ದೇವರಂತೆ ಬಂದ ಮಹಾತಾಯಿ…


Team Udayavani, Sep 17, 2019, 5:51 AM IST

u-1

ಹಳ್ಳಿಗಳಿಂದ ಬಂದವರಿಗೆ ಬೆಂಗಳೂರಿನಂಥ ದೊಡ್ಡ ದೊಡ್ಡ ಮಹಾನಗರಗಳಲ್ಲಿ ಒಂಟಿತನ ಕಾಡಲು ಶುರುವಾಗಿಬಿಡುತ್ತದೆ. ಇಲ್ಲಿನವರಲ್ಲಿ ಬಹುತೇಕರು ತಾವಾಯ್ತು ತಮ್ಮ ಪಾಡಾಯ್ತು. ನಮಗ್ಯಾಕೆ ಬೇಕಪ್ಪ ಬೇರೆಯವರ ಉಸಾಬರಿ ಅನ್ನೋ ರೀತಿ ಬದುಕುತ್ತಿರುತ್ತಾರೆ. ಹೀಗಾಗಿ, ಮಹಾನಗರಕ್ಕೆ ಹೊಕ್ಕರೆ ಸಾಕು ಒಂಥರಾ ಅಪರಿಚಿತ ಭಾವ. ದಾರಿಯಲ್ಲಿ ಬಿದ್ದರೂ, ಎದ್ದರೂ ಯಾಕೆ, ಏನು ಎಂದು ಯಾರೂ ಕೇಳುವುದಿಲ್ಲ, ಹೇಳುವುದಿಲ್ಲ. ಇಂಥ ಸಂದರ್ಭದಲ್ಲಿ, ಮಹಾನಗರದೊಳಗೆ ಅಡಗಿರುವ ಅಮಾನವೀಯತೆಯ ದರ್ಶನವಾಗುತ್ತದೆ.

ಇಂಥದೇ ಅನುಭವ ನನಗೂ ಆಯಿತು. ನಾನು ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿಗೆ ಬಂದಾಗ ಹೊಂದಿಕೊಳ್ಳುವುದಕ್ಕೆ ಸ್ವಲ್ಪ ಕಷ್ಟವಾಗಿತ್ತು. ಅದರಲ್ಲೂ ನಮ್ಮ ಹಳ್ಳಿಯ ಆಹಾರಕ್ಕೂ, ನಗರ ಪ್ರದೇಶದ ಹೋಟೆಲ್‌ ಊಟ ಹೊಂದಾಣಿಕೆ ಆಗದೇ, ನಾನು ನಿಯಮಿತವಾಗಿ ಸೇವಿಸದೇ ಆರೋಗ್ಯ ಹದಗೆಟ್ಟಿತ್ತು. ಇದೇ ಪರಿಸ್ಥಿತಿಯಲ್ಲಿ ಕೆಲಸಕ್ಕೆ ಹೋಗಲೇ ಬೇಕಾದ ಅನಿವಾರ್ಯ ಎದುರಾಯಿತು. ಹೀಗಾಗಿ, ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದೆ.

ಬೆಳಗ್ಗೆ ಒಂಭತ್ತು ಗಂಟೆಗೆ ಹೊರಟೆ. ಪೀಕ್‌ ಅವರ್‌ ಆಗಿದ್ದರಿಂದ ಮೆಟ್ರೋ ಪೂರ್ತಿ ಜನಜಂಗುಳಿ. ಕೂರಲು ಸೀಟುಗಳು ಇರಲಿಲ್ಲ. ಹಾಗೂ ಹೀಗೂ ಮಾಡಿ ನಿಂತೇ ಇದ್ದೆ. ಒಂದಷ್ಟು ಸಮಯ ಕಳೆಯಿತು. ಏನಾಯಿತೋ ಗೊತ್ತಿಲ್ಲ. ಇದಕ್ಕಿದ್ದಂತೆ ತಲೆ ಸುತ್ತಲು ಶುರುವಾಯಿತು. ನಿಂತಲ್ಲೇ ಕುಸಿದು ಬಿದ್ದೆ. ಬಿದ್ದ ರಭಸಕ್ಕೆ ಮೂಗು, ಬಾಯಲ್ಲೆಲ್ಲಾ ರಕ್ತ ಸುರಿಯಲು ಶುರುವಾಯಿತಂತೆ. ಎಲ್ಲಿದ್ದೀನಿ, ಹೇಗಿದ್ದೀನಿ, ಏನಾಗಿದೆ ತಿಳಿಯದು. ಆದರೆ, ಮುಂದಿನ ನಿಲ್ದಾಣದ ಸೂಚನೆ ಸಣ್ಣದಾಗಿ ಕಿವಿಯಲ್ಲಿ ಮೊಳಗಿದಾಗಲೇ ಪ್ರಜ್ಞೆ ಬಂದಿದೆ ಅಂತ ಗೊತ್ತೂಗಿದ್ದು. ಮೆಟ್ರೋದಲ್ಲಿ ಅಷ್ಟೊಂದು ಜನರಿದ್ದರೂ, ಯಾರೂ ಕೂಡ ಕೆಳಗೆ ಬಿದ್ದಿದ್ದ ನನ್ನ ಸಹಾಯಕ್ಕೆ ಬರಲಿಲ್ಲ. ನಾನು ಹಾಗೇ ಬಿದ್ದೇ ಇದ್ದೆ. ಏಳಲು ಕೂಡ ಆಗುತ್ತಿಲ್ಲ. ಆದರೆ ದೇವರು ನನ್ನ ಪಾಲಿಗೆ ಇದ್ದ ಎನಿಸುತ್ತದೆ. ಜನಜಂಗುಳಿಯ ಮಧ್ಯೆ ಇದ್ದ ಯಾರೋ ಒಬ್ಬ ಮಹಾತಾಯಿ ಮುಂದೆ ಬಂದು, ನನ್ನನ್ನು ಎಚ್ಚರಿಸಿ, ಎಬ್ಬಿಸಿ ಮೆಟ್ರೋದಿಂದ ಇಳಿಸಿ ಕೊಂಡು ಬಂದರು. ಆನಂತರ, ನೀರು ಕುಡಿಸಿ, ವಿಚಾರಿಸಿದರು.

ಆಕೆ ಇಷ್ಟಕ್ಕೇ ಬಿಡಲಿಲ್ಲ. ವಾಪಸ್ಸು ನನ್ನ ಹಾಸ್ಟೆಲ್‌ ತನಕ ಜೊತೆಗೆ ಬಂದು, ಹುಷಾರಮ್ಮಾ ಅಂತ ಹೇಳಿ ಬಿಟ್ಟು ಹೋದರು. ಇಂಥ ದೊಡ್ಡ ಮಹಾನಗರದಲ್ಲಿ ಗೊತ್ತಿಲ್ಲದ ಅಪರಿಚಿತ ತಾಯಿ ನನ್ನನ್ನು ರಕ್ಷಿಸಿದೇ ಇದ್ದಿದ್ದರೆ ನಾನು ಏನಾಗುತ್ತಿದ್ದೆನೋ?

ಆವತ್ತು ಆಕೆ ಕೇಳಿದ ಪ್ರಶ್ನೆಗೆ ಏನೆಂದು ಉತ್ತರಿಸಿದೇನೋ ನೆನಪಿಲ್ಲ. ಇಷ್ಟಾಗಿಯೂ ಆ ತಾಯಿ ತನ್ನ ವಿಳಾಸ ಮಾತ್ರ ತಿಳಿಸಲಿಲ್ಲ. ನನಗೋ, ಆ ಪರಿಸ್ಥಿತಿಯಿಂದ ಪಾರಾದರೆ ಸಾಕಿತ್ತು. ಹಾಗಾಗಿ, ನಾನು ಹೆಸರು ಕೂಡ ಕೇಳಲಿಲ್ಲ. ದೇವರಂತೆ ಬಂದ ಮಹಾತಾಯಿಯ ಋಣ ತೀರಿಸಲು ಸಾಧ್ಯವೇ ಇಲ್ಲ.

ಭಾಗ್ಯಶ್ರೀ.ಎಸ್‌

ಟಾಪ್ ನ್ಯೂಸ್

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.