ಆ ಚಪ್ಪಲಿ ಕತಿ ನೆನಸ್ಕೊಂಡ್ರಾ…


Team Udayavani, Jan 21, 2020, 4:23 AM IST

sad-11

ನಮ್ಮ ತಾಯಿ ತವರುಮನಿ ಹಾವೇರಿ ಜಿಲ್ಲಾ ಒಳಗ್‌ ಒಂದು ಸಣ್ಣ ಹಳ್ಳಿ . ಅವಾಗವಾಗ ಏನರ ಕಾರ್ಯಕ್ರಮ ಇದ್ರ ಹೋಗಿರ್ತಿದ್ವಿ . ಹೀಗೇ ಹೋದಾಗ, ಸುಮಾರು 15 ವರ್ಷದ ಹಿಂದೆ ಆದ ಘಟನೆ . ಮಾಮಾನ ಮನಿ ಒಳಗ ಸತ್ಯನಾರಾಯಣ ಪೂಜಾ ಇತ್ತು. ಎಲ್ಲಾ ಬಳಗ ಸೇರಿತ್ತು . ನನಗ 7 ಜನ ಮಾಮಂದಿರು . ಅದ್ರಾಗ ಮೂರು ಜನರ ಫ್ಯಾಮಿಲಿ ಹಾಜರ್‌ ಆಗಿತ್ತು. ಅವರ ಮಕ್ಕಳೆಲ್ಲ ನನಗಿಂತ ಸಣ್ಣವರು . ದಿನಾ ರಾತ್ರಿ ದೊಡ್ಡ ದೊಡ್ಡ ತಾಟಿ (ತಟ್ಟೆ )ನೊಳಗ ಅನ್ನ , ತರಕಾರಿ ಹಾಕಿದ ಸಾಂಬಾರ್‌, ತುಪ್ಪ ಇದಿಷ್ಟು ಒಂದು ಹಾಕಿದ್ರು. ಇನ್ನೊಂದ್ರಾಗ ಕೆನಿಮೊಸರು ಹಾಲು ಹಾಕಿ ಕಲಸಿ , ಒಗ್ಗರಣೆ ಕೊಟ್ಟ ಮೊಸರನ್ನ . ಇದೆಲ್ಲದರ ಜೊತಿಗೆ ಉಪ್ಪಿನಕಾಯಿ , ಬಾಳಕ ,ಸಂಡಿಗೆ ಮತ್ತು ಹಪ್ಪಳಗಳು ಊಟಕ್ಕೆ ಇದ್ದವು. ಎಲ್ಲಾ ಹುಡಗೂರು ಸುತ್ತಲೂ ಕೂತು ಕೈತುತ್ತು ಹಾಕಿಸ್ಕೊತಿದ್ರು.

ನಾನೂ ಅವರ ಜೊತಿಗೆ ತಿನ್ನುತ್ತಿದ್ದೆ. ನಾನೇ ಅವರಿಗೆಲ್ಲಾ ಹಿರಿಯಕ್ಕ. ಆದ್ದರಿಂದ ತುಸು ಹೆಚ್ಚೇ ಅನ್ನೋವಷ್ಟು ಪ್ರೀತಿ. ಭಾರಿ ಮಜಾ ಇದ್ಲು ಆ ದಿನಗಳು . ನದಿಯಲ್ಲಿ ಈಜೋದು , ತೊಗರಿ ಹೊಲದಲ್ಲಿ ನುಗ್ಗಿ ವಾನರ ಸೈನ್ಯದಂಗ ತೊಗರಿ ಕಾಯಿ ಕಿತ್ತಿ ತಿನ್ನೋದು . ಶೇಂಗಾ ತಿನ್ನೋದು .ಯಾರಿಗೂ ಹೆದರ್ತಿರ್ಲಿಲ್ಲಾ . ಕವಡೆ , ಪಗಡೆಯಾಟ ಆಡೋದು , ಮರಕೋತಿ ಆಡೋದು , ಒಟ್ಟಿನ್ಯಾಗ ಭಾಳ ಖುಷಿಯಿಂದ ಇರ್ತಿದ್ವಿ . ಅವತ್ತು ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಅಂತ ಎಲ್ಲರೂ ಕೂಡಿದ್ವಿ . ಅಂತ್ಯಾಕ್ಷರಿ , ಜೋಕ್ಸ್‌, ದೇವರಹಾಡು ..ಇದೆಲ್ಲ ಮಾಡ್ಕೊತ ಹೆಂಗ್‌ ಒಂದು ವಾರ ಹೋತು ಗೊತ್ತಾಗ್ಲಿಲ್ಲ . ಊರಿಗೆ ಹೋಗೋ ದಿನ ಬಂತು . 5, 6 ಜನರು ಹೊರಟಿವಿ. ನಮ್ಮನ್ನ ಕಳಸ್ಲಿಕ್ಕೆ ಕಪಿ ಸೈನ್ಯ ನಮ್ಮ ಜೊತಿ ಜೊತಿಗೆ . ಹಳ್ಳಿ ದಾರಿ , ಎಡಬಲ ಮುಸುಕಿನ ಜೋಳದ ಹೊಲ. ಸಣ್ಣ ಕಾಲುದಾರಿ. ನಡ್ಕೊತ 3 ಕಿಲೋಮೀಟರು ದೂರದ ರೈಲ್ವೇ ಸ್ಟೇಷನ್‌ ತನಕ ಹೋದ್ವಿ. ಯಾವ ವಾಹನ ಹೋಗೋ ದಾರಿನೂ ಅಲ್ಲ ಅದು. ಮಳಿ ಬಂದು ದಾರಿ ಎಲ್ಲ ಕೆಸರು ರಾಡಿ .. ಹಿಂಗ 15 ಹೆಜ್ಜಿ ಹೋಗೋದ್ರಾಗ ನನ್ನ ಚಪ್ಪಲಿ ಉಂಗುಷ್ಟ ಕಿತ್ತಿ ಬಿಡು¤. ಹೆಂಗ್‌ ನಡೀತೀರಿ? ಕೈಯಾಗ್‌ ಹಿಡ್ಕೊಂಡು ಹೊಂಟೆ ಎರಡೂ ಚಪ್ಲಿನ. ಪಾಪ, ನನ್ನ ಮಾಮನ ಮಗನೊಬ್ಬ ನನ್ನ ಗೋಳು ನೋಡಲಾರ್ದ ” ಅಕ್ಕ ನನ್ನ ಚಪ್ಪಲ್‌ ಹಾಕ್ಕೋ ‘ಅಂತ ತನ್ನ ಚಪ್ಲಿ ಕೊಟ್ಟ .ಅವನ ಚಪ್ಪಲಿಗಳ್ಳೋ ನನ್ನ ಪಾದದ ಎರಡು ಪಟ್ಟು ದೊಡುÌ . ಇಷ್ಟಾಗೋದ್ರಾಗ ಟ್ರೈನ್‌ ಬಂತು ಅಂತ ಗೊತ್ತಾತು .ಓಡಿ ಓಡಿ ಅದು ಬರೋದುಕ್ಕು ನಾವು ಸ್ಟೇಷನ್‌ ಮುಟ್ಟಿದ್ವಿ .ಟ್ರೈನ್‌ ಹತ್ತೇಬಿಟ್ವಿ . ಕೆಳಗ್‌ ಎಲ್ಲಾ ಹುಡಗೂರು ಬೇಜಾರ್‌ ಮಾಡ್ಕೊಂಡು ಇಳಿ ಮುಖ ಮಾಡ್ಕೊಂಡು ಟಾಟಾ ಅಕ್ಕ ಅಂದುÌ . ಅದ್ರಗೂ ಚಪ್ಪಲಿ ಕೊಟ್ಟ ತಮ್ಮಾ ಜೋರಾಗಿ ಕೈ ಬೀಸ್ಲಿಕತ್ತಾ. ನಾನು ಬೈ ಮತ್ತ ಸಿಗೋಣ .ಚಿyಛಿ ಚಿyಛಿ ಅಂದದ್ದೇ ಅವ ನನ್ನ ಟ್ರೈನ್‌ ಜೊತಿಗೆ ಓಡಿ ಓಡಿ ಬರ್ಲಿಕತ್ತಾ. “ಬಬ್ಯಾìಡೋ ಹೋಗು ಹೋಗು ‘ ಅಂತೇನಿ. ಅವ ಕೈ ಮಾಡೇ ಮಾಡ್ತಾನ. ಜೊತಿಗೆ ಟ್ರೈನ್‌ ಹೋದಷ್ಟು ಸ್ಪೀಡ್‌ ಒಳಗ ಓಡಿ ಬರ್ಲಿಕತ್ತಾನ. ಟ್ರೈನ್‌ ಬ್ಯಾರೆ ರಶ್‌ ಇತ್ತು. ಯಾರೋ ಅಂದ್ರು “ಏನೋ ಕೇಳ್ತಾರಿ ಅವ್ರು . ಏನೋ ಕೊಡು ಅಂತಿದ್ದಾರೆ ‘ ಅಂದ್ರು.

ನಂಗೊ ಅವನ ಮಾತು ಕೇಳ್ತಿಲ್ಲ . ಕಿಡಕಿ ಹತ್ರ ತಲಿ ಹಾಕಿ “ಏನೋ?’ ಅಂದೇ . “ಅಕ್ಕಾ ನನ್ನವು ಚಪ್ಪಲಿ ಕೊಡಕ್ಕ. ಒಗಿ ಕಿಡಿಕ್ಯಾಗಿಂದ ‘ ಅಂದ . ಅವಾಗ ನೆನಪು ಬಂತು ..ಒಂದು ಕಾಲಾಗಿಂದು ಒಮ್ಮೆ ಬೀಸಿ ಎಸೆದೆ. ಇನ್ನೊಂದು ಕಾಲಾಗಿಂದು ಇನ್ನೊಮ್ಮೆ ಕಿಡಕಿ ಒಳಗ್‌ ಒಗದೆ. ಕತ್ತಲು ಬ್ಯಾರೆ . ಎಲ್ಲಿ ಬಿದ್ದಾವು ಅಂತ ಕಾಣವಲು. ಗಾರ್ಡ್‌ ಬೀಸೋ ಲೈಟ್‌ ಇಸ್ಕೊಂಡು ಹುಡಿಕ್ಕೊಂಡನಂತ. ಕಿಲೋಮೀಟರ್‌ ದೂರ ಬಿದ್ದಿದ್ವಂತ. ಹುಡಿಕಿ ಹಾಕ್ಕೊಂಡೆ ಅಕ್ಕಾ ಅಂತ ಫೋನ್‌ ಮಾಡಿದ್ದಾ.

ಈ ಪ್ರಕರಣ ಆಗಿ 15 ವರ್ಷ ಆತು . ಈಗೂ ನೆನಿಸ್ಕೊಂಡು ನಗ್ತೀವಿ . ಈಗ ಆ ಹಳ್ಳಿ ಭಾಳ್‌ ಸುಧಾರಸೇದ. ಬಸ್‌ ಅಡ್ಡಾಡ್ತಾವು. ಆದ್ರ, ಅಲ್ಲೇ ಮಾಮ ಇಲ್ಲ . ತೀರಿಕೊಂಡು 10 ವರ್ಷಾತು. ತಮ್ಮಂದ್ರು ಜಾಬ್‌ ಹಿಡ್ಕೊಂಡು , ಮದುವಿ ಮಾಡ್ಕೊಂಡಾರ. ಈಗೂ ಕಾರ್ಯಕ್ರಮ ಇದ್ದಾಗ ಎಲ್ಲಾರು ಸೇತೇìವಿ.ಆದ್ರ ಆವಾಗಿನ ಮಜಾ ಸಿಗಂಗಿಲ್ಲ .

ಶ್ರೀಮತಿ ಲತಾ ಜೋಶಿ

ಟಾಪ್ ನ್ಯೂಸ್

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.