ಹೇಳಿ ಹೋಗು ಕಾರಣ


Team Udayavani, Jul 23, 2019, 5:00 AM IST

i-18

ಆ ದಿನ ನನಗೆ ಸರಿಯಾಗಿ ನೆನಪಿದೆ. ಸ್ನೇಹಿತನ ಮದುವೆಗೆ ಅಂತ ನಾನು ಬಳ್ಳಾರಿಯಿಂದ ದೂರದ ಮಂಗಳೂರಿಗೆ ಬಂದಿದ್ದೆ. ಅವತ್ತೇ ನಾನು ನಿನ್ನ ಮೊದಲು ನೋಡಿದ್ದು. ವಧುವಿನ ಜೊತೆ ಮದುಮಗಳಂತೆಯೇ ಸಿಂಗಾರಗೊಂಡ ನಿನ್ನ ಸೌಂದರ್ಯಕ್ಕೆ ಆ ಕ್ಷಣದಲ್ಲೇ ಶರಣಾಗಿಬಿಟ್ಟೆ. ನಿನ್ನ ಕೋಗಿಲೆ ಧ್ವನಿ, ಕಮಲದಂಥ‌ ಕಣ್ಣುಗಳು, ನಾಜೂಕು ನಡಿಗೆ, ಅಬ್ಟಾ, ಅದೆಷ್ಟು ಚೆಂದ ಕಾಣ್ತಿದ್ದೆ ಗೊತ್ತಾ ನೀನು? ಮದುವೆ ಮನೇಲಿದ್ರೂ ಯಾವುದೇ ಗಲಾಟೆ,, ಗೋಜು ನನ್ನ ಅರಿವಿಗೆ ಬರಲೇ ಇಲ್ಲ. ಯಾಕಂದ್ರೆ ಆ ಹೊತ್ತಿಗಾಗಲೇ ನೀ ನನ್ನನ್ನು ಸಂಪೂರ್ಣವಾಗಿ ಆವರಿಸಿಬಿಟ್ಟಿದ್ದೆ.

ಸ್ನೇಹಿತರ ಸಹಾಯದಿಂದ ಹೇಗೋ ನಿನ್ನ ಮೊಬೈಲ್‌ ನಂಬರ್‌ ಪತ್ತೆ ಹಚ್ಚಿದ್ದೇ ನಂಗೆ ಆವತ್ತಿಗೆ ದೊಡ್ಡ ಸಾಧನೆ ಅನಿಸಿದ್ದು ಸುಳ್ಳಲ್ಲ. ಸ್ವಲ್ಪ ಹೆಚ್ಚೇ ಮೃದು ಸ್ವಭಾವದ ನಾನು ಬರೋಬ್ಬರಿ ಒಂದು ವಾರ ಯೋಚನೆ ಮಾಡಿ ಅಳೆದು, ತೂಗಿ ಕೊನೆಗೂ ಒಂದು ದಿನ Hai ಅಂತ ಸಂದೇಶ ಕಳಿಸೇ ಬಿಟ್ಟೆ. ಆವಾಗ ಶುರುವಾಯಿತು ನೋಡು ನನ್ನ ಫ‌ಜೀತಿ. ಆಮೇಲೆ ನಾನು ಪಟ್ಟ ಪಾಡು ನೆನಸ್ಕೊಂಡ್ರೆ ನಗು ಬರುತ್ತೆ. ಇದೆಲ್ಲಾ ಆಗಿ ಎರಡನೇ ದಿನ ಬೆಳಗ್ಗೆ ಎದ್ದು ಮೊಬೈಲ್‌ ನೋಡಿದ್ರೆ ಆ ಕಡೆಯಿಂದ Hai ಅಂತ ನೀನು ಕಳ್ಸಿರೋ ಮೆಸೇಜ್ ಅವತ್ತು ಪ್ರಪಂಚವನ್ನೇ ಗೆದ್ದ ಖುಷಿ ನಂದಾಗಿತ್ತು. ಅದೆಷ್ಟು ಸಾರಿ ಆ ಮೆಸೇಜನ್ನು ಓದಿದೆನೋ…!

ಅಲ್ಲಿಂದ ಶುರುವಾದ ನಮ್ಮ ಸ್ನೇಹ, ಎಷ್ಟು ಬೇಗ ಪ್ರೀತಿ ಅಂತ ಹೆಸರು ಬದಲಾಯಿಸಿಕೊಳ್ಳು ಅಂತ ನನಗೆ ಇವತ್ತಿಗೂ ಆಶ್ಚರ್ಯ ಆಗುತ್ತೆ. ಬಯಲುಸೀಮೆಯ ನನಗೂ ಕಡಲತೀರದ ನಿನಗೂ ಈ ಪ್ರೀತಿಯನ್ನೋ ಮಾಯೆ ಬೆಸುಗೆ ಹಾಕಿಬಿಟ್ಟಿತ್ತು. ಒಂದು ದಿನ ನಿನ್ನ Call ಬರ್ದಿದ್ರೂ ಏನೋ ಕಳೆದುಕೊಂಡ ಭಾವ ನನ್ನ ಕಾಡ್ತಿತ್ತು. ಆದ್ರೆ ನೀನು ಆಥರಾ ಯಾವತ್ತೂ ಮಾಡಿಲ್ಲ Call ಮಾಡೋಕಾಗ್ದೇ ಇದ್ರು ಕಡೇಪಕ್ಷ ಮೆಸೇಜ್‌ ಮಾಡಿ ನನ್ನನ್ನು ಸಮಾಧಾನ ಮಾಡ್ತಿದ್ದೆ. ಆಗ ನಿಜವಾಗಲೂ ನಿನ್ನಲ್ಲಿ ಒಬ್ಬ ತಾಯಿನ ಕಂಡಿದ್ದೆ.

ಅಷ್ಟೊಂದು ಪ್ರೀತಿಸುತ್ತಿದ್ದ ನೀನು ಇದ್ದಕ್ಕಿದ್ದ ಹಾಗೆ ಮೆಸೇಜ್‌ ಮಾಡೋದು ನಿಲ್ಲಿಸಿಬಿಟ್ಟೆ. ಇವತ್ತಿಗೆ ನೀನು ನನ್ನಿಂದ ದೂರ ಆಗಿ ಒಂದು ವರ್ಷ ಆಯ್ತು. ಬಲವಂತವಾಗಿ ಯಾವುದನ್ನೇ ಪಡೆದರೂ ಅದು ಕೊನೆಯವರೆಗೂ ಉಳಿಯಲ್ಲ ಅನ್ನೋದು ನನ್ನ ನಂಬಿಕೆ. ಅದಕ್ಕೇ ನಾನು ನಿನ್ನನ್ನು ಯಾವುದಕ್ಕೂ ಒತ್ತಾಯ ಮಾಡಲ್ಲ. ಆದ್ರೆ ಇದೊಂದನ್ನು ಮಾತ್ರ ಕೇಳ್ತೀನಿ: ಎದ್ದು ಹೋದೆ ಸರಿ. ಆದ್ರೆ ಯಾಕೆ ಹೀಗೆ ಮಾಡಿದೆ? ಸಾಧ್ಯ ಆದ್ರೆ – “ಹೇಳಿ ಹೋಗು ಕಾರಣ’.

ನಿನ್ನದೇ ಗುಂಗಿನ…….
ಶಂಕರ ನವಲೆ ಮಧುಗಿರಿ.

ಟಾಪ್ ನ್ಯೂಸ್

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.