ಕಷ್ಟಕ್ಕೆ ನೆರವಾದ ಆ ಮೇಷ್ಟ್ರಿಗೆ ಸಲಾಂ


Team Udayavani, Oct 22, 2019, 4:02 AM IST

kashtakke

ನಮ್ಮ ಶಾಲೆಯಲ್ಲಿ ಪ್ರತೀ ವರ್ಷ ಶಾಲಾ ಮಟ್ಟದಲ್ಲದೆ, ದಸರಾ, ಗಣೇಶ ಹಬ್ಬದ ಪ್ರಯುಕ್ತ ಆಯೋಜಿಸುವ ಆಟಗಳಲ್ಲಿ ಆಡಿದ್ದೇ ಆಡಿದ್ದು. ಜೊತೆಗೆ ಆಗ ಶಾಲೆಯಲ್ಲಿ ಓದಲೇಬೇಕು ಎನ್ನುವ ಒತ್ತಡವೇನೂ ಹೆಚ್ಚಿರಲಿಲ್ಲ. ನಮ್ಮ ಪಿ.ಟಿ ಮೇಷ್ಟ್ರು ಕೂಡಾ ಬಹಳ ಮೃದು ಸ್ವಭಾವದವರು. ಶಾಲೆಯಲ್ಲಿ ನಮಗೆ ಸಿಗುತ್ತಿದ್ದ ಮರ್ಯಾದೆ, ಗೌರವಗಳು ಕೆಲವೊಮ್ಮೆ ನಾವು ಅಹಂಕಾರದ ಹಾದಿ ಹಿಡಿಯಲು ಕಾರಣವಾದವು!.

ಆವತ್ತೂಂದು ದಿನ ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆವು. ಮಳೆಗಾಲ ಬೇರೆ. ಮಲೆನಾಡಿನ ಮಳೆಗಾಲದ ವೈಖರಿಯನ್ನು ಹೆಚ್ಚೇನು ವಿವರಿಸಬೇಕಿಲ್ಲ. ಮೈದಾನಕ್ಕೆ ಧಾವಿಸುತ್ತಿರುವಂತೆ ವರುಣನ ಆರ್ಭಟ ಆರಂಭವಾಗಿತ್ತು. ಜಿಲ್ಲಾ ಮಟ್ಟದ ಕ್ರೀಡೆಯಾದ ಕಾರಣ, ಎದುರಾಳಿ ಸ್ಪರ್ಧಾಳುಗಳು ತಯಾರಿ ನಡೆಸುತ್ತಿದ್ದರು. ನಮ್ಮ ಊರಿನ ಜನರಿಗೆ ನಾವೇ ಸ್ಟಾರ್‌ಗಳು!. ಧ್ವನಿವರ್ಧಕದಿಂದ ಆಟ ಆರಂಭವಾಗುವ ಸೂಚನೆ ಕೇಳಿಬಂತು.

ಮಳೆಯಿಂದ ಸೃಷ್ಟಿಯಾಗಿದ್ದ ಕೆಸರನ್ನು ಲೆಕ್ಕಿಸದೆ, ತಮ್ಮ ತಮ್ಮ ತಂಡದ ಪರವಾಗಿ ನಿಂತುಕೊಳ್ಳುತ್ತಿದ್ದರು. ಅಂಕಣಕ್ಕೆ ಇಳಿಯುವ ಮುನ್ನವೇ ಪಿ.ಟಿ ಮೇಷ್ಟ್ರು ಒಳ್ಳೆ ಸಲಹೆಗಳನ್ನಿತ್ತು ಕಳುಹಿಸಿದರು. ಪ್ರೇಕ್ಷಕರ ನಿರೀಕ್ಷೆಯನ್ನು ಮೀರಿಸುವಂತೆ ಆಡಿ ಫೈನಲ್‌ ತಲುಪಿದ್ದೆವು. ಎರಡು ಬಲಿಷ್ಠ ತಂಡಗಳ ಹಣಾಹಣಿಯನ್ನು ನೋಡಲು ನೆರೆದಿದ್ದ ಜನರು ಅಪಾರ. ಗೆಲುವು ನಮ್ಮ ದೇ ಎನ್ನುವ ಭರವಸೆಯಿತ್ತು.

ಆದರೆ, ವಿಧಿಯಾಟವೇನೋ? ಕೊನೆಯ 5 ನಿಮಿಷದ ಆಟದಲ್ಲಿ ಬಾಕ್ಸಿಂದ ಹೊರಬಂದ ನನ್ನ ಕಾಲಿನ ಮೂಳೆ ಮುರಿಯಿತು.ತಕ್ಷಣಕ್ಕೆ ಆಟದ ಫ‌ಲಿತಾಂಶ ಕುರಿತು ಯೋಚಿಸದೆ, ನಮ್ಮ ಪಿ.ಟಿ ಮೇಷ್ಟ್ರು ನನ್ನನ್ನು ಎತ್ತಿಕೊಂಡೇ ಆ್ಯಂಬುಲೆನ್ಸ್‌ ಹತ್ತಿದ್ದರು. ಕೆಲವರು ನನ್ನನ್ನು ಹೊಗಳಿ ದುಃಖ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಆಟವನ್ನು ಹಾಳು ಮಾಡಿದ ಹೊಣೆಯನ್ನು ನನ್ನ ತಲೆಗೆ ಕಟ್ಟಿದ್ದರು.

ಅದ್ಯಾವುದಕ್ಕೂ ಲೆಕ್ಕಿಸದೆ, ಆಟ ಬಿಟ್ಟು, ಅಲ್ಲಿದ್ದ ಪಿ.ಟಿ ಮೇಷ್ಟ್ರು ಒಬ್ಬರು, ರಾತ್ರಿ ತನಕ ಆಸ್ಪತ್ರೆಯಲ್ಲಿದ್ದರು. ಆಮೇಲೆ ಬೆಳಗ್ಗೆ ಚಿಕಿತ್ಸೆ ಮುಗಿಸಿ, ಮನೆಗೆ ತಲುಪಿಸಿದ್ದರು. ಆವತ್ತು ಪಿ.ಟಿ ಮೇಷ್ಟ್ರು ಅಲ್ಲಿ ಇಲ್ಲದೇ ಇದ್ದಿದ್ದರೆ ನನ್ನ ಕತೆ ಬೇರೆಯೇ ಆಗುತ್ತಿತ್ತು. ಇವತ್ತು ಎಲ್ಲಿದ್ದಾರೋ ಗೊತ್ತಿಲ್ಲ. ಆದರೆ, ಅವರ ಸಹಾಯವನ್ನು ಎಂದಿಗೂ ಮರೆಯಲಾರೆ. ಥ್ಯಾಂಕ್ಯೂ ಸಾರ್‌

* ರಕೀಬ್‌, ಕುದುರೆಗುಂಡಿ

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.