ಬದುಕಿಗೆ ಚಿನ್ನದ ಹಾದಿ

ಜುಮ್ಮ್ ಅಂತ ಜೆಮ್ಮಾಲಜಿ ಕಲಿಯೋಕೆ ಮುತ್ತಿನಂಥ ಅವಕಾಶ

Team Udayavani, Jul 16, 2019, 5:15 AM IST

jewellery-designing-course-in-India-copy-copy

ಭಾರತ, ಶತ ಶತಮಾನಗಳಿಂದಲೂ ಅನರ್ಘ್ಯ ಮುತ್ತು, ರತ್ನಗಳಿಗೆ ಹೆಸರಾಗಿದೆ. ಮೌರ್ಯರ ಆಡಳಿತ, ಗುಪ್ತರ ಸ್ವರ್ಣಯುಗ, ವಿಜಯನಗರ ಕಾಲದ ಐಶ್ವರ್ಯ ವರ್ಣನೆಯನ್ನು ಮಾಡುವಾಗ, ಮೊಗಲರ ವೈಭವವನ್ನು ಚಿತ್ರಿಸುವಾಗ, ಮುತ್ತು ರತ್ನ, ವಜ್ರ, ವೈಡೂರ್ಯಗಳ ವರ್ಣನೆ ಇಲ್ಲದೆ ಅವು ಮುಗಿಯುವುದೇ ಇಲ್ಲ. ಹಿಂದೊಂದು ಕಾಲದಲ್ಲಿ ಭಾರತವು ಜಗತ್ತಿನ ಏಕಮೇವಾದ್ವಿತೀಯ ರಾಷ್ಟ್ರವೆಂದು ಖ್ಯಾತಿಯಾಗಿದ್ದು ಕೂಡ ಈ ಮುತ್ತು, ರತ್ನಗಳ ಉತ್ಪಾದನೆ ಮತ್ತು ಸಂಸ್ಕರಣದಲ್ಲಿ. ಇಂದಿಗೂ ಸಹಾ ಭಾರತ ಅನರ್ಘ್ಯರತ್ನಗಳಾದ ವಜ್ರ, ವೈಡೂರ್ಯಗಳನ್ನು ಸಂಸ್ಕರಿಸುವುದರಲ್ಲಿ ವಿಶ್ವದ ನಂ.1 ದೇಶ ಅನ್ನಿಸಿಕೊಂಡಿದೆ. ಬನ್ನಿ, ಈ ವಿಶಿಷ್ಟವಾದ ರತ್ನಶಾಸ್ತ್ರದ ಬಗ್ಗೆ ಒಂದಿಷ್ಟು ತಿಳಿಯೋಣ.

ರತ್ನ ಶಾಸ್ತ್ರ ಒಂದು ಕಲೆಯೂ ಹೌದು. ವಿಜ್ಞಾನವೂ ಹೌದು. ರತ್ನಶಾಸ್ತ್ರವು ಅನರ್ಘ್ಯ ರತ್ನಗಳ ಅಧ್ಯಯನ, ಸಂಸ್ಕರಣೆ, ಬೆಲೆ ನಿರ್ಧಾರ ಮತ್ತು ಮಾರಾಟ ಮಾಡುವ ಪ್ರಕ್ರಿಯೆಗಳನ್ನು ಒಳಗೊಂಡಿದೆ. ಅನರ್ಘ್ಯ ರತ್ನಗಳೆಂದರೆ, ವಜ್ರ, ಮುತ್ತು, ದವಳ, ಪಚ್ಚೆ, ವೈಢೂರ್ಯ. ರತ್ನಶಾಸ್ತ್ರವು ನೈಸರ್ಗಿಕ ಹಾಗೂ ಕೃತಕ ರತ್ನಗಳನ್ನು ಅಧ್ಯಯನ ಮಾಡುವ ವಿಶೇಷಶಾಸ್ತ್ರವಾಗಿದೆ. ಇಂದು ಕೃತಕ ವಜ್ರಗಳು, ಕೃತಕ ರತ್ನಗಳು ಮಾರುಕಟ್ಟೆಯಲ್ಲಿ ಹೇರಳವಾಗಿ ದೊರಕುತ್ತದೆ. ಅಲ್ಲದೇ ಇದರದ್ದೇ ಆದ ಮಾರ್ಕೆಟ್‌ ಸೃಷ್ಟಿಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲ್‌/ಡೀಸೆಲ್‌ ಮತ್ತು ಚಿನ್ನವನ್ನು ಹೊರತುಪಡಿಸಿದರೆ ಅತಿ ಹೆಚ್ಚಿನ ಮೌಲ್ಯದ ವಹಿವಾಟು ನಡೆಯುವುದು ಅನರ್ಘ್ಯ ರತ್ನಗಳದ್ದೇ. ಭಾರತ ಕಳೆದ ಹಣಕಾಸು ವರ್ಷದಲ್ಲಿ 3.5 ಬಿಲಿಯನ್‌ ಡಾಲರ್‌ ಮೌಲ್ಯದ ರತ್ನಗಳನ್ನು ಆಮದು ಮಾಡಿಕೊಂಡಿದೆ. ಹೀಗಾಗಿ, ರತ್ನ ಶಾಸ್ತ್ರದ ಅಧ್ಯಯನ ಎಂಬುದು ಇಂದು ಅತಿ ಹೆಚ್ಚಿನ ಬೇಡಿಕೆ ಇರುವ ಎಜುಕೇಶನ್‌ಪ್ರೋಗ್ರಾಮ್‌ಗಳಲ್ಲಿ ಒಂದಾಗಿದೆ.
ರತ್ನಶಾಸ್ತ್ರದಲ್ಲಿ ಹಲವಾರು ರೀತಿಯ ಕೋರ್ಸ್‌ಗಳಿವೆ. ಪೋಸ್ಟ್‌ ಗ್ರಾಜಿಯೇಷನ್‌ ಡಿಪ್ಲೊಮೊ ಇನ್‌ ಜೆಮ್ಮಲಾಜಿಕಲ್‌, ಡಿಪ್ಲೊಮೊ ಇನ್‌ ಡೈಮಂಡ್‌ ಗ್ರೇಡಿಂಗ್‌, ಡಿಪ್ಲೊಮೋ ಇನ್‌ ಜ್ಯುಯಲರಿ ಡಿಸೈನಿಂಗ್‌ ಹೀಗೆ ನಾನಾ ರೀತಿಯ ಕೋರ್ಸ್‌ಗಳು ಇವೆ. ಇವುಗಳಲ್ಲಿ ಬಹುತೇಕ ಆನ್‌ಲೈನ್‌ ಕೋರ್ಸಗಳು, ದೂರಶಿಕ್ಷಣ ಕೋರ್ಸುಗಳ ಇವೆ. ಹೀಗಾಗಿ, ಒಂದು ವಾರದಿಂದ ನಾಲ್ಕು ತಿಂಗಳ ಅವಧಿಯಲ್ಲಿ ಮುಗಿದು ಹೋಗುವಂಥ ಕೋರ್ಸ್‌ಗಳಿವೆ. ಇವಲ್ಲದೆ, ಅಲ್ಪಾವಧಿ, ಪೂರ್ಣಾವಧಿ ಕೋರ್ಸ್‌ಗಳು ಲಭ್ಯವಿವೆ. ಅಂಚೆ ಮೂಲಕ ಕೂಡ ಶಿಕ್ಷಣ ಪಡೆಯಬಹುದು. ಹೆಚ್ಚಿನ ಮಾಹಿತಿ www.giionline.com ಇಲ್ಲಿ ಸಿಗುತ್ತದೆ.

ಕೆಲಸ ಎಲ್ಲಿ ಸಿಗುತ್ತೆ?
ಇವತ್ತು ರತ್ನಾಭರಣಕ್ಕೆ ಸಂಬಂಧಿಸಿದಂತೆ ಡಿಪ್ಲೊಮೊ ಪದವಿ ಗಳಿಸಿದವರಿಗೆ ಡಿಮ್ಯಾಂಡ್‌ ಜಾಸ್ತಿ ಇದೆ. ಇದಕ್ಕೆ ಕಾರಣ, ಪ್ರತಿಯೊಬ್ಬ ಗ್ರಾಹಕ ಕೂಡ ಗುಣಮಟ್ಟವನ್ನು ನೋಡುತ್ತಿರುವುದು. ಹೀಗಾಗಿ, ವಜ್ರದ ಯೋಗ್ಯತ ತಿಳಿದುಕೊಳ್ಳಲು ಪದವೀಧರರ ಅವಶ್ಯಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜ್ಯೂಯಲರಿ ಡಿಸೈನಿಂಗ್‌, ಜ್ಯುಯಲರಿ ರಿಟೈನಿಂಗ್‌ ಕ್ಷೇತ್ರಕ್ಕೆ ಬುದ್ಧಿವಂತ ಪದವೀಧರನ ಅವಶ್ಯಕತೆ ಕಾಡುತ್ತಿದೆ.

ಅಂತೆಯೇ, ಬೆಲೆ ಬಾಳುವ ಮುತ್ತು, ರತ್ನಗಳನ್ನು ಪಾಲಿಶ್‌ ಮಾಡುವುದು ಸರಿಯಾಗಿ ಕತ್ತರಿಸುವುದು ಕೂಡ ಸವಾಲಿನ ಕೆಲಸ. ವಜ್ರವನ್ನು ಪಾಲಿಶ್‌ ಮಾಡುವ ಉದ್ಯಮವಿದೆಯಲ್ಲ, ಅದು ದೇಶದ ವಿದೇಶಿ ವಿನಿಮಯದಲ್ಲಿ ದೊಡ್ಡ ಪಾಲು ಹೊಂದಿದೆ ಎಂದರೆ ಇನ್ನು, ಕೆಲಸಕ್ಕೆ ಯಾವ ರೀತಿಯ ಡಿಮ್ಯಾಂಡ್‌ ಇರಬೇಡ? ಮುತ್ತುಗಳನ್ನು ಪರೀಕ್ಷೆ ಮಾಡುವ ಲ್ಯಾಬೊರೇಟರಿಗಳಲ್ಲಿ ಕೆಲಸ ಮಾಡುವ ತಂತ್ರಜ್ಞರಿಗೆ ಯಾವತ್ತೂ ಡಿಮ್ಯಾಂಡ್‌ ಇದ್ದೇ ಇದೆ. ಮೈನಿಂಗ್‌ ಕಂಪನಿಗಳಲ್ಲಿ, ಆಭರಣಗಳ ತಯಾರಿಕಾ ಯೂನಿಟ್‌ಗಳಲ್ಲಿ, ದೊಡ್ಡ ದೊಡ್ಡ ಜ್ಯುಯಲರಿ ಶೋರೂಮ್‌ಗಳಲ್ಲಿ ಪದವಿ ಪಡೆದವರು ಬೇಕೇಬೇಕು.

ಎಲ್ಲೆಲ್ಲಿ ಕೋರ್ಸ್‌?
ಮುಂಬಯಿನ ರತ್ನ ಮತ್ತು ಆಭರಣಗಳ ರಫ್ತುದಾರರ ಒಕ್ಕೂಟದ ನೆರವಿನಿಂದ ಭಾರತ ರತ್ನ ಶಾಸ್ತ್ರ ಸಂಸ್ಥೆ (Gemmological Institute of India) 1971ರಲ್ಲಿ ಆರಂಭವಾಯಿತು. ಈ ಸಂಸ್ಥೆ, ರತ್ನಗಳಿಗೆ ಸಂಬಂಧಿಸಿದಂತೆ ಹಲವಾರು ಡಿಪ್ಲೊಮಾ ಕೋರ್ಸ್‌ಗಳನ್ನು ನಡೆಸುತ್ತದೆ. ಅದರಲ್ಲಿ ಮುಖ್ಯವಾಗಿ-
1) ವಜ್ರಗಳ ವಿಂಗಡಣೆ
2) ಆಭರಣಗಳ ವಿನ್ಯಾಸ/ತಯಾರಿಕೆ
3) ಮುತ್ತು, ರತ್ನಗಳ ಸಂಸ್ಕರಣೆ
4) ವಜ್ರಗಳ ಸಂಸ್ಕರಣೆ ಮುಂತಾದವುಗಳ ಬಗ್ಗೆ ಹೇಳಿ ಕೊಡಲಾಗುತ್ತದೆ.
ಈ ಸಂಸ್ಥೆ ರತ್ನಗಳ ಪರೀಕ್ಷಾ ಘಟಕಗಳನ್ನು 70ರ ದಶಕದಲ್ಲೇ ಶುರುಮಾಡಿದ ಹೆಗ್ಗಳಿಕೆ ಈ ಸಂಸ್ಥೆಗೆ ಇದೆ. ಈ ರತ್ನ ಪರೀಕ್ಷಾ ಘಟಕವು ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿದೆ. ಈವರೆಗೆ ಹೆಚ್ಚು ಕಮ್ಮಿ 7 ಲಕ್ಷಕ್ಕೂ ಹೆಚ್ಚು ರತ್ನ ಶಾಸ್ತ್ರಜ್ಞರನ್ನು ರೂಪಿಸಿದ ಹೆಗ್ಗಳಿಕೆ ಈ ಸಂಸ್ಥೆಗೆ ಇದೆ. ಪಂಜಾಬ್‌ ವಿವಿ ಯೊಂದಿಗೆ ಒಪ್ಪಂದ ಮಾಡಿಕೊಂಡು ಅಲ್ಲಿ ಕೂಡ ರತ್ನ ಶಾಸ್ತ್ರದ ಕೋರ್ಸ್‌ಗಳನ್ನು ನಡೆಸುತ್ತಿದೆ. ಇದಲ್ಲದೆ , ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್ ಜೆಮಾಲಜಿ ನ್ಯೂಡೆಲ್ಲಿ,ಯಲ್ಲಿ , ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್ ಜ್ಯೂಯಲ್ಲರಿಯಲ್ಲೂ ಕೂಡ ಕೋರ್ಸ್‌ಮಾಡಬಹುದು.

-ಡಾ. ಗೋಪಾಲಕೃಷ್ಣ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.