ಒಮ್ಮೆ ಹೇಳಿಬಿಡು ನಾ ನಿನ್ನದೇ ನೆರಳೆಂದು…


Team Udayavani, Mar 17, 2020, 4:15 AM IST

omme-helibidu

ಪ್ರೀತಿ, ಬದುಕಿನ ನಿಜವಾದ ಆಶಾವಾದದ ಕಿರಣ. ಮನುಷ್ಯ ಕೇವಲ ಹೊಟ್ಟೆಗಾಗಿ ಮಾತ್ರ ದುಡಿಯುತ್ತಿಲ್ಲ. ಪ್ರೀತಿ ಯಾರಲ್ಲಿ ಹುಟ್ಟುತ್ತದೋ ಅವರೇ ಪ್ರೀತಿಯನ್ನು ತುಂಬಬಲ್ಲರು. ಈ ಮಾತು ನಿಜಕ್ಕೂ ಸತ್ಯ. ಹಾಗಾಗಿ, ನಿನ್ನ ಪುಟ್ಟ ಹೃದಯದ ಮೇಲೆ ಹುಟ್ಟಿರುವ ನನ್ನ ಪ್ರೀತಿಯನ್ನು ನಾನೇ ತುಂಬಬೇಕು ಅಲ್ವಾ? ಹಾಗಾಗಿ, ಅದು ಸುಳ್ಳೇ ಆಗಲಿ, ನಿಜವೇ ಆಗಲಿ. ನೀನೊಮ್ಮೆ ಹೇಳಿಬಿಡು ಗೆಳತಿ. ಮನದ ಭಾವನೆಗಳನ್ನು ಅದೆಷ್ಟು ದಿನ ನಿನ್ನೊಳಗೆ ಅದುಮಿಟ್ಟುಕೊಂಡಿರುತ್ತೀಯ?

ನನಗೂ ಗೊತ್ತು, ನಿನ್ನ ಮನಸ್ಸಲ್ಲಿ ತುಂಬಿದ ಸಾಗರದಷ್ಟು ಪ್ರೀತಿಗೆ ಸಾವಿರ ಕನಸುಗಳನ್ನು ತುಂಬಿಸುವ ಆಸೆಯಿದೆ ಎಂದು. ಗುಬ್ಬಿಯಂತೆ ಕಣ್ಮುಚ್ಚಿ ಮಲಗಿದ ಆ ನಿನ್ನ ಮುದ್ದು ತುಟಿಯಂಚಲಿ ಸೂಸುತಿರುವ ನಗೆಗೆ ನಾ ಕಾರಣವಾಗಿದ್ದರೆ ಅದನೊಮ್ಮೆ ಹೇಳಿಬಿಡು.

ಅಂದೆಂದೋ ಆಕಸ್ಮಿಕವಾಗಿ ಆದ ಪರಿಚಯ; ಹೀಗೆ ಸಿಕ್ಕಾಗಲೊಮ್ಮೆ ಸಣ್ಣದಾದ ಮುಗುಳ್ನಗು. ಇವೆಲ್ಲಾ ಪದೇ ಪದೆ ಕಾಡುತ್ತಿರುವುದು ಯಾವುದರ ಸಂಕೇತ? ಗೊತ್ತಿಲ್ಲ; ಎಲ್ಲದಕ್ಕೂ ಉತ್ತರ ಹುಡುಕ ಹೊರಟರೆ ನನಗೆ ನಾನೇ ಒಂದು ಪ್ರಶ್ನೆಯಾಗಿ ಉಳಿದುಬಿಡುವಿನೇನೋ ಎಂಬ ಭಯ! ಆದರೂ, ನಿನ್ನ ಮನದ ಇಂಗಿತವನ್ನು ನಾನು ಒಮ್ಮೆ ಕೇಳುವಾಸೆ. ಕಡಲ ಅಲೆಗಳು ತೀರಕ್ಕೆ ಬಂದು ಮರಳನ್ನು ಅಪ್ಪುವಂತೆ, ನಿನ್ನ ಪ್ರೀತಿಯ ಅಲೆಗಳು ಬಂದು ನನ್ನೊಮ್ಮೆ ತಬ್ಬಿಬಿಡಲಿ ಅನ್ನೋ ಸಾಗರದಷ್ಟು ಬಯಕೆ ನನ್ನಲ್ಲಿ ತುಂಬಿದೆ ಗೆಳತಿ. ಅಲೆಗಳ ಮೋಹದಲ್ಲಿ ಮರಳ ಮೇಲೆ ಬರೆದ ಹೆಸರು ಇನ್ನೂ ಅಳಿಸಿಲ್ಲ. ತೀರದ ಅಂಚಲ್ಲಿ ನಿನ್ನೊಟ್ಟಿಗೆ ಕುಳಿತು ಸಂಜೆಯ ತಂಪಲ್ಲಿ, ದೂರದ ಸಾಗರದ ಅಲೆಗಳ ಮೇಲೆ ತೇಲುವ ಆ ದೋಣಿಗಳನ್ನು ನೋಡುವ ಆಸೆ ಇನ್ನೂ ಇದೆ. ಆದರೆ, ನಿನ್ನ ಆಗಮನಕ್ಕಾಗಿ ಕಾದೂ ಕಾದು ಈ ಸಂಜೆ ಯಾಕಾಗಿದೆ ನೀನಿಲ್ಲದೆ? ಅನಿಸಿದ್ದಂತೂ ಸುಳ್ಳಲ್ಲ.

ನಿನಗೆ ಗೊತ್ತಾ? ಬೆಳದಿಂಗಳು ಸುರಿಸುವ ಆ ಚಂದ್ರನಿಗೂ ಒಮ್ಮೊಮ್ಮೆ ಬೇಸರ ಬರುತ್ತದೆಯೇನೋ ಅನಿಸಿಬಿಟ್ಟಿದೆ. ಏಕೆಂದರೆ, ಆ ಚಂದ್ರನೂ ಕೂಡ ನಿನ್ನ ಆ ಮುಂಗುರುಳ ಸಲ್ಲಾಪ ಕಂಡು ಸೋತುಬಿಟ್ಟಿದ್ದಾನೆ. ಅದಕ್ಕಾಗಿಯೇ ಹುಣ್ಣಿಮೆ ಬೆಳಕಿನಲ್ಲಿ ನಿನ್ನ ಅಂದ ಇನ್ನಷ್ಟು ಹೆಚ್ಚಿ, ಹಾಲಿನ ಕನ್ಯೆಯಂತೆ ಕಂಗೊಳಿಸುತ್ತೀಯ. ನಿನ್ನ ಮುಂಗುರುಳ ಆಟಕ್ಕೆ ಆ ಚಂದ್ರನೇ ಶರಣಾಗಿರುವಾಗ ಇನ್ನು ನಾನು ಶರಣಾಗಿದ್ದರಲ್ಲಿ ತಪ್ಪೇನಿದೆ?

ಗೆಳತಿ, ಪ್ರೀತಿ ಅರಮನೆ ತುಂಬ ನಿನ್ನದೇ ಆಡಳಿತ ನಡೆಸುವುದಕ್ಕೆ ನೀನೊಮ್ಮೆ ಬಂದುಬಿಡು. ಅದು ಸುಳ್ಳಾದರೂ ಸರಿಯೆ, ಒಮ್ಮೆ ಹೇಳಿಬಿಡು ಗೆಳೆಯ ನಾ ನಿನ್ನದೇ ನೆರಳೆಂದು.

ಲಕ್ಷ್ಮೀಕಾಂತ್‌ ಎಲ್‌. ವಿ

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.