ತಿರುವಿನಲ್ಲಿ ತಿರುಗಿ ನೋಡಿ ಕಣ್ಣು ಮಿಟುಕಿಸಿದಳಲ್ಲ…


Team Udayavani, Nov 19, 2019, 5:37 AM IST

cc-12

ನನ್ನೆಲ್ಲಾ ಶಕ್ತಿಗಳನ್ನು ಒಂದುಗೂಡಿಸಿಕೊಂಡೆ. ನನ್ನ ಪ್ರೀತಿಯ ಪಾಲಿಗೆ ಇಂದು ಈ ಕ್ಷಣವೇ ಅಚ್ಚೆ ದಿನ್‌ ಆಗಬಹುದೆಂದು ಎಣಿಸಿದೆ. ಜೊತೆಯಲ್ಲಿ ಏಳು ಹೆಜ್ಜೆ, ಒಂದು ಮಾತು.. ಒಲವಿನ ಹಣೆಬರಹ ನಿರ್ಧರಿತ! ಯಾಕೋ, ಬೇಕುಬೇಕು ಅಂತಲೇ ನನ್ನ ಕಡೆ ನೋಡದೆ ಗದ್ದೆಯ ಕಡೆ, ದೂರದ ದಾರಿಯ ತಿರುವಿನ ಕಡೆ, ಮರದ ಮೇಲೆ ಕೂತಿದ್ದ ಬೆಳ್ಳಕ್ಕಿಗಳ ಕಡೆ ನೋಡುತ್ತಿದ್ದಳು. ಅದೊಂಥರಾ ತುಸು ಚಂದದ ಜಂಬ. ಅವಳು ಹತ್ತಿರವಾದಷ್ಟೇ ವೇಗದಲ್ಲಿ ನನ್ನ ಬಾಯಿ ಕೂಡ ಒಣಗುತ್ತಿತ್ತು.

ಹಿಂದಿನ ದಿನ, ನನ್ನ ಕನಸುಗಳಿಗೆ ಸಮನಾಗಿಯೇ ಮಳೆ ಸುರಿದಿತ್ತು. ಮಧ್ಯರಾತ್ರಿಯಲ್ಲಿ ಧಡಕ್ಕನೆ ಎಚ್ಚರಾದ ಸದ್ದಿಗೆ ಎದ್ದು ಕಿಟಕಿಯಲ್ಲಿ ಇಣುಕಿದೆ. ಸಮಾಧಾನಿಸಲು ಚಂದ್ರನಿರಲಿಲ್ಲ. ಬಹುತೇಕ ಸಂದರ್ಭಗಳಲ್ಲಿ ಅವನು ನನಗೆ ಹೀಗೆ ಕೈಕೊಟ್ಟಿದ್ದೇ ಜಾಸ್ತಿ. ಜಗತ್ತು ಮೌನದಲ್ಲಿತ್ತು; ನನ್ನ ಹೊರತಾಗಿ! ಜೀರುಂಡೆಯೊಂದು ಯಾಕೋ ಹಠ ಹಿಡಿದಂತೆ ಕೂಗುತಿತ್ತು. ನಾನೇನು ಆ ದನಿಯಲ್ಲಿ ವಿರಹವನ್ನು ಗುರುತಿಸದಷ್ಟು ದಡ್ಡನಲ್ಲ. ಆದರೆ, ನನ್ನ ವಿರಹವನ್ನು, ಆಸೆಯನ್ನು, ಪ್ರೀತಿಯನ್ನು ಗುರುತಿಸಲಾಗದಷ್ಟು ದಡ್ಡತನ ಏಕೆ ಈ ಜಗತ್ತಿಗೆ? ಈ ಕಳ್ಳ ಚಂದ್ರ, ಸುಳ್ಳೇ ಸುರಿಯುವ ಮಳೆ, ಸೋಗಲಾಡಿ ತಂಗಾಳಿ, ಶಾಲಿವನದ ಹಸಿರು ಇವಕ್ಕೆಲ್ಲಾ ಏನಾಗಿದೆ? ಕೋಗಿಲೆಗಳ, ನವಿಲುಗಳ, ಗಿಳಿಗಳ ಅಷ್ಟೇ ಏಕೆ, ಚಿಟ್ಟೆಗಳಿಗೂ ಒಂದು ಪ್ರೀತಿ ಹುಟ್ಟುವಂತೆ ಹರಸಿ, ಬೆರೆಸಿ ಹೋಗುವ ಇವುಗಳಿಗೆ ನನ್ನ ಮೇಲೇಕೆ ತಾತ್ಸಾರ?

ಮರುದಿನದ ನಸುಕಿಗೆ ಹಾಸ್ಟೆಲ್‌ ನಿಂದ ಚಿಮ್ಮಿ ರಸ್ತೆಗೆ ಬಿದ್ದೆ. ಒಂಟಿ ನಾನು. ಪಕ್ಕದಲ್ಲಿ ಗದ್ದೆಯ ದಿವ್ಯ ಹಸಿರಿನ ಗಂಭೀರವಾದ ಮೌನ.ಅದರ ನಡುವೆಯೊಂದು ಕೆಂಪನೆಯ ಹಾದಿ. ಅದರ ಮೇಲಷ್ಟೇ ಆಕೆ ಬರುವುದು. ಎರಡು ನೋಟುಬುಕ್ಕು ಎದೆಯೊಳಗಿನ ಹೃದಯಕ್ಕೆ ಕಾವಲು, ಮೈಗೆ ಲಂಗ ದಾವಣಿಯ ಸೊಬಗು. ನಡೆದರೆ ಊರ ದೇವರ ತೇರು, ಸದಾ ಅವಳ ಸುತ್ತ ಒಂದು ಪ್ರೀತಿಯ ಘಮಲು. ವಾಚಿನ ಮುಳ್ಳುಗಳು ಒಂಬತ್ತಕ್ಕೆ ಬಂದು ನಿಂತಾಗ, ಅಲ್ಲಿ ಅವಳು ಹಾದಿಯ ಮೇಲೆ ಕಂಡಳು. ಇವತ್ತು ನನ್ನ ಪರವಾಗಿಲ್ಲದ ಜಗತ್ತಿಗೆ ಒಂದು ಧಿಕ್ಕಾರ ಕೂಗಿದೆ. ನನ್ನ ಪ್ರೀತಿಯನ್ನು ನಾನೇ ಗೆಲ್ಲಿಸಿಕೊಳ್ಳಲು ಹೊರಟೆ. ಬೊಚ್ಚು ಬಾಯಿಯ ಭತ್ತದ ತೆನೆಗಳು ಅವಳ ಕಡೆಯೇ ನೋಡುತ್ತಿದ್ದವು. ನೆಪಕ್ಕೆ ಅವಳ ಜೊತೆಗೆ ಹೀಗೆ ಸುಮ್ಮನೆ ಏಳು ಹೆಜ್ಜೆ ಹಾಕಿ ಎಡಗಿವಿಯಲ್ಲಿ, “ಹುಡುಗಿ, ಪ್ರೀತಿಯ ಗೂಡು ಕಟ್ಟಲು ಎಸಳುಗಳು ಬೇಕಿವೆ’ ಎಂದು ಹಾರೋಣ ಒಟ್ಟಿಗೆ? ಅಂತ ಹೇಳಿ ಬದುಕಿನ ಅಷ್ಟೂ ಭಾರವನ್ನು ಕಳೆದುಕೊಂಡು ಹಗುರಾಗ ಬೇಕು ಅಂದುಕೊಂಡೆ. ಅವಳು ಹತ್ತಿರವಾದಂತೆ ನನಗಿಂತ ನನ್ನ ಬೆವರೇ ಆಚೆ ಬಂದು ಬಂದು, ಅವಳನ್ನು ನೋಡಲು ಇಣುಕುತ್ತಿತ್ತು.

ನನ್ನೆಲ್ಲಾ ಶಕ್ತಿಗಳನ್ನು ಒಂದುಗೂಡಿಸಿಕೊಂಡೆ. ನನ್ನ ಪ್ರೀತಿಯ ಪಾಲಿಗೆ ಇಂದು ಈ ಕ್ಷಣವೇ ಅಚ್ಚೆ ದಿನ್‌ ಆಗಬಹುದೆಂದು ಎಣಿಸಿದೆ. ಜೊತೆಯಲ್ಲಿ ಏಳು ಹೆಜ್ಜೆ, ಒಂದು ಮಾತು.. ಒಲವಿನ ಹಣೆಬರಹ ನಿರ್ಧರಿತ! ಯಾಕೋ ಬೇಕುಬೇಕು ಅಂತಲೇ ನನ್ನ ಕಡೆ ನೋಡದೆ ಗದ್ದೆ ಕಡೆ, ದೂರದ ದಾರಿಯ ತಿರುವಿನ ಕಡೆ, ಮರದ ಮೇಲೆ ಕೂತಿದ್ದ ಬೆಳ್ಳಕ್ಕಿಗಳ ಕಡೆ ನೋಡುತ್ತಿದ್ದಳು. ಅದೊಂಥರಾ ತುಸು ಚಂದದ ಜಂಬ. ಅವಳು ಹತ್ತಿರವಾದಷ್ಟೇ ವೇಗದಲ್ಲಿ ನನ್ನ ಬಾಯಿ ಕೂಡ ಒಣಗುತ್ತಿತ್ತು. ನಾನು ನಿಂತಲ್ಲೇ ನಿಂತಿದ್ದೆ. ನನಗೆ ಯಾವ ಗರ ಬಡಿದಿತ್ತೂ ಏನೋ? ಎದುರಿಗೆ ಹಾದು ಹೋಗುತ್ತಿದ್ದರೆ ಸುಮ್ಮನೆ ಅಮಾಯಕನಂತೆ ನಿಂತಿದ್ದೆ. ಬಿಡು, ಇದು ಮತ್ತೂಂದು ಸೋಲಾಯಿತು ಅಂದುಕೊಂಡೆ. ನೂರಿನ್ನೂರು ಮೀಟರ್‌ ದೂರದ ತಿರುವಿನ ಬಳಿ ಹೋದವಳು ತಿರುಗಿ ನೋಡಿ ಮುಂಗುರುಳನ್ನು ಕಿವಿ ಮೇಲೆ ಗಪ್ಪನೆ ಎಸೆದುಕೊಂಡು ಕಣ್ಣು ಮಿಟುಕಿಸಬೇಕೆ? ಮರದ ಮೇಲಿದ್ದ ಜೋಡಿ ಬೆಳ್ಳಕ್ಕಿಗಳು ಮುಖ ಮುಖ ನೋಡಿಕೊಂಡವು..

ಸದಾಶಿವ್‌ ಸೊರಟೂರು

ಟಾಪ್ ನ್ಯೂಸ್

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.