ಒಲವೆಂಬ ಪ್ರೀತಿಗೆ ಹಲವು ಹೆಸರಿದೆ


Team Udayavani, Aug 6, 2019, 5:00 AM IST

JOSH-A

ಒಂದು ಗಂಡು ಒಂದು ಹೆಣ್ಣು ಹತ್ತಿರವಿದ್ದರೆ ಅದು ಬರಿ ಪ್ರೀತಿಯೇ ಅಂತ ಏಕೆ ಊಹಿಸುವುದು? ಅಲ್ಲಿ ಅಣ್ಣ ತಂಗಿಯ ಒಲವು ಇರಬಹುದಲ್ಲಾ?.

ವೀಳ್ಯದೆಲೆ ಜಗಿದ ಕೆಂಪಗಿನ ತುಟಿಗಳ ನಡುವೆ, ಬಿಳಿ/ ದಂತಪಕ್ತಿ ಎಡೆಯಿಂದ ಹೊರಹೊಮ್ಮುವ ಆ ಮೃದು ದನಿ, ಅದರ ಬೆನ್ನಿಗೆ ಹೊಮ್ಮುವ ಆತ್ಮವಿಶ್ವಾಸದ ನುಡಿಗಳು, ಸಹನಶೀಲತೆ, ಮುಗುಳು ನಗು, ಅಪಾರವಾದ ಒಲವು, ಮನ ಗೆಲ್ಲುವ ಸರಳ ಸ್ವಭಾವ… ನಿನ್ನ ಬಗ್ಗೆ ಪದಗಳಲ್ಲಿ ಬರೆದರೆ ಕಡಿಮೆ ಆದೀತು ಅನ್ನಿಸುತ್ತಿದೆ. ಆ ಮುಗ್ಧ ಪ್ರೀತಿಯಲ್ಲೂ ಎದ್ದು ಕಾಣುವ ಗಾಂಭೀರ್ಯ, ಅಪಾರ ಜ್ಞಾನ, ಯಾರೂ ಸಹ ಸ್ಪೂರ್ತಿಯಾಗುವ ನಿನ್ನ ವ್ಯಕ್ತಿತ್ವ ಅನನ್ಯ.

ನಿನ್ನ ಪುಟ್ಟ ಪುಟ್ಟ ಕನಸುಗಳನ್ನೂ ಆಗಸದೆತ್ತರಕ್ಕೆ ಏರಿಸಿ ನನಸು ಮಾಡಬೇಕಂಬ ಹಂಬಲವಿದೆ. ಅದಕ್ಕೆ ಬೇಕಾದ ಶಕ್ತಿಯನ್ನು ದೇವರು ಕರುಣಿಸಬೇಕಷ್ಟೇ. ನಿನ್ನ ನೋಡುತ್ತಾ ನೋಡುತ್ತಾ ಒಲವಿನ ಕರೆಗೆ ಕಾದು ಕುಳಿತದ್ದು ಸತ್ಯ. ಒಲವೆಂದರೆ ಅದು ಪ್ರೇಮವೆಂದು ತಿಳಿದೆಯಾ? ಅನುಮಾನ. ಒಲವಿಗೂ ಹಲವು ಹೆಸರಿದೆ. ಒಂದು ಗಂಡು ಒಂದು ಹೆಣ್ಣು ಹತ್ತಿರವಿದ್ದರೆ ಅದು ಬರಿ ಪ್ರೀತಿಯೇ ಅಂತ ಏಕೆ ಊಹಿಸುವುದು? ಅಲ್ಲಿ ಅಣ್ಣ ತಂಗಿಯ ಒಲವು ಇರಬಹುದಲ್ಲಾ?.

ಹೌದು, ನಾನು ನಿನ್ನಲ್ಲಿ ಸಹೋದರನ ಪ್ರೀತಿ ಕಂಡೆ. ಆದರೆ, ಸುತ್ತಲಿನ ಜನಕ್ಕೆ ನೀನು ಭಯಪಟ್ಟೆ.

ನಮ್ಮ ನಡುವೆ ಇಲ್ಲ ಸಲ್ಲದ ಕತೆಗಳು ಹುಟ್ಟಿದರೆ, ಅದು ಜೀವನದ ಕಪ್ಪುಚುಕ್ಕೆಯಾದರೆ ಅನ್ನುವ ನಿನ್ನೊಳಗಿನ ನೀನೇ ಸೃಷ್ಟಿಸಿಕೊಂಡ ಊಹಾಪೋಹಗಳಿಗೆ ನೀನೇ ರೆಕ್ಕೆ ಪುಕ್ಕ ಕಟ್ಟಿದೆ ಅಲ್ಲವೇ ?

ನಿಜಕ್ಕೂ ನನಗೆ ನಿನ್ನ ಗುಣಗಳು ಇಷ್ಟವಾದದ್ದು ಸತ್ಯ. ಅದರಿಂದ ನಿನ್ನ ಆತ್ಮವಿಶ್ವಾಸದ ನಡೆ ನನ್ನನ್ನು ನನ್ನೊಳಗೆ ಗಟ್ಟಿಮಾಡಿಸಿದ್ದು ಹೌದು. ನಿನಗೊಂದು ಮೂರ್ತರೂಪ ಕೊಟ್ಟು ಮಾತನಾಡಿಸಿ ನಾನು ನನ್ನವಳಾಗಿ ಬದುಕಲಾರಂಭಿಸಿದೆ. ಕಷ್ಟಗಳಿಗೆ ಬೆದರುತ್ತಿದ್ದವಳಿಗೆ ನನ್ನೊಳಗಿನ ನೀನು ಸ್ಪೂರ್ತಿಯಾಗಿ ಹುರಿದುಂಬಿಸುತ್ತಿದ್ದೆ. ಅಚಲವಾಗಿ ನಿಂತು ನಾನು ಮುಂದೆ ನಡೆದೆ… ಹೆದರಿ ಬೆದರಿ ಕಳೆದು ಕೊಂಡದ್ದು ನೀನು ಒಬ್ಟಾಕೆ ಸಹೋದರಿಯನ್ನು..

ಒಂದು ಮಾತು ನೆನಪಿರಲಿ; ಯಾವತ್ತೂ ನಾನು ನಿನ್ನನ್ನು ನೋಡೋಕೆ ಬರುವುದಿಲ್ಲ. ಆದರೆ ಗೊತ್ತಿರಲಿ, ಒಲವೆಂಬ ಪ್ರೀತಿಗೆ ಹಲವು ಹೆಸರಿದೆ……

-ರಜನಿ ಭಟ್‌

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.