ಯುದ್ಧಕ್ಕೂ ಮುನ್ನ ಸೂತ್ರಾಭ್ಯಾಸ: ಗೆಳತಿ ಜತೆ ವಾದ ನಿಲ್ಲಿಸಲು 5 ಸೂತ್ರ


Team Udayavani, Aug 1, 2017, 12:22 PM IST

01-JOSH-2.jpg

ಒಬ್ಬರು ವೃದ್ಧ ದಂಪತಿಗೆ, “ನಿಮ್ಮ ದೀರ್ಘ‌ ಕಾಲದ ದಾಂಪತ್ಯದ ಗುಟ್ಟೇನು?’ ಎಂದು ಪ್ರಶ್ನಿಸಿದಾಗ ತಾತ, “ನನಗೆ ಕಿವಿ ಕೇಳುವುದಿಲ್ಲ’ ಎಂದರಂತೆ! ಆದರೆ, ಇಂದಿನ ಯುವಜೋಡಿಗಳಿಗೆ ಕಿವಿ ಮತ್ತು ಬಾಯಿ ಸ್ವಲ್ಪ$ಜಾಸ್ತಿ ಕೆಲಸ ಮಾಡುತ್ತದೆ! ಪರಿಣಾಮವಾಗಿ, ವಾಗ್ವಾದ, ಜಗಳ, ಬ್ರೇಕಪ್‌ ಎಲ್ಲವೂ ತೀರಾ ಸಾಮಾನ್ಯ ಎನ್ನುವಂತೆ ಕಂಡುಬರುತ್ತವೆ.

ಬಹಳಷ್ಟು ಸಲ ಹುಡುಗರು ದುಡುಕಿ ಸುಖಾಸುಮ್ಮನೆ ಜಗಳವಾಡಿ ಆಮೇಲೆ ಒಬ್ಬರೇ ಕುಳಿತು ಹಣೆ ಹಣೆ ಚಚ್ಚಿಕೊಳ್ಳುತ್ತಾರೆ. ನಂತರ ಥತ್‌, ನಾನು ಆವೇಶದಲ್ಲಿ ಮಾತಾಡಿಬಿಟ್ಟೆ ಎಂದುಕೊಂಡು ಅದೇ ಬೇಸರದಲ್ಲಿ ಗುಂಡುಹಾಕಿ ಪಶ್ಚಾತ್ತಾಪ ಪಡುತ್ತಾರೆ. ಎಲ್ಲ ಸಮಸ್ಯೆಗಳಿಗೂ ಬಗೆಬಗೆಯ ಸೂತ್ರಗಳಿರುವ ಈ ದಿನಗಳಲ್ಲಿ, ಗೆಳತಿಯೊಂದಿಗಿನ ವಾದ ನಿಲ್ಲಿಸಲು ಕೆಲವು ಜಾಣ ಸಲಹೆಗಳು ಇಲಿವೆ…

1. ಯಾವುದೇ ಚಿಕ್ಕ ವಿಷಯಕ್ಕೆ ನಿಮ್ಮ ಹುಡುಗಿ ಬೇಸರಿಸಿಕೊಂಡು ಸಿಟ್ಟಾದರೆ, ನೀವು ಪ್ರತಿಯಾಗಿ ಸಿಟ್ಟು ಮಾಡಿಕೊಳ್ಳದಿರಿ. ಶಾಂತತೆಯನ್ನು ಕಾಪಾಡಿಕೊಳ್ಳಿ. ಗೆಳತಿಯ ಸಿಟ್ಟಿಗೆ ಮೂಲ ಕಾರಣವನ್ನು ಹುಡುಕುವ ಪ್ರಯತ್ನ ಮಾಡಿ.

2. ಜಗಳ, ವಾದಗಳೆಂದರೆ ಅಲ್ಲಿ ಕೆಟ್ಟಪದ ಬಯುಳಗಳದ್ದೇ ಕಾರುಬಾರು. ನೀವು ಕೆಟ್ಟ ಪದ ಬಳಸಿ ವಾದಿಸಿದರೆ ಅವರೂ ಅದೇ ದಾರಿ ಹಿಡಿಯಬಹುದು ಅಥವಾ ಆ ಹುಡುಗಿ ಬಹಳ ಸೂಕ್ಷ್ಮ ಮನಸ್ಸಿನವಳಾಗಿದ್ದರೆ, ನಿಮ್ಮ ಒರಟು ಮಾತನ್ನು ಕೇಳಿ ಶಾಕ್‌ ಆಗಿ, ಎದ್ದು ಹೋಗಿಬಿಡಬಹುದು. ಹಾಗಾಗಿ, ಜಗಳದ ಸಂದರ್ಭದಲ್ಲಿ ಆದಷ್ಟೂ ಸಂಭಾವಿತ ಭಾಷೆ ಬಳಸಿ.

3. ಹುಡುಗಿಯರು ಹುಡುಗರಿಗಿಂತ ಕೋಮಲ ದನಿಯುಳ್ಳವರು. ತಮ್ಮ ಹುಡುಗನೂ ತಮ್ಮಂತೆಯೇ ಮಾತಾಡಲಿ ಎಂದೇ ಅವರು ಆಸೆ ಪಡುತ್ತಾರೆ. ಆದರೆ, ಕೆಲವೊಂದು ಸನ್ನಿವೇಶದಲ್ಲಿ ಹುಡುಗರು ಸಾರ್ವಜನಿಕವಾಗಿ ಗೆಳತಿಗೆ ಏರು ಧ್ವನಿಯಲ್ಲಿ ಏಕವಚನ ಬಳಕೆ ಮಾಡಿ ಬಿಡುವುದುಂಟು. ಇದರಿಂದ ಸಂಬಂಧ ಶಾಶ್ವತವಾಗಿ ಹದಗೆಡಬಹುದು. ಹಾಗಾಗಿ, ಎಚ್ಚರಿಕೆಯಿಂದ ವ್ಯವಹರಿಸಿ. 

4. ಕೆಲ ಹುಡುಗರು ಗೆಳತಿಯರಿಗೆ ಮಾತಾಡುವ ಅವಕಾಶವನ್ನೇ ನೀಡುವುದಿಲ್ಲ. ಅವರ ಬೇಕು ಬೇಡಗಳಿಗೆ ಕಿವಿಯಾಗುವುದಿಲ್ಲ. ತಮ್ಮ ಬಗ್ಗೆಯೇ ಕೊಚ್ಚಿಕೊಳ್ಳುತ್ತಿರುತ್ತಾರೆ. ಅದರ ಬದಲಿಗೆ ಅವರಿಗೂ ಮಾತಾಡಲು ಅವಕಾಶ ನೀಡಿ, ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಯತ್ನಿಸಿದರೆ, ಸಣ್ಣಪುಟ್ಟ ವ್ಯತ್ಯಾಸಗಳು ಮಾಯವಾಗಿ ಸ್ನೇಹ ಗಾಢವಾಗುವುದು.

5. ನಿಮ್ಮ ಕಡೆಯಿಂದ ಆಕಸ್ಮಿಕವಾಗಿ ತಪ್ಪು ಆಗಿರುತ್ತದೆ. ಅದು ಸಹಜವೇ… ಆದರೆ, ತಪ್ಪು$ಮಾಡಿದಾಗ, “ನಾನು ಗಂಡಸು. ನನ್ನ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ’ ಎಂಬ ಅಹಂ ಒಳ್ಳೆಯದಲ್ಲ. ನಿಮ್ಮ ತಪ್ಪನ್ನು ನಿಮ್ಮ ಗೆಳತಿಗೆ ಹೇಳಿದರೆ, ಕ್ಷಮಾಯಾಧರಿತ್ರಿ ಗುಣದ ಹುಡುಗಿಯರು ಖಂಡಿತವಾಗಿಯೂ ಕ್ಷಮಿಸುವರು. ಆಗ ವಾಗ್ವಾದ, ಜಗಳಕ್ಕೆ ಆಸ್ಪದವಿರುವುದಿಲ್ಲ .

ಸಿ.ಜಿ. ವೆಂಕಟೇಶ್ವರ, ಗೌರಿಬಿದನೂರು

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.