ನಂಗೇನೂ ಗೊತ್ತಿಲ್ಲ, ನಂಗೇನೂ ಗೊತ್ತಿಲ್ಲ…!


Team Udayavani, Feb 19, 2019, 12:30 AM IST

q-5.jpg

ಮರುದಿನ ಆಕೆ ಕಾರಿಡಾರ್‌ನಲ್ಲಿ ಬರುತ್ತಿರುವಾಗ ಹುಡುಗ ಪತ್ರವನ್ನು ಕೊಡಲು ಹೋದ. ನಾವೆಲ್ಲ ಅಲ್ಲೇ ಸ್ವಲ್ಪ ದೂರದಲ್ಲಿ ನಿಂತು ಗಮನಿಸುತ್ತಿದ್ದೆವು. ಆತ ಅವಳಿಗೆ ಪತ್ರ ಕೊಟ್ಟು, ಏನೋ ಹೇಳಿದ. ಅದೇನೆಂದು ನಮಗೆ ಕೇಳಿಸಲಿಲ್ಲ. 

 ಇದು ಐದು ವರ್ಷಗಳ ಹಿಂದೆ ನಡೆದ ಘಟನೆ. ಆಗ ನಾನು ಪಿಯು ಓದುತ್ತಿದ್ದೆ. ನನ್ನನ್ನೂ ಸೇರಿ ನಾಲ್ವರು ಗೆಳೆಯರ ಗುಂಪೊಂದು ಇತ್ತು. ನಾವೆಲ್ಲರೂ ಓದುವುದರಲ್ಲಿ ಬುದ್ಧಿವಂತರು. ಆದರೆ, ನಾಚಿಕೆ ಸ್ವಭಾವದವರು. ಕ್ಲಾಸ್‌ಗೆ ಬಂಕ್‌ ಮಾಡುವುದು, ಹುಡುಗಿಯರ ಜೊತೆ ಮಾತಾಡುವುದು, ಕ್ಲಾಸ್‌ನಲ್ಲಿ ಗಲಾಟೆ ಮಾಡುವುದು…ಇಂಥ ಯಾವುದರಲ್ಲೂ ನಾವು ಇರಲಿಲ್ಲ. ನಮ್ಮ ಕಾಲೇಜು ತುಂಬಾ ದೊಡ್ಡದಾಗಿತ್ತು. ಕ್ಲಾಸ್‌ ಕೂಡಾ… ತರಗತಿಯಲ್ಲಿದ್ದ 9 ಬೆಂಚುಗಳಲ್ಲಿ 3ನೇ ಬೆಂಚು ನಮ್ಮ ಗುಂಪಿಗೆ ಮೀಸಲು. ಬೇರೆ ಯಾರೂ ಅದರಲ್ಲಿ ಕೂರುತ್ತಿರಲಿಲ್ಲ. 

ಹೀಗಿರುವಾಗ ನಮ್ಮ ಗುಂಪಿನ ಗೆಳೆಯನೊಬ್ಬ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಎಂಬ ವಿಷಯ ಗೊತ್ತಾಯ್ತು. ಅವನ ಬಾಯಿ ಬಿಡಿಸಿ, ಆ ಹುಡುಗಿ ಯಾರೆಂದು ತಿಳಿದುಕೊಂಡೆವು. ಹೋಗಿ ಪ್ರಪೋಸ್‌ ಮಾಡುವಂತೆ ಅವನನ್ನು ಪೀಡಿಸತೊಡಗಿದೆವು. ಅವನು ಅದಕ್ಕೆ ಒಪ್ಪಲೇ ಇಲ್ಲ. ಆದರೆ, ನಾವು ಆ ವಿಷಯವನ್ನು ಅಲ್ಲಿಗೇ ಬಿಡಲು ತಯಾರಿರಲಿಲ್ಲ. ಕೊನೆಗೆ ಎಲ್ಲರೂ ಸೇರಿ ಒಂದು ಐಡಿಯಾ ಮಾಡಿದೆವು.

ಅದೇನೆಂದರೆ, ಲವ್‌ ಲೆಟರ್‌ ಮೂಲಕ ಪ್ರೀತಿ ನಿವೇದನೆ ಮಾಡಿಕೊಳ್ಳುವುದು! ಲವ್‌ ಲೆಟರ್‌ ಬರೆಯೋದು ನಮಗೆಲ್ಲರಿಗೂ ಹೊಸತು. ಆದರೆ, ಸಿನಿಮಾಗಳಲ್ಲಿ ನೋಡಿದ್ದೆವಲ್ಲ! ಬಿಳಿಯ ಹಾಳೆಯಲ್ಲಿ ಕವನವೊಂದನ್ನು ಬರೆದು, ಹೃದಯದ ಚಿತ್ರ ಬಿಡಿಸಿದೆವು. ಸ್ನೇಹಿತ ಆ ಪತ್ರವನ್ನು ತನ್ನ ಪ್ರೇಯಸಿಗೆ ಕೊಡಲು ಒಪ್ಪಿದ. ಹುಡುಗಿಗೆ ಕೊಡಲು ಹೋದವನು, ಹೆದರಿ ಹಿಂದಕ್ಕೆ ಬಂದ. ಎರಡು-ಮೂರು ಸಲ ಪ್ರಯತ್ನ ನಡೆಸಿ, “ನನ್ನ ಕೈಯಲ್ಲಿ ಆಗಲ್ಲ’ ಎಂದುಬಿಟ್ಟ. ಹೇಗಾದ್ರೂ ಮಾಡಿ ಈ ಪತ್ರವನ್ನು ನಾವೇ ಆ ಹುಡುಗಿಗೆ ತಲುಪಿಸಬೇಕು ಅಂತ ಹಠಕ್ಕೆ ಬಿದ್ದೆವು. 

ಬೇರೆ ತರಗತಿಯ ಹುಡುಗನೊಬ್ಬನಿಂದ ಆ ಪತ್ರವನ್ನು ತಲುಪಿಸುವ ಏರ್ಪಾಡು ಮಾಡಿದೆವು. ಆತನೂ ಅದಕ್ಕೆ ಒಪ್ಪಿದ. ಆದರೆ, ನಾನು ಈ ಪತ್ರವನ್ನು ಅವಳಿಗೆ ಕೊಡುವಾಗ, ನೀವು ಅಲ್ಲಿ ಇರಬೇಕು ಎಂದು ಹೇಳಿದ. “ಆಯ್ತು’ ಎಂದು ಎಲ್ಲರೂ ಒಪ್ಪಿಕೊಂಡೆವು. ಮರುದಿನ ಆಕೆ ಕಾರಿಡಾರ್‌ನಲ್ಲಿ ಬರುತ್ತಿರುವಾಗ ಹುಡುಗ ಪತ್ರವನ್ನು ಕೊಡಲು ಹೋದ. ನಾವೆಲ್ಲ ಅಲ್ಲೇ ಸ್ವಲ್ಪ ದೂರದಲ್ಲಿ ನಿಂತು ಗಮನಿಸುತ್ತಿದ್ದೆವು. ಆತ ಅವಳಿಗೆ ಪತ್ರ ಕೊಟ್ಟು, ಏನೋ ಹೇಳಿದ. ಅದೇನೆಂದು ನಮಗೆ ಕೇಳಿಸಲಿಲ್ಲ. ಆದರೆ, ನಮ್ಮತ್ತ ಕೈ ತೋರಿಸಿ, ಏನೋ ಹೇಳಿದ್ದು ಗೊತ್ತಾಯ್ತು. ಆಕೆ ಪತ್ರ ಹಿಡಿದು, ನಮ್ಮ ಕಡೆ ಬರಲಾರಂಭಿಸಿದಳು. ಗುಂಪಿನಲ್ಲಿ ಮುಂದೆ ನಿಂತಿದ್ದ ನಾನು, ಹಿಂದೆ ಗೆಳೆಯರಿದ್ದಾರೆ ಎಂದು ಧೈರ್ಯವಾಗಿದ್ದೆ. “ಈಗ ನೀನು ಐ ಲವ್‌ ಯೂ ಅಂತ ಹೇಳಿ ಬಿಡು’ ಅನ್ನುತ್ತಾ ತಿರುಗಿ ನೋಡಿದರೆ, ಅಲ್ಲಿ ಯಾರೂ ಇರಲೇ ಇಲ್ಲ! ಆ ಲವರ್‌ ಬಾಯ್‌ ದೂರದಲ್ಲಿ ಒಂದು ಮರದ ಮರೆಯಲ್ಲಿ ನಿಂತಿದ್ದ. 

ಆಕೆ ಹತ್ತಿರ ಬರುತ್ತಿರುವುದನ್ನು ನೋಡಿ ನನಗೆ ಗಾಬರಿಯಾಯಿತು. ಏನು ಮಾಡೋದೆಂದು ತಿಳಿಯದೆ ಓಡಲಾರಂಭಿಸಿದೆ. ಆ ಹುಡುಗಿ ಕೂಡ ಕೂಗುತ್ತಾ ಓಡಿ ಬಂದಳು. ನಾನು “ನಂಗೇನೂ ಗೊತ್ತಿಲ್ಲಾ’ ಎಂದು ಓಡಿದ್ದೇ ಓಡಿದ್ದು..

ಧನಂಜಯ ಎಂ.ಎಸ್‌., ನಾಗಮಂಗಲ

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.