ವರ್ಕ್‌ ಫ್ರಂ ಹೋಮ್‌ ಕತೆಗಳು : ಆಫೀಸೇ ಚೆನ್ನಾಗಿತ್ತು…


Team Udayavani, Apr 7, 2020, 6:04 PM IST

ವರ್ಕ್‌ ಫ್ರಂ ಹೋಮ್‌ ಕತೆಗಳು : ಆಫೀಸೇ ಚೆನ್ನಾಗಿತ್ತು…

ನಾಳೆಯಿಂದ ವರ್ಕ್‌ ಫ್ರಂ ಹೋಂ ಅಂದಾಗ, ಖುಷಿಯೋ ಖುಷಿ. ಹೆತ್ತವರಿಗೆ, ಮಗ ಮನೇಲೆ ಇರ್ತಾನೆ ಅನ್ನೋ ಸಡಗರ. ನಾಳೆ ತಿಂಡಿ ಏನು ಬೇಕು ಅಂತ ಹೆಂಡತಿ ಕೇಳಿದಳು. ಬಿಸಿಬೇಳೆ ಬಾತ್‌ ಮಾಡೇ ಅಂತ ಅಮ್ಮ ಅಂದಳು. ಅಪ್ಪಾ, ನಾಳೆ ನೀನು ನನ್ನ ಜೊತೆ ಆಟ ಆಡಬೇಕು ಅಂತ ಮಗ ಶುರು ಮಾಡಿದ… ಹೀಗೆ, ಪಟ್ಟಿ ಬೆಳೆಯುತ್ತಾ ಹೋಯಿತು. ವರ್ಕ್‌ ಫ್ರಂ ಹೋಮ್‌ ಖುಷಿಯ ಬೆನ್ನಿಗೆ.  ಸರಿ, ಆಫೀಸಲ್ಲಿ ಬಾಸ್‌ ನೇ ನಿಭಾಯಿಸಿದ್ದೀನಂತೆ; ಇವರು ಯಾವ ಮಹಾ ಅಂದುಕೊಂಡು ಯೋಜನೆ ಮಾಡಿದೆ. ಮಾರನೆ ದಿನ, ಬಿಸಿಬೆಳೆ ಬಾತ್‌ಗೆ ಒಲೆಯ ಮೇಲೆ ಅಕ್ಕಿ, ಬೇಳೆ ಬೇಯುತ್ತಿರುವಾಗಲೇ, ಮಗ ಆಟಕ್ಕೆ ಕರೆದ. ದಿನಾ ಬೆಳಗ್ಗೆ ಎದ್ದೇಳ್ಳೋದು ಇದ್ದಿದ್ದೇ ಅಂತ, ಸ್ವಲ್ಪ ನಿಧಾನಕ್ಕೆ ಎದ್ನಲ್ಲಪ್ಪ, ತಗೋ, ಆಫೀಸಿಂದ ಮೂರು ಕರೆ, 10 ಮೆಸೇಜು ರೆಡಿಯಾಗಿದ್ದವು.

ಆವತ್ತು ಏನಾಗಿತ್ತು ಅಂದರೆ, ನನ್ನ ಸಹೋದ್ಯೋಗಿಗೆ ಹುಷಾರಿಲ್ಲದೆ, ಅವನು ವರ್ಕ್‌ ಫ್ರಂ ಹೋಮ್‌ಗೆ ರಜೆ ಹಾಕಿದ್ದ. ಹೀಗಾಗಿ, ಅವನ ಎಲ್ಲ ಕೆಲಸಗಳನ್ನು ನಾನೇ ಮುಗಿಸಬೇಕಿತ್ತು. ನನ್ನ ಕೆಲಸ ಬಹಳ ವಿಚಿತ್ರದ್ದು. ಟೆಲಿಫೋನಿನಲ್ಲಿ ಗ್ರಾಹಕರನ್ನು ಸಂದರ್ಶಿಸಿ, ಅವರ ತಲೆ ಸವರಿ, ನಮ್ಮ ಪ್ರಾಡಕr…ಗಳನ್ನು ಅವರ ತಲೆಗೆ ಕಟ್ಟುವ ಪ್ರಕ್ರಿಯೆ. ಕೊರೊನಾಕ್ಕೂ ಮೊದಲು ಬಹಳ ಚೆನ್ನಾಗಿತ್ತು.

ವಿದೇಶಗಳಲ್ಲಿ ಮೆಡಿಕಲ್‌ಗೆ ಸಂಬಂಧಿಸಿದ ವಸ್ತುಗಳಿಗೆ ಬೇಡಿಕೆ ಇದ್ದುದರಿಂದ ನಮ್ಮ ಮಾತಿಗೆ ಗೌರವ ಕೂಡ ಇತ್ತು. ಆದರೆ, ಕೊರೊನಾ ಹೆಚ್ಚಾದಂತೆ, ವಿದೇಶಿ ಕರೆಗಳು ಬಂದ್‌ ಆದವು. ಸ್ಥಳೀಯರ ಕರೆಗಳನ್ನು ಸ್ವೀಕರಿಸಿ, ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಸೂಚಿಸುವುದೇ ಉದ್ಯೋಗ ಮತ್ತು ಜವಾಬ್ದಾರಿಯಾಯಿತು. ಒಂದು ನಿಮಿಷ ಕೂಡ ಪುರುಸೊತ್ತಿಲ್ಲ. ಬೆಳಗ್ಗೆಯಿಂದಲೇ ಕರೆ, ಹೆಂಡತಿ, ಮಕ್ಕಳು, ಯಾರ ಬಳಿಯೂ ಮಾತನಾಡಲು ಸಮಯವಿಲ್ಲ. ಆಫೀಸಲ್ಲಾದರೆ, ನಿಗದಿತ ಸಮಯಕ್ಕೆ ಮಾತ್ರ ಕರೆ ಬರುತ್ತಿತ್ತು.

ನಮ್ಮದು ಮೆಡಿಕಲ್‌ ಕ್ಷೇತ್ರವಾದ್ದರಿಂದ, ಸೇವೆ ಅನ್ನೋ ಹೆಸರಲ್ಲಿ ನಮ್ಮ ಬಾಸ್‌ ಯಾವಾಗ ಬೇಕಾದರೂ ಕರೆ ಮಾಡಿ ಅಂತ ಹೇಳಿದ್ದಾರೆ. ಹೀಗಾಗಿ, ಸ್ನಾನ, ತಿಂಡಿ ಮಾಡುವಾಗಲೂ ಕರೆ ಬರುತ್ತಲೇ ಇತ್ತು. ಆಗ ಮನೆಯವರಿಗೆ ಅನ್ನಿಸಿದ್ದೇನೆಂದರೆ, ವರ್ಕ್‌ ಫ್ರಂ ಹೋಮ್‌ಗಿಂತ, ಇವರು ಆಫೀಸಲ್ಲಿ ಇದ್ದಿದ್ದರೇ ಚೆನ್ನಾಗಿತ್ತು ಅಂತ…

 

ಕಳಿಂಗ ಮೂರ್ತಿ, ಚಾಮರಾಜಪೇಟೆ

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.