ಅನುಮಾನಂ ಪೆದ್ದ ರೋಗಂ!


Team Udayavani, May 23, 2017, 9:54 AM IST

anumana.jpg

ಎರಡು ವರ್ಷಗಳ ಹಿಂದಿನ ಘಟನೆಯಿದು. ನಾನು ಕಚೇರಿ ಕೆಲಸ ಮುಗಿಸಿ ಊರಿಗೆ ಹೋಗುವ ಸಂಭ್ರಮದೊಂದಿಗೆ ಬಸ್‌ಸ್ಟಾಂಡ್‌ಗೆ ಪ್ರಯಾಣ ಬೆಳೆಸಿದೆ. ಆದಾಗಲೇ ಬಸ್‌ ಹೊರಡುವ ಸಮಯವಾಗಿದ್ದರಿಂದ ತರಾತುರಿಯಲ್ಲಿ ಬಸ್‌ ಹತ್ತಿ ನನ್ನ ಸೀಟ್‌ ಸಿಕ್ಕ ಖುಷಿಯಲ್ಲಿ ದೀರ್ಘ‌ ನಿಟ್ಟುಸಿರು ಬಿಡುತ್ತಾ ಆರಾಮಾಗಿ ಕುಳಿತೆ. ಕೆಲಸದ ಆಯಾಸದಿಂದ ಅಲ್ಲೇ ನಿದ್ರಾಲೋಕಕ್ಕೆ ಜಾರಿದೆ. 

ಬಸ್‌ ಹೊರಟು ಒಂದು ಗಂಟೆ ನಂತರ, ನನ್ನ ಪಕ್ಕದ ಸೀಟಿನಲ್ಲಿ ಒಂದು ಹುಡುಗ- ಹುಡುಗಿ ಬಂದು ಕುಳಿತರು. ನಾನು ನಿದ್ರಾಲೋಕದಲ್ಲಿ ಇದ್ದುದರಿಂದ ಅಷ್ಟಾಗಿ ಅವರನ್ನು ಗಮನಿಸಲಿಲ್ಲ. ಗಾಢ ನಿದ್ದೆಯಲ್ಲಿದ್ದ ನನಗೆ ಕಂಡಕ್ಟರ್‌ ಚಾ/ತಿಂಡಿಗೆ ಹತ್ತು ನಿಮಿಷ ಸಮಯವಿದೆ ಎಂದು ಜೋರಾಗಿ ಹೇಳುತ್ತಾ ನಮ್ಮ ಸೀಟಿನ ಬದಿಗೆ ಬಂದಾಗ ಎಚ್ಚರವಾಯಿತು.

ಆದಾಗಲೇ ಪಕ್ಕದ ಸೀಟಿನವರು ಚಾ ಕುಡಿಯಲು ಹೊರಟು ಹೋಗಿಯಾಗಿತ್ತು. ನಾನು ಚಾ ಕುಡಿದು ನನ್ನ ಸೀಟಿನಲ್ಲಿ ಕುಳಿತು, ಆಗಸದ ಚಂದ್ರನನ್ನು ದಿಟ್ಟಿಸಿ ನೋಡುತ್ತಿರುವಾಗ ನಮ್ಮ ಕಚೇರಿಯ ಮಹಿಳಾ ಸಹೋದ್ಯೋಗಿ ನಮ್ಮ ಬಸ್‌ ಕಡೆ ಬರುವುದನ್ನು ಗಮನಿಸಿದೆ. ನನ್ನ ಮುಖವನ್ನು ಬಾಟಲಿ ನೀರಿನಲ್ಲಿ ತೊಳೆದು ಮತ್ತೆ ಸರಿಯಾಗಿ ನೋಡಿದೆ. ಹೌದು ಅವಳೇ… ನೀಲಿ ಕಣ್ಣಿನ ಸುಂದರಿ!

ಅವಳು ಬಂದು ನನ್ನ ಪಕ್ಕದ ಸೀಟಿನಲ್ಲಿ ಹುಡುಗನೊಬ್ಬನ ಜೊತೆ ಕುಳಿತಾಗ ನನಗೆ ಅಚ್ಚರಿ. ವಾರೆ ಕಣ್ಣಿನಲ್ಲಿ ನೋಡುತ್ತಾ ಗಾಢ ನಿದ್ರೆಯಲ್ಲಿ ಇರುವ ಹಾಗೆ ನಟನೆ ಮಾಡಿದೆ. ಆದರೆ ಮನದಲ್ಲಿ ನೂರಾರು ಆಲೋಚನೆ! ಅವಳ ಬಳಿಯಿದ್ದ  ದೃಢಕಾಯ ಶರೀರದ ಹುಡುಗ ಯಾರಿರಬಹುದು? ಇವರಿಬ್ಬರೂ ಎಲ್ಲಿಗೆ ಹೋಗುತ್ತಿರಬಹುದು? ಸಂಬಂಧಿಕನಾ? ಅಥವಾ ಪರಿಚಯದವನಾ? ಹೀಗೆ ಏನೇನೋ ಆಲೋಚನೆಗಳಿಗೆ ಉತ್ತರ ಹುಡುಕುತ್ತಿರುವಾಗ ಆ ಹುಡುಗಿ ನನ್ನನ್ನು ನೋಡಿ “ನೀವಾ ಸಾರ್‌! ನಾನು ನೋಡಿರಲೇ ಇಲ್ಲ. ಸಾರೀ ಸಾರ್‌. ಅಜ್ಜಿ ಮನೆಯಲ್ಲಿ ಕಾರ್ಯಕ್ರಮ ಇರುವುದರಿಂದ ನಾನು ಮತ್ತು ಅಣ್ಣ ಹಾಸನಕ್ಕೆ ಹೋಗುತ್ತಿದ್ದೇವೆ’ ಎಂದಾಗ ನನ್ನ ಮನಸ್ಸು ನಿರಾಳವಾಯಿತು. ಸಾವರಿಸಿಕೊಂಡು ಹ್ಯಾಪಿ ಜರ್ನಿ ಹೇಳುತ್ತಾ ನನ್ನ ಸ್ಟಾಪ್‌ನಲ್ಲಿ ಇಳಿದೆ. ಇದೇ ಕಾರಣಕ್ಕೆ ಹಿರಿಯರು ಹೇಳಿರಬಹುದು, “ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು’ ಎಂದು.                                                     

– ಅಶೋಕ್‌ ಕುಲಾಲ್‌ ಬಂಟ್ವಾಳ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.