ಬುದ್ಧಿ ಉಪಯೋಗಿಸಿ ಬಹುಮಾನ ಗಳಿಸಿದೆ!


Team Udayavani, Jun 5, 2018, 6:00 AM IST

c-6.jpg

1969ರ ಸಂಗತಿಯಿದು. ನಾನಾಗ ಎಸ್ಸೆಸ್ಸೆಲ್ಸಿ ಓದುತ್ತಿದ್ದೆ. ತಂದೆ ಹೊಟೇಲ್‌ ಉದ್ಯಮಿ. ನಾನೂ ಬಿಡುವಿದ್ದಾಗಲೆಲ್ಲ ಹೋಟೆಲಿಗೆ ಹೋಗಿ ಗಲ್ಲಾ ಪೆಟ್ಟಿಗೆ ಏರುತ್ತಿದ್ದೆ. ಊಟ, ಸಾಂಬಾರ್‌ನ ಕೂಪನ್‌ಗಳಿಂದ ಕೂಡಿದ್ದ ಬಿಲ್‌ ಬುಕ್‌ಗಳಿಗೆ ಸೀಲ್‌ ಹೊಡೆಯುವುದು, ಕಿರಾಣಿ ತರುವುದು, ಅಂಗಡಿ ಬಾಕಿಯನ್ನು ಸಂಜೆ ಕೊಟ್ಟು ಬರುವುದು ಮೊದಲಾದವು ನನ್ನ ಪಾಲಿನ ಸಣ್ಣ ಕೆಲಸಗಳು.

ಆಗ ಲಿಪ್ಟನ್‌ ಟೀ ಪುಡಿ ಕಂಪನಿಯವರ ಬ್ರೂಕ್‌ಬಾಂಡ್‌ ಚಹಾಪುಡಿ ಉತ್ಕೃಷ್ಟ ಸ್ವಾದದ್ದಾಗಿತ್ತು. ನಾವು ನಿತ್ಯ ಅದನ್ನೇ ಬಳಸುತ್ತಿದ್ದೆವು. ಒಮ್ಮೆ ಬ್ರೂಕ್‌ಬಾಂಡ್‌ ಕಂಪನಿಯವರು ಗ್ರಾಹಕರಿಗಾಗಿ ಒಂದು ಸ್ಪರ್ಧೆಯನ್ನಿಟ್ಟಿದ್ದರು. ಪ್ರವೇಶಪತ್ರದಲ್ಲಿ ವಿಶಿಷ್ಟ ಕೋನದಲ್ಲಿ ಗುರುತಿಸಲಾಗದಂತೆ ತೆಗೆದ ವಸ್ತುಗಳ ನಾಲ್ಕು ಫೋಟೋ ಕೊಟ್ಟಿದ್ದರು. ನಾವು ಮಾಡಬೇಕಾದದ್ದಿಷ್ಟೇ; ಆ ವಸ್ತುಗಳನ್ನು ಗುರುತಿಸಬೇಕು. ನಂತರ, ನಾನು ಬ್ರೂಕ್‌ಬಾಂಡ್‌ ಚಹಾವನ್ನೇ ಇಷ್ಟಪಡುತ್ತೇನೆ ಏಕೆಂದರೆ… ಈ ವಾಕ್ಯವನ್ನು ಕೇವಲ 10 ಶಬ್ದಗಳನ್ನು ಬಳಸಿ ಪೂರ್ಣ ಮಾಡಬೇಕು. ಉತ್ತಮ ರೀತಿಯಲ್ಲಿ ವರ್ಣಿಸಿದವರಿಗೆ  ಬಹುಮಾನ. ಪ್ರಥಮ ಬಹುಮಾನ 5 ಸಾವಿರ, ದ್ವಿತೀಯ 3 ಸಾವಿರ, ತೃತೀಯ 1 ಸಾವಿರ. 25 ಸಮಾಧಾನಕರ ಬಹುಮಾನಗಳಿದ್ದವು.

ನಾನು ಆ ವೇಳೆಗೆ ವಾಚಕರ ಪತ್ರ, ಕವನ, ಚುಟುಕು, ಮಕ್ಕಳ ಕಥೆ ಬರೆದು ಪುಡಿ ಲೇಖಕನೆನಿಸಿದ್ದೆ. ಅಲ್ಲದೇ ಇಂಥ ಸ್ಪರ್ಧೆಗಳೆಂದರೆ ನನಗೆ ಅಚ್ಚುಮೆಚ್ಚು. ಏನಾದರಾಗಲಿ, ಒಂದು ಕೈ ನೋಡಿಯೇ ಬಿಡೋಣವೆಂದು ಪ್ರವೇಶಪತ್ರ ಹಿಡಿದು ಕುಳಿತೆ. ಫೊಟೋಗಳನ್ನು ಗುರುತಿಸಿದೆ. ಚಹಾಪುಡಿಯನ್ನು ವರ್ಣಿಸಲು ತಡಕಾಡಿ ಕೊನೆಗೂ 10 ಪದಗಳ ಪುಂಜವನ್ನು ತುಂಬಿ ಅಂಚೆಯ ಮೂಲಕ ಮದ್ರಾಸಿಗೆ ಕಳಿಸಿದೆ.

ಒಂದು ತಿಂಗಳ ನಂತರ ಫ‌ಲಿತಾಂಶ ಕೈಯಲ್ಲಿ ಹಿಡಿದು ಚಹಾಪುಡಿ ಕಂಪನಿಯ ಆಫೀಸರ್‌ ಅವರೇ ಹೋಟೆಲಿಗೆ ಬಂದರು, “ಶಂಕರರಾಯರೇ, ನಿಮ್ಮ ಮಗನಿಗೆ 2ನೇ ಬಹುಮಾನವಾಗಿ 3000 ರೂಪಾಯಿ ಬಂದಿದೆ’ ಎಂದರು!
ಅಪ್ಪ ಖುಷ್‌! ನಾನು ಫ‌ುಲ್‌ಖುಷ್‌! ನಾನಂತೂ ಖಂಡಿತ ಇದನ್ನು ನಿರೀಕ್ಷಿಸಿರಲಿಲ್ಲ. ದಕ್ಷಿಣದ ನಾಲ್ಕು ರಾಜ್ಯಗಳಿಗೆ ಮಾತ್ರ ನಿಗದಿಯಾಗಿದ್ದ ಆ ಸ್ಪರ್ಧೆಯಲ್ಲಿ ನನಗೆ 2ನೇ ಬಹುಮಾನ! ಅದೂ 3000 ರೂ. 1969ರ ಸಂದರ್ಭದಲ್ಲಿನ 3 ಸಾವಿರ ರೂ. ಇಂದಿನ ಒಂದು ಲಕ್ಷಕ್ಕೆ ಸಮ.

ತಂದೆಯವರು ಆ ಹಣವನ್ನು ನನ್ನ ಕೈಗಿತ್ತರು. ಪ್ರಶ್ನಾರ್ಥಕವಾಗಿ ಅವರೆಡೆ ನೋಡಿದೆ. “ಇದು ನಿನ್ನ ಶ್ರಮದ ದುಡಿಮೆಯ ಹಣ. ನಿನಗೇ ಸೇರಿದ್ದು. ಇದನ್ನು ನಿನ್ನ ಪ್ರಥಮ ಸಂಬಳ ಎಂದುಕೋ…’ ಎಂದರು. ಅವರ ಮಾತಿನಿಂದ ಒಮ್ಮೆ ರೋಮಾಂಚಿತನಾದೆ. ನಿಜ! ಅದು ನನ್ನ ಮೊದಲ ಸಂಪಾದನೆಯಾಗಿತ್ತು. ಇಂದು ನಾನು ನನ್ನ ಕಾರ್ಮಿಕರಿಗೆ ಸಂಬಳ ಕೊಡುವಾಗಲೆಲ್ಲ ಆ ಮೂರು ಸಾವಿರ ನೆನಪಾಗುತ್ತದೆ. 

ಕೆ. ಶ್ರೀನಿವಾಸ ರಾವ್‌

ಟಾಪ್ ನ್ಯೂಸ್

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

Election ಗೆದ್ದ ನಂತರ ಜನರಿಂದ ದೂರವಾಗದೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು

Election ಗೆದ್ದ ಬಳಿಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು; ಬಿ.ವೈ.ರಾಘವೇಂದ್ರ

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

Election ಗೆದ್ದ ನಂತರ ಜನರಿಂದ ದೂರವಾಗದೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು

Election ಗೆದ್ದ ಬಳಿಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು; ಬಿ.ವೈ.ರಾಘವೇಂದ್ರ

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

8-shirva

Shirva: ವಾಕಿಂಗ್‌ ವೇಳೆ ಕುಸಿದು ಬಿದ್ದು ಸಾವು

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.