ಬಿಟ್ಟು ಹೋಗಿದ್ದಕ್ಕೆ ಧನ್ಯವಾದ!


Team Udayavani, Oct 22, 2019, 4:08 AM IST

bittu

ಹಣ, ಆಸ್ತಿ, ವಿದ್ಯೆ, ಇದ್ಯಾವುದೂ ನನ್ನಲ್ಲಿ ಇಲ್ಲ ಎಂದು ತಿಳಿದಾಗ ನೀನು ನಡೆದುಕೊಂಡ ರೀತಿಯಿದೆಯಲ್ಲ; ಅದನ್ನು ಎಂದಿಗೂ ಮರೆಯಲಾರೆ. ಇವನಿಂದ ಏನೂ ಸಿಗಲಾರದು ಎಂದು ತಿಳಿಯುತ್ತಿದ್ದಂತೆಯೇ ನೀನು ಬಿಟ್ಟು ಹೋದೆಯಲ್ಲವಾ ? ಬಾಳೆಂದರೇನೆಂಬುವುದು ಈಗ ಅರ್ಥವಾಗುತ್ತಿದೆ.

ತಾಯಿಯ ಯಜಮಾನಿಕೆಯಲ್ಲಿ ನಮ್ಮ ಮನೆ ನಡೆಯುತ್ತಿತ್ತು. ಬೆಳೆದು ದೊಡ್ಡವನಾಗುತ್ತಾ ಅದೆಲ್ಲವನ್ನೂ ನಿಭಾಯಿಸುವುದ ಕಲಿತೆ. ತಂಗಿಯ ಬದುಕಿಗೂ ಆಸರೆಯಾಗ ಹೊರಟೆ. ಈ ಎಲ್ಲದರ ನಡುವೆ ಯೌವ್ವನವೆಂಬ ಮಾಯೆ ನನ್ನ ಬದುಕಿಗೆ ಯಾಕೆ ಎಂಟ್ರಿ ಕೊಟ್ಟಿತೋ ಗೊತ್ತಾಗ್ಲಿಲ್ಲ. ಆವಾಗಲೇ ನನ್ನಲ್ಲಿ ಈ ಪ್ರೀತಿ ಎಂಬ ಹೂವು ಚಿಗುರೊಡೆದದ್ದು. ಆಸೆಗಳಿಗೆ ಮಂಕು ಬಳಿದದ್ದು. ಹೌದು ನಾನು ನನ್ನನ್ನೇ ಮರೆತದ್ದು ನೀ ಬಂದಾಗಲೇ.

ಜೀವನದಲ್ಲಿ ಕಷ್ಟಗಳನ್ನೇ ಎದುರಿಸಿದ ನನಗೆ ನೀನೊಂಥರಾ ಅತಿಯಾಗಿ ಹಿಡಿಸಿದೆ. ನಿನ್ನ ನಗುವಲ್ಲಿ ಪ್ರೀತಿಯ ರಂಗವಲ್ಲಿ ಬರೆದು ನಾನು ಖುಷಿ ಪಡುತ್ತಿದ್ದೆ. ನಿನ್ನ ಸಣ್ಣ ನೋವೂ ನನಗೆ ಪರ್ವತದಂತೆ ಭಾಸವಾಗುತ್ತಿತ್ತು. ನೀನು ನನ್ನ ಮನದ ಅಪ್ಪಣೆಯನ್ನು ಕೇಳದೇ ನನಗೇ ತಿಳಿಯದಂತೆ ನನ್ನನ್ನೇಆವರಿಸಿ ಬಿಟ್ಟಿದ್ದೆ. ಎಲ್ಲಾ ಹುಚ್ಚು ಆಸೆಗಳ ಮಧ್ಯೆ, ಪ್ರಾಯದಲ್ಲಿ ಬಂದ ಸಣ್ಣ ಆಕರ್ಷಣೆಗಳ ಮಧ್ಯೆ, ನಾನು ನನ್ನನ್ನೇ ಮರೆತು ಬಿಟ್ಟಿದ್ದೆ ಎಂಬುದು ತಿಳಿದದ್ದು ಮಾತ್ರ ತುಂಬ ತಡವಾಗಿ.

ನಿನ್ನನ್ನು ದೂರುವ ಹುಡುಗ ನಾನಲ್ಲ. ಆದರೆ, ಮನೆಗೆ ಹೆಗಲಾಗಬೇಕಾದ ಈ ವಯಸ್ಸಿನಲ್ಲಿ ನಾನು ಪ್ರಣಯವೆಂಬ ದಾರಿ ಹಿಡಿದೆ. ಹಣ, ಆಸ್ತಿ, ವಿದ್ಯೆ, ಇದ್ಯಾವುದೂ ನನ್ನಲ್ಲಿ ಇಲ್ಲ ಎಂದು ತಿಳಿದಾಗ ನೀನು ನಡೆದುಕೊಂಡ ರೀತಿಯಿದೆಯಲ್ಲ; ಅದನ್ನು ಎಂದಿಗೂ ಮರೆಯಲಾರೆ. ಇವನಿಂದ ಏನೂ ಸಿಗಲಾರದು ಎಂದು ತಿಳಿಯುತ್ತಿದ್ದಂತೆಯೇ ನೀನು ಬಿಟ್ಟು ಹೋದೆಯಲ್ಲವಾ ? ಬಾಳೆಂದರೇನೆಂಬುವುದು ಈಗ ಅರ್ಥವಾಗುತ್ತಿದೆ.

ಬಾಳ ಪಯಣವು ಸುದೀರ್ಘ‌ವಾಗಿದೆ. ನುಡಿಗಟ್ಟಾಗಿ ಬಂದ “ಹೆಣ್ಣು ತ್ಯಾಗಮಯಿ’ ಎಂಬ ಮಾತು ನೂರಕ್ಕೆ ನೂರು ಸತ್ಯವಲ್ಲವೆಂಬುವುದೂ ಅನುಭವವಾಗಿದೆ. ಪ್ರೇಯಸಿ ದೂರವಾಗಿರಬಹುದು. ಆದರೆ ರಕ್ತ ಹಂಚಿಕೊಂಡು ಹುಟ್ಟಿದ ತಂಗಿ ಎಂದಿಗೂ ನನ್ನ ಕಡೆಗಣಿಸಿಲ್ಲ. ಅವಳ ಭವಿಷ್ಯಕ್ಕೆ ಮುನ್ನುಡಿ ಬರೆದು, ನನ್ನ ಕನಸಿನ ಅರಮನೆಯ ಕಡೆಗೆ ಹೆಜ್ಜೆ ಇಡುತ್ತೇನೆ.

* ಅರ್ಪಿತಾ ಕುಂದರ್‌

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.