ಖಂಡಿಸಲಾರೆ, ಋಣವಿರದ ಅನುರಾಗವೇ ಹಾಗೇ…


Team Udayavani, Jul 16, 2019, 5:46 AM IST

kandisalare

ಕಳೆದುಹೋದ ಭರ್ತಿಹಣವಿರುವ ಪರ್ಸ್‌ ಒಮ್ಮೆ ಸಿಕ್ಕರು ಅಷ್ಟು ಖುಷಿ ಆಗೋದಿಲ್ಲ. ಅದೇ ಹಾರಿಹೋದ ಪ್ರೀತಿ ಎಂಬ ಪಾರಿವಾಳ ಮರಳಿ ಗೂಡಿಗೆ ಬಂದಾಗ ಆಗುವ ಖುಷಿಗೆ ಪಾರವೇ ಇರುವುದಿಲ್ಲ ಬಿಡಿ. ಅಷ್ಟಕ್ಕೂ ಈ ನನ್ನ ಪಾರಿವಾಳದ ಮನಸ್ಸೇ ಚಿತ್ತ ಚಂಚಲ, ನಗು ಕೋಮಲ, ಒಂದೊಮ್ಮೆ ಕೆಂದುಟಿಯ ಪಕ್ಕದಲ್ಲಿ ಬೊಟ್ಟಿಟ್ಟು, ಯಾರ ದೃಷ್ಟಿ ತಾಕದಂತೆ ಗುಳಿಗೆನ್ನೆಯ ಮೇಲೆ ಕೈ ಬೆರಳ ಒರಳಾಡಿಸಿ, ಕಪ್ಪನೆಯ ಚಂದ್ರನ ಚಿತ್ರ ಬರೆದುಬಿಡಬೇಕು ಎಂದೆನೆಸಿದರು ಸುಮ್ಮನಿದ್ದೆ. ಮೊದಲೇ ಜಿಂಕೆ ಮರಿ ಅವಳು, ಗಾಬರಿಯಾಗಿ ಪ್ರೀತಿಯನ್ನು ಬುಡಮೇಲು ಮಾಡಿದರು ಅಚ್ಚರಿ ಇಲ್ಲ. ಹೌದು, ಹಾರಿಹೋದ ಪರಿವಾಳ ಗೂಡಿನ ಸನಿಹವಾದರು ಸುಳಿದಿದ್ದು ಹೇಗೆ ಎಂದು ಮನಸ್ಸು ಕನಸಿನ ಜೋಕಾಲಿಯನ್ನು ಜೀಕಿತು.

ಅಂದು ಅವಳ ಮಾತು ಕಠೊರವಾಗಿತ್ತು. ಆಕರ್ಷಣೆಗೆ ಹುಟ್ಟಿದ ಈ ನಿನ್ನ ಪ್ರೀತಿ ಘರ್ಷಣೆಯಲ್ಲೇ ಕಳೆದೊಯ್ತು ಎಂದಾಗ ಒಂದೊಮ್ಮೆ ಉಮ್ಮಳಿಸಿ ಕಣ್ಣಾಲೆಗಳು ಒ¨ªೆಯಾಗಿದ್ದು ಸುಳಲ್ಲ. ಮಾರನೆ ದಿನ ಅಮ್ಮ ಮಾಡಿದ ತಿಂಡಿ ತಿಂದು ನಲಿಯಬೇಕಿತ್ತು. ಅಷ್ಟರಲ್ಲಿ ಅದೊಂದು ಕರೆಯೊಂದು ಕರೆಯಿತು ನೋಡಿ. ಆಗ ಶುರುವಾದ್ದದ್ದೇ ಅಮ್ಮನ ಎದುರಿನ ನಾಟಕ.
ಕ್ಷೀಣ ಧ್ವನಿಯಲ್ಲಿ..
“ಹ‌ಲೋ ಯಾರು?’ ಅಂದಳು.
“ನಾನು ! ಓ ಹೇಳಿ ಏನಾಗಬೇಕಿತ್ತು?’ ಎಂದೆ.
“ಸಂಜೆ ಫ್ರೀ ಇದ್ರೆ ಸಿಗ್ತಿàಯ.’ ಕೇಳಿದಳು.
“ಆಯ್ತು’ ಅಂದೆ.

ಏನೇ ಸುಂದ್ರಿ ಕೊಬ್ಟಾ! ಎಂದೆನ್ನ ಬೇಕೆನಿಸಿದರು ಸುಮ್ಮನಾದೆ. ಆನಂತರ ಇಬ್ಬರು ವಾಟ್ಸ್ ಆಪ್ ಗೋಡೆಯ ಮೇಲೆ ಒಂದಿಷ್ಟು ತುಂಟತನವನ್ನು ಹಂಚಿಕೊಂಡ ಮೇಲೇ “ಲೇ ಸುಂದ್ರಿ ನೀನ್‌ ಅಂದ್ರೆ ಇಷ್ಟ ಕಣೆ’ ಅಂದೆ, ಆ ಕಡೆಯಿಂದ “ಲೋ ಸುಬ್ಬ ನಂಗೂ ಅಷ್ಟೆ ಕಣೋ..!’ ಅಂತ ಉತ್ತರ ಬಂದಾಗ ಮರುಭೂಮಿಯಲ್ಲಿ ಪ್ರೀತಿ ಚಿಲುಮೆ ಉಕ್ಕಿತು. ಎಲ್ಲವೂ ಸರಿ ಇದೆ ಎನ್ನುವಾಗಲೇ ಕಿತ್ತಾಟದ ಸಣ್ಣ ರಂಧ್ರ ಪ್ರೀತಿಯ ಹೃದಯದ ಗೋಡೆಯನ್ನೇ ಬಗೆದಾಗಿತ್ತು.

ಮತ್ತೆ ಸ್ಮಶಾನ ಮೌನ. ಪ್ರೇಮ ವೈರಾಗ್ಯದ ಕೂಗು ದಟ್ಟವಾಗುತ್ತಿದೆ, ಬಸವಳಿದ ದೇಹ ಕಂಪಿಸುತ್ತಿದೆ, ಯಾವುದು ಹಿತವಾಗಿಲ್ಲ, ಊಟ ಸಪ್ಪೆ ಆಯ್ತು, ಅಮ್ಮನ ಮೇಲೆ ಕೋಪ ವಿಪರೀತವಾಯಿತು, ಕಣ್ಣಂಚಿನ ಧೂಳಿನ ಕಣ ಮತ್ತೆ ಗುಡ್ಡವಾಯ್ತು. ಸುರಿವ ನನ್ನ ಕಣ್ಣ ಹನಿಗಳಿಗೆ ಕೊಡೆ ಹಿಡಿದು ಬಿಡು ಬಾ ಎಂದು ಜೋರಾಗಿ ಕೂಗಿ ಕರೆದರೆ ಮರಳಿ ಬರುವೆಯಾ! ಗೊತ್ತಿಲ್ಲ.

ಖಂಡಿಸಲಾರೆ, ಋಣವಿರದ ಅನುರಾಗವೇ ಹಾಗೇ… ಕೊಂದು, ಬೆಂದು, ನೊಂದರು ನೆನಪಿನ ಗಹನಕ್ಕೆ ಕರುಳು ಕಿವುಚಿ ಕುಹಕ ಎನಿಸುತ್ತಿದೆ. ಆದರೂ ಕಾಯುವೆ, ಕಾಯುತ್ತಲೇ ಇರುವೆ ಮರಳಿ ನನ್ನಡೆಗೆ ಬಂದು ಬಿಡು.
ಆದರೆ ಮತ್ತೆ ಹೀಗೆಂದೂ ಮಾಡದಿರು.

– ವಿರುಪಾಕ್ಷಿ ಕಡ್ಲೆ ಕಲ್ಲುಕಂಭ

ಟಾಪ್ ನ್ಯೂಸ್

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.