ನೀನು ಎರೆಚಿದ ಬಣ್ಣ ನಾಟಿರುವುದು ಹೃದಯಕ್ಕೆ


Team Udayavani, Oct 9, 2018, 6:00 AM IST

shutterstock503896363-copy.jpg

ಒಮ್ಮೆ ನಿನ್ನನ್ನು ತಬ್ಬಿಕೊಳ್ಳಬೇಕು, ಪ್ರೀತಿಯಿಂದ ಮುದ್ದಾಡಬೇಕೆನಿಸಿತು. ನೀನು ಆಕಾಶ, ನಾನು ಭೂಮಿ. ಅದು ಹೇಗೆ ತಬ್ಬಿಕೊಳ್ಳಲು ಸಾಧ್ಯ? ಎಷ್ಟು ಉದ್ದ ಕೈ ಚಾಚಿದರೂ ನೀನು ಸಿಗಲಾರೆ. ಆಗ ಒಂದು ಉಪಾಯ ಹೊಳೆಯಿತು…

ಬಾನಂಗಳದ ತಾರೆಯ ಚುಕ್ಕಿಗಳ ಸಾಲಿನಲಿ, ಅಂದು ನಾನೂ ಕೂಡ ಮಿನುಗು ನಕ್ಷತ್ರವಾಗಿದ್ದೆ. ಹುಣ್ಣಿಮೆಯ ಚಂದ್ರಮನಲ್ಲಿ ನಾನು ನಿನ್ನನ್ನು ಕಂಡೆ. ಆ ಕಲ್ಪನೆಯಲ್ಲೇ, ಚಂದಿರನೊಂದಿಗೆ ಮಾತಾಡುತ್ತಾ ಕುಳಿತೆ. ಅದರೊಡನೆಯೇ ಮನಸಿನ ಭಾವನೆಗಳನ್ನು ಹಂಚಿಕೊಂಡೆ.

 ಆದರೆ, ಈ ಕಣ್ಣುಗಳಿಗೆ ಅಷ್ಟು ಮಾತ್ರ ಸಾಲಲಿಲ್ಲ. ಒಮ್ಮೆ ನಿನ್ನನ್ನು ತಬ್ಬಿಕೊಳ್ಳಬೇಕು, ಪ್ರೀತಿಯಿಂದ ಮುದ್ದಾಡಬೇಕೆನಿಸಿತು. ನೀನು ಆಕಾಶ, ನಾನು ಭೂಮಿ. ಅದು ಹೇಗೆ ತಬ್ಬಿಕೊಳ್ಳಲು ಸಾಧ್ಯ? ಎಷ್ಟು ಉದ್ದ ಕೈ ಚಾಚಿದರೂ ನೀನು ಸಿಗಲಾರೆ. ಆಗ ಒಂದು ಉಪಾಯ ಹೊಳೆಯಿತು. ಒಂದು ಕ್ಷಣ ಕಣ್ಣುಗಳೆರಡನ್ನೂ ಮುಚ್ಚಿಕೊಂಡು ನಾನು ನೀನಿದ್ದಲ್ಲಿಗೇ ಬಂದುಬಿಟ್ಟೆ. ನಿನ್ನನ್ನು ಬಿಗಿಯಾಗಿ ಅಪ್ಪಿಕೊಂಡು ಮುದ್ದಾಡಿದೆ. ಅಷ್ಟೆ: ನನ್ನ ಆಸೆಗಳೆಲ್ಲಾ ಈಡೇರಿದಂತಾಯಿತು. ಕಣ್ಣು ಬಿಟ್ಟಾಗ, ನಾನು ಮೊದಲಿದ್ದ ಜಾಗದಲ್ಲೇ ಇದ್ದೆ.

ಒಂದೇ ಒಂದು ಕ್ಷಣ, ಅದೂ ಕಲ್ಪನೆಯಲ್ಲಿ ನಿನ್ನೊಟ್ಟಿಗಿರುವುದೇ ಎಷ್ಟು ಖುಷಿ ಕೊಡುತ್ತದೆ. ಇನ್ನು ಜೀವನಪೂರ್ತಿ ನಿನ್ನೊಂದಿಗೆ ಕಾಲ ಕಳೆಯುವುದನ್ನು ನೆನೆಸಿಕೊಂಡರೆ, ಮನಸಿಗಾಗುವ ಖುಷಿ ಅಷ್ಟಿಷ್ಟಲ್ಲ. ಈ ಜೀವಕ್ಕೆ ಬೇರೇನು ಬೇಕು ಹೇಳು? ಅಂದಹಾಗೆ, ನೀನು ಬರುವುದು ಯಾವಾಗ? ನಿನ್ನನ್ನು ನೋಡದೆ, ಮಾತನಾಡಿಸದೆ, ತುಂಬಾ ದಿನಗಳಾಯಿತು.

ನನಗನಿಸುತ್ತೆ: ನಿನಗೂ ಚಂದ್ರಮನಿಗೂ ಅದೇನೋ ನಂಟಿದೆ. ನಾನು ನಿನ್ನಿಂದ ಅದೆಷ್ಟೇ ದೂರವಿದ್ದರೂ, ಅವನಲ್ಲೇ ನಿನ್ನನ್ನು ಕಾಣುತ್ತೇನೆ. ನಿನ್ನನ್ನು ಮೊದಲ ಬಾರಿ ಕಂಡದ್ದು, ಹುಣ್ಣಿಮೆಯ ದಿನದಂದೇ. ನೆನಪಿದೆಯಾ? ಅಂದು ಹೋಳಿ ಹುಣ್ಣಿಮೆ. ಅಪರಿಚಿತಳಾದ ನನ್ನ ಮೇಲೆ, ನೀನು ಒಲವಿನ ಬಣ್ಣ ಚೆಲ್ಲಿ, ಹೃದಯವನ್ನು ಚಿತ್ತಾರಗೊಳಿಸಿದೆ. ಎಷ್ಟೇ ಅಳಿಸಿ, ತೊಳೆದರೂ ಆ ಬಣ್ಣ ನನ್ನಿಂದ ದೂರಾಗಲಿಲ್ಲ. ಯಾಕೆಂದರೆ, ಆ ಬಣ್ಣ ನಾಟಿರುವುದು ನನ್ನೀ ಹೃದಯಕ್ಕೆ. ನಮ್ಮ ಮಧ್ಯೆ ಪ್ರೀತಿಯ ಹೂ ಅರಳಲು ಕಾರಣವಾದ ಆ ಒಲವಿನ ಬಣ್ಣ ಎಂದೆಂದಿಗೂ ಮಾಸುವುದೇ ಬೇಡ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.
– ಗೀತಾ ಕೆ. ಬೈಲಕೊಪ್ಪ

ಟಾಪ್ ನ್ಯೂಸ್

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.