ಕಂಡಕ್ಟರ್‌ ಮಾಡಿದ ಪುಣ್ಯದ ಕೆಲಸ


Team Udayavani, Jul 30, 2019, 3:00 AM IST

condoctor

ಈಗ್ಗೆ ಸುಮಾರು 60 ವರ್ಷಗಳ ಹಿಂದಿನ ಘಟನೆ. ನನ್ನ ತಾಯಿಗೆ ಆಗಾಗ್ಗೆ ಅನಾರೋಗ್ಯ ಕಾಡುತ್ತಿತ್ತು. ವೈದ್ಯರ ಸಲಹೆಯ ಮೇರೆಗೆ, ಪರಿಸರದ ಬದಲಾವಣೆಗಾಗಿ ಅವರ ಅಣ್ಣನ ಮನೆಗೆ ಪುಟ್ಟ ತಮ್ಮನನ್ನು ಕರಕೊಂಡು ಬಸ್ಸಿನಲ್ಲಿ ಹೊರಟರು. ಅವತ್ತು ಕುಂಭದ್ರೋಣ ಮಳೆ ಬೇರೆ. ರಸ್ತೆ ಯಾವುದು, ನೀರಿನ ಕೊಳ್ಳ ಯಾವುದೆಂದು ಪತ್ತೆಹಚ್ಚುವುದು ಕಷ್ಟವಿತ್ತು. ಉದ್ಯಾವರದ ಬಳಿಯ ರಸ್ತೆಯಲ್ಲಿ 3 ಅಡಿಗಳಷ್ಟು ನೀರು ನಿಂತಿತ್ತು. ಬಸ್ಸು ಮುಂದೆ ಹೋಗಲು ಸಾಧ್ಯವೇ ಇದ್ದಿರಲಿಲ್ಲ.

ಅದೇ ಊರಿನ ಒಬ್ಬರು, ದೊಡ್ಡ ಕೋಲಿನ ಸಹಾಯದಿಂದ ನೀರಿನ ಆಳ ತಿಳಿಸುತ್ತಾ, ಮುಂದಿನ ಹಾದಿ ಸೂಚಿಸು­ತ್ತಿದ್ದರು. ಡ್ರೈವರ್‌ ನಿಧಾನವಾಗಿ ಬಸ್ಸನ್ನು ಚಲಾಯಿಸಿ ಕೊಂಡು, ಉಡುಪಿ ತಲುಪುವಾಗ ರಾತ್ರಿ 11 ಗಂಟೆ. ಅಷ್ಟರಲ್ಲಾಗಲೇ ಹೆಬ್ರಿಗೆ ಹೋಗುವ ಬಸ್ಸು ಹೊರಟು ಹೋಗಿದ್ದರಿಂದ, ನನ್ನ ಅಮ್ಮ ಅಸಹಾಯಕರಾಗಿ ಅಳುತ್ತಿದ್ದರಂತೆ. ಆಗ ಕಂಡಕ್ಟರ್‌ ಬಂದು, “ಅಮ್ಮ ನೀವು ಹೆದರಬೇಡಿ… ನನಗೆ ನಿಮ್ಮ ಜಾತಿಯವರೇ ಆದ ಒಬ್ಬರು ಗೊತ್ತಿದ್ದಾರೆ.

ತುಂಬಾ ಒಳ್ಳೆಯವರು. ನಿಮ್ಮನ್ನು ಅವರ ಮನೆಗೆ ತಲುಪಿಸುತ್ತೇನೆ. ಇವತ್ತು ಅಲ್ಲಿ ಉಳಿದು, ನಾಳೆ ನಿಮ್ಮ ಮನೆಯನ್ನು ಸೇರಿಕೊಳ್ಳಿ’ ಎಂದು ಅವರ ಮನೆಗೆ ಬಿಟ್ಟನಂತೆ. ಆ ಹೊತ್ತಿಗೆ ಎಲ್ಲಾ ಹೋಟೆಲುಗಳು ಬಂದ್‌ ಆಗಿದ್ದವಂತೆ. ಹೊಟ್ಟೆಗೇನೂ ಸಿಗದಿದ್ದಾಗ ಮನೆಯಾಕೆ, ಮಗುವಿಗೆ ಹಾಲು ನೀಡಿ, ತಾಯಿಗೆ ಅವಲಕ್ಕಿ ಮೊಸರು ಕೊಟ್ಟರಂತೆ. ಅಮ್ಮ ಬೆಳಗ್ಗೆ ಎದ್ದು, ಅಣ್ಣನ ಮನೆ ತಲುಪಿದರಂತೆ. ಯಾಕೋ ಆ ಕಂಡಕ್ಟರ್‌ನ ಈ ಕತೆ ಮತ್ತೆ ನೆನಪಿಗೆ ಬಂತು.

* ಪುಷ್ಪ ಎನ್‌.ಕೆ. ರಾವ್‌

ಟಾಪ್ ನ್ಯೂಸ್

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.