ಬ್ಯಾಗ್‌ ಕೊಟ್ಟ ಮಹಾನುಭಾವ


Team Udayavani, Oct 29, 2019, 4:25 AM IST

x-6

ನಾನು ಆಗ ಧಾರವಾಡದ ಕರ್ನಾಟಕ ವಿವಿಯಲ್ಲಿ ಎಂಎ ಪರೀಕ್ಷೆ ತೆಗೆದುಕೊಂಡಿದ್ದೆ. ಪರೀಕ್ಷೆ ಬರೆಯಲು, ನಾನು ಕೆಲಸ ಮಾಡುತ್ತಿದ್ದ ಸ್ಥಳದಿಂದ ಪ್ರತಿನಿತ್ಯ ಓಡಾಡುತ್ತಿದ್ದೆ. ಹೀಗಿರುವಾಗ, ಮೂರನೇ ಪತ್ರಿಕೆ ಇದ್ದ ದಿನ ಆವತ್ತು ಹಾವೇರಿ ಜಿಲ್ಲೆಯಾದ್ಯಂತ ರಸಗೊಬ್ಬರಕ್ಕಾಗಿ ರೈತರು ಹೋರಾಟವನ್ನು ಮಾಡುತ್ತಿದ್ದರು.ನಾನು ಪ್ರಯಾಣಿಸುತ್ತಿದ್ದ ಬಸ್‌ ಶಿಗ್ಗಾವಿಯನ್ನು ಆಗತಾನೇ ತಲುಪಿತ್ತು. ನೂರಾರು ವಾಹನಗಳು ಟ್ರಾಫಿಕ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದವು. ಇನ್ನೂ ನಿಧಾನ ಆಗಬಹುದು ಅಂತ ನಾನು, ವಾಹನಗಳು ಎಷ್ಟು ದೂರದವರೆಗೆ ನಿಂತಿವೆ? ಟ್ರಾಫಿಕ್‌ ಕ್ಲಿಯರ್‌ ಆಗಲು ಎಷ್ಟು ಸಮಯವಾಗಬಹುದೆಂದು ತಿಳಿಯಲು ಬಸ್‌ನಿಂದ ಕೆಳಗೆ ಇಳಿದೆ. ಹತ್ತು ನಿಮಿಷಗಳಲ್ಲಿ ಟ್ರಾಫಿಕ್‌ ಕ್ಲಿಯರ್‌ ಆಯ್ತು. ವಾಪಸ್‌ ಓಡಿ ಬಂದು ನಮ್ಮ ಬಸ್‌ ಎಲ್ಲಿ ಅಂತ ನೋಡ್ತೀನಿ, ಕಾಣ್ತಾನೇ ಇಲ್ಲ. ಮೈ ಬೆವರ ತೊಡಗಿತು. ಬಸ್‌ ನಂಬರ್‌ ಬೇರೆ ಬರೆದು ಕೊಂಡಿಲ್ಲ. ಏನು ಮಾಡುವುದು? ಸಿಕ್ಕ ಸಿಕ್ಕವರನ್ನು ಕೇಳಿದೆ. ಬಸ್ಟ್ಯಾಂಡಿಗೆ ಬೇಗ ಹೋಗಿ, ಸಿಗಬಹುದು ಎಂದರು. ಆಟೋದಲ್ಲಿ ಬಸ್ಟ್ಯಾಂಡಿಗೆ ಹೋದರೆ, ಅಲ್ಲಿ ಈಗ ತಾನೇ ಹೊರಟು ಹೋಯ್ತು ಎಂಬ ಉತ್ತರ ಸಿಕ್ಕಿತು. ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ, ಮತ್ತೂಂದು ಬಸ್‌ ಹತ್ತಿದೆ. ನಿರ್ವಾಹಕನಿಗೆ ನಡೆದ ಘಟನೆಯನ್ನು ತಿಳಿಸಿದೆ. ಡ್ರೈವರ್‌ ಬಳಿ ನಡೆದು ವೇಗವಾಗಿ ಬಸ್‌ ಓಡಿಸಲು ವಿನಂತಿಸಿದೆ. ನನ್ನ ಮನವಿಗೆ ಬೆಲೆ ಕೊಟ್ಟ ಡ್ರೈವರ್‌ ಅಣ್ಣ ವೇಗವಾಗಿ ಬಸ್‌ನ ಓಡಿಸಿ, ಹುಬ್ಬಳ್ಳಿಯ ಹಳೆ ಬಸ್ಟಾಂಡ್‌ಗೆ ತಲುಪಿಸಿದರು. ಲಗುಬಗನೇ ಕೆಳಗಿಳಿದು ಮೊದಲು ಹತ್ತಿದ್ದ ಬಸ್‌ ಅನ್ನು ಹುಡುಕಾಡಿದೆ. ಕೆಲವೇ ನಿಮಿಷಗಳ ಹಿಂದೆ ನಿರ್ಗಮಿಸಿತು ಅಂದರು. ಬರಸಿಡಿಲು ಬಡಿದಂತಾಯಿತು. ಅದೇ ಸಮಯದಲಿ, ಒಬ್ಬ ಮಹಿಳಾ ಪೊಲೀಸ್‌ ಪೇದೆಯ ಕೈಯಲ್ಲಿ ನನ್ನ ಬ್ಯಾಗ… ಕಾಣಿಸಿತು.

ಹೋದ ಜೀವ ಮರಳಿ ಬಂದಂತಾಗಿ ಓಡೋಡಿ ಹೋಗಿ,’ಮೇಡಮ್‌ ಇದು ನನ್ನ ಬ್ಯಾಗ… ಅಂದೆ. “ಹೌದಾ!ಕೆಲವು ನಿಮಿಷಗಳ ಹಿಂದೆ,ಒಬ್ಬ ಪ್ರಯಾಣಿಕ ಇದನ್ನು ಕೊಟ್ಟು,ಸಂಬಂಧಿಸಿದವರಿಗೆ ಕೊಡಿ ಎಂದು ಹೇಳಿ ಹೋದ’ ಅಂದರು.

ಬ್ಯಾಗಿನೊಳಗಿರುವ ಆಧಾರ್‌ ಕಾರ್ಡ್‌,ಬ್ಯಾಂಕ್‌ ಪಾಸ್‌ಬುಕ್‌,ಹಾಲ… ಟಿಕೆಟ್‌, 2 ಸಾವಿರ ರೂ.ಬಗ್ಗೆ ಮಾಹಿತಿ ಹೇಳಿದೆ. ಖಚಿತಪಡಿಸಿಕೊಂಡು, ನನ್ನ ಕೈ ಗೆ ಬ್ಯಾಗ್‌ ನೀಡಿದರು. ಬ್ಯಾಗ್‌ ಸಿಕ್ಕ ಖುಷಿಗಿಂತ “ಆಪದಾºಂಧವ’ನಾಗಿ ನನ್ನ ಬ್ಯಾಗನ್ನು ಹಿಂತಿರುಗಿಸಿದ ಆ ವ್ಯಕ್ತಿಗೆ ದೊಡ್ಡ ನಮಸ್ಕಾರ ಹಾಕಿದೆ. ಈಗಲೂ ಅವರ ನೆರವನ್ನು ನೆನಪಿಸಿಕೊಳ್ಳುತ್ತೇನೆ.

ಮಲ್ಲಪ್ಪ ಫ‌. ಕರೇಣ್ಣನವರ

ಟಾಪ್ ನ್ಯೂಸ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.