ನೀನೇ ಮುಂದಾಗಿ ಒಮ್ಮೆ ಮಾತಾಡು…
Team Udayavani, Feb 18, 2020, 4:18 AM IST
ಹಂಚಿಕೊಂಡಷ್ಟು ಹೆಚ್ಚಾಗುತ್ತದಂತೆ ಪ್ರೀತಿ. ಪ್ರೀತಿ ಹಂಚಬೇಕಂತೆ. ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದಂತೆ. ಕವಿ ‘ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ?’ ಎಂದಿ¨ªಾರಂತೆ! ಹೀಗೆಲ್ಲ ಭಾಷಣ ಮಾಡುವ ನಿಮ್ಮಪ್ಪಾಜಿ ನಿನ್ನ ನನ್ನ ಪ್ರೀತಿಗೆ ಅದೇಕೆ ನಿರಾಕರಿಸುತ್ತಾರೆ? ‘ಹೇಳ್ಳೋದು ಶಾಸ್ತ್ರ ತಿನ್ನೋದು ಬದನೆಕಾಯಿ’ ಅಂತಾರಲ್ಲ, ಅವರು ಆ ಗುಂಪಿನವರಾ?
ನಾನು ಹೀಗೆ ಕೇಳ್ತೀನಿ ಅಂತ ಬೇಜಾರಾಗ್ಬೇಡ. ನಾನೇನಿದ್ರೂ ಸ್ಟ್ರೇಟ್ ಫಾರ್ವರ್ಡ್. ಹಿಂದೊಂದು ಮುಂದೊಂದು ಮಾತಾಡೋದು ನಂಗೊತ್ತಿಲ್ಲ. ಹಾಗೆ ಮಾತಾಡೋರನ್ನ ಕಂಡ್ರೂ ನನಗಾಗಲ್ಲ. ಬೀಸೋ ಗಾಳಿ, ಸುರಿಯೋ ಮಳೆ, ಸೂರ್ಯನ ಬೆಳಕು, ಅಷ್ಟೇ ಏಕೆ? ಉರಿಯೋ ಬೆಂಕಿಯೂ ಪ್ರಕೃತಿಯಲ್ಲಿ ತಾರತಮ್ಯ ಮಾಡದೇ ಬದುಕುವ ಪಾಠ ಹೇಳುತ್ತಿವೆ. ಜಗತ್ತಿನ ಯಾವ ಜೀವಿಗೂ ಇಲ್ಲದ ಬುದ್ಧಿವಂತಿಕೆ, ವಿವೇಚನೆ, ವೈಚಾರಿಕತೆ, ಜ್ಞಾನ, ತರ್ಕ ಇರೋ ಮನುಷ್ಯನ ಈ ಪ್ರೀತಿಯ ವಿಷಯದಲ್ಲಿ ಅದ್ಯಾಕೆ ಹೀಗಾಡ್ತಾನೋ ಗೊತ್ತಿಲ್ಲ. ಇದು ನಿಮ್ಮನೆ ಕಥೆ ಮಾತ್ರವಲ್ಲ, ಎಲ್ಲರದೂ. ಜಾತಿ, ಅಂತಸ್ತಿನ ಅಡ್ಡಗೋಡೆ ಕಟ್ಟುವ ಜನ- ಬೆಳ್ಳಿ-ಬಂಗಾರ, ವಜ್ರ-ವೈಢೂರ್ಯಕ್ಕಿಂತಲೂ ಬೆಲೆ ಬಾಳ್ಳೋ ಪ್ರೀತಿಯ ಆಭರಣವನ್ನು ತಿರಸ್ಕರಿಸಿಬಿಡುತ್ತಾರೆ. ಬಹಳ ಓದಿ ತಿಳಿದಿರೋ ನಿಮ್ಮಪ್ಪಾಜಿಗೆ ನನ್ನ-ನಿನ್ನ ಪ್ರೀತಿ ವಿಷಯದಲ್ಲಿ ಇಂತಹ ಕ್ಷುಲ್ಲಕ ವಿಚಾರ ಇರದೇ ಇರಬಹುದು. ಅವರೊಂದಿಗೆ ಮನಸ್ಸು ಬಿಚ್ಚಿ ಮಾತಾಡು. ಇಲ್ಲವೇ ನನಗೆ ಮಾತಾಡಲು ಬಿಡು.
ಹೆಣ್ಣು ಮಕ್ಕಳಿಗೆ ಅಪ್ಪನಂತಹ ಸ್ನೇಹಿತ ಮತ್ತೂಬ್ಬನಿರಲಾರ. ನೀನೇನೋ ಮಹಾಪರಾಧ ಮಾಡಿದ ರೀತಿ ನಮ್ಮ ಪ್ರೀತಿಯ ವಿಚಾರ ತಿಳಿಸಲು ಹಿಂದೆ-ಮುಂದೆ ನೋಡುತ್ತ ನಮ್ಮ ಅಮೂಲ್ಯ ಸಂಬಂಧ ಮುರಿದುಕೊಂಡು ಬದುಕಿನುದ್ದಕ್ಕೂ ಕೊರಗುವುದು ಬೇಡ. ಒಮ್ಮೆ ನೋಡು…
ನಿನ್ನೊಲವ ದೊರೆ
ಅಶೋಕ ವಿ ಬಳ್ಳಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ