ನನ್ನ ತಪ್ಪೇನು ಅಂತ ಹೇಳಿಬಿಡು…
Team Udayavani, Sep 18, 2018, 7:59 AM IST
ಕೊನೆಯವರೆಗೂ ನಿನ್ನ ಜೊತೆಯಲ್ಲಿರಬೇಕೆಂಬ ಹಂಬಲ. ನಿನ್ನನ್ನು ಹೇಗಾದರೂ ಪಡೆಯಬೇಕೆಂಬ ಹುಚ್ಚು ಹಠ. ಹಾಗಾದ್ರೆ ಪೀತಿ ಅಂದ್ರೆ ಏನು? ಸ್ವಾರ್ಥವೇ ಅಥವಾ ತ್ಯಾಗವೇ? ಅದೇಕೋ ಗೊತ್ತಿಲ್ಲ, ನೀನು ಬೇಕೆಂದು ನನ್ನ ಮನಸ್ಸು ಚಿಕ್ಕ ಮಗುವಿನಂತೆ ಹಠ ಮಾಡುತ್ತಿದೆ. ಅದನ್ನು ಸಂತೈಸಲು ನನ್ನಿಂದಾಗ್ತಾ ಇಲ್ಲ. ನಿ ಸಿಗದೆ ಅದು ಸುಮ್ಮನಾಗೋ ಲಕ್ಷಾಣಾನೂ ಕಾಣಿಸ್ತಾ ಇಲ್ಲ.
ಸದ್ಯಕ್ಕಂತೂ ನಿರೀಕ್ಷೆಗಳೇ ಬದುಕಾಗಿವೆ. ನಿನ್ನ ಅಗಲಿಕೆಯಿಂದಾಗಿರುವ ನೋವು, ದುಃಖವನ್ನು ಹೇಗೆ ವಿವರಿಸೋದು? ನನಗ್ಯಾಕೆ ಈ ಶಿಕ್ಷೆ ಕೊಟ್ಟೆ? ನೀನು ನನ್ನನ್ನು ನಿಜಕ್ಕೂ ಮರೆತೇಬಿಟ್ಟೆಯಾ? ಜಗತ್ತನ್ನೇ ಮರೆತ ನನಗೆ ನಿನ್ನನ್ನು ಮಾತ್ರ ಮರೆಯಲಾಗುತ್ತಿಲ್ಲ. ಯಾಕೆ ಗೊತ್ತಾ, ನಿನ್ನನ್ನು ನಾನು ಅಷ್ಟೊಂದು ಪ್ರೀತಿಸಿದ್ದೆ, ಆರಾಧಿಸಿದ್ದೆ.
ನೀನಿದ್ದಾಗ ಕನಸು ಕಾಣುವುದನ್ನೇ ಬಿಟ್ಟಿದ್ದೆ. ಆಗ ನೀನೇ ನನ್ನ ಕನಸು, ಮನಸು ಆಗಿದ್ದೆ. ಆದರೆ, ಈಗ ಮತ್ತೆ ಕನಸು ಕಾಣಲು ಆರಂಭಿಸಿದ್ದೇನೆ. ಯಾಕಂದ್ರೆ, ಕನಸಿನಲ್ಲಾದರೂ ನೀನು ಬರ್ತೀಯಾ, ಆಗಲಾದ್ರೂ ನಿನ್ನ ನೋಡಬಹುದು ಅನ್ನೋ ಆಸೆಯಿಂದ. ಆದರೇನು ಮಾಡುವುದು? ಕನಸು ಮುಗಿದ ಮೇಲೆ ಮತ್ತೆ ಅದೇ ನೋವು, ನಿರಾಸೆ.
ಈ ಶಿಕ್ಷೆಗೊಂದು ಕಾರಣವಾದ್ರೂ ಇರಬೇಕಲ್ಲ? ನನ್ನ ತಪ್ಪೇನು ಅಂತ ಹೇಳಿಬಿಡು. ಅದನ್ನೆಲ್ಲ ಸರಿಪಡಿಸಿಕೊಳ್ತೀನಿ. ಮುಂದೆಂದೂ ತಪ್ಪಾಗದಂತೆ ನಡೆದುಕೊಳ್ತೀನಿ.
ಇಂತಿ ನಿನ್ನ
ನೇತ್ರಾವತಿ ಎಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!