ಫ‌ಸ್ಟ್‌ ಇಯರ್‌ನ ಎಲ್ಲ ಹುಡುಗರ ಕಡೆಯಿಂದ…

ಹೊಡಿ ಮಗ ಹೊಡಿ ಮಗ ಬಿಡಬೇಡ ಅವ್ನಾ! 

Team Udayavani, Apr 23, 2019, 6:00 AM IST

5

ಇಷ್ಟು ಹೊತ್ತಿನವರೆಗೂ ವಿಧಿವಿಧಾನಗಳಂತೆ ಯಾರಿಗೆ, ಯಾರಿಂದ, ಯಾವ ಹಾಡು ಎಂದು ಹೇಳುತ್ತಿದ್ದವರು, ನನ್ನ ವಿಷಯದಲ್ಲಿ ಮಾತ್ರ ಯಾವೊಂದು ವಿವರಣೆಯನ್ನೂ ಕೊಡದೆ, ನೇರವಾಗಿ ಹಾಡನ್ನೇ ಪ್ಲೇ ಮಾಡಿದರು.

ನನಗಿನ್ನೂ ನೆನಪಿದೆ. ಅದು ಎಂಜಿನಿಯರಿಂಗ್‌ನ ಮೊದಲ ವರ್ಷ. ನಾವಿಲ್ಯಾಕೆ ಬಂದಿದ್ದೀವಿ, ಏನೇನು ಓದಬೇಕು, ಹೇಗೆಲ್ಲ ಪರೀಕ್ಷೆ ಎದುರಿಸಬೇಕು ಮುಂತಾದ ವಿಷಯಗಳನ್ನು ತಿಳಿಯುವ ಮೊದಲೇ ಪರೀಕ್ಷಾ ವೇಳಾಪಟ್ಟಿ ನೋಟಿಸ್‌ ಬೋರ್ಡ್‌ ಮೇಲೆ ನೇತಾಡುತ್ತಿತ್ತು. ಜೊತೆಗೆ ವಾರ್ಷಿಕೋತ್ಸವದ ದಿನವೂ ಬಂತು! ಪರೀಕ್ಷೆ ಬಗ್ಗೆಯೇ ಜಾಸ್ತಿ ಗೊತ್ತಿರಲಿಲ್ಲ. ಅಂದಮೇಲೆ, ನಾವು ವಾರ್ಷಿಕೋತ್ಸವದ ಬಗ್ಗೆ ತಲೆ ಕೆಡಿಸಿಕೊಳ್ಳುವುದು ದೂರದ ಮಾತು. ಹಾಸ್ಟೆಲ್‌ನ ಹುಡುಗಿಯರನ್ನು ಬಿಟ್ಟರೆ (ಅವರಿಗೆ ಸೀನಿಯರ್ಸ್‌ಗಳ ಒತ್ತಡದಿಂದ ಭಾಗವಹಿಸಲೇಬೇಕಾಗಿತ್ತು), ಉಳಿದವರಿಗೆ ವಾರ್ಷಿಕೋತ್ಸವದ ಬಗ್ಗೆ ಹೆಚ್ಚೇನೂ ಕುತೂಹಲವಿರಲಿಲ್ಲ. ನಮಗೆ ಕುತೂಹಲವಿದ್ದುದು ಎರಡೇ ವಿಷಯಗಳ ಬಗ್ಗೆ; ಒಂದು ಅವತ್ತು ಊಟಕ್ಕೆ ಏನೇನಿರುತ್ತದೆ? ಎರಡನೆಯದು ಮತ್ತು ಮುಖ್ಯವಾದದ್ದು ವಾರ್ಷಿಕೋತ್ಸವದ ಕಾರ್ಯಕ್ರಮಗಳು ಮುಗಿದ ಮೇಲೆ ಮನೆಗೆ ಹೋಗಲು ಕಾಲೇಜ್‌ ಬಸ್‌ ಅರೇಂಜ್‌ಮೆಂಟ್‌ ಇರುತ್ತದೋ, ಇಲ್ಲವೋ ಎಂದು!

ಹೀಗಿರುವಾಗ, ವಾರ್ಷಿಕೋತ್ಸವದ ಮೊದಲನೇ ದಿನ ಒಂದು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಏನೆಂದರೆ, ಇಷ್ಟ ಬಂದವರಿಗೆ ಕವಿತೆ, ಚಿತ್ರಗೀತೆ ಅಥವಾ ಶಾಯರಿಯನ್ನು ಅರ್ಪಿಸುವ ಕಾರ್ಯಕ್ರಮ. ಈ ಹಾಡು/ ಕವಿತೆ ಯಾರಿಂದ, ಯಾರಿಗೋಸ್ಕರ ಎಂದು ನಿರೂಪಕರು ಮೈಕ್‌ನಲ್ಲಿ ಹೇಳುತ್ತಿದ್ದರು. ಕೆಲವರು ತಮ್ಮ ಸ್ನೇಹಿತರಿಗೆ ಸ್ನೇಹಕ್ಕೆ ಸಂಬಂಧಿಸಿದ ಹಾಡು ಅರ್ಪಿಸಿದರೆ, ಇನ್ನೂ ಕೆಲವರು ತಮ್ಮ ನೆಚ್ಚಿನ ಶಿಕ್ಷಕರಿಗೆ ಗೌರವಾರ್ಥವಾಗಿ ಹಾಡು ಅರ್ಪಿಸಿದರು. ಇದನ್ನೇ ಅವಕಾಶ ಮಾಡಿಕೊಂಡು ಕೆಲ ಹುಡುಗರು ತಮ್ಮ ಪ್ರೀತಿಯ ಹುಡುಗಿಗೆ ಪ್ರೇಮ ನಿವೇದನೆಯನ್ನೂ ಮಾಡಿದರು!
ನನ್ನ ಹೆಚ್ಚಿನ ಸಹಪಾಠಿಗಳಿಗೆ ಪ್ರೀತಿ ನಿವೇದನೆಯ ಹಾಡುಗಳು ಸಾಲು ಸಾಲಾಗಿ ಬರಲಾರಂಭಿಸಿದವು. ಅದೂ ಅಲ್ಲದೆ, ಕೆಲ ಹುಡುಗರು ತಮ್ಮ ಹೆಸರನ್ನು ಹೇಳದೆ, ಬರೀ ಎಲೆಕ್ಟ್ರಾನಿಕ್ಸ್ ವಿಭಾಗ, ಮೆಕ್ಯಾನಿಕಲ್‌ ವಿಭಾಗ ಎಂದಷ್ಟೇ ನಮೂದಿಸಿ; ಈ ಹುಡುಗ ಯಾರಿರಬಹುದು ಎಂದು ಹುಡುಗಿಯರ ತಲೆಯೊಳಗೆ ಹುಳ ಬಿಟ್ಟರು. ಆಗ ನಿರೂಪಕರು ಥಟ್ಟನೆ ನನ್ನ ಹೆಸರನ್ನು ಹೇಳಿಬಿಟ್ಟರು! “ಈಗ ಹಾಕಲಾಗುವ ಹಾಡು, ಎಲೆಕ್ಟ್ರಿಕಲ್‌ ಅಂಡ್‌ ಎಲೆಕ್ಟ್ರಾನಿಕ್ಸ್ ವಿಭಾಗದ ಅನುಪಮಾ ಬೆಣಚಿನಮರ್ಡಿ ಅವರಿಗೆ’ ಎಂದು ಹೇಳಿದರಷ್ಟೇ. ನಿಮಿರಿ ನಿಂತಿದ್ದ ನನ್ನ ಕಿವಿಗಳು “ಯಾರಿಂದ?’ ಎಂದು ಕೇಳಲು ಹಾತೊರೆದವು. ಆದರೆ, ಇಷ್ಟು ಹೊತ್ತಿನವರೆಗೂ ವಿಧಿವಿಧಾನಗಳಂತೆ ಯಾರಿಗೆ, ಯಾರಿಂದ, ಯಾವ ಹಾಡು ಎಂದು ಹೇಳುತ್ತಿದ್ದವರು, ನನ್ನ ವಿಷಯದಲ್ಲಿ ಮಾತ್ರ ಯಾವೊಂದು ವಿವರಣೆಯನ್ನೂ ಕೊಡದೆ, ನೇರವಾಗಿ ಹಾಡನ್ನೇ ಪ್ಲೇ ಮಾಡಿದರು. ಅದೂ ಯಾವ ಹಾಡು?- ಜೋಗಿ ಚಿತ್ರದ “ಹೊಡಿ ಮಗ ಹೊಡಿ ಮಗ, ಬಿಡಬೇಡ ಅವಾ°…’

ಎಲ್ಲರೂ ಹೋ ಎಂದು ಕೂಗಲು ಶುರು ಮಾಡಿದರು. ಸ್ವಲ್ಪ ಹೊತ್ತು ಜಾಸ್ತಿಯೇ ಪ್ಲೇ ಮಾಡಿದ ನಿರೂಪಕರು, ಹಾಡು ಮುಗಿದ ಮೇಲೆ “ಇದು ಎಲ್ಲ ಫ‌ಸ್ಟ್ ಇಯರ್‌ ಹುಡುಗರ ಕಡೆಯಿಂದ’ ಎಂದು ಒತ್ತಿ ಒತ್ತಿ ಹೇಳಿದರು. ನನಗಂತೂ ಕೋಪ ನೆತ್ತಿಗೇರಿತ್ತು. ನನ್ನ ಸ್ನೇಹಿತೆಯರೆಲ್ಲ ನಕ್ಕು ನಕ್ಕು, “ಏನೇ, ಕಾಲೇಜ್‌ ಬ್ಯಾಗಲ್ಲಿ ಲಾಂಗು, ಮಚ್ಚು ಏನಾದ್ರೂ ಇಟ್ಕೊಂಡಿದೀಯಾ? ಅವರು ಯಾಕೆ ಆ ಹಾಡನ್ನು ಅರ್ಪಿಸಿದ್ದಾರೆ?’ ಅಂತ ಗೇಲಿ ಮಾಡುತ್ತಿದ್ದರು.

ಸ್ವಲ್ಪ ನೇರವಾಗಿ, ಇದ್ದುದನ್ನು ಇದ್ದ ಹಾಗೆ ಹೇಳುವ ನನ್ನ ಸ್ವಭಾವ ಹಾಗೂ ಒಂದೆರಡು ಬಾರಿ, ಕಾಲೇಜ… ಬಸ್‌ನಲ್ಲಿ ಹುಡುಗಿಯರಿಗೆ ಮೀಸಲಿರಿಸಿದ ಸೀಟ್‌ನಲ್ಲಿ ಕುಳಿತಿದ್ದ ಹುಡುಗರನ್ನು ಎಬ್ಬಿಸಿ ನಾನು ಕೂತಿದ್ದಕ್ಕೆ ಈ ಹಾಡನ್ನು ಅರ್ಪಿಸುವುದೇ? ನನಗೆ ಗೊತ್ತಿತ್ತು, ಇಡೀ ಕಾಲೇಜಿನ ಫ‌ಸ್ಟ್ ಇಯರ್‌ ಹುಡುಗರ ಮೆದುಳು ಒಂದೇ ತೆರನಾಗಿ ಕೆಲಸ ಮಾಡಲು ಸಾಧ್ಯವೇ? ಯಾರೋ ತಮ್ಮ ಹೆಸರನ್ನು ನಮೂದಿಸಲು ಭಯವಾಗಿ ಹೀಗೆ ಮಾಡಿದ್ದಾರೆ ಎಂದು!

ಆದರೆ, ಇದೊಂದು ಸವಿನೆನಪಾಗಿ ನನ್ನ ಮನಃಪಟಲದಲ್ಲಿ ಉಳಿದಿದೆ. ಈಗಲೂ, ಜೋಗಿ ಚಿತ್ರದ ಹಾಡು ಟಿವಿಯಲ್ಲಿ ಬರುತ್ತಿದ್ದರೆ, ಸ್ನೇಹಿತರು ಮೆಸೇಜ… ಮಾಡಿ, “ಈ ಚಾನೆಲ… ಹಾಕು’ ಅಂತ ಕಿಚಾಯಿಸುತ್ತಾರೆ. ಇವತ್ತಿಗೂ, ಆ “ಎಲ್ಲ ಫ‌ಸ್ಟ್ ಇಯರ್‌ ಹುಡುಗರ ಕಡೆಯಿಂದ’ ಎಂದು ಬರೆದುಕೊಟ್ಟ ಹುಡುಗನನ್ನು ಹುಡುಕುತ್ತಿದ್ದೇನೆ (ಸಿಗಲಿ ನನ್ನ ಕೈಗೆ ಎಂದು!).

ಅನುಪಮಾ ಬೆಣಚಿನಮರ್ಡಿ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.