ನನ್ನೆ ದೆಯಲಿ, ನಿನದೇ ಕುಹೂ ಕುಹೂ


Team Udayavani, Sep 5, 2017, 10:27 AM IST

05-JOSH-5.jpg

ನಿನ್ನನ್ನು ಸ್ನೇಹಿತನೆಂದೇ ತಿಳಿದಿದ್ದೆ. ಅದೆಷ್ಟೋ ಮುಗಿಯದಷ್ಟು ಮಾತುಗಳನ್ನು ಆಡಿದ್ದೆ. ಗಂಟೆಗಟ್ಟಲೆ ಜಗಳ ಮಾಡಿದ್ದೆ. ನಕ್ಕು ಹುಣ್ಣಾಗುವಷ್ಟು ತುಂಟಾಟ ಮಾಡಿದ್ದೆ. ಅಷ್ಟೇ ಯಾಕೆ? ಚಿಕ್ಕಂದಿನಿಂದಲೂ ನೀನೇ ನನ್ನ ಜೀವದ ಗೆಳೆಯ ಎಂದೇ ತಿಳಿದಿದ್ದೆ. ಆದರೆ, ಇಂದು ನೀನು ಎದುರಿಗೆ ಬಂದರೆ ಸಾಕು, ಮನಸ್ಸು ನವಿಲಾಗುತ್ತದೆ. ಹೃದಯ ಮಿಡಿಯುತ್ತದೆ. ಮನಸೆಂಬೋ ಮನಸು ಕುಣಿದು ಕುಪ್ಪಳಿಸುತ್ತದೆ. ನಮ್ಮಿಬ್ಬರ ಸ್ನೇಹ ಅದಾವ ಕ್ಷಣದಲ್ಲಿ ಪ್ರೀತಿಯಾಗಿ ಬದಲಾಯಿತೋ, ನನಗೆ ತಿಳಿಯದು.

ಏಕಾಂತದಲ್ಲಿ ಕುಳಿತಾಗ ನಿನ್ನದೇ ನೆನಪು. ನಿನ್ನೊಡನೆ ಕಳೆದ ಸುಮಧುರ ಕ್ಷಣಗಳೇ ಕಣ್ಣ ಮುಂದೆ ಕುಣಿಯುತ್ತವೆ. ನಿನ್ನ ಆ ಮುದ್ದಾದ ಮುಖ, ಮಿಂಚಿನಂಥ ಕಣ್ಣುಗಳು, ಸಿಹಿ ತುಂಬಿದ ಮಾತುಗಳು, ಅಬ್ಟಾ… ನೆನೆದರೆ ತುಟಿಯಂಚಲಿ ನಗು. ನಿನ್ನ ಕಂಡಾಗ ಈ ಕಣ್ಣಿಗೆ ಅದೇನೋ ಸಂತೋಷ.
ಹೃದಯದಲ್ಲಿ ಎಷ್ಟೋ ಕನಸುಗಳು ಅರಳುತ್ತವೆ. ನಿನ್ನಿಂದ ನನ್ನಲ್ಲಿ ಅದೆಷ್ಟು ಬದಲಾವಣೆಗಳಾಗಿದೆಯೆಂದು ನೆನೆಸಿಕೊಂಡರೆ ಅಚ್ಚರಿಯಾಗುತ್ತದೆ.

ನಿನ್ನ ಆ ಮುಗ್ಧ ಸ್ವಭಾವ, ಪೆದ್ದು ಮಾತುಗಳು, ತುಂಟಾಟ ನನ್ನ ಹೃದಯವನ್ನು ಬಡಿದೆಬ್ಬಿಸಿವೆ. ನೀನು ನನ್ನೆದೆಯಲ್ಲಿ ಒಂದು ಜಾಗ ಮಾಡಿಕೊಂಡು ಕುಳಿತು ಬಿಟ್ಟಿದ್ದೀಯ. ಆ ಜಾಗದಿಂದ ಇನ್ನೆಂದೂ ನಿನ್ನನ್ನು ಹೊರಹಾಕಲು ಸಾಧ್ಯವಿಲ್ಲ. ನೀನಿಲ್ಲದ ಜೀವನವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ನಮ್ಮಿಬ್ಬರ ಪ್ರೀತಿ ಚಿಪ್ಪಿನೊಳಗಿನ ಮುತ್ತಿನಂತೆ. ಅದೆಷ್ಟು ಬಾರಿ ನಿನ್ನ ನೋಡಿದರೂ ಮತ್ತೆ ಮತ್ತೆ ನೋಡುವಾಸೆ, ನಿನ್ನ ಮಾತುಗಳನ್ನೇ ಕೇಳುತ್ತಿರುವಾಸೆ. ಪ್ರೀತೀಲಿ ಬಿದ್ದವರಿಗೆಲ್ಲಾ ಹೀಗೇ ಆಗುತ್ತಾ? ಕಾಲೇಜಿನಲ್ಲಿ ಗೆಳತಿಯರೊಡನೆ ಬರೀ ನಿನ್ನ ಬಗ್ಗೆಯೇ ಮಾತಾಡ್ತೀನಿ.

ನೆನಪಿದೆಯಾ ನಿನಗೆ? ಅಂದು ನಾನು ನಿನ್ನೊಡನೆ ಕಡಲ ತೀರದಲ್ಲಿ ಕೈ ಹಿಡಿದು ನಡೆದದ್ದು, ನೀನು ಧರಿಸಿದ್ದ ಆ ಸ್ಟೈಲಿಶ್‌ ಪ್ಯಾಂಟ್‌ ಬಗ್ಗೆ ಕಮೆಂಟ್‌ ಮಾಡಿದ್ದು, ನಿನ್ನ ಮೊಬೈಲ್‌ನಲ್ಲಿ ಇದ್ದ ಎಸ್ಸೆಮ್ಮೆಸ್‌ಗಳನ್ನು ಕದ್ದು ಓದಿದ್ದು, ಒಂದೇ ಐಸ್‌ಕ್ರೀಮ್‌ ಅನ್ನು ಇಬ್ಬರೂ ತಿಂದದ್ದು, ಸಿನಿಮಾ ನೋಡಿದ್ದು,  ಜೊತೆಗೆ ಸೆಲ್ಫಿ ತೆಗೆದುಕೊಂಡದ್ದು, ಮುಗಿಯದಷ್ಟು ಮಾತುಗಳನ್ನಾಡಿದ್ದು… 

ಉಫ್, ನಿನ್ನೊಂದಿಗೆ ಎಷ್ಟೊಂದು ಜಾಲಿಜಾಲಿಯಾಗಿ ನಡ್ಕೊಂಡಿದೀನಿ ಎಂಬುದನ್ನು ಹೇಳುತ್ತಾ ಹೋದರೆ ನನಗೇ ನಾಚಿಕೆ, ಖುಷಿ, ಒಂಥರಾ ಥ್ರಿಲ್‌ ಎಲ್ಲಾ ಒಟ್ಟೊಟ್ಟಿಗೇ ಆಗಿಬಿಡುತ್ತೆ… ಇಷ್ಟಾದ ಮೇಲೂ ಮಿಕ್ಕಿದ್ದನ್ನು ವಿವರಿಸಿ ಹೇಳಬೇಕಿಲ್ಲ ತಾನೆ? ಒಂದೇ ಹೃದಯ, ಎರಡು ದೇಹದಂತಿರುವ ನಮ್ಮಿಬ್ಬರ ಪ್ರೀತಿ ನೂರು ಕಾಲ ಚಿರವಾಗಿರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುವೆ…

ಗೀತಾ ಕೆ. ಬೈಲಕೊಪ್ಪ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.