ಮೊದಲ ದಿನ ಮೌನ…


Team Udayavani, Aug 27, 2019, 5:46 AM IST

n-11

ನಾವಿರುವ ಮನೆಯಲ್ಲಿ ಕನ್ನಡ ಗೊತ್ತಿರುವವರು ಒಬ್ಬರಾದ್ರೂ ಇರುವಂತೆ ಮಾಡ್ರಪ್ಪಾ ಎಂದು ದೇವರಲ್ಲಿ ಬೇಡಿಕೊಂಡೆ. ಆದರೆ, ರೂಂಗೆ ಬಂದಾಗಲೇ ಗೊತ್ತಾಯ್ತು: ಅಲ್ಲಿರುವ ಆರು ಜನರೂ ಆರು ರಾಜ್ಯಕ್ಕೆ ಸೇರಿದವರು ಎಂಬ ಸಂಗತಿ ! ಆಮೇಲೆ ಮಾಡುವುದೇನು? ಪೆಚ್ಚು ಮೊರೆ ಹಾಕ್ಕೊಂಡು ಕೂತೆ…

ಮನಸಲ್ಲಿ ಸಾವಿರಾರು ಆಲೋಚನೆ. ಹೃದಯದ ಬಡಿತ ಕೇಳ್ಳೋಷ್ಟು ಆತಂಕ. ಇದಕ್ಕೆಲ್ಲಾ ಕಾರಣ, ಏನೂ ಗೊತ್ತಿಲ್ಲದ ಊರು. ಅಲ್ಲಿ ಜೀವನ ಹೆಂಗೋ ಏನೋ ಅನ್ನೋ ಭಯ. ಆದ್ರೂ ಜೀವನದಲ್ಲಿ ಏನಾದ್ರೂ ಸಾಧಿಸಲೇ ಬೇಕು ಅನ್ನುವ ಛಲ… ಹೀಗೆ ನನ್ನ ಚಿಂತೆಗಳು ಸಾವಿರವಿದ್ದವು. ಅವನ್ನೆಲ್ಲ ಜೊತೆಗಿಟ್ಟುಕೊಂಡೇ ಅವತ್ತು ರಾತ್ರಿ ಎಲ್ಲಿಗೋ ಪಯಣ ಯಾವುದೋ ದಾರಿ, ಏಕಾಂಗಿ ಸಂಚಾರಿ’ ಅಂತ ಮುಂಬೈ ಬಸ್‌ ಹತ್ತಿ ಕುಳಿತುಬಿಟ್ಟಿದ್ದೆ.

ನಿದ್ದೆ ಮಾಡದ ನಗರಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಲೈಫ್ನಲ್ಲಿ ಒಂದು ಸಾರಿ ಆದರೂ ಮುಂಬೈಗೆ ಹೋಗಿ ಗೇಟ್‌ ವೇ ಆಫ್ ಇಂಡಿಯಾ ನೋಡೋ ಕನಸು ಎಲ್ಲರಿಗೂ ಇದ್ದೇ ಇರತ್ತೆ. ಬರೀ ತಿರುಗಾಟಕ್ಕಾಗಿ ಬರೋದು ಬೇರೆ, ಇಲ್ಲೇ ಇರೋಕೆ ಬರೋದು ಬೇರೆ. ಅದರಲ್ಲೂ, ಯಾವುದೋ ಒಂದು ಪುಟ್ಟ ಹಳ್ಳಿಯಿಂದ ಬಂದು ಮುಂಬೈನ ದೊಡ್ಡದೊಂದು ಕಂಪನಿಯಲ್ಲಿ ಕೆಲಸಕ್ಕೆ ಸೇರೋದು ಅಂದ್ರೆ ತಮಾಷೆನಾ?

ಒಬ್ಬರಾದ್ರೂ ಕನ್ನಡಿಗರು ನಾನು ಇರೋ ಮನೇಲಿ ಇರುವ ಹಾಗೆ ಮಾಡಪ್ಪಾ ಅಂತ ದೇವ್ರತ್ರ ಕೇಳಿಕೊಳ್ಳದೇ ಇರೋ ನಿಮಿಷನೇ ಇಲ್ಲಾ. ಇರೋ ಬರೋ ಧೈರ್ಯ ಎಲ್ಲಾ ಒಟ್ಟುಗೂಡಿಸಿ ಮನೆ ಒಳಗೆ ಬರಿ¤ದ್ದಂಗೇ ಗೊತ್ತಾಯ್ತು. ಒಂದೇ ಕಂಪನೀಲಿ ಕೆಲಸ ಸಿಕ್ಕಿರೋ ನಾವು ಏಳು ಹುಡುಗೀರೂ, ಆರು ಬೇರೆ ಬೇರೆ ರಾಜ್ಯದೋರು ಅಂತ. ಅಲ್ಲಿಗೆ ಮುಗೀತು: ಮನಸಿನ ಮೂಲೆಯಲ್ಲಿ ಇದ್ದ ಸಣ್ಣದೊಂದು ಆಸೆನೂ ಸತ್ತು ಹೋಗಿತ್ತು.

ರೂಮಿಗೆ ಬಂದಾಗ ತಿಳೀತು. ನನ್ನ ರೂಮ್‌ಮೇಟ್‌ ರಾಜಧಾನಿ ದೆಹಲಿಯವಳು ಎಂದು. ಛಲೋ ಠೀಕ್‌ ಹೈ ಅಂತ ಚೂರು ಪಾರು ಹಿಂದಿ ಎಲ್ಲಾ ಒಟ್ಟುಗೂಡಿಸಿ ಅವಳ ಜೊತೆ ಮಾತಾಡಿದ್ದೂ ಆಯಿತು. ದೇವರು ಯಾವಾಗ್ಲೂ ಜೊತೆಗೆ ಇರ್ತಾನೆ ಅನ್ನೋದಕ್ಕೆ ಅವಳೇ ಸಾಕ್ಷಿ. ಅಪ್ಪ-ಅಮ್ಮ, ಮನೇ ಮಠ ಬಿಟ್ಟು ಬಂದು ನಿಂತಿದ್ದ ನನಗೆ ಅವಳು ಒಂದೇ ದಿನದಲ್ಲಿ ಒಳ್ಳೆಯ ಸ್ನೇಹಿತೆಯಾದಳು. ನನಗೆ ಹಿಂದಿ ಚನ್ನಾಗಿ ಬರೋದಿಲ್ಲ ಎಂದು ತಿಳಿದಮೇಲಂತೂ ಒಂದು ಕ್ಷಣಕ್ಕೂ ನನ್ನ ಒಬ್ಬಳನ್ನೇ ಬಿಟ್ಟು ಹೋಗ್ತಿರ್ಲಿಲ್ಲ.

“ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು ರಾಘವೇಂದ್ರ’ ಎಂದು ಮಾರನೇದಿನ ಆಫೀಸಿಗೆ ಹೋಗಿದ್ದೂ ಆಯಿತು. ಹೊಟ್ಟೆಗೆ ಹಿಟ್ಟಿಲ್ಲದಿದ್ದರು ಜುಟ್ಟಿಗೆ ಮಲ್ಲಿಗೆ ಹೂವು ಅಂತಾರಲ್ಲ ಅದೇ ಥರ, ಸುಂದರವಾಗಿರೋ ಹುಡುಗರು ಇರಲಪ್ಪಾ ಆಫೀಸಲ್ಲಿ ಅಂತ ಮನಸಲ್ಲೇ ಮಂಡಕ್ಕಿ ತಿಂತಿದ್ದೆ. ಮೊದಲನೇ ದಿನ ಆಗಿರೋದ್ರಿಂದ ಜಾಸ್ತಿ ಏನು ಕೆಲಸ ಇರಲಿಲ್ಲ. ಸ್ವಲ್ಪ ಬೇಗನೆ ಮನೆಗೆ ಹೊರಟಾಯಿತು. ಅದೃಷ್ಟಾನೋ ದುರಾದೃಷ್ಟಾನೋ ಗೊತ್ತಿಲ್ಲ. ಅಂದಿನ ಮಳೆ ಅಬ್ಬರಕ್ಕೆ ಟ್ರಾಫಿಕ್‌ನಲ್ಲಿ ನಾವು ಸಿಕ್ಕಾಕ್ಕೊಂಡಿದ್ವಿ. ಮಲೆನಾಡಲ್ಲಿ ಮಳೆಗಾಲದಲ್ಲಿ ಮುದವಾಗಿ ಮಲಗಿರಬೇಕಾಗಿದ್ದ ಮುಗ್ಧ ಮನಸ್ಸು ಮುಂಬಯಿನ ಮಾರಣಾಂತಿಕ ಮಳೆಯಲ್ಲಿ ಮಂಕಾಗಿ ಕುಳಿತಿದ್ದ ಆ ದಿನ ಮರೆಯಲು ಸಾಧ್ಯವೇ ಇಲ್ಲ.

-ಜಯಲಕ್ಷ್ಮೀ ಭಟ್‌, ಡೊಂಬೇಸರ

ಟಾಪ್ ನ್ಯೂಸ್

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.