ಆಪತ್ತಿಗೆ ಆದ ಈ ನೆಂಟ


Team Udayavani, Nov 5, 2019, 3:34 AM IST

aa-3

ಅಂದು ಭಾನುವಾರ. ವೈಯಕ್ತಿಕ ಕೆಲಸದ ನಿಮಿತ್ತ ಸೂಳೇಭಾವಿಯಿಂದ ಅಮೀನಗಡಕ್ಕೆ ಹೋಗಿದ್ದೆ.

ಆ ದಿನಗಳಲ್ಲಿ ನಾನು ವಿದ್ಯಾರ್ಥಿ. ಹೀಗಾಗಿ, ಹೆಚ್ಚೆಂದರೆ ನನ್ನ ಬಳಿ ಹತ್ತು ರೂಪಾಯಿ ಇರುತ್ತಿತ್ತು. ಅದೂ ವಾರಕ್ಕೊಮ್ಮೆ ತಂದೆಯವರು ಪಾಕೆಟ್‌ ಮನಿ ರೂಪದಲ್ಲಿ ಹಣ ಕೊಟ್ಟರೆ ಮಾತ್ರ. ಇಲ್ಲವಾದರೆ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ಅಮೀನಗಡದ ಊರ ಒಳಗೆ ನಡೆದು ಹೋಗುತ್ತಿದ್ದೆ. ವಿಪರೀತ ಬಿರು ಬಿಸಿಲು ಬೇರೆ. ನಾನೊಬ್ಬನೇ ಹೋಗಿದ್ದೆ.

ಎರಡು ಮೂರು ದಿನದ ಹಿಂದೆ ಸಣ್ಣಗೆ ಜ್ವರ ಬೇರೆ ಕಾಡಿತ್ತು. ಮಾತ್ರೆ ತೆಗೆದುಕೊಂಡಿದ್ದರಿಂದ, ಸ್ವಲ್ಪ ವಾಸಿಯಾದಂತೆ ಆಗಿತ್ತಾದರೂ ಸುಸ್ತು ಇದ್ದೇ ಇತ್ತು. ಆ ಊರಲ್ಲಿ ಕಿರಿದಾದ ರಸ್ತೆ ನಡುವೆ ಹೋಗುವಾಗ ದಿಢೀರನೆ ತಲೆ ಸುತ್ತು ಬಂದಂತೆ ಆಯಿತು. ಕಣ್ಣು ಮಂಜು, ಮಂಜು. ಸ್ವಲ್ಪ ಮಂಪರು ಆದಂತಾಗಿ, ನೋಡುನೋಡುತ್ತಿದ್ದಂತೆಯೇ ಪ್ರಜ್ಞಾಹೀನನಾಗಿ ನೆಲಕ್ಕೆ ಉರುಳಿದೆ. ಕಣ್ಣು ಬಿಟ್ಟು ನೋಡ್ತೀನಿ: ಅಲ್ಲಿಯೇ ಹತ್ತಿರವಿದ್ದ ಹುನಗುಂದ ಆಸ್ಪತ್ರೆ ಯ ಬೆಡ್‌ ಮೇಲೆ ಮಲಗಿದ್ದೆ. ಸಲೈನ್‌ ಹಚ್ಚಿ ದ್ದರು. ಎಚ್ಚೆತ್ತುಕೊಂಡು, ನರ್ಸ್‌ಗೆ , “ನನಗೆ ಏನಾಯಿತು’ ಎಂದು ಕೇಳಿದಾಗ, “ನಿಶಕ್ತಿಯಾಗಿ, ದೇಹದಲ್ಲಿ ರಕ್ತ ಕಡಿಮೆಯಾಗಿ ಪ್ರಜ್ಞೆ ಕಳೆದುಕೊಂಡಿದ್ದಿರಿ. ಯಾರೋ ಪರಿಚಿತ ವ್ಯಕ್ತಿ ಇಲ್ಲಿ ತಂದು ಸೇರಿಸಿದರು. ಚಿಕಿತ್ಸೆಯ ದುಡ್ಡು ಅವರೇ ಭರಿಸಿದ್ದಾರೆ ಅಂದರು. ಮತ್ತೆ ಎಲ್ಲಿ ಆ ಪುಣ್ಯಾತ್ಮ ಅಂದಾಗ- “ತುರ್ತು ಕಾರ್ಯವಿದೆ ಎಂದು ಹೋದರು’ ಅಂದರು ನರ್ಸ್‌. ಆಗ ನನ್ನಲ್ಲಿ ಕಣ್ಣೀರ ಧಾರೆ. ಆ ಪುಣ್ಯಾತ್ಮ ಹಾಗೂ ವೈದ್ಯರಿಗೆ ಇಬ್ಬರಿಗೂ ಮನದಲ್ಲೇ ನಮಿಸಿ ಮನೆ ಸೇರಿದೆ. ಈ ಘಟನೆಯನ್ನು ಮನೆಯವರಿಗೆ ತಿಳಿಸಲಿಲ್ಲ. ಅಮೀನಗಡ ಹೋದಾಗ ಅಥವಾ ಆ ಊರು ನೆನಪಾದಾಗಲೋ ಈ ಘಟನೆ ಈಗಲೂ ಫ‌ಕ್ಕನೆ ಕಣ್ಣ ಮುಂದೆ ಬಂದು, ಕಣ್ಣಂಚು ತೇವವಾಗುತ್ತದೆ. ಆವತ್ತು ಸಹಾಯ ಮಾಡಿದ ವ್ಯಕ್ತಿ ಯಾರೆಂದು ತಿಳಿದಿಲ್ಲ. ಆಪತ್ತಿಗೆ ಆದವನೇ ನಿಜವಾದ ನೆಂಟ ಅಂತಾರೆ. ಆತ ಎಲ್ಲೇ ಇರಲಿ, ಹೇಗೇ ಇರಲಿ, ಸದಾ ಸುಖೀಯಾಗಿರಲಿ ಅನ್ನೋದೇ ನನ್ನ ಪ್ರಾರ್ಥನೆ.

ರಂಗನಾಥ ಎನ್‌ ವಾಲ್ಮೀಕಿ

ಟಾಪ್ ನ್ಯೂಸ್

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

ಮತದಾನ ಮಾಡಿದ ನಿವೃತ್ತ ಯೋಧ ನಿಧನ

Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ

Lok Sabha ಚುನಾವಣೆ ಕರ್ತವ್ಯಕ್ಕೆ 60ಕ್ಕೂ ಅಧಿಕ ಸರಕಾರಿ ಬಸ್‌

Lok Sabha ಚುನಾವಣೆ ಕರ್ತವ್ಯಕ್ಕೆ 60ಕ್ಕೂ ಅಧಿಕ ಸರಕಾರಿ ಬಸ್‌

ದಿ| ಜಾರ್ಜ್‌ ಫೆರ್ನಾಂಡಿಸ್‌ ಆದರ್ಶ, ಅವರೇ ಸ್ಫೂರ್ತಿ: ಕ್ಯಾ| ಬ್ರಿಜೇಶ್‌ ಚೌಟ

ದಿ| ಜಾರ್ಜ್‌ ಫೆರ್ನಾಂಡಿಸ್‌ ಆದರ್ಶ, ಅವರೇ ಸ್ಫೂರ್ತಿ: ಕ್ಯಾ| ಬ್ರಿಜೇಶ್‌ ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

ಮತದಾನ ಮಾಡಿದ ನಿವೃತ್ತ ಯೋಧ ನಿಧನ

Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.