ಗೀತೆ ಮೊಳಗಿದೊಡನೆ ಸಿನೆಮಾ ಆರಂಭದ ಸೂಚನೆ.

ಅಬ್ಬಾ! ರಾಜ್‌ ಕುಮಾರ್‌ ಸ್ವಾಭಿಮಾನದ ನಲ್ಲೇ ಎಂದು ಹಾಡುತ್ತಾ ಲೀಲಾವತಿಯನ್ನು ಕುದುರೆಯ ಮೇಲೆ ಕೂರಿಸಿಕೊಂಡು ಹೋಗುವುದು, ಉದಯ್‌ಕುಮಾರ್‌ ಅವರೊಂದಿಗೆ ಕತ್ತಿವರಸೆ… ಇದೆಲ್ಲವೂ ನಮ್ಮನ್ನು ಬೇರೆ ಲೋಕಕ್ಕೆ ಕೊಂಡೊಯ್ಯುತ್ತಿತ್ತು. ಮನೆಗೆಬಂದು ಮಲಗಿದ ಮೇಲೂ ಅದೇ ದೃಶ್ಯಗಳ ಯಾದೋಂಕಿ ಬಾರಾತ್‌ ಕಣ್ಣೆದುರು.ಅವರೆಲ್ಲ ರಾತ್ರಿ ಪರದೆಯ ಹಿಂದೆ ಇರುತ್ತಾರಾ? ಎಂದು ಬೆಳಿಗ್ಗೆ ನಾವು ನಾಲ್ಕಾರುಜನ ಪರದೆಯ ಹಿಂದಿನ ಮೋಟುಗೋಡೆನೋಡಿ ಬಂದಿದ್ದೂ ಉಂಟು!ಕಸ್ತೂರಿ ನಿವಾಸ, ಭಕ್ತ ಸಿರಿಯಾಳ, ಜನ್ಮರಹಸ್ಯ, ಪ್ರತಿಧ್ವನಿ, ಮಾವನ ಮಗಳು,ಅದೆಷ್ಟೋ ಚಿತ್ರಗಳೊಂದಿಗೆ ಬಸವರಾಜ ಚಿತ್ರ ಮಂದಿರದ ಕುರ್ಚಿಗಳು ತಳಕು ಹಾಕಿಕೊಂಡಿವೆ. ಕೋವಿಡ್‌ ನಂತರದಲಾಕ್‌ಡೌನ್‌ಗೆ ನಲುಗಿ ಬಸವರಾಜಚಿತ್ರಮಂದಿರ ನೆಲಸಮವಾದರೂ ಆಚಿತ್ರಮಂದಿರದೊಂದಿಗಿನ ಸವಿ ನೆನಪುಗಳು ಇಂದಿಗೂ ನಮ್ಮೊಂದಿಗಿದೆ.

 

– ಕೆ. ಶ್ರೀನಿವಾಸ್‌ ರಾವ್‌

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.