ಸೈಕಲ್‌ನಲ್ಲಿ ಬಂದವನು ಕಾರು ಓಡಿಸಿದ…


Team Udayavani, Feb 4, 2020, 4:23 AM IST

pro-7

ಆಗಷ್ಟೇ ಹೊಸದಾದ ದೊಡ್ಡ ಕಾರನ್ನು ಮಗ ಖರೀದಿಸಿದ್ದ. ದೇವಸ್ಥಾನದಲ್ಲಿ ಪೂಜೆಗೆ ಮಾಡಿಸಬೇಕಿದ್ದುದರಿಂದ, ಹೂ ಹಣ್ಣು ಖರೀದಿಸಿ ,ಸಂಜೆ ಆರು ಗಂಟೆಗೆ ಅದೇ ಕಾರಲ್ಲಿ ಹೊರಟೆವು. ಎಂಟು ಗಂಟೆಯ ಒಳಗೆ ನಾವು ದೇವಾಲಯದಲ್ಲಿರಬೇಕಾಗಿತ್ತು. ಕತ್ತಲೆಯಲ್ಲಿ ನಮಗೆ ಸ್ವಲ್ಪ ದಾರಿತಪ್ಪಿ, ಅವರಿವರನ್ನು ಕೇಳಿಕೊಂಡು ಬಂದೆವು. ಇನ್ನೇನು ಒಂದೆರಡು ಕಿ.ಮೀ ದೂರದಲ್ಲಿದೆ ಎನ್ನುವಾಗ ‘ದೇವಾಲಯಕ್ಕೆ ದಾರಿ’ ಎನ್ನುವ ಫ‌ಲಕವನ್ನು ಕಂಡೆವು. ಸದ್ಯ ಬೇಗ ತಲುಪಬಹುದು ಎಂಬ ಆಸೆಯಿಂದ ಅಲ್ಲಿಯೇ ಹೋಗುತ್ತಿದ್ದ ಒಂದಿಬ್ಬರನ್ನು-“ಈ ದಾರಿಯಲ್ಲಿ ಕಾರು ಹೋಗುತ್ತದಾ’ ಎಂದು ಕೇಳಿದಾಗ ಹೌದೆನ್ನುವ ಉತ್ತರ ಬಂದಿತು. ನಮ್ಮದು ದೊಡ್ಡ ಕಾರು ಎಂಬುದನ್ನು ಗಮನಿಸದೆ ಕಾರನ್ನು ತಿರುಗಿಸಿ ಬಿಟ್ಟೆವು. ಆದರೆ, ದಾರಿಯಲ್ಲಿ ಒಂದೆರಡು ಮೀಟರ್‌ ಕ್ರಮಿಸಿದ್ದೇವಷ್ಟೇ. ಕಾರು ಮುಂದೆ ಹೋಗಲಾರದಷ್ಟು ಇಕ್ಕಟ್ಟಾದ ರಸ್ತೆ ಎದುರಾಯಿತು. ಹೊಸದಾಗಿ ಡ್ರೈವಿಂಗ್‌ ಕಲಿತಿದ್ದ ಮಗನಿಗೆ ಮುಂದೆ ಚಲಾಯಿಸಲೂ ಆಗದೆ, ಹಿಂದೆ ಹೋಗಲೂ ಆಗದೆ ಒದ್ದಾಡ ತೊಡಗಿದ.

ಇದರ ನಡುವೆ ಆಚೀಚೆ ಹೋಗುವವರ, ಆಟೋ, ಸೈಕಲ್‌ ಸವಾರರ ಬೈಗುಳ ಬೇರೆ. ಕಾರಿಗೆ ಏನೋ ತಗುಲಿ ಸ್ವಲ್ಪ ಗೀಚು, ಗೀಚಾಯಿತು. ಪೂಜೆಯ ಸಮಯ ಬೇರೆ ಹತ್ತಿರವಾಗುತ್ತಿದೆ. ಬೇರೇನೂ ತೋಚದೆ “ದೇವರೇ, ನೀನೇ ಈ ಕಷ್ಟದಿಂದ ಪಾರುಮಾಡಬೇಕು’ ಎಂದು ಪ್ರಾರ್ಥಿಸುವ ಹೊತ್ತಿಗೆ, ನನ್ನ ಕರೆ ದೇವರಿಗೆ ಮುಟ್ಟಿತೋ ಎಂಬಂತೆ ಸೈಕಲ್ಲಿನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರು, “ಏನಾಯಿತಮ್ಮಾ, ನಾನೊಬ್ಬ ಡ್ರೈವರ್‌. ನನ್ನಿಂದೇನಾದರೂ ಸಹಾಯ ಆಗುವುದಾದರೆ ಮಾಡಿಕೊಡುತ್ತೇನೆ’ ಎಂದು ಹೇಳಿದಾಗ, ನಮಗೆಲ್ಲಾ ಹೋದ ಜೀವ ಬಂದಂತಾಯಿತು. ಮರು ಮಾತನಾಡದೆ ನನ್ನ ಮಗ ಕಾರಿನಿಂದ ಇಳಿದು, ಅವನಿಗೆ ಸೀಟು ಬಿಟ್ಟು ಕೊಟ್ಟ. ನಿಮಿಷ ಮಾತ್ರದಲ್ಲಿ ಆತ ಕಾರನ್ನು ಹಿಮ್ಮುಖವಾಗಿ ಚಲಿಸಿ ಮುಖ್ಯರಸ್ತೆಗೆ ತಂದು ನಿಲ್ಲಿಸಿ, ಕೆಳಗಿಳಿದು, ಹೊರಡಲು ಅನುವಾದ. ಕೃತಜ್ಞತೆಯಿಂದ ಹಣ ಕೊಡಲು ಹೋದ ನನ್ನ ಮಗನ ಕೈಯನ್ನು ಹಿಂದಕ್ಕೆ ನೂಕಿ, “ಬೇಡ ಸಾರ್‌, ಏನೋ ನನಗೆ ಗೊತ್ತಿರೋ ವಿದ್ಯೆ, ಸಹಾಯಮಾಡಿದೆ ಅಷ್ಟೇ. ಇದಕ್ಕೆಲ್ಲ ಹಣ ತೆಗೆದುಕೊಂಡರೆ ದೇವರು ಮೆಚ್ಚುತಾನಾ?’ ಎಂದು ಹೇಳುತ್ತಾ, ಸೀದಾಹೊರಟೇಬಿಟ್ಟ. ದೇವರೇ ಅವನ ರೂಪದಲ್ಲಿ ಬಂದು ನಮಗೆ ಸಹಾಯ ಮಾಡಿರಬಹುದು ಎಂದು ಅನ್ನಿಸಿತು. ಇಂದಿಗೂ ಆ ಆಪತ್ಭಾಂಧವನನ್ನು ಮರೆತಿಲ್ಲ. ಆತ ಎಲ್ಲೋ ಇದ್ದರೂ ಚೆನ್ನಾಗಿರಲಿ.

ಪುಷ್ಪ ಎನ್‌.ಕೆ ರಾವ್‌

ಟಾಪ್ ನ್ಯೂಸ್

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.