ಬಸ್ಸಿನಲ್ಲಿದ್ದ ಎಲ್ಲರ ಜೀವ ಉಳಿಸಿದ


Team Udayavani, Feb 18, 2020, 4:56 AM IST

ben-1

ತಿಂಗಳಿಗೊಮ್ಮೆಯಾದರೂ ಕಾರಣ ನಿಮಿತ್ತ ನಾನು ಬೆಂಗಳೂರಿಗೆ ಹೋಗುವುದು ರೂಢಿ. ಅಂದು ಕೂಡ ನಮ್ಮೂರಿನಿಂದ ಮಹಾನಗರಿಗೆ ಹೊರಡಲು ಸ್ಲಿಪರ್‌ ಕೋಚ್‌ ಬಸ್‌ ಹತ್ತಿದ್ದೆ. ಸೀಟ್‌ ಬುಕ್‌ ಮಾಡುವಾಗ, ಬಸ್ಸಿನ ಸ್ಥಿತಿಗತಿ ತಿಳಿಯುವಂತಿದ್ದರೆ ಚೆನ್ನಾಗಿರುತ್ತದೆ ಅಂತ ಅನಿಸಿದ್ದೇ ಆವತ್ತು. ಈ ಮಾತು ಏಕೆ ಅನ್ನೋಕ್ಕಿಂತ ಮುಂದೆ ಏನಾಯ್ತು ಅಂತ ನೋಡಿ…ಆ ಬಸ್ಸೋ ಹಳೆಯದು. ಅದನ್ನು ಹತ್ತಿದ ಮೇಲೆಯೇ ನಮಗೆ ತಿಳಿದದ್ದು. ಅದರ ಬಿಡಿ ಬಾಗಗಳೆಲ್ಲ ಗಡಗಡ ಅಲುಗಾಡುತಿದ್ದವು. ಹೀಗಾಗಿ, ರಾತ್ರಿ ಪೂರಾ ನಿದ್ರೆ ಇಲ್ಲ. ನೂರು ಕಿ.ಮೀ ಹೋಗುವಷ್ಟರಲ್ಲಿ ಎರಡು ಮೂರು ಸಲ ಅಲ್ಲಲ್ಲಿ ಕೆಟ್ಟು ನಿಂತಿತು. ಕಂಡಕ್ಟರ್‌, ಡ್ರೈವರ್‌ ತಮಗೆ ಗೊತ್ತಿದ್ದ ಬುದ್ಧಿಮತ್ತೆಯಿಂದ ರಿಪೇರಿ ಮಾಡಿದರಾದರೂ ಬಸ್‌ ವೇಗವಾಗಿ ಏನೂ ಹೋಗುತ್ತಿರಲಿಲ್ಲ. ಹೀಗೆ ಹೋದರೆ, ಬೆಂಗಳೂರು ತಲುಪುವುದು ಯಾಕೋ ಕಷ್ಟವೆನಿಸತೊಡಗಿತು.

ಯಾವ ಮಟ್ಟಕ್ಕೆ ಎಂದರೆ, ಈ ಬಸ್ಸಲ್ಲಿ ಕೂತರೂ ಎತ್ತಿನ ಗಾಡಿಯ ಪ್ರಯಾಣದ ಅನುಭವವಾಗತೊಡಗಿತು. ಹಾಗೂ ಹೀಗೂ, ನಸುಕಿನ ಐದು ಗಂಟೆ ಹೊತ್ತಿಗೆ ಬಸ್‌ ತುಮಕೂರು ತಲುಪಿತು. ಈ ಸಮಯದಲ್ಲಿ ಪ್ರಯಾಣಿಕರೆಲ್ಲರೂ ಗಾಡ ನಿದ್ದೆಯಲ್ಲಿದ್ದರು. ಹಿಂದೆ ಮಲಗಿದ್ದ ಸಹ ಪ್ರಯಾಣಿನೊಬ್ಬನಿಗೆ ತಾನು ಮಲಗಿದ ಬೆಡ್ಡಿನ ಕೆಳಗೆ ಏನೋ ಬಿಸಿ ಬಿಸಿ ಆದಂತಾಯಿತು. ಅವನಿಗೆ ಏನನಿಸಿತೋ, ಏನು ಊಹಿಸಿದನೋ… ಎದ್ದವನೇ ದೊಡ್ಡ ದನಿಯಲ್ಲಿ, “ಎಲ್ಲರು ಇಳೀರಿ. ಬಸ್ಗೆ ಬೆಂಕಿ ಹೊತ್ತಿಕೊಂಡಿದೆ. ಬೇಗ ಇಳೀರಿ’ ಎಂದು ಚೀರತೊಡಗಿದ. ನಿದ್ದೆಯಲ್ಲಿದ್ದ ನನಗೆ ಸಣ್ಣಗೆ ಯಾರೋ ಕೂಗಿದಂತೆ ಕೇಳುತ್ತಿತ್ತು. ಮರುಕ್ಷಣವೇ ಎಲ್ಲರೂ ದಡಬಡಿಸಿ ಎದ್ದರು. ಕೊನೆಗೆ ಎದ್ದೆನೊ…ಬಿದ್ದೆನೋ ಅಂತ ಕಿರುಚುತ್ತಾ ತಮ್ಮ ವಸ್ತುಗಳನ್ನು ಅಲ್ಲಿಯೆ ಬಿಟ್ಟು, ಕೆಳಗಿಳಿದು ಓಡಲು ಶುರುಮಾಡಿದರು.

ಎಲ್ಲರೂ ಇಳಿದು, ಒಂದಷ್ಟು ಮೀಟರ್‌ಗಳಷ್ಟು ದೂರದಲ್ಲಿ ನಡೆದು ಹೋಗುತ್ತಿರುವಾಗಲೇ ಬೆಂಕಿಯ ಜ್ವಾಲೆಯಲ್ಲಿ ಬಸ್ಸೇ ಉರಿಯತೊಡಗಿತು. ಕೆಂಪು ಕೆನ್ನಾಲಿಗೆಯಲ್ಲಿ ಆಕಾಶದೆತ್ತರಕ್ಕೆ ಹೊಗೆ ಸೂಸುತ್ತಿದ್ದ ಅವಘಡವನ್ನು ಕಣ್ಣ ಮುಂದೆಯೇ ಕಂಡವರು ಅವಾಕ್ಕಾದರು. ಆವತ್ತು ಅಪಾಯವನ್ನು ಗ್ರಹಿಸಿ, ಪದೇ ಪದೆ ಕೂಗು ಹಾಕಿ ಎಲ್ಲರನ್ನೂ ಎಬ್ಬಿಸಿ, ಬಸ್‌ನಲ್ಲಿದ್ದ ಎಲ್ಲರ ಜೀವ ಉಳಿಸಿದ ಆ ಅನಾಮಿಕ ಸಹ ಪ್ರಯಾಣಿಕನಿಗೆ ಶರಣು.

ಅಂಬಿ ಎಸ್‌ ಹೈಯ್ನಾಳ್‌,ಮುದನೂರ .ಕೆ

ಟಾಪ್ ನ್ಯೂಸ್

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.