ಕಷ್ಟಕಾಲದಲ್ಲಿ ಕೈ ಹಿಡಿದ ಕಂಡಕ್ಟರ್‌

ಮೂರೇ ನಿಮಿಷದ ಮನುಷ್ಯ

Team Udayavani, Aug 27, 2019, 5:47 AM IST

n-8

ಬಳ್ಳಾರಿ ಜಿಲ್ಲೆಯ ಶಿರಗುಪ್ಪದಲ್ಲಿ ಅತಿಥಿ ಉಪನ್ಯಾಸಕರ ಸಂದರ್ಶನ ಏರ್ಪಡಿಸಿದ್ದರು. ನಾನು ಸ್ವಂತ ಊರಿನಿಂದ ಕೊಪ್ಪಳಕ್ಕೆ ಬಂದು ಅಲ್ಲಿಂದ ಬಸ್‌ ಮೂಲಕ ಹೊರಟಿದ್ದೆ. ಹನ್ನೊಂದು ಗಂಟೆಗೆ ಸಂಜರ್ಶನ. ಸರಿಯಾದ ಸಮಯಕ್ಕೆ ಹಾಜರಾದೆ. ನನ್ನೊಂದಿಗೆ ಇನ್ನೂ ಐದಾರು ಜನ ಬಂದಿದ್ದರು. ಹೆಚ್ಚು ಕಡಿಮೆ ಒಂದು ಘಂಟೆಯಲ್ಲಿ ಎಲ್ಲಾ ಪ್ರಕ್ರಿಯೆ ಮುಗಿಯಿತು. ಎರಡು ದಿನ ಬಿಟ್ಟು ಫ‌ಲಿತಾಂಶವನ್ನು ಪ್ರಕಟಿಸುತ್ತೇವೆ. ಆಯ್ಕೆಯಾದವರಿಗೆ ನೇರವಾಗಿ ತಿಳಿಸುತ್ತೇವೆ ಎಂದರು. ಹಾಗಾಗಿ ಎಲ್ಲರೂ ಅಲ್ಲಿಂದ ಹೊರ ಬಿದ್ದೆವು.

ಅಷ್ಟು ಹೊತ್ತಿಗೆಲ್ಲಾ ಆತ್ಮೀಯರಾಗಿದ್ದ ನಾವುಗಳು, ಹೊರಗೆ ಬಂದು ಟೀ ಕುಡಿಯಲೆಂದು ಹೋಟೆಲ್‌ಗೆ ಹೋದೆವು. ಅಪರೂಪದ ಆತಿಥ್ಯಕ್ಕೆ ನಾನೇ ಹಣ ಕೊಡಬೇಕು ಅಂದು ಕೊಳ್ಳುವ ಹೊತ್ತಿಗೆ ಮತ್ಯಾರೋ ಬಿಲ್‌ ಕೊಟ್ಟರು.

ಸರಿ, ಬಸ್ಟ್ಯಾಂಡಿಗೆ ಬಂದು ಕೊಪ್ಪಳದ ಬಸ್‌ ಏರಿದೆ. ಕಂಡಕ್ಟರ್‌ ಟಿಕೆಟ್‌ ಕೊಡುತ್ತಾ ಬಂದಾಗ, ಟಿಕೆಟ್‌ ದುಡ್ಡು ಕೊಡಲು ಜೇಬಿಗೆ ಕೈ ಹಾಕಿದರೆ ಹಣವೇ ಇಲ್ಲ. ನಾನೇ ಕಳೆದುಕೊಂಡಿದ್ದೆನೋ ಅಥವಾ ಯಾರಾದರೂ ಕದ್ದಿದ್ದರೋ ಗೊತ್ತಿಲ್ಲ. ಶಿರಗುಪ್ಪದಿಂದ ಕೊಪ್ಪಳಕ್ಕೆ ನೂರು ರೂ ಬಸ್‌ ಚಾರ್ಜ್‌. ನಾನು ಒಳ್ಳೆಯ ಬಟ್ಟೆ ಧರಿಸಿ ಚೆನ್ನಾಗಿ ಕಾಣುತ್ತಿದ್ದೆ. ಇಂಥದರಲ್ಲಿ ಹಣವಿಲ್ಲ ಅಂದರೆ ಯಾರು ನಂಬ್ತಾರೆ? ಅಲ್ಲಿ ನನಗೆ ಪರಿಚಿತರಾರೂ ಇಲ್ಲ. ಧೈರ್ಯದಿಂದ, ಸಂಕ್ಷೇಪವಾಗಿ ನನ್ನ ಪರಿಸ್ಥಿತಿಯನ್ನು ಕಂಡಕ್ಟರ್‌ಗೆ ಹೇಳಿಕೊಂಡೆ. “ಕೊಪ್ಪಳದಲ್ಲಿ ಇಳಿಯುತ್ತಲೇ ನಿಮಗೆ ಹಣ ಕೊಡುವ ವ್ಯವಸ್ಥೆ ಮಾಡುತ್ತೇನೆ’ ಅಂದೆ. ಕಂಡಕ್ಟರ್‌ ಪ್ರಶ್ನೆಯನ್ನೇ ಕೇಳದೆ, ತಕ್ಷಣ ಟಿಕೆಟ್‌ ಕೊಟ್ಟು ಬಿಟ್ಟ. ನನ್ನ ಸ್ನೇಹಿತನಿಗೆ ಫೋನ್‌ ಮಾಡಿ, ಮುಂದಿನ ವ್ಯವಸ್ಥೆ ಮಾಡಿದ್ದೆ. ಕೊಪ್ಪಳ ಬಸ್‌ ಬಸ್ಟಾಂಡಿಗೆ ಬಂದಾಗ ಅಭಿಮಾನ ಪೂರ್ವಕ ಕಂಡಕ್ಟರನಿಗೆ ಹಣ ಕೊಟ್ಟೆ. ಆತ, “ಯಾರಿಗಾದರೂ ಇಂತಹ ಸಂದರ್ಭ ಎದುರಾಗಬಹುದು. ನಿಮ್ಮ ಮಾತಿನಲ್ಲಿ ಸತ್ಯವಿದೆ ಅನ್ನಿಸಿಯೇ ಟಿಕೆಟ್‌ ಕೊಟ್ಟೆ. ಹುಷಾರು, ಹೋಗಿ ಬನ್ನಿ’ ಎಂದರು. ಅವರಿಗೊಂದು ಕೃತಜ್ಞತೆ ಹೇಳಿ ಹೊರಟೆ. ಈಗ, ಆವತ್ತಿನ ಚಿತ್ರಣ ನೆನಪಿಸಿಕೊಂಡಾಗೆಲ್ಲ, ಕಂಡಕ್ಟರ್‌ ದೇವರಂತೆ ಕಾಣುತ್ತಾರೆ.

ಭೋಜರಾಜ ಸೊಪ್ಪಿಮಠ

ಟಾಪ್ ನ್ಯೂಸ್

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

14-

Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್‌ ಬಿಜೆಪಿಗೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.