ಮಾಸ್ಟರ್‌ ಆಗಬೇಕಿದ್ದವ ಮ್ಯಾನೇಜರ್‌ ಆಗಿಬಿಟ್ಟೆ


Team Udayavani, Oct 13, 2020, 7:29 PM IST

josh-tdy-2

ನಾನಾಗ ಚಿಕ್ಕವನಿದ್ದೆ, ಓದಿದ್ದು ಸರ್ಕಾರಿ ಶಾಲೆಯಲ್ಲಿ. ಆಗ ನನಗೆ “ಹೀರೋ’ ಅಂದರೆ ನಮ್ಮ ಶಿಕ್ಷಕರು! ಅವರ ಗತ್ತು,ಕಣ್ಣಲ್ಲೇ ಇಡುವ ಭಯ, ಇನ್ನೂ ಮೀರಿದರೆ ವಿದ್ಯಾರ್ಥಿಗ  ಮೈಮೇಲೆ ಆಡುವ “ಬೆತ್ತದ ನರ್ತನ! ಎಲ್ಲವೂ ನನ್ನನ್ನು ಆಕರ್ಷಿಸುತ್ತಿತ್ತು! ಗುರುಗಳ ಮಾತು, ನಡತೆ, ಸಾಮಾನ್ಯ ಉಡುಪು, ಬಡತನವಿದ್ದರೂ ಬಾಯ್ತುಂಬ ಇರುತ್ತಿದ್ದ ನಗು, ಅವರು ಹೇಳುತ್ತಿದ್ದ ನೀತಿ ಕಥೆಗಳು, ಅವರು ನಂಬಿಕೊಂಡು ಬಂದ ರೀತಿ ನೀತಿಗಳು, ಪಾಲಿಸುತ್ತಿದ್ದ ಆದರ್ಶ… ಒಂದಾ ಎರಡಾ? – ಇಂಥವೇ ಸಂಗತಿಗಳು, ಭವಿಷ್ಯದಲ್ಲಿ ನಾನೂ ಒಬ್ಬ ಶಿಕ್ಷಕ ಆಗಬೇಕು ಎಂಬ ಆಸೆಯನ್ನು ನನ್ನೊಳಗೆ ಬಿತ್ತಿದವು.

ನಮ್ಮ ತಂದೆ ಸಹ ಮಿಡ್ಲ್ ಸ್ಕೂಲ್‌ನ ಶಿಕ್ಷಕರು ಆಗಿದ್ದರಿಂದ, ಮುಂದೆ ನಾನೂ ಅವರಂತೆಯೇ ಶಿಕ್ಷಕನೇ ಆಗಬೇಕು ಎಂಬುದು ಗುರಿ ಮಾತ್ರ ಆಗದೆ, ಅದೊಂದು ಹುಚ್ಚಿನಂತೆ ಜೊತೆಯಾಯಿತು. ಆ ನಂತರದಲ್ಲಿ ಎಲ್ಲೆಡೆಯೂ ನನಗೆ ಶಿಕ್ಷಕರೇ ಕಾಣಿಸ ತೊಡಗಿದರು.ಕಣ್ಣು ಮುಚ್ಚಿದರೂ ಟೀಚರ್‌. ಶಾಲೆಗೆ ಹೋದರೂ ಟೀಚರ್‌. ಮನೆಯಲ್ಲಂತೂ ಸಾಕ್ಷಾತ್‌ ನಮ್ಮಪ್ಪನೇ ಟೀಚರ್‌! ಸರ್ವಂ ಶಿಕ್ಷಕಮಯಂ!

ಆಗ ನಾನು, ಟೀಚರ್‌ ಆಗಲು ಏನು ಓದಬೇಕು ಅಂತ ಪರಿಚಯದ ಹಲವರ ಬಳಿ ವಿಚಾರಿಸಿದೆ. ನನ್ನ ಮುಸ್ಲಿಂ ಗೆಳೆಯನೊಬ್ಬ-ಟಿಸಿಎಚ್‌ಕರೋಜಿ ಜಲ್ದಿ ಕಾಮ್‌ ಮಿಲ್ತಾ ಹೈ. ಹಮಾರ ಖಾನ್ದಾನ್‌ ಪೂರ ಟೀಚರ್‌ ಹೀ ಟೀಚರ್‌ ಅಂದ! ಮನೆಗೆ ಹೋಗಿ ಮುಂದೆ ನಾನೂ ಟೀಚರ್‌ ಆಗುತ್ತೇನೆ ಅಂತ ತಂದೆಯವರಿಗೆ ಹೇಳಿದೆ. ಅವರು ತಕ್ಷಣ- “”ಅಯ್ಯೋ ಬೇಡ ಬೇಡ, ನಾನು ಟೀಚರ್‌ ಆಗಿ ತುಂಬಾಕಷ್ಟದಲ್ಲಿ ಮನೆ ನಡೆಸುತ್ತಿರೋದುಕಾಣಿಸುತ್ತಿಲ್ವ? ನೀನಾದರೂ ಚೆನ್ನಾಗಿ ಓದಿ ದೊಡ್ಡಕೆಲಸಕ್ಕೆ ಹೋಗು ಅಂದರು.

ಆ ನಂತರದಲ್ಲಿ ನನ್ನ ಎಸ್ಸೆಸ್ಸೆಲ್ಸಿ, ಪಿಯುಸಿ, ಡಿ-ಫಾರ್ಮಾ ನೂ ಆಯ್ತು. ಜೊತೆಗೆ ಡಿಗ್ರೀನು ಆಯ್ತು. ಬಿ.ಇಡಿ., ಮಾಡಿ ಟೀಚರ್‌ ಆಗಬೇಕು ಅಂತ ಮತ್ತೆ ಆಸೆಯಾಯಿತು. ಈ ವೇಳೆಗೆ, ನನ್ನನ್ನು ಮಾಸ್ಟರ್‌ ಡಿಗ್ರಿಗೆ ಸೇರಿಸಲು ತಂದೆಯವರು ರೆಡಿ ಆಗಿದ್ದರು.ಅವರನ್ನುಕಾಡಿ ಬೇಡಿ ಬಿ.ಇಡಿ.,ಗೆ ಸೇರಿದೆ. ನಂತರಕನ್ನಡದಲ್ಲಿ ಎಂ. ಎ. ಮಾಡಿದೆ. ಕನ್ನಡದಲ್ಲಿ ಎಂ. ಎ ಮಾಡಿದ ನಾನು, ಪ್ರೈವೇಟ್‌ ಶಿಕ್ಷಣ ಸಂಸ್ಥೆಗಳಲ್ಲಿ ಅನುಭವಿಸಿದ ನೋವು ನನ್ನ ಶತ್ರುಗಳಿಗೂ ಬೇಡ! ತುಂಬಾ ಆಸೆಪಟ್ಟು ಆಯ್ಕೆ ಮಾಡಿಕೊಂಡಿದ್ದ ಶಿಕ್ಷಕನ ವೃತ್ತಿಯಲ್ಲಿ ನೆಮ್ಮದಿಯೇ ಇಲ್ಲವಲ್ಲ ಅನ್ನಿಸಿತು.ಕಡೆಗೆ ಆ ಕೆಲಸ ಬಿಟ್ಟು, ಡಿ. ಫಾರ್ಮ ಸರ್ಟಿಫಿಕೇಟ್‌ನ ಆಧಾರದ ಮೇಲೆ ಒಂದು ದೊಡ್ಡ ಆಸ್ಪತ್ರೆಯಲ್ಲಿ ಮೆಡಿಕಲ್‌ ಸ್ಟೋರ್‌ ನಡೆಸುವ ಜವಾಬ್ದಾರಿ ವಹಿಸಿಕೊಂಡೆ. ಆಸ್ಪತ್ರೆಯ ಮ್ಯಾನೇಜ್‌ ಮೆಂಟ್‌ನ ದುರಾಸೆಗೆ ಸಾಥ್‌ ಕೊಡಲು ಮನಸ್ಸು ಒಪ್ಪದೇ, ಆ ಕೆಲಸವನ್ನೂ ಬಿಟ್ಟು ಬಂದೆ. ಈಗ ಒಂದು ದೊಡ್ಡ ಮೆಡಿಕಲ್‌ ಹೋಲ್‌ಸೇಲ್‌ಕಂಪನಿಯಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದೇನೆ.

ನನ್ನ ಕೈ ಕೆಳಗೆ 30 ಜನಕೆಲಸ ಮಾಡುತ್ತಿದ್ದಾರೆ. ಅವರಿಗೆಲ್ಲ ನನಗೆ ತಿಳಿದ ಒಳ್ಳೆಯ ಮಾತುಗಳನ್ನು, ನೀತಿಯನ್ನು, ಬುದ್ಧಿ ಮಾತುಗಳನ್ನು ಶಿಕ್ಷಕನ ರೀತಿಹೇಳುತ್ತ, ಮನದೊಳಗಿನ ಆಸೆಯನ್ನು ನೆರವೇರಿಸಿಕೊಳ್ಳುತ್ತಿದ್ದೇನೆ! ಮಾಸ್ಟರ್‌ಆಗಬೇಕಾದವನು ಮ್ಯಾನೇಜರ್‌ಆದರೂ, ನನ್ನ ಮನದಾಸೆಯನ್ನು ಇನ್ನೂ ಮರೆಯಲಾಗಿಲ್ಲ! ಈ ಸಂದರ್ಭದಲ್ಲಿ ನನಗೆ ಡಾ.ರಾಜ್‌ ರವರ ಒಂದು ಹಾಡು ಜ್ಞಾಪಕಕ್ಕೆ ಬರುತ್ತೆ-ಆಸೆಯೆಂಬ ಬಿಸಿಲುಕುದುರೆ ಏಕೆ ಏರುವೆ, ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ, ಅವನ ನಿಯಮ ಮೀರಿ ಇಲ್ಲಿ ಏನು ಆಗದು, ನಾವು ಬಯಸಿದಂತೆ ಇಲ್ಲಿ ಏನು ನಡೆಯದು…!­

 

-ಮೆಡಿಕಲ್ಸ್ ಚಂದ್ರು, ತುಮಕೂರು.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.