ಚಿಕ್ಕ ಬರವಸೆಯೊಂದಿಗೆ ದಿನ ಕಳೆಯುತ್ತಿರುವೆ..


Team Udayavani, Oct 15, 2019, 5:00 AM IST

l-12

ಲೆಕ್ಕವಿಲ್ಲದಷ್ಟು ಕಂಡ ಕನಸಿಗೆ ರೆಕ್ಕೆ ನೀಡುವ ದಿನ ಬರಬಹುದೆಂಬ ಹೆಬ್ಬಯಕೆ. ನಿನ್ನ ಮುಗುಳುನಗು, ಗುಳಿಕೆನ್ನೆಯ ಮುಖ ನೋಡಲು ಸದಾಕಾಯುತ್ತಿರುವೆ ಹುಡುಗಾ…ಬರುವೆಯಾ ಮರೆಯದೇ?

ನಿನ್ನ ಕರೆಗಾಗಿ ಕಾದ ರಾತ್ರಿಗಳಿಗೆ ಲೆಕ್ಕವೇ ಇಲ್ಲ, ನಿನ್ನ ನೆನಪಿಗೆ ಪೂರ್ಣವಿರಾಮವಿಟ್ಟು ಬಿಡೋಣ ಎಂದರೆ ಅದಕ್ಕೂ ಮನಸ್ಸು ಒಪ್ಪುತ್ತಿಲ್ಲ. ನಿನ್ನ ಪಾಲಿಗೆ ನಾನು ಮುಗಿದ ಅಧ್ಯಾಯವಷ್ಟೇ. ಆದರೆ, ನನಗಿನ್ನೂ ನೀನು ವಸಂತ ಮಾಸದ ಚಿಗುರಿನಂತೆ ಸದಾಕಾಲ ಹಸಿರಾಗಿ, ನವಿರು ಗೊಳಿಸುವ ಸುಂದರ ಕನಸೇ ಆಗಿದ್ದೀಯ. ಅಂದು ನೀನಾಡಿದ ಮಾತುಗಳು ಇಂದು ಜೀವ ಕಳೆದು ಕೊಂಡಿವೆ. ನೀನೇ ಪ್ರಪಂಚವೆಂಬ ಮಾತು ನಶ್ವರಗೊಂಡು ಕೇವಲ ಪ್ರಶ್ನೆಯಾಗಿ ಉಳಿದಿದೆ.

ಪರೀಕ್ಷೆಯ ಗಡಿಬಿಡಿಯಲ್ಲಿದ್ದ ನನಗೆ, ಸೋಶಿಯಲ್‌ ಮೀಡಿಯಾದೆಡೆಗೆ ಗಮನವಿರಲಿಲ್ಲ. ಒಂದು ತಿಂಗಳ ನಂತರ ತೆಗೆದು ನೋಡಿದಾಗ ನಿನ್ನ ಸಂದೇಶವಿತ್ತು. ಅಪರಿಚಿತರೊಂದಿಗೆ ಮಾತು ಅನುಚಿತವಲ್ಲವೆಂದು, ಅದರಲ್ಲೂ ಸೋಶಿಯಲ್‌ ಮೀಡಿಯಾಗಳ ಬಗ್ಗೆ ಕೊಂಚ ಆತಂಕವಿದ್ದ ನನಗೆ, ನಿನ್ನ ಸಂದೇಶಕ್ಕೆ ಮರು ಉತ್ತರಿಸಬೇಕೆನಿಸಲಿಲ್ಲ.

ಎರಡು ದಿನಗಳ ನಂತರ ಮತ್ತೆ ಬಂದ ನಿನ್ನ ಸಂದೇಶ,ಯಾರಿರಬಹುದು ಎಂಬ ಆ ಕುತೂಹಲವೇ ಎಡೆಮಾಡಿಕೊಟ್ಟಿತು. ಕುತೂಹಲ ಸಂದೇಶವಾಗಿ ರವಾನೆಯಾಯಿತು ಪರಿಚಯವಾದ ಹೊಸತರಲ್ಲಿ ನಿನ್ನೆಡೆಗೆ ಅಷ್ಟು ಗಮನಹರಿಸದ ನಾನು, ದಿನಕಳೆದಂತೆ ನಿನಗೆ ಮನಸೋತಿದ್ದ. ನಿನ್ನ ನಡುವಳಿಕೆ, ನಾನಂದುಕೊಂಡ ಕನಸಿನ ಹುಡಗನನ್ನು ಹೋಲುವಂತಿತ್ತು. ಅದೇ ಕಾರಣವಿರಬಹುದು: ಪರಿಚಯ ಸ್ನೇಹವಾಗಲು, ಸ್ನೇಹ ಪ್ರೀತಿಯಾಗಲು ಹೆಚ್ಚು ಸಮಯ ಹಿಡಿಯಲಿಲ್ಲ.

ಪ್ರತಿದಿನ ಒಂದೆರಡು ಸಂದೇಶಗಳಲ್ಲಿ ಮುಗಿಯುತ್ತಿದ್ದ ಮಾತು ಆ ನಂತರ ಬೆಳೆಯುತ್ತಾ ಹೋಯಿತು. ಕಾಲಕ್ರಮೇಣ ದಿನವಿಡೀ ಸಂದೇಶಗಳೇ ಹರಿದಾಡುವಂತಾಯಿತು. “ಪ್ರೀತಿಯಲ್ಲಿ ಬಿದ್ದವರಿಗೆ ಜಗತ್ತೇ ಕುರುಡು’ಎನ್ನುವ ಮಾತಿಗೆ ನಾವೇನೂ ಹೊರತಾಗಿರಲಿಲ್ಲ. ಅದೆಷ್ಟೋ ಸನ್ನಿವೇಷಗಳಲ್ಲಿ ನೀನು ನನ್ನ ಪರವಾಗಿ ನಿಂತು ಸಮಾಧಾನಗೊಳಿಸುವಾಗ ನಾನೆಂದುಕೊಂಡಿದ್ದೆ “ನನ್ನಷ್ಟು ಪುಣ್ಯವಂತೆ ಇಲ್ಲ ‘.ನಿನಗೂ ಜೀವನದಲ್ಲಿ ಏನಾದರು ಸಾಧಿಸಬೇಕೇಂಬ ಹಂಬಲ. ಅದಕ್ಕೆ ನನ್ನದೇನೂ ಅಡ್ಡಿ ಇರಲಿಲ್ಲ. ಅದೇ ಉದ್ದೇಶದಿಂದ ನೀನು ಬೆಂಗಳೂರಿಗೆ ಹೋದೆ. ಬಹುಶಃ ಅದೇ ನನ್ನ ನಿನ್ನ ಕೊನೆಯ ಭೇಟಿ!

ಹಾಗೆಯೇ, ಅದೇ ನನ್ನ ಮೊದಲ ತಪ್ಪೆಂದು ಹೇಳಬಹುದು.ಮಾಯಾನಗರಿ ಬೆಂಗಳೂರಿಗೆ ಹೋದ ನೀನು, ಎಲ್ಲಿ ಕಳೆದುಹೊದೆಯೆಂದು ಹುಡುಕಲು ನನ್ನಿಂದ ಸಾಧ್ಯವಾಗಲೇ ಇಲ್ಲ. ನನ್ನವನಾಗಿದ್ದ ನೀನು ಕೇವಲ ಒಂದೇ ತಿಂಗಳಿನಲ್ಲಿ ಅಪರಿಚಿತನಾದೆ. ಎಂದಾದರೂ ಒಂದು ದಿನ ಮರಳಿ ಬರುವೆಯೆಂಬ ಹಂಬಲ ನನ್ನದು. ನಾವು ನಡೆದ ಹೆಜ್ಜೆ ಗುರುತುಗಳು ಮತೊಮ್ಮೆ ಸಾಕ್ಷಿಕೇಳುತ್ತಿವೆ. ಸಾಬೀತುಪಡಿಸಲು ನೀನಿಲ್ಲವಲ್ಲ ಎಂಬುದೇ ಕೊರಗು. ಕೂತಜಾಗ, ಆಡಿದ ಮಾತುಗಳು, ಕಂಡ ಕನಸುಗಳು ಎಲ್ಲವೂ ನನ್ನನ್ನು ಅಣಕಿಸಿದಂತೆ ಭಾಸವಾಗುತ್ತಿದೆ. ನಿನಗಾಗಿ ಒಂದು ಜೀವಕಾಯುತ್ತಿದೆ ಎಂದು ನೆನಪಾಗಿ ಎಂದಾದರೊಂದು ದಿನ ಮರಳುವೆಯೆಂಬ ಚಿಕ್ಕ ಭರವಸೆಯಲ್ಲಿ ದಿನದೂಡುತ್ತಿರುವೆ. ನಿನ್ನ ಮುಗುಳುನಗು, ಗುಳಿಕೆನ್ನೆಯ ಮುಖ ನೋಡಲು ಸದಾಕಾಯುತ್ತಿರುವೆ ಕಣೋ…ಬರುವೆಯಾ ಮರೆಯದೇ?

ವಿಶ್ವಾಸಗಳೊಂದಿಗೆ,

ಪವಿತ್ರಾ ಭಟ್‌

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.