“ಆಪರೇಶನ್ ಅನಂತ’ ಸಕ್ಸಸ್
Team Udayavani, Jan 22, 2019, 2:45 AM IST
ಗ್ರೂಪ್ ಹೆಸರು: “ಆಪರೇಶನ್ ಅನಂತ’
ಅಡ್ಮಿನ್ಗಳು: ಅಮೋಘ, ಮಯೂರ್ ಶೆಟ್ಟಿ, ವಿಜಯ್ ಬಿ., ಅಪೂರ್ವ ಕೆ.ಸಿ., ಸುಹಾಸ್ ನಾಯಕ್, ಶರಣ್ ಹೆಬ್ರಿ…
ಕಾಪಿ ಮಹಾಶೂರರು ಸರ್ವವ್ಯಾಪಿ. ಹಾಗೆ ನಮ್ಮ ಕ್ಲಾಸ್ನಲ್ಲೂ ಒಬ್ಬನಿದ್ದ. ಅವನ ಹೆಸರು ಅನಂತ. ನಾವು ಕಷ್ಟ ಪಟ್ಟು ಓದೋದು, ಅನಂತ ಕಾಪಿ ಹೊಡೆದು, ಹೆಚ್ಚು ಅಂಕ ಪಡೆಯೋದು! ಇದು ನಮ್ಮ ಬ್ಯಾಚ್ನಲ್ಲಿ ಪ್ರತಿವರ್ಷ ನಡೆಯುತ್ತಿದ್ದ ಪವಾಡ. ಚೆನ್ನಾಗಿ ಓದುತ್ತಿದ್ದನಾದರೂ ಏನೋ ಕಾಪಿ ಹೊಡೆಯುವ ಚಟ ಅವನಿಗೆ. ಎಸ್ಸೆಸ್ಸೆಲ್ಸಿ- ಪಿಯುಸಿ ದಾಟಿ, ಪದವಿಗೆ ಬಂದ ಮೇಲೂ ಅವನ “ಕಾಪಿ ಕಲೆ’ಗೆ ಬ್ರೇಕ್ ಬಿದ್ದಿರಲೇ ಇಲ್ಲ. ಹೇಗೋ ಸೈಕಲ್ ಗ್ಯಾಪ್ನಲ್ಲಿ, ಚೀಟಿ ತೆಗೆದು, ತನಗೆ ಬೇಕಾದ ಸಂಗತಿಯನ್ನು ಮಿಂಚಿನ ನೋಟದಲ್ಲಿ ಕದ್ದು ನೋಡಿ, ಬರೆಯುತ್ತಿದ್ದ. “ನಾವು ಹೋಗ್ಲಿ ಪಾಪ, ನಮ್ ಹುಡ್ಗ’ ಅಂತಲೇ ಇದ್ದೆವು. ಆದರೆ, ರಿಸಲ್ಟ್ ಬಂದಮೇಲೆ ಆತ ನಮ್ಮನ್ನು ಸರಿಯಾಗಿ ಉರಿಸುವುದನ್ನು ನೋಡಿ, ನಾವು ಸಹಿಸದಾದೆವು.
ಮೊನ್ನೆಯ ಸೆಮಿಸ್ಟರ್ನಲ್ಲಿ ಅನಂತನ ವಿರೋಧಿಗಳೆಲ್ಲ ಒಂದು ಗ್ರೂಪ್ ರಚಿಸಿಕೊಂಡೆವು. ಅದಕ್ಕೆ ಇಟ್ಟ ಹೆಸರು, “ಆಪರೇಷನ್ ಅನಂತ’! ಅವತ್ತು ಜರ್ನಲಿಸಂನ ಇಂಟರ್ನಲ್ ಪರೀಕ್ಷೆ ಇತ್ತು. ಅನಂತನ ಹಿಂದೆಯೇ, ಅಪೂರ್ವ ಎಂಬ ಹುಡುಗಿ ಕೂರುತ್ತಿದ್ದಳು. “ಅನಂತ ಕಾಪಿ ಚೀಟಿ ತೆರೆದು ನೋಡುವಾಗಲೆಲ್ಲ, ನೀನು ಜೋರಾಗಿ ಕೆಮ್ಮ ಬೇಕು’ ಎಂದು ಸೂಚಿಸಿದ್ದೆವು. ಅನಂತ ಕಾಪಿಗೆ ಯತ್ನಿಸಿದಾಗಲೆಲ್ಲ, ಅವಳ ಕಂಠದಿಂದ ಕೆಮ್ಮು ಚಿಮ್ಮುತ್ತಿತ್ತು. ಲೆಕ್ಚರರ್ ಮೇಡಂ ಹಿಂದೆ ತಿರುಗಿ, ಅವಳತ್ತಲೇ ದೃಷ್ಟಿ ಹಾಯಿಸುವಾಗ, ಅನಂತನಿಗೆ ಕಸಿವಿಸಿ ಆಗುತ್ತಿತ್ತು. ಒಮ್ಮೆ ಇದ್ದಕ್ಕಿದ್ದಂತೆ ಆತ ಚೀಟಿ ತೆರೆದಾಗ, ಈಕೆ ಪುನಃ ಕೆಮ್ಮಿದಳು. ಮೇಡಂಗೆ ಅನಂತನ ಈ ಕಾಪಿ ಅವಾಂತರ ಗೊತ್ತಾಗಿ, ಪ್ರಿನ್ಸಿಪಾಲ್ ಬಳಿ ಕರೆದೊಯ್ದರು. ಅಂತೂ ನಾವೆಲ್ಲ ಸೇರಿ, ಅವನನ್ನು ಅಂಕದಲ್ಲಿ ಹಿಂದೆ ಹಾಕಿಬಿಟ್ಟೆವು.
ಅಮೋಘ ಎನ್.ಆರ್., ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ