ಹೀಗೊಂದು “ಆಪರೇಶನ್‌ ಕಮಲ’!


Team Udayavani, Sep 18, 2018, 6:00 AM IST

2.jpg

ಒಂದು ದಿನ ನಮ್ಮ ಅಮ್ಮನ ಜೊತೆಗೆ ಅವರ ದೂರದ ಸಂಬಂಧಿಯ ಊರಿಗೆ ಹೋಗಿದ್ದೆ. ಆ ಊರಿನ ಹೆಸರು ಆನಕ (ಭಯಾನಕ). ಅಲ್ಲಿ ಸೂರ್ಯನ ಉದಯವೇ ಆಗುತ್ತಿರಲಿಲ್ಲ. ಎಲ್ಲಿ ನೋಡಿದರಲ್ಲಿ ಕಗ್ಗತ್ತಲು. ದೀವಿಗೆಯ ಬೆಳಕಿನಲ್ಲೇ ಜನರು ವಾಸಿಸುತ್ತಿದ್ದರು. ಅಂತೂ ಆ ಊರು ತಲುಪಿದೆವು. ಎಲ್ಲಿ ನೋಡಿದರೂ ಜನರು ಕಾಣುತ್ತಿಲ್ಲ. ಸಂಚಾರಿ ವ್ಯವಸ್ಥೆಯಂತೂ ಮೊದಲೇ ಇಲ್ಲ. ಸಂಬಂಧಿಗಳ ಮನೆಯೋ ತುಂಬಾನೇ ದೂರ. ನಡೆಯಲು ಆಗುತ್ತಿಲ್ಲ. ಕಾಲು ತುಂಬಾ ನೋವು ಅಂತಾ ಅಮ್ಮನಿಗೆ ಹೇಳುತ್ತಿದ್ದೆ. ಅಮ್ಮ “ಅಗೊ! ಇಲ್ಲಿಯೇ ಇದೆ ಸ್ವಲ್ಪ ಮುಂದೆ ಹೋದರಾಯಿತು’ ಎಂದರು.

  ಹೋಗುವ ರಸ್ತೆಯಲ್ಲಿ ಸ್ಮಶಾನದ ವಾತಾವರಣವಿತ್ತು. ನಾನಂತೂ ಆ ದೃಶ್ಯವನ್ನೆಲ್ಲ ನೋಡಿ, ಕಿಟಾರ್‌ ಎಂದು ಚೀರಿ ಅಮ್ಮನನ್ನು ತಬ್ಬಿಕೊಂಡೆ. ಅಮ್ಮ, “ಅತ್ತ ನೋಡಬೇಡ. ದೇವರ ಮಂತ್ರ ಜಪಿಸುತ್ತಾ ಹೋಗೋಣ’ ಎಂದರು. ಆಯ್ತು ಎಂದು, ದೇವರ ನಾಮ ಜಪಿಸುತ್ತಾ ಸಂಬಂಧಿಕರ ಮನೆ ತಲುಪಿದೆವು.

  ಅಮ್ಮ ಠಕ್‌ ಠಕ್‌ ಎಂದು ಮನೆಯ ಬಾಗಿಲನ್ನು ತಟ್ಟಿದರು. ಆಗ ಉದ್ದನೆಯ ಕೈ ಬಂದು, ಸರಕ್‌ ಅಂತ ಬಾಗಿಲು ತೆಗೆದ ಸದ್ದಾಯಿತು. ಆದರೆ, ಮುಖವೇ ಕಾಣುತ್ತಿಲ್ಲ. ನನಗೋ ಮೈಯೆಲ್ಲಾ ಬೆವರು. ಅಮ್ಮ ಬಾಗಿ ನನ್ನ ಹಣೆಯ ಬೆವರು ಒರೆಸುವಾಗ ಒಂದು ಮುಖ ಬಾಗಿಲು ಹೊರಗೆ ಬಂತು. “ಅಮ್ಮಾ…’ ಎಂದು ಜೋರಾಗಿ ಕೂಗಿದೆ. ಅಮ್ಮ ನೋಡಿ ಭಯಭೀತಳಾದಳು. ಅವರನ್ನು ನೋಡಿದರೆ, ಅಷ್ಟು ಭಯಾನಕವಾಗಿದ್ದರು.

  ಬಾಯಲ್ಲಿ ಹಲ್ಲುಗಳೇ ಇರಲಿಲ್ಲ. ಬಾಯಿ ತೆಗೆದರೆ ಬ್ರಹ್ಮಾಂಡವೇ ಕಾಣುತ್ತಿತ್ತು. ಮಾರುದ್ದ ಗಡ್ಡ, ಮೈಯೆಲ್ಲ ರೋಮಗಳಿಂದ ಆವೃತವಾಗಿತ್ತು. ಕಣ್ಣುಗಳೆರಡು ನಿಂಬೆ ಹಣ್ಣಿನ ಗಾತ್ರ ಹೊಂದಿದ್ದವು. ಆತನಿಗೆ ಮೂಗು, ಕಿವಿಗಳೇ ಇದ್ದಿರಲಿಲ್ಲ. ಮುಖದಲ್ಲಿ ಕಣ್ಣುಗಳೇ ಎದ್ದು ಕಾಣುತ್ತಿದ್ದವು. ಅಮ್ಮ ಮೂಛೆì ಬಿದ್ದರು. ಆ ಗಡ್ಡ ವೇಷಧಾರಿ ತನ್ನ ನಾಲಿಗೆಯನ್ನು ಹೊರ ಚಾಚಿ ನಾಲಿಗೆಯಿಂದ ನನ್ನನ್ನು ಎಳೆದ. “ಅಮ್ಮ ಅಮ್ಮ!’ ಎಂದು ಕೂಗ ತೊಡಗಿದೆ. ಅಮ್ಮನಿಗೆ ಎಚ್ಚರವಾಗುತ್ತಿಲ್ಲ. ನನಗೆ ದಿಕ್ಕೇ ತೋಚದಂತಾಯಿತು.

  ಮನದಲ್ಲಿ ಇಷ್ಟ ದೇವರನ್ನು ಸ್ಮರಿಸುತ್ತಿದ್ದೆ. ಸ್ವಲ್ಪ ಸಮಯದ ನಂತರ ಅದೆಲ್ಲಿಂದಲೋ ಒಂದು ಕಮಲದ ಹೂ ಬಂತು. ತದನಂತರ ಬೆಂಕಿ ಬರುವುದು ಕಂಡಿತು. ಕಮಲದ ಹೂ ಬಂದು, ನನ್ನನ್ನು ಮತ್ತು ಅಮ್ಮನನ್ನು ಎತ್ತಿಕೊಂಡಿತು. ಬೆಂಕಿ ಬಂದು ಗಡ್ಡದಾರಿ ಮನುಷ್ಯನ ನಾಲಿಗೆಯನ್ನು ಸೀಳಿ ಎರಡು ಹೋಳಾಗಿ ಮಾಡಿತು. ಆ ಮನುಷ್ಯ ಅಲ್ಲಿಯೇ ಭಸ್ಮವಾದ.

  ನಾನು ಅಮ್ಮನನ್ನು ಎಬ್ಬಿಸಿ ನಡೆದ ಎಲ್ಲ ಘಟನೆಯನ್ನು ಹೇಳಿದೆ. ಅಮ್ಮ, “ಮಗು ಇನ್ನೂ ಬೆಳಗಾಗಿಲ್ಲ. ನೀನು ಕಂಡಿರುವುದು ಕನಸು’ ಅಂತಂದಳು. ಕನಸೇನೋ ನಿಜ… ಆದರೆ, ಇವತ್ತಿಗೂ ಆ ಗಡ್ಡದಾರಿ ಮನುಷ್ಯ ನನ್ನ ಕಲ್ಪನಾ ಲೋಕದಲ್ಲಿ ವಿಲನ್‌ ಆಗಿ ಕಾಡುತ್ತಲೇ ಇದ್ದಾನೆ. ಆ ಮೂರು ನಿಮಿಷದ ಮನುಷ್ಯನನ್ನು ನೆನೆದು ಪ್ರತಿಕ್ಷಣ ಬೆಚ್ಚುತ್ತೇನೆ.

– ಅಶ್ವಿ‌ನಿ ಪಿಡಶೆಟ್ಟಿ

ಟಾಪ್ ನ್ಯೂಸ್

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.