ಇವತ್ತು ಖಂಡಿತ ಬರ್ತಿ ತಾನೆ?

ಅಲ್ಲೇ ಕಾದು ನಿಂರ್ತಿನಿ

Team Udayavani, Jun 11, 2019, 6:00 AM IST

b-9

ಏನಾದರಾಗಲಿ, ಈ ಹುಡುಗಿ ಯಾರಂತ ತಿಳಿದುಕೊಳ್ಳಲೇಬೇಕು ಅಂತ ಮನಸ್ಸು ಹಠ ಹಿಡಿಯಿತು. ಯಾವುದೋ ಅಪ್ಲಿಕೇಷನ್‌ ತುಂಬುವ ನೆಪ ಹೂಡಿ, ನಿನಗಾಗಿ ಕಾಯುತ್ತಾ ನಿಂತೆ. ಹತ್ತು ನಿಮಿಷದ ನಂತರ ನೀನು ಕೆಲಸ ಮುಗಿಸಿ, ಹೊರಡಲನುವಾದೆ. ನಿನಗೆ ಗೊತ್ತೇ ಆಗದಂತೆ ನಾನೂ ನಿನ್ನನ್ನು ಹಿಂಬಾಲಿಸಿದೆ.

ಅವತ್ತು ಯಾವುದೋ ಕೆಲಸದ ನಿಮಿತ್ತ ಬ್ಯಾಂಕ್‌ಗೆ ಹೋಗಿದ್ದೆ. ಹಿಂದಿನ ಎರಡು ದಿನ ಬ್ಯಾಂಕಿಗೆ ರಜೆ ಇದ್ದುದ್ದರಿಂದಲೋ ಏನೋ ಬ್ಯಾಂಕ್‌ ಜನರಿಂದ ಗಿಜಿಗುಡುತ್ತಿತ್ತು. ಬ್ಯಾಂಕ್‌ ಕೆಲಸ ಅಂದ್ರೆ ಮಹಾನ್‌ ಬೋರು ಅಂತ ಬೈಯುತ್ತಲೇ, ಬಂದ ಕೆಲಸ ಮುಗಿಸಿಕೊಂಡು ಹೊರಡುವವನಿದ್ದೆ. ಆಗ ಕಣ್ಮುಂದೆ ಮಿಂಚೊಂದು ಪಾಸ್‌ ಆದಂತಾಯ್ತು. ಏನಾಯ್ತು ಅಂತ ಕಣ್ಣರಳಿಸಿ ನೋಡಿದರೆ, ನೀನು ನೂರು ವ್ಯಾಟ್‌ ಬಲ್ಬ್ನಂತೆ ನಸುನಗುತ್ತಾ ಕ್ಯಾಷಿಯರ್‌ ಬಳಿ ಮಾತಾಡುತ್ತಿದ್ದೆ. ಅಬ್ಟಾ, ಒಂದ್ಸಾರಿ ಇಲ್ಲಿಂದ ಹೊರಟರೆ ಸಾಕಪ್ಪಾ ಅನ್ನುತ್ತಿದ್ದವನನ್ನು ನಿನ್ನ ನಗು ಸ್ಟಾಚ್ಯು ಹೇಳಿ ನಿಲ್ಲಿಸಿಬಿಟ್ಟಿತ್ತು.

ಏನಾದರಾಗಲಿ, ಈ ಹುಡುಗಿ ಯಾರಂತ ತಿಳಿದುಕೊಳ್ಳಲೇಬೇಕು ಅಂತ ಮನಸ್ಸು ಹಠ ಹಿಡಿಯಿತು. ಯಾವುದೋ ಅಪ್ಲಿಕೇಷನ್‌ ತುಂಬುವ ನೆಪ ಹೂಡಿ, ನಿನಗಾಗಿ ಕಾಯುತ್ತಾ ನಿಂತೆ. ಹತ್ತು ನಿಮಿಷದ ನಂತರ ನೀನು ಕೆಲಸ ಮುಗಿಸಿ, ಹೊರಡಲನುವಾದೆ. ನಿನಗೆ ಗೊತ್ತೇ ಆಗದಂತೆ ನಾನೂ ನಿನ್ನನ್ನು ಹಿಂಬಾಲಿಸಿದೆ. ಒಂದೆರಡು ಬಾರಿ, ನೀನು ತಿರುಗಿ ನನ್ನತ್ತ ನೋಡಿ, ನಸು ನಕ್ಕಂತಾಯ್ತು. ಸರಿ, ಇವಳನ್ನು ಇವತ್ತು ಪರಿಚಯ ಮಾಡಿಕೊಳ್ಳಲೇಬೇಕು ಅಂತ ನಿರ್ಧರಿಸಿದೆ. ಅಷ್ಟರಲ್ಲಿ ನೀನು, ಪಕ್ಕದಲ್ಲಿದ್ದ ದೇವಸ್ಥಾನದತ್ತ ಹೊರಟೆ. ದೇವಿಯ ದರ್ಶನ ಅದಾಗಲೇ ಆಗಿದ್ದರೂ, ನಿನ್ನನ್ನು ಮಾತಾಡಿಸುವ ಸಲುವಾಗಿ ನಾನೂ ದೇವಸ್ಥಾನದ ಆವರಣಕ್ಕೆ ಬಂದೆ.

ನೀನು ಅಲ್ಲೇ ಸ್ವಲ್ಪ ದೂರದಲ್ಲಿದ್ದ ನಲ್ಲಿಯಿಂದ ಕಾಲು ತೊಳೆಯುತ್ತಿದ್ದೆ. ಶೂ ಹಾಕಿದ್ದೇನೆಂಬುದನ್ನೂ ಮರೆತು ನಾನು ಕಾಲನ್ನು ನಲ್ಲಿಯ ಕೆಳಗೆ ತಂದಾಗ ನೀನು- “ರೀ, ಶೂ ಕಳಚಿ ಕಾಲು ತೊಳೆಯಿರಿ’ ಅಂದು, ದೇವಸ್ಥಾನದತ್ತ ಹೊರಟೆ. ನೀನು ಹೋದ ದಾರಿ ನೋಡುತ್ತಾ, ಬೇಗ ಬೇಗ ಕಾಲು ತೊಳೆಯಬೇಕು ಅಂತ ನಾನು ಶೂ ಕಳಚಲು ಶುರು ಮಾಡಿದೆ. ಆಗ ಯಾರೋ ನನ್ನ ಕಾಲು ಹಿಡಿದು ಎಳೆದಂತಾಯ್ತು. ನಾನು ನಿನ್ನನ್ನು ಕೂಗಬೇಕು ಅಂದುಕೊಳ್ಳುವಷ್ಟರಲ್ಲಿ, ಯಾರೋ ನನ್ನ ಹೆಸರನ್ನು ಕೂಗುತ್ತಾ, ಕಾಲು ಜಗ್ಗತೊಡಗಿದರು…. ಎಚ್ಚರವಾದಾಗ ನಮ್ಮಪ್ಪ ಹೊದಿಕೆ ಎಳೆಯುತ್ತಾ, “ಏಳ್ಳೋ, ಗಂಟೆ ಎಂಟಾಯ್ತು. ಬ್ಯಾಂಕ್‌ಗೆ ಹೋಗ್ಬೇಕು ಅಂತಿದ್ಯಲ್ಲ’ ಅಂತ ನನ್ನನ್ನು ಎಬ್ಬಿಸುತ್ತಿದ್ದರು.
ಓ ಕನಸಿನ ಕನ್ಯೆಯೇ, ನಿನ್ನ ಮುಖ ನನಗಿನ್ನೂ ನೆನಪಿದೆ. ಇವತ್ತು ನೀನು ಖಂಡಿತಾ ಬ್ಯಾಂಕ್‌ಗೆ ಬರಿ¤àಯ, ಅಂತ ಒಳ ಮನಸ್ಸು ಹೇಳುತ್ತಿದೆ. ನಿನಗಾಗಿ ಕಾಯ್ತಾ ಇರಿ¤àನಿ…ಆಯ್ತಾ?

ಇಂತಿ ನಿನ್ನ ಹಿಂಬಾಲಕ

-ಮಣಿಕಂಠ ಪಾ ಹಿರೇಮಠ

ಟಾಪ್ ನ್ಯೂಸ್

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.