ನಿನ್ನನ್ನು ಗೆದ್ದೆ ಅಂದುಕೊಂಡಿದ್ದು ಎಂಥಾ ಸುಳ್ಳು…


Team Udayavani, Aug 1, 2017, 2:15 PM IST

01-JOSH-7.jpg

ನಿನ್ನ ನನ್ನ ಹಾದಿ ಕವಲೊಡೆದಿದೆ. ದೂರಾಗಲು ಹೊರಟವಳನ್ನು ನೋಡುತ್ತಾ ನಿಂತವನನ್ನು, ನೀ ಒಮ್ಮೆ ತಿರುಗಿ ನೋಡಬಹುದೆಂಬ ಆಸೆ ಹುಸಿಯಾಯಿತು. ಯಾವುದೋ ತಿರುವಿನಲ್ಲಿ ನೀ ಮರೆಯಾಗಿ ಹೋದೆ…

ಹೃದಯದ ಗಾಯವೇ, 
ಯಾಕೋ ಈ ಮೌನ ತುಂಬಿದ ಇರುಳುಗಳು ಮುಗಿಯುವುದಿಲ್ಲ. ಒಳ್ಳೆಯದೆಲ್ಲಕ್ಕೂ ಒಂದು ಕೊನೆ ಇರುವಂತೆ. ನಮ್ಮಿಬ್ಬರ ಸಂಭ್ರಮಗಳಿಗೂ ಕೊನೆಯೆಂಬುದಿದೆ ಅನ್ನೋದನ್ನ ನಾ ಯಾವತ್ತೂ ಯೋಚಿಸಿದವನಲ್ಲ. ನೀ ತಿರುಗಿ ಬರಲಾರೆ ಅಂತ ಗೊತ್ತಿದ್ದೂ, ನಿನ್ನದೇ ಹಾದಿ ಕಾಯುವಂತೆ ಪುಸಲಾಯಿಸುವ ಮನಸ್ಸಿಗೆ ತಿಳಿಹೇಳುವುದು ಹೇಗೆಂದು ಅರಿಯದೆ ನಿಸ್ಸಹಾಯಕನಾಗಿದ್ದೇನೆ. ಆದರೂ ನಿರೀಕ್ಷೆಯನ್ನು ಕೊಲ್ಲದೆ, ವಾಸ್ತವವನ್ನು ನಿರಾಕರಿಸದೆ ಬದುಕಿದ್ದೇನೆ. ಬಿಟ್ಟು ಹೊರಡಬೇಕೆಂದು ನಿಂತವಳನ್ನು, ತಡೆದು ನಿಲ್ಲಿಸಿ “ಹೇಳಿ ಹೋಗು ಕಾರಣ’ ಅಂತ ಕೇಳಿದರೆ… ನಿನ್ನೊಳಗಿನ ಉತ್ತರಕ್ಕೆ ನಿನ್ನನ್ನು ಮರೆಯುವಂತೆ, ನನ್ನ ಮನಸನ್ನು ಕಠಿಣಗೊಳಿಸುವಷ್ಟು ಶಕ್ತಿ ಇದೆಯಾ? ಅದು ನೀನು ಬೇಕೆಂದೇ ಮಾಡಿದ ಮೋಸವಾಗಿದ್ದರೂ, ನನ್ನದು ನಿರ್ಲಜ್ಜ ಪ್ರೀತಿ. 

ನಿನ್ನನ್ನು ಪಡೆದೇ ತೀರಬೇಕೆಂಬ ಅದಮ್ಯ ಹಂಬಲ ಹುಟ್ಟುಹಾಕಿದ ನಿರ್ಲಜ್ಜ ಪ್ರೀತಿ. ಹಾಗಂತ ನಿನ್ನ ದಾರಿಗೆ ನಾನು ಅಡ್ಡ ನಿಲ್ಲಲಾರೆ. ಬಲವಂತ ಮಾಡಿ ದಮ್ಮಯ್ಯ ಗುಡ್ಡೆ ಹಾಕಿದರೆ ದಕ್ಕುವುದು ಕರುಣೆಯೇ ಹೊರತು ಪ್ರೀತಿಯಲ್ಲ. ಹಾದಿಯಲ್ಲಿ ಹೆಕ್ಕಿದ ನೆನಪುಗಳ ಪುಟ್ಟ ಜೋಳಿಗೆ ಬೆನ್ನಲ್ಲಿದೆ ! ಹಾಡದಿರೋ ಸಾವಿರ ಪದಗಳ ಮೂಕ ಸೇತುವೆ ಕಣ್ಮುಂದಿದೆ!! ಎಲ್ಲ ಹೂಗಳಿಗೂ ದೇವರ ಮುಡಿಯೇರುವ ಹಂಬಲವಿದ್ದೇ ಇರುತ್ತದೆ. ಆದರೆ, ಮಣ್ಣುಪಾಲಾಗಿದ್ದೇ ಹೆಚ್ಚು. ನಿನ್ನೊಳಗನ್ನು ಅರ್ಥ ಮಾಡಿಕೊಳ್ಳಲು ನಾ ಸೋತಿದ್ದಾದರೂ ಎಲ್ಲಿ? ನಿನ್ನನ್ನು ಗೆದ್ದೆ ಎಂದುಕೊಂಡಿದ್ದು ಎಂಥಾ ಸುಳ್ಳು?! ಸುಳ್ಳೇ ಆದರೂ ಅದನ್ನೇ ನಂಬಿದ್ದ ನನಗೆ ಅದೆಷ್ಟು ಅಪ್ಯಾಯಮಾನವಾಗಿತ್ತು! ನಿನ್ನ ನಿರಾಕರಣೆಯನ್ನು ಯಾಕೆ ಹೀಗೆ ಆಭರಣದಂತೆ ಜತನವಾಗಿಟ್ಟುಕೊಂಡಿದ್ದೇನೆ? 

ನೀ ಜತೆಗಿದ್ದ ಗಳಿಗೆಗಳಷ್ಟೇ ತೀವ್ರವಾಗಿ, ನೀನಿಲ್ಲದಾಗ ನಿನ್ನ ನೆನಪುಗಳನ್ನೂ ಅಷ್ಟೇ ತೀವ್ರವಾಗಿ ಪ್ರೀತಿಸಿದ್ದೆ ಗೊತ್ತಾ? ನೀ ಇರದ ಅರೆ ಘಳಿಗೆಯೂ ಈ ಬದುಕಿನಲ್ಲಿ ಉಳಿದಿಲ್ಲ. ಮೈಯ ಮಚ್ಚೆಯಂತಿರುವ ನಿನ್ನ ನೆನಪುಗಳನ್ನು ನನ್ನಿಂದ ಕಿತ್ತುಕೊಳ್ಳಲು ನಿಂಗೆ ಸಾಧ್ಯವಾ ಹೇಳು? ಅದು ಮುಂಜಾನೆ ಚುಮು ಚುಮು ಇಬ್ಬನಿಯಿಂದ ಅಪರಾತ್ರಿಯ ಕಣ್ಣಹನಿಯವರೆಗೂ ಕಾವಲಿದೆ. ನಿನ್ನ ನನ್ನ ಹಾದಿ ಕವಲೊಡೆದಿದೆ. ದೂರಾಗಲು ಹೊರಟವಳನ್ನು ನೋಡುತ್ತಾ ನಿಂತವನನ್ನು, ನೀ ಒಮ್ಮೆ ತಿರುಗಿ ನೋಡಬಹುದೆಂಬ ಆಸೆ ಹುಸಿಯಾಯಿತು. ಯಾವುದೋ ತಿರುವಿನಲ್ಲಿ ನೀ ಮರೆಯಾಗಿ ಹೋದೆ. ನಿಂತಲ್ಲೇ ಉಳಿದುಹೋದವನಿಗೆ ಕಣ್ಣು ತುಂಬಿ ಬಂದು, ಮುಂದಿನ ದಾರಿ ಮಂಜು ಮಂಜು. 

 ಜೀವ ಮುಳ್ಳೂರು  

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.