ಒಂದೇ ಒಂದ್ಸಲ ಮಾತಾಡಿಸ್ರಿ ಪ್ಲೀಸ್‌…


Team Udayavani, Jan 15, 2019, 12:30 AM IST

letter-harsha.jpg

ಹಾಯ್‌ ಅಪರಿಚಿತೆ, 
ನೀವು ಯಾರೆಂದು ನನಗೆ ಗೊತ್ತು. ಆದ್ರೆ, ನಾನು ಯಾರು ಎಂದು ನಿಮಗೆ ಗೊತ್ತಿಲ್ಲ. ನಿಮ್ಮ ಪರಿಚಯ ಹೇಗಾಯ್ತು ಅಂತ ನಾನೇ ಹೇಳ್ತೀನಿ ಕೇಳಿ. 

ಆವತ್ತೂಂದಿನ ನಾನು ಸುಮ್ಮನೆ ಕೂತು ಟಿಕ್‌ಟಾಕ್‌ನಲ್ಲಿ ವಿಡಿಯೋಗಳನ್ನು ನೋಡುತ್ತಿದ್ದೆ. ಆಗ ನನ್ನಿಷ್ಟದ ಹಾಡು ಕಾಣಿಸಿತು. ಯಾರು ಪೋಸ್ಟ್‌ ಮಾಡಿರೋದು ಅಂತ ಪ್ರೊಫೈಲ್‌ ತೆರೆದು ನೋಡಿದರೆ, ಪ್ರಿಯಾ ಅಂತ ಇತ್ತು. ಅಲ್ಲಿ ನೀವು ಮಾಡಿರುವ ಎಲ್ಲಾ ವಿಡಿಯೋಗಳನ್ನು ನೋಡಿದೆ. ನೋಡುತ್ತಾ, ನೋಡುತ್ತಾ ಕಳೆದು ಹೋದೆ. 

ಈಗ ನಿಮ್ಮ ವಿಡಿಯೋಗಳನ್ನು ನೋಡುವುದೇ ಗೀಳಾಗಿ ಹೋಗಿದೆ. ಮೊನ್ನೆ ಹಾಕಿದ್ದ ಮಳೆ ಹಾಡಿನ ಡಬ್ಸ್ಮ್ಯಾಶ್‌ ಅಂತೂ ಸೂಪರ್‌. ನನ್ನ ಮೊಬೈಲ್‌ ಸ್ಟೋರೇಜ್‌ ತುಂಬಾ ನಿಮ್ಮದೇ ವಿಡಿಯೋಗಳು ತುಂಬಿಕೊಂಡಿವೆ. ನಿಮ್ಮೂರು ಯಾವುದು ಅಂತ ತಲೆ ಕೆಡಿಸಿಕೊಂಡು, ಫೇಸ್‌ಬುಕ್‌ನಲ್ಲಿ ಜಾಲಾಡಿದಾಗ ನೀವು ದಾವಣಗೆರೆಯವರೆಂದು ತಿಳಿಯಿತು. ನಿಮ್ಮನ್ನು ಹುಡುಕಿಕೊಂಡು ದಾವಣಗೆರೆಗೂ ಬಂದಿದ್ದೆ ಅಂದರೆ ನೀವು ನಂಬುವುದಿಲ್ಲವೇನೋ! ಒಂದು ವಾರ ದಾವಣಗೆರೆಯ ಗೆಳೆಯನ ಮನೆಯಲ್ಲಿದ್ದು, ಸಾಧ್ಯವಾದ ಕಡೆಗಳಲ್ಲೆಲ್ಲ ಹುಡುಕಿ, ಊರಿಗೆ ವಾಪಸಾದೆ. 

ಅದ್ಯಾಕೋ ಗೊತ್ತಿಲ್ಲ, ಒಮ್ಮೆಯಾದರೂ ನಿಮ್ಮನ್ನು ಭೇಟಿಯಾಗಬೇಕಂತ ಆಸೆಯಾಗಿದೆ. ಫೇಸ್‌ಬುಕ್‌ನಲ್ಲಿ ರಿಕ್ವೆಸ್ಟ್‌ ಕಳಿಸಿದ್ದೀನಿ, ಮೆಸೆಂಜರ್‌ನಲ್ಲಿ ಮೆಸೇಜ್‌ ಕೂಡ. ಕೊನೇಪಕ್ಷ ಒಮ್ಮೆಯಾದರೂ ನಂಜೊತೆ ಚಾಟ್‌ ಮಾಡಿ ಪ್ಲೀಸ್‌. ಇನ್ನೂ ಒಂದು ವಿಷಯ ಗೊತ್ತಾ,
ನಮ್ಮ ಮನೆಯಲ್ಲಿ ಹೊಸ ಟಿ.ವಿ. ತಂದಾಗ ಮೊದಲು ಪ್ಲೇ ಮಾಡಿದ್ದೇ, ನಿಮ್ಮ ವಿಡಿಯೊವನ್ನು. ಮೊಬೈಲ್‌ ಸ್ಕ್ರೀನ್‌ಗಿಂತ ಟಿ.ವಿ.ಯಲ್ಲಿ ಇನ್ನೂ ಚೆನ್ನಾಗಿ ಕಾಣಿಸ್ತೀರಿ. 

ಪ್ರಿಯಾ, ಮತ್ತೂಮ್ಮೆ ಬೇಡಿಕೊಳ್ತಾ ಇದ್ದೀನಿ; ಈ ಪತ್ರವನ್ನು ಓದಿಯಾದರೂ ನನ್ನ ಜೊತೆ ಚಾಟ್‌ ಮಾಡಿ. ನಿಮ್ಮ ಮೆಸೇಜ್‌ಗಾಗಿ ಕಾಯುತ್ತಿರುತ್ತೇನೆ. ಹಾಂ, ಇನ್ನೊಂದೆರಡು ವಾರದಲ್ಲಿ ನಾನು ಮತ್ತೂಮ್ಮೆ ದಾವಣಗೆರೆಗೆ ಬರುತ್ತೇನೆ. ನಿಮ್ಮನ್ನು ಮೀಟ್‌ ಮಾಡಿಯೇ ವಾಪಸ್‌ ಹೋಗೋದು, ಸಿಕ್ತೀರ ಅಲ್ವಾ? 

-ಹರ್ಷ 

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.