ನೀನಿಲ್ಲ ಅಂದರೂ ಪಯಣ ನಿಲ್ಲದು…


Team Udayavani, Sep 24, 2019, 4:42 AM IST

f-12

ಇವತ್ತಿನ ಈ ನಿರ್ಧಾರದ ಹಿಂದೆ ಪ್ರೀತಿಯ ಸೆಲೆಯಾಗಿ ಯಾರು ಬಂದರೂ ಅಳಿಸಲಾಗದೇ ಇರುವ ನೆನಪಿನ ಸರಮಾಯ ಗುಚ್ಛ ಇದೆ. ಒಂದು ಮಾತು ಹೇಳುತ್ತೇನೆ ಕೇಳು, ನೀನಿಲ್ಲ ಎಂದ ಕೂಡಲೇ ಈ ಪಯಣದ ದಾರಿ ಬದಲಾಗಬಹುದು. ಆದರೆ, ಪಯಣ ನಿಲ್ಲುವುದಿಲ್ಲ. ಯಾರ ಹಂಗಿಲ್ಲದೇ ನಿರಂತರವಾಗಿಯೇ ಸಾಗುತ್ತಿರುತ್ತದೆ.

ಬದುಕಿನ ಅಂಗಳದಲ್ಲಿ ಸುಂದರ ಕನಸುಗಳನ್ನು ಹೊತ್ತು ಕಾದದ್ದು ಎಷ್ಟು ಸತ್ಯ. ಹಾಗೆಯೇ, ಈಗ ನಿನ್ನ ನೆನಪೆಂಬ ಕನಸಿಗೆ ತಿಲಾಂಜಲಿ ಇಡುತ್ತಿರುವುದೂ ಸುಳ್ಳಲ್ಲ. ನೆನಪಿರಲಿ, ನಾನು ಒಂಟಿತನದಲ್ಲಿ ಪರಮ ಸುಖೀ. ಇಲ್ಲಿ ನೀನೇ ನನ್ನ ಬದುಕು ಎಂಬ ಲಹರಿ ಇಲ್ಲ. ನಿನ್ನ ನೆನಪೆಂಬ ಸುಳಿ, ನನ್ನ ಬಳಿ ಇನ್ನೆಂದಿಗೂ ಸುಳಿಯುವುದೇ ಇಲ್ಲ.

ಕನಸಿನ ಮೂಟೆ ಹೊತ್ತು ದೂರ ಸಾಗುತ್ತಿರುವೆನು. ಅಲ್ಲೊಂದು ನನ್ನದೇ ಸುಂದರ ಪ್ರಪಂಚ ಸೃಷ್ಟಿಸಿ ಕೊಳ್ಳುತ್ತೇನೆ. ಹೌದು, ಯಾಕಿಷ್ಟು ಕಠೊರವಾಗಿ ಮಾತನಾಡುತ್ತಿದ್ದಾಳೆ ಅನಿಸಿಬಹುದು. ನಿನ್ನ ಮನದೊಡತಿ ನಾ ಅಲ್ಲ. ನಿನ್ನ ಹೃದಯದಲ್ಲಿ ಪ್ರತಿ ದಿನ ಆರಳುತ್ತಿರುವ ನಿತ್ಯ ಪುಷ್ಪವೂ ನಾನಲ್ಲ. ಈವರೆಗಿನ ಎಲ್ಲ ಕನಸುಗಳಿಗೆ ಅಂತ್ಯ ಹಾಡಿ, ನನ್ನ ಕನಸಿನ ಅರಮನೆಗೆ ಆಸೆ ಆಕಾಂಕ್ಷೆ ಹೊತ್ತು ಹೊರಡುತ್ತಿದ್ದೇನೆ.

ನಿನ್ನಷ್ಟು ಲೆಕ್ಕಾಚಾರದ ಬದುಕು ನನ್ನದಲ್ಲ. ಏನೇ ಎದುರಾದರೂ ಅದನ್ನು ನಗು ನಗುತ್ತಲೇ ಸ್ವಾಗತಿಸುವ ಸ್ವಭಾವ ನನ್ನದು. ನಿನ್ನಿಂದ ಕಲಿತ ಅನುಭವದ ಪಾಠ ಮರೆಯುವಂತಿಲ್ಲ. ಸಮಾಜದ ಚುಚ್ಚು ಮಾತಿಗಿಂತ, ಆತ್ಮ ಸಾಕ್ಷಿಯೆಂಬುದಕ್ಕೆ ಬೆಲೆ ಕೊಡುವವಳು ನಾನು.

ಒಂದು ಬಾರಿ ಯೋಚಿಸಿ ನೊಡು, ನನ್ನ ತಾಳ್ಮೆಯನ್ನು ಎಷ್ಟು ಬಾರಿ ಪರೀಕ್ಷೆಗೆ ಒಡ್ಡಿದ್ದೀಯಾ? ಇವತ್ತಿನ ಈ ನಿರ್ಧಾರದ ಹಿಂದೆ ಪ್ರೀತಿಯ ಸೆಲೆಯಾಗಿ ಯಾರು ಬಂದರೂ ಅಳಿಸಲಾಗದೇ ಇರುವ ನೆನಪಿನ ಸರಮಾಲೆ ಗುಚ# ಇದೆ.

ಒಂದು ಮಾತು ಹೇಳುತ್ತೇನೆ ಕೇಳು, ನೀನಿಲ್ಲ ಎಂದ ಕೂಡಲೇ ಈ ಪಯಣದ ದಾರಿ ಬದಲಾಗಬಹುದು. ಆದರೆ, ಪಯಣ ನಿಲ್ಲುವುದಿಲ್ಲ. ಯಾರ ಹಂಗಿಲ್ಲದೇ ನಿರಂತರವಾಗಿ ಸಾಗುತ್ತಿರುತ್ತದೆ. ನೀ ಕಲಿಸಿದ ಪಾಠ, ಜೀವಂತ ಪರ್ಯಂತ ನೆನಪಿನ ಜೋಳಿಗೆಯಲ್ಲಿರುತ್ತದೆ.

ಬದುಕಿನ ಎಲ್ಲಾ ಪ್ರಶ್ನೆಗೆ ಬಹುಬೇಗನೇ ಉತ್ತರ ದೊರಕಿದೆ. ಆದರೂ, ನಿನ್ನನ್ನು ಎಂದಿಗೂ ದೂಷಿಸುವುದಿಲ್ಲ. ನೆನಪುಗಳನ್ನು ಜೋಳಿಗೆಯಲ್ಲಿ ಎತ್ತಿಟ್ಟುಕೊಂಡು ನಗುತ್ತಾ ಆಸೆ ಆಕಾಂಕ್ಷೆಗಳನ್ನು ಈಡೇರಿಸಲು ನನ್ನ ಅರಮನೆಯೆಡೆಗೆ ಸಾಗುವೆನು. ಕೊನೆಯದಾಗಿ, ಜೀವನದಲ್ಲಿ ಬಲುದೊಡ್ಡ ಪಾಠ ಕಲಿಸಿದ ನಿನಗೆ ಧನ್ಯವಾದ.

ಸಾಯಿನಂದಾ ಚಿಟ್ಪಾಡಿ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.