ಟೆಕ್ಕಿಯ ಬದುಕನ್ನು ಪಾಸ್‌ವರ್ಡ್‌ ಬದಲಿಸಿತು!


Team Udayavani, May 30, 2017, 3:00 PM IST

pasword.jpg

ಬದುಕಿನಲ್ಲಿ ಎಲ್ಲವನ್ನೂ ಕಳಕೊಂಡ ಟೆಕ್ಕಿಯೊಬ್ಬ “ಪಾಸ್‌ವರ್ಡ್‌’ ಎಂಬ ಮಾಯಾಕ್ಷರಗಳ ಮೂಲಕ ಪುನಃ ಎಲ್ಲವನ್ನೂ ಸಂಪಾದಿಸಿದ ಕತೆಯಿದು. ಮನಸ್ಸು, ಛಲವೊಂದಿದ್ದರೆ ಗೆಲುವಿಗೆ ನಮ್ಮ ವಿಳಾಸ ತುಂಬಾ ಸಲೀಸಾಗಿ ಸಿಗುತ್ತೆ ಅನ್ನೋದಕ್ಕೆ ಈ ಸ್ಟೋರಿ ಸಾಕ್ಷಿ…

ಅವಳು ಏಕೆ ಹಾಗೆ ಮಾಡಿದಳು? ಪ್ರತಿ ಕ್ಷಣ, ಪ್ರತಿ ದಿನ ಈ ಪ್ರಶ್ನೆ ನನ್ನೊಳಗೆ ಲಾಗಾಪಲ್ಟಿ ಹಾಕುತ್ತಿತ್ತು. ಹೆಂಡತಿ ನನಗೆ ಡೈವೋರ್ಸ್‌ ಕೊಟ್ಟ ಮರುದಿನವೂ ನನ್ನೊಳಗೆ ನೋವು ಹೊತ್ತಿ ಉರಿಯುತ್ತಿತ್ತು. ಸಾಫ್ಟ್ವೇರ್‌ ಎಂಜಿನಿಯರ್‌ ಆಗಿದ್ದ ನನಗೆ ನನ್ನ ಬಾಳಿನಲ್ಲಿ “ಡೈವೋರ್ಸ್‌ ವೈರಸ್‌’ ನುಗ್ಗಲು ಕಾರಣ ಏನೆಂಬುದೇ ತಿಳಿಯದೆ, ತಲೆ ಗಿರ್ರೆಂದಿತ್ತು. ಆ ತಲೆಬಿಸಿಯಲ್ಲೇ ಆಫೀಸಿಗೆ ಹೋಗಿದ್ದೆ.

ನನ್ನ ಉದ್ಯೋಗದ ದಿನಚರಿ ಆರಂಭಗೊಳ್ಳುವುದು ಕಂಪ್ಯೂಟರಿನಿಂದಲೇ. ಅದನ್ನು ಆನ್‌ ಮಾಡಿದಾಗ, “ನಿಮ್ಮ ಪಾಸ್‌ವರ್ಡ್‌ ಅವಧಿ ಮುಗಿದಿದೆ. ದಯವಿಟ್ಟು ಪಾಸ್‌ವರ್ಡ್‌ ಬದಲಿಸಿ’ ಎಂಬ ಸಂದೇಶ ಕಂಪ್ಯೂಟರಿನ ಪರದೆ ಮೇಲೆ ಮೂಡಿತು. ನಾನು ಮೈಕ್ರೋಸಾಫ್ಟ್ ಎಕ್ಸ್‌ಚೇಂಜ್‌ ಸರ್ವರ್‌ನಲ್ಲಿ ಕೆಲಸ ಮಾಡುವವನು. ಪ್ರತಿ 30 ದಿನಗಳಿಗೊಮ್ಮೆ ಇಲ್ಲಿ ಪಾಸ್‌ವರ್ಡ್‌ ಬದಲಿಸುವುದು ಕಡ್ಡಾಯ.

“ಯಾವ ಪಾಸ್‌ವರ್ಡ್‌ ಕೊಡಲಿ?’ ಅಂತ ಒಂದೈದು ನಿಮಿಷ ಆಲೋಚಿಸಿದೆ. ಹಾಗೆ ಆಲೋಚಿಸುವಾಗಲೂ ಕಣ್ಣೆದುರು ಬಂದಿದ್ದು, ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ನಡೆದ ಹೆಂಡತಿಯೇ! ಇನ್ನು ಸಾಕು, ಇವಳ ನೆನಪು ಎಂದುಕೊಂಡು “Forgive@h3r’ ಎಂಬ ಪಾಸ್‌ವರ್ಡ್‌ ನೀಡಿದೆ. ಸ್ಕ್ರೀನ್‌ ಸೇವರ್‌ನಲ್ಲಿದ್ದ ಆಕೆಯ ಭಾವಚಿತ್ರದ ಮೇಲೆ ದೃಷ್ಟಿ ಚೆಲ್ಲಿತು. ಅದನ್ನು ಮೊದಲು ಡಿಲೀಟ್‌ ಮಾಡಿ, ಸುಂದರ ಹೂವಿನ ಚಿತ್ರ ಹಾಕಿಕೊಂಡೆ. ಕೆಲಸದ ನಡುವೆ ಕಾಫಿಗೆ, ಲಂಚ್‌ ಬ್ರೇಕ್‌ಗೆ, ಸಿಗರೇಟ್‌ಗೆ ಅಂತ ಆಗಾಗ್ಗೆ ಎದ್ದು ಹೋಗುತ್ತಲೇ ಇರುತ್ತೇನೆ. ಮತ್ತೆ ಬಂದಾಗ ನನ್ನ ಕಂಪ್ಯೂಟರ್‌ ಅದೇ ಪಾಸ್‌ವರ್ಡ್‌ ಅನ್ನೇ ಕೇಳುತ್ತಿತ್ತು. ಹಾಗೆ ನಿತ್ಯ ಐದಾರು ಬಾರಿಯಂತೆ, ಮೂವತ್ತು ದಿನ “Forgive@h3r’ ಅಂತಲೇ ಟೈಪಿಸುತ್ತಾ ಹೋದೆ. ನಿಧಾನಕ್ಕೆ ಅವಳ ನೆನಪನ್ನು ಮರೆಯಲು ಗುಪ್ತಾಕ್ಷರ (ಪಾಸ್‌ವರ್ಡ್‌) ನೆರವಾಗುತ್ತಿತ್ತು. ಹಾಗೆ ಟೈಪಿಸುವಾಗ, ಹಿಂದೆ ಆಕೆಯೊಂದಿಗೆ ಕಳೆದ ದೃಶ್ಯಗಳೆಲ್ಲ ನನ್ನ ಮನಸ್ಸಿನಿಂದ ಅಳಿಸಿ ಹೋಗುತ್ತಿದ್ದವು. ಹೃದಯದ ಪ್ರತಿ ಬಡಿತವೂ “Forgive her’ ಎನ್ನುತ್ತಿತ್ತು.

ಒಂದು ತಿಂಗಳಾಗುವ ಹೊತ್ತಿಗೆ, ನಾನು ಆಕೆಯನ್ನು ಸಂಪೂರ್ಣವಾಗಿ ಮರೆತಿದ್ದೆ!
ಮತ್ತೆ ಮರು ತಿಂಗಳು… ಕಂಪ್ಯೂಟರಿನಲ್ಲಿ ಪುನಃ “ನಿಮ್ಮ ಪಾಸ್‌ವರ್ಡ್‌ ಅವಧಿ ಮುಗಿದಿದೆ. ದಯವಿಟ್ಟು ಪಾಸ್‌ವರ್ಡ್‌ ಬದಲಿಸಿ’ ಎಂಬ ಸಂದೇಶ ಬಂತು. ಬದುಕು ಹೀಗಾಯ್ತಲ್ಲ ಎಂಬ ಚಿಂತೆಯಲ್ಲಿ ನನಗೆ ಸಿಗರೇಟಿನ ಚಟ ಅಂಟಿಕೊಂಡಿತ್ತು. ಆ ಹೊತ್ತಿನಲ್ಲಿ ಧೂಮಪಾನದ ಮೇಲೆ ಕೋಪ ಉಕ್ಕಿ “Quit@smoking4ever’ ಎಂಬ ಪಾಸ್‌ವರ್ಡ್‌ ಕೊಟ್ಟೆ. ಹಾಗೆ ಪಾಸ್‌ವರ್ಡ್‌ ಕೊಟ್ಟ ಮೇಲೆ, ಮೂವತ್ತು ದಿನ ಸಿಗರೇಟು ಸೇದಲು ಹೋಗಲಿಲ್ಲ. ಆಮೇಲೆ, ಮತ್ತೆಂದೂ ಸಿಗರೇಟನ್ನು ಮುಟ್ಟಲು ಮನಸ್ಸಾಗಲಿಲ್ಲ.

ಮತ್ತೆ ಮರು ತಿಂಗಳು… ಮನಸ್ಸು ಬಹಳ ತಾಜಾ ಆಗಿತ್ತು. ಎಲ್ಲಾದರೂ ಟ್ರಿಪ್‌ ಹೋಗೋಣ ಅಂತನ್ನಿಸಿತ್ತು. ಎದುರಿದ್ದ ಕಂಪ್ಯೂಟರ್‌ ಪುನಃ ಹೊಸ ಪಾಸ್‌ವರ್ಡ್‌ ಕೇಳಿತ್ತು. ಈ ಬಾರಿ “Save4trip@thailand’ ಎಂಬ ಗುಪ್ತಾಕ್ಷರ ನೀಡಿದೆ. ಅನಗತ್ಯ ಖರ್ಚಿಗೆ ಮುಕ್ತಿಹಾಡಿ, ದಿನವೂ ಒಂದಿಷ್ಟು ಹಣವನ್ನು ಪ್ರವಾಸಕ್ಕಾಗಿ ಮೀಸಲಿಟ್ಟೆ. ತಿಂಗಳು ಮುಗಿಯುವ ಹೊತ್ತಿಗೆ, ಪ್ರವಾಸಕ್ಕೆ ಅಗತ್ಯವಿರುವಷ್ಟು ಹಣ ನನ್ನ ಖಾತೆಯಲ್ಲಿತ್ತು. ವಾರದ ಮಟ್ಟಿಗೆ ಕಚೇರಿ, ಕೆಲಸವನ್ನೆಲ್ಲ ಮರೆತು, ಜಾಲಿ ಆಗಿ ಹೋಗಿಬಂದೆ.

ಮತ್ತೆ ಮರು ತಿಂಗಳು. ಕಚೇರಿಗೆ ಹೋದಾಗ, ಸುಂದರವಿದ್ದ ಹೊಸ ಹುಡುಗಿಯೊಬ್ಬಳು ನನ್ನ ಪಕ್ಕದಲ್ಲೇ ಬಂದು ಕುಳಿತಿದ್ದಳು. ಅವಳನ್ನೇ ನೋಡುತ್ತಾ, ಕಂಪ್ಯೂಟರ್‌ ಆನ್‌ ಮಾಡಿದೆ. ಆ ತಿಂಗಳು ಪುನಃ ನಾನು ಹೊಸ ಪಾಸ್‌ವರ್ಡ್‌ ನೀಡಬೇಕಿತ್ತು. “Ask@her4date’ ಎಂಬ ಗುಪ್ತಾಕ್ಷರ ನೀಡಿದೆ. ಹಾಗೆ ದಿನಾ ಪಾಸ್‌ವರ್ಡ್‌ ನೀಡುವಾಗಲೆಲ್ಲ, ಆಕೆಯತ್ತ ನೋಡಿ ನಗು ಬೀರುತ್ತಿದ್ದೆ. ಇಬ್ಬರೂ ಕಾಫಿಗೆ ಹೋಗುತ್ತಿದ್ದೆವು. ಕಚೇರಿಯಿಂದ ಒಟ್ಟಿಗೆ ಹೊರಡುತ್ತಿದ್ದೆವು. ತಿಂಗಳಾಂತ್ಯದಲ್ಲಿ ಅವಳು ನನ್ನ ಪ್ರೀತಿಯನ್ನು ಒಪ್ಪಿದ್ದಳು. ನನಗೀಗ ಹೊಸ ಸಂಗಾತಿ ಸಿಕ್ಕಿದ್ದಾಳೆ. ಅವಳು ನನ್ನ ಬಾಳನ್ನು ಬೆಳಗುತ್ತಿದ್ದಾಳೆ!

ಇದೇ ರೀತಿ ನಾನು ಕೊಡುತ್ತಲೇ ಹೋದ ಹೊಸ ಪಾಸ್‌ವಡ್‌ಗಳುì ನನ್ನಲ್ಲಿ ಹಲವು ಬದಲಾವಣೆ ತಂದಿದ್ದವು; No@drinking2months ಎಂಬ ಗುಪ್ತಾಕ್ಷರ ನನ್ನ ಕುಡಿತ ಚಟವನ್ನು ಬಿಡಿಸಿತ್ತು. Facetime2mom@sunday ಎಂಬ ಪಾಸ್‌ವರ್ಡ್‌ನಿಂದ ಅಮ್ಮನನ್ನು ಹೆಚ್ಚೆಚ್ಚು ಪ್ರೀತಿಸುತ್ತಾ ಹೋದೆ. Save4@house ಎಂಬ ಗುಪ್ತಾಕ್ಷರದಿಂದ ಅಪಾರ್ಟ್‌ಮೆಂಟ್‌ ಖರೀದಿಸಿದೆ.

ಹೀಗೆ ಪ್ರತಿ ತಿಂಗಳು ಬದಲಾಗುವ ಪಾಸ್‌ವರ್ಡ್‌ಗಳು ನನ್ನ ಬದುಕನ್ನು ಬದಲಿಸಿದವು. ಅವನತಿಯಲ್ಲಿದ್ದ ನನಗೆ ಔನ್ನತ್ಯ ತಂದುಕೊಟ್ಟವು. ಈಗ ನನ್ನ ಬದುಕಿನಲ್ಲಿ ಆಶಾಕಿರಣ ಉದಯಿಸಿದೆ. ನಾನು ಗೆಲ್ಲುತ್ತಿದ್ದೇನೆ. ಇನ್ನೂ ಗೆಲ್ಲುತ್ತೇನೆ… ಇದೇ ಪಾಸ್‌ವರ್ಡ್‌ ಮೂಲಕವೇ!

– ಸಾಂದೀಪನಿ

ಟಾಪ್ ನ್ಯೂಸ್

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.