ದೇವರಂತೆ ಬಂದ ಮಹಾತಾಯಿ…


Team Udayavani, Sep 17, 2019, 5:51 AM IST

u-1

ಹಳ್ಳಿಗಳಿಂದ ಬಂದವರಿಗೆ ಬೆಂಗಳೂರಿನಂಥ ದೊಡ್ಡ ದೊಡ್ಡ ಮಹಾನಗರಗಳಲ್ಲಿ ಒಂಟಿತನ ಕಾಡಲು ಶುರುವಾಗಿಬಿಡುತ್ತದೆ. ಇಲ್ಲಿನವರಲ್ಲಿ ಬಹುತೇಕರು ತಾವಾಯ್ತು ತಮ್ಮ ಪಾಡಾಯ್ತು. ನಮಗ್ಯಾಕೆ ಬೇಕಪ್ಪ ಬೇರೆಯವರ ಉಸಾಬರಿ ಅನ್ನೋ ರೀತಿ ಬದುಕುತ್ತಿರುತ್ತಾರೆ. ಹೀಗಾಗಿ, ಮಹಾನಗರಕ್ಕೆ ಹೊಕ್ಕರೆ ಸಾಕು ಒಂಥರಾ ಅಪರಿಚಿತ ಭಾವ. ದಾರಿಯಲ್ಲಿ ಬಿದ್ದರೂ, ಎದ್ದರೂ ಯಾಕೆ, ಏನು ಎಂದು ಯಾರೂ ಕೇಳುವುದಿಲ್ಲ, ಹೇಳುವುದಿಲ್ಲ. ಇಂಥ ಸಂದರ್ಭದಲ್ಲಿ, ಮಹಾನಗರದೊಳಗೆ ಅಡಗಿರುವ ಅಮಾನವೀಯತೆಯ ದರ್ಶನವಾಗುತ್ತದೆ.

ಇಂಥದೇ ಅನುಭವ ನನಗೂ ಆಯಿತು. ನಾನು ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿಗೆ ಬಂದಾಗ ಹೊಂದಿಕೊಳ್ಳುವುದಕ್ಕೆ ಸ್ವಲ್ಪ ಕಷ್ಟವಾಗಿತ್ತು. ಅದರಲ್ಲೂ ನಮ್ಮ ಹಳ್ಳಿಯ ಆಹಾರಕ್ಕೂ, ನಗರ ಪ್ರದೇಶದ ಹೋಟೆಲ್‌ ಊಟ ಹೊಂದಾಣಿಕೆ ಆಗದೇ, ನಾನು ನಿಯಮಿತವಾಗಿ ಸೇವಿಸದೇ ಆರೋಗ್ಯ ಹದಗೆಟ್ಟಿತ್ತು. ಇದೇ ಪರಿಸ್ಥಿತಿಯಲ್ಲಿ ಕೆಲಸಕ್ಕೆ ಹೋಗಲೇ ಬೇಕಾದ ಅನಿವಾರ್ಯ ಎದುರಾಯಿತು. ಹೀಗಾಗಿ, ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದೆ.

ಬೆಳಗ್ಗೆ ಒಂಭತ್ತು ಗಂಟೆಗೆ ಹೊರಟೆ. ಪೀಕ್‌ ಅವರ್‌ ಆಗಿದ್ದರಿಂದ ಮೆಟ್ರೋ ಪೂರ್ತಿ ಜನಜಂಗುಳಿ. ಕೂರಲು ಸೀಟುಗಳು ಇರಲಿಲ್ಲ. ಹಾಗೂ ಹೀಗೂ ಮಾಡಿ ನಿಂತೇ ಇದ್ದೆ. ಒಂದಷ್ಟು ಸಮಯ ಕಳೆಯಿತು. ಏನಾಯಿತೋ ಗೊತ್ತಿಲ್ಲ. ಇದಕ್ಕಿದ್ದಂತೆ ತಲೆ ಸುತ್ತಲು ಶುರುವಾಯಿತು. ನಿಂತಲ್ಲೇ ಕುಸಿದು ಬಿದ್ದೆ. ಬಿದ್ದ ರಭಸಕ್ಕೆ ಮೂಗು, ಬಾಯಲ್ಲೆಲ್ಲಾ ರಕ್ತ ಸುರಿಯಲು ಶುರುವಾಯಿತಂತೆ. ಎಲ್ಲಿದ್ದೀನಿ, ಹೇಗಿದ್ದೀನಿ, ಏನಾಗಿದೆ ತಿಳಿಯದು. ಆದರೆ, ಮುಂದಿನ ನಿಲ್ದಾಣದ ಸೂಚನೆ ಸಣ್ಣದಾಗಿ ಕಿವಿಯಲ್ಲಿ ಮೊಳಗಿದಾಗಲೇ ಪ್ರಜ್ಞೆ ಬಂದಿದೆ ಅಂತ ಗೊತ್ತೂಗಿದ್ದು. ಮೆಟ್ರೋದಲ್ಲಿ ಅಷ್ಟೊಂದು ಜನರಿದ್ದರೂ, ಯಾರೂ ಕೂಡ ಕೆಳಗೆ ಬಿದ್ದಿದ್ದ ನನ್ನ ಸಹಾಯಕ್ಕೆ ಬರಲಿಲ್ಲ. ನಾನು ಹಾಗೇ ಬಿದ್ದೇ ಇದ್ದೆ. ಏಳಲು ಕೂಡ ಆಗುತ್ತಿಲ್ಲ. ಆದರೆ ದೇವರು ನನ್ನ ಪಾಲಿಗೆ ಇದ್ದ ಎನಿಸುತ್ತದೆ. ಜನಜಂಗುಳಿಯ ಮಧ್ಯೆ ಇದ್ದ ಯಾರೋ ಒಬ್ಬ ಮಹಾತಾಯಿ ಮುಂದೆ ಬಂದು, ನನ್ನನ್ನು ಎಚ್ಚರಿಸಿ, ಎಬ್ಬಿಸಿ ಮೆಟ್ರೋದಿಂದ ಇಳಿಸಿ ಕೊಂಡು ಬಂದರು. ಆನಂತರ, ನೀರು ಕುಡಿಸಿ, ವಿಚಾರಿಸಿದರು.

ಆಕೆ ಇಷ್ಟಕ್ಕೇ ಬಿಡಲಿಲ್ಲ. ವಾಪಸ್ಸು ನನ್ನ ಹಾಸ್ಟೆಲ್‌ ತನಕ ಜೊತೆಗೆ ಬಂದು, ಹುಷಾರಮ್ಮಾ ಅಂತ ಹೇಳಿ ಬಿಟ್ಟು ಹೋದರು. ಇಂಥ ದೊಡ್ಡ ಮಹಾನಗರದಲ್ಲಿ ಗೊತ್ತಿಲ್ಲದ ಅಪರಿಚಿತ ತಾಯಿ ನನ್ನನ್ನು ರಕ್ಷಿಸಿದೇ ಇದ್ದಿದ್ದರೆ ನಾನು ಏನಾಗುತ್ತಿದ್ದೆನೋ?

ಆವತ್ತು ಆಕೆ ಕೇಳಿದ ಪ್ರಶ್ನೆಗೆ ಏನೆಂದು ಉತ್ತರಿಸಿದೇನೋ ನೆನಪಿಲ್ಲ. ಇಷ್ಟಾಗಿಯೂ ಆ ತಾಯಿ ತನ್ನ ವಿಳಾಸ ಮಾತ್ರ ತಿಳಿಸಲಿಲ್ಲ. ನನಗೋ, ಆ ಪರಿಸ್ಥಿತಿಯಿಂದ ಪಾರಾದರೆ ಸಾಕಿತ್ತು. ಹಾಗಾಗಿ, ನಾನು ಹೆಸರು ಕೂಡ ಕೇಳಲಿಲ್ಲ. ದೇವರಂತೆ ಬಂದ ಮಹಾತಾಯಿಯ ಋಣ ತೀರಿಸಲು ಸಾಧ್ಯವೇ ಇಲ್ಲ.

ಭಾಗ್ಯಶ್ರೀ.ಎಸ್‌

ಟಾಪ್ ನ್ಯೂಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.