ಜಾತ್ರೆಗೆ ಹೋಗೋಣ ಪ್ಲೀಸ್‌, ವಾಪಸ್‌ ಬಾ…


Team Udayavani, Nov 27, 2018, 6:00 AM IST

x-11.jpg

ಶಿರಸಿಯಲ್ಲೊಂದು ಜನರಲ್ ಸ್ಟೋರ್‌ ಇಟ್ಕೊಂಡು, ಆಗಾಗ ಕಾಲೇಜು ಹುಡುಗಿಯರ ಕಡೆ ಕಣ್ಣಾಯಿಸಿದ್ದೆ ಬಿಟ್ರೆ, ನನ್‌ ಮದ್ವೆ ಜವಾಬ್ದಾರಿ ಅಪ್ಪ-ಆಯಿಗೇ ಬಿಟ್ಟಿದ್ದೆ. ಅವ್ರು ಸಂಬಂಧ ಹುಡ್ಕಿ ಸಾಕಾದಾಗ ಒಂದ್‌ ಕಡೆಯಿಂದ ನಿನ್‌ ಜಾತಕ ಬಂದಿತ್ತು. 

“ಹೇಗಿದ್ದೀಯಾ ಚಂದು?’ ಹೆಸರಿಗೆ ತಕ್ಕಂತೆ ಮುದ್ದು ಮುಖದ ಚೆಲುವೆ. ಈಗ ಫೇಸ್ಬುಕ್‌ಗೆ ಬೇರೆ ಎಂಟ್ರಿ ಕೊಟ್ಟಿದ್ದೀಯಾ? ಆದ್ರೆ ನನ್ನ ಮಾತ್ರ ಯಾಕೆ ಬ್ಲಾಕ್‌ ಮಾಡಿದ್ದೆ? ಹಾಗೂ ಹೀಗೂ ನಿನ್‌ ಈ ಮೇಲ… ಐಡಿ ಸಂಪಾದಿಸಿ ಮತ್ತೂಮ್ಮೆ ಪ್ರೇಮ ನಿವೇದನೆ ಮಾಡ್ತಾ ಇದೀನಿ. ಹಳೆಯದನ್ನೆಲ್ಲ ನೆನಪಿಸ್ತಾ ಇದೀನಿ. ಓದಿ, ಹೇಗನ್ನಿಸುತ್ತೋ ಹಾಗೆ ಮಾಡು.

ಅದಿರ್ಲಿ, ಜನವರಿಗೆ ನಿಶ್ಚಿತಾರ್ಥ ಆಗಿ, ಮೇ ತಿಂಗಳಲ್ಲಿ ಮದ್ವೆ ಹೇಳಿ ಮಾತು ಆತು. ಯಾರನ್ನೂ ಒಪ್ಪದ ನೀನು ನನಗೆ “ಓಕೆ’ ಅಂದಿದ್ಕೆ ನಂಗಂತೂ ಸ್ವರ್ಗಕ್ಕೆ ಮೂರೇ ಗೇಣು. ಆದ್ರೂ ನಿನ್‌ ಮುಖದಲ್ಲಿ ಸಣ್ಣ ಅಸಹನೆ ಎದ್ದು ಕಂಡಂಗಾತಲ್ಲ? ಎಂಗೇಮೆಂಟ್‌ ಮುಗಿಸಿದ ಮರುದಿನಾನೇ, ಸಿಗದೆ ಸತಾಯಿಸುವ ಬಿಎಸ್ಸೆನ್ನೆಲ್ ಸಿಗ್ನಲ್ ಹಿಡಿದು ನೀನೇ ನನಗೆ ಫೋನಾಯಿಸಿದ್ದೆ. ನಮ್ಮೂರ ಜಾತ್ರೆಗ್‌ ಬತ್ತೆ ಹೇಳಿದಾಗ ಸಖತ್‌ ಖುಷಿ ಆತು.

ಯಲ್ಲಾಪುರದ ದೇವಿ ಗದ್ದುಗೆಯಿಂದ ವೈಟಿಎಸ್‌ಎಸ್‌ ಮೈದಾನದವರೆಗೂ ಕೈಗೆ ಕೈ ಮಿಲಾಯಿಸಿ ನಡೆದದ್ದು, ಬಣ್ಣ ಬಣ್ಣದ ಝುಮುಕಿ, ಬಳೆ, ಸರಕ್ಕೆ ನೀ ಮಾರುಹೋದರೆ, ಅವನ್ನೆಲ್ಲ ಕೊಂಡ ನಿನ್ನ ನೋಡಿ ನಾ ಯಾಮಾರಿದೆ. ಸಂಜೆಯ ಹೊತ್ತಿಗೆ ತೊಟ್ಟಿಲು, ರೈಲು, ಬೋಟು ಎಲ್ಲಾ ಮುಗಿಸಿ ನೀ ಕುಮಟಾ ಬಸ್‌ ಹತ್ತಿ ಹೊರಟರೆ, ನನ್ನ ಪೆದ್ದು ಮನ ನಿನ್ನನ್ನೇ ಹಿಂಬಾಲಿಸಿತ್ತು.

ಶಿರಸಿಯಲ್ಲೊಂದು ಜನರಲ್ ಸ್ಟೋರ್‌ ಇಟ್ಕೊಂಡು, ಆಗಾಗ ಕಾಲೇಜು ಹುಡುಗಿಯರ ಕಡೆ ಕಣ್ಣಾಯಿಸಿದ್ದೆ ಬಿಟ್ರೆ, ನನ್‌ ಮದ್ವೆ ಜವಾಬ್ದಾರಿ ಅಪ್ಪ-ಆಯಿಗೇ ಬಿಟ್ಟಿದ್ದೆ. ಅವ್ರು ಸಂಬಂಧ ಹುಡ್ಕಿ ಸಾಕಾದಾಗ ಒಂದ್‌ ಕಡೆಯಿಂದ ನಿನ್‌ ಜಾತಕ ಬಂದಿತ್ತು. ಶಿರಸಿಲಿ ನನ್‌ ಸ್ವಂತ ಮನೆ ಇದೆ ಅಂತ ಅದ್ಯಾರು ನಿನಗೆ ಹೇಳಿದರೋ? ಒಟ್ನಲ್ಲಿ ನನ್ನ ಒಪ್ಪಿಕೊಂಡಿದ್ದೆ. ಲ್ಯಾಂಡ್‌ಲೈನ್‌ಗೆ ಮಿಸ್‌ಕಾಲ… ಕೊಟ್ಟರೆ, ಸಿಗ್ನಲ್‌ ಹುಡುಕಿಕೊಂಡು ಗುಡ್ಡದ ತುದಿಗ್‌ ಬರ್ತಿದ್ದೆ ನೀನು, ಮಾತನಾಡೋದಿಕ್ಕೆ.

ಅಂತೂ ಇಂತೂ ಮದ್ವೆ ಎಲ್ಲಾ ಮುಗೀತು. ಒಂದು ತಿಂಗಳ ಕಾಲ ಎಲ್ಲಾ ಸುಂದರ. ಒಂದಿನ ನೀನು, “ಹೇಗೂ ನಂಗೆ ಡಿಗ್ರಿ ಆಗಿದೆ. ಎಲ್ಲಾದ್ರೂ ಕೆಲಸಕ್ಕೆ ಸೇರಾ?’ ಅಂದಾಗ ನಾನು, “ಬೇಡ ಚಂದನಾ, ನೀ ಮನೇಲೆ ಏನಾದ್ರು ಮಾಡು. ಟ್ಯೂಷನ್‌ ತಕ, ಹೊಲ್ಗೆ ಮಾಡು’ ಅಂದಿದ್ದೆ. ಅಷ್ಟಕ್ಕೇ ನೀನು, ಸಿಟ್ಟಿನಿಂದ ತವರಿಗೆ ಹೊರಟುಬಿಟ್ಟೆ. 

ಮದುವೆಯ ದಲ್ಲಾಳಿ ನಿಂಗೇನ್‌ ಹೇಳಿದ್ದರೋ, ಸ್ವಂತ ಮನೆ, ಅಂಗಡಿ ಮಾಲೀಕ ಎಂದು ನಂಬಿ ಮದುವೆಯಾಗಿದ್ದೆ. ಆದ್ರೆ, ನಿನ್ನ ಗಂಡನದು ಬಿಸೊಡ್‌ ಬಳಿ ಇರುವ ಎರಡೆಕರೆ ಅಡಿಕೆ ತೋಟ, ಒಂದ್‌ ಎಕರೆ ಮಡೆ ತೋಟ ಎಂದು ತಿಳಿದು ದಂಗಾಗಿದ್ದೆ. ಸದ್ಯದಲ್ಲೇ ಒಂದು ಬೊಲೆರೋ ಕಾರ್‌ ತೆಗೆದುಕೊಳ್ಳಬೇಕೆಂಬ ನಿನ್ನಾಸೆ ಕಮರಿತ್ತು. ಮದುವೆಗೆ ಮಾಡಿದ ನನ್ನ ಕೈ ಸಾಲವೇ ಇನ್ನೂ ತೀರಿಸಲು ಆಗಿರಲಿಲ್ಲ. 

ಎಲ್ಲ ಸತ್ಯ ಹೇಳಿ ಹೇಗಾದರೂ ಸರಿ ನಮ್ಮೂರಿಗೆ ಕರೆದೊಯ್ಯುವೆ, ಈ ಪ್ರೀತಿಗೆ ಎಲ್ಲಾ ಬದಲಾಯಿಸುವ ಶಕ್ತಿ ಇದೆ ಅಂದುಕೊಂಡದ್ದು ಸುಳ್ಳಾಗಿತ್ತು. ಗದ್ದೆ ಬಯಲೆಲ್ಲ ಹಸಿರಾಗಿಸಲು ತಮ್ಮ ಹರೆಯವನ್ನೇ ತೊರೆದ ಅಪ್ಪ ಆಯಿಯನ್ನು ಈ ಇಳಿವಯಸ್ಸಿನಲ್ಲಿ ಬಿಟ್ಟು ಬಂದು, ಆ ಪೇಟೆಯಲ್ಲಿ ಏನು ಮಾಡಲಿ ಹೇಳು? ಸ್ವಲ್ಪ ಹೊಂದಿಕೊಂಡು ಹೋದರೆ ಸಾಕಿತ್ತು ಚಂದು. ಇನ್ನೆರಡು ಮೂರು ವರ್ಷಗಳ ನಂತರ ಸ್ವಿಫ್ಟ್ ಡಿಸೈರ್‌ ಝಡ್‌ಡಿಐನೇ ಕೊಡಿಸ್ತಿದ್ದೆ.

ಧಿಕ್ಕರಿಸಿ ಹೊರಟವಳ ಮುಂದೆ ದುಃಖೀಸಬಾರದು ಅಂದ್ಕೊಡೆ. ಪ್ರೀತಿಯ ಮುಂದೆ ಕಣ್ಣ ಹನಿ ಜಾರಿತ್ತು.  ನಿನಗೆ ಬೇಕಿದ್ದುದು ಹಳ್ಳಿಯ ಹಸಿರಲ್ಲ, ನಗರದ ಬೆಳಕು ಎಂದು ಗೊತ್ತಾಗಿದೆ. “ಈ ವರ್ಷ ಮಳೆಗಾಲದಂತೆ ಚಳಿನೂ ಜಾಸ್ತಿ ಮಾಣಿ. ಚಂದನಾ ನಿನ್‌ ಬಿಟ್ಟು ಹೋಯಿ 2 ವರ್ಷಾತು. ಇನ್ನೆಷ್ಟು ದಿನ ಹಿಂಗೇ ಇರಿ¤? ಮತ್ತೂಂದು ಹುಡ್ಗಿ ಹುಡುಕುವ’ ಎಂದು ಖಡಕ್ಕಾಗಿ ಹೇಳಿದ್ದಾಳೆ ಆಯಿ. ನಂಗೆ ನಿನ್ನ ಮರೆಯೋಕೆ ಆತಿಲ್ಲ ಚಂದೂ, ಪ್ಲೀಸ್‌ ವಾಪಸ್‌ ಬಾ…

ಅಂಜನ್‌ ಗಾಂವ್ಕರ್‌

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.