ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ….


Team Udayavani, Nov 20, 2018, 6:10 AM IST

lover.jpg

ಪ್ರೀತಿಯ ಹುಡುಗಿ,
ಎದೆಯ ಗೂಡ ಕಡಲಲ್ಲಿ, ಮೊಹಬತ್‌ನ ಮೇಘ ಹೊತ್ತು ತಂದ ತಂಗಾಳಿ ತೂಕದ ಹುಡುಗಿಯೇ.. ಭೂಮಿಯ ಹಾಯಿ ದೋಣಿಯಲ್ಲಿ, ಚಂದ್ರಮನ ದೀಪ ಹಚ್ಚಿ ಕುಳಿತು ಏಕಾಂತವನ್ನು ಆಸ್ವಾದಿಸುತಿದ್ದ ಪರಮ ಸುಖೀ ನಾನು.. ಅದ್ಯಾವ ಘಳಿಗೆಯಲಿ ನನ್ನದೆಯ ಹೊಸ್ತಿಲು ತುಳಿದು ಮನಸೊಳಗೆ ಬಂದುಬಿಟ್ಟೆ ನೀನು?

ನನ್ನ ಕಂಗಳಲ್ಲಿ ಪ್ರೀತಿಯ ಲಾಟೀನು ಹೊತ್ತಿಸಿದ ರೂಪಸಿಯೆ, ನಿನ್ನ ಕಣ್ಣೋಟದ ಆಲಿಂಗನಕೆ ನನ್ನ ಹೃದಯದಲ್ಲಿ ಸಾವಿರ ತಂತಿಗಳು ಸ್ವರ ಮೀಟಿವೆ. ನಿನ್ನ ಸ್ಪರ್ಶಿಸುವ ಸಮ್ಮತಿಗೆ ಹೃದಯದ ಕೋಣೆಯಲ್ಲಿ ಬೆಚ್ಚಗಿನ ಭಾವನೆಗಳ ಉಗಮವಾಗುತ್ತಿದೆ. ನಿನ್ನ ನಿದಿರೆಗೆ ನನ್ನ ಮಡಿಲ ತೊಟ್ಟಲಲಿ ಜೋಗುಳ ಗೀತೆಯ ಹಾಡಲು ಹೃದಯ ತವಕಿಸುತ್ತಿದೆ.

ನಿನ್ನ ಮಾತಿನ ಕಡಗೋಲಿಗೆ ನನ್ನ ಎದೆಯಲ್ಲಿ ಒಲವ ಮಂಥನ, ಉದಯಿಸಿದ ಪ್ರೀತಿಗೆ ಸಾವಿರ ಬಣ್ಣ. ಇಳಿ ಸಂಜೆಯ ಮಬ್ಬಿನಲೂ ನಿನ್ನ ಕೆನ್ನೆಯ ಮೇಲೆ ನಾಚಿಕೆಯ ರಂಗು. ಹಿಡಿದಿಟ್ಟ ಬಿಸಿಯ ಭಾವನೆಗಳಿಗೆ ಈ ಮನವೀಗ ಒಲವ ಕುಲುಮೆ. ನೀ ಎದೆಗೆ ಒರಗಿದಾಗ ಸೋಕಿದ ಕೂದಲಿನ ಘಮ, ಕಣ್ಣುಚ್ಚದೆ ನಿನ್ನೊಂದಿಗೆ ಕಳೆದ ರಾತ್ರಿಗೆ ಈಗ ಪ್ರತಿ ರಾತ್ರಿಗಳ ಕಂದಾಯ. ಇಬ್ಬರೇ ಇದ್ದ ಏಕಾಂತದಲೂ ಸಂಯಮ ತಪ್ಪದ ನನ್ನ ಪ್ರೀತಿಗೆ ಬೆಲೆ ಕಟ್ಟಲಾಗದ ಗರ್ವ..

ಸಮಯ ಸರಿದು ಬಾನಲ್ಲೇ ಕರಗಿ ಹೋದ ಚಂದ್ರಮನ ಮೇಲಾಣೆ. ನೀನು ನನ್ನ ಹೃದಯ ಹೊಕ್ಕ ಸುಂದರ ಸ್ಪಪ್ನ. ಹಾಲಲ್ಲಿ ಅದ್ದಿ ತೆಗೆದ ಬೊಂಬೆಗೆ ಸೂರ್ಯನ ಹೊಂಬಿಸಿಲ ಕೆಂಪ ಸೋಕಿಸಿ, ಶ್ವೇತವರ್ಣದ ಹತ್ತಿಯ ಸುತ್ತಿ ಚರ್ಮದ ಹೊದಿಕೆ ಹೊದಿಸಿದಂತಿದೆ ನಿನ್ನ ಮೈ ಬಣ್ಣ. 

ನಾ ಹರವಿ ಕೂತ ಎಲ್ಲ ಕನಸುಗಳಲಿ ನಿನ್ನ ಪಾಲುದಾರಿಕೆ ಇದೆ. ಒಲವ ಅಕ್ಷರ ತೀಡಿದ ಬೆರಳ ಇನ್ನೊಮ್ಮೆ ಸೋಕುವ ಬಯಕೆ. ಎದೆಯ ಕೋಟೆಯಲಿ ನಿನ್ಹೆಸರ ಸ್ಮಾರಕ. ಕಪ್ಪು ಬಿಳುಪು ಕಂಗಳಲ್ಲಿ ನಿನ್ನ ನೆನಪ ಚಿತ್ತಾರ. ಹೃದಯದ ಬೀದಿಗಳಲ್ಲಿ ಪ್ರೇಮೋತ್ಸವದ ತಯಾರಿ. ಏಕಾಂತಕ್ಕೂ ನಿನ್ನ ಹೆಸರ ಧ್ಯಾನ.

ಸಾಕು, ಈ ದೂರ ಸಾಕಿನ್ನು. ನನ್ನ ಪ್ರೇಮ ದೀವಟಿಗೆಗೆ ನೀ ಒಲವ ತೈಲವಾಗು. ಎದೆಯ ಗೂಡಲ್ಲಿ ಪ್ರೇಮ ಜ್ಯೋತಿಯಾಗು. ನನ್ನವಳಾಗು. ನೆರಳಾಗಿ ಜೊತೆಗಿರುವೆ ನಾ ಎಂದೆಂದಿಗೂ…

– ಗಣೇಶ್‌, ಶಿವಮೊಗ್ಗ

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.