ಹೂವೊಂದು ಬಳಿ ಬಂದು…


Team Udayavani, Feb 27, 2018, 3:55 PM IST

hoo.jpg

ನಿನ್ನ ದೆಸೆಯಿಂದಾಗಿ ಎಕ್ಸಾಂ ಕೂಡ ಹಾಳಾಗಿ ಹೋಗಿದೆ. ಆದರೆ, ನನಗದರ ಬಗ್ಗೆ ಬೇಜಾರೇ ಇಲ್ಲ. ಇನ್ನೇನು ನೀನು ಪಕ್ಕದಿಂದ ಎದ್ದೇ ಹೋಗಿ ಬಿಡುತ್ತೀಯಲ್ಲ, ಆ ಸಂಕಟವೇ ನನ್ನನ್ನು ಹೆಚ್ಚು ಕಾಡುತ್ತಿದೆ…

ಮುದ್ದು ಮನಸ್ಸಿನವಳೇ,
ಅದ್ಯಾವ ಘಳಿಗೆಯಲ್ಲಿ ನೀನು ಕತ್ತಲೆ ತುಂಬಿದ ನನ್ನ ಹೃದಯದೊಳಗೆ ದೀಪದಂತೆ ಹೊಕ್ಕೆಯೋ ನಾ ಕಾಣೆ. ಅಂದಿನಿಂದ ಬರೀ ನಿನ್ನ ಗುಂಗಲ್ಲಿಯೇ ದಿನ ದೂಡುತ್ತಿದ್ದೇನೆ. ಮೊದಲ ಸೆಮಿಸ್ಟರ್‌ನ ಮೊದಲ ಪರೀಕ್ಷೆಯ ದಿನ ನಾನು ಪರೀಕ್ಷೆಯ ಭಯದಿಂದ ಎಲ್ಲರಿಗಿಂತ ಮೊದಲೇ ಎಕ್ಸಾಂ ಹಾಲ್‌ಗೆ ಬಂದುಬಿಟ್ಟಿದ್ದೆ. ನಂತರ ಒಬ್ಬೊಬ್ಬರಾಗಿ ಬಂದು ತಮ್ಮ ತಮ್ಮ ಸಂಖ್ಯೆಯ ಡೆಸ್ಕ್ಗಳನ್ನು ಹುಡುಕಿ ಕುಳಿತರು. ನನ್ನ ಪಕ್ಕದ ಸೀಟು ಮಾತ್ರ ಇನ್ನೂ ಖಾಲಿ ಹೊಡೆಯುತ್ತಿತ್ತು. ಪ್ರತಿ ಸಲ ಬೇರೆ ಬೇರೆ ವಿಭಾಗದ ಹುಡುಗರೇ ನನ್ನ ಪಕ್ಕದಲ್ಲಿ ಬರುತ್ತಿದ್ದುದರಿಂದ, ಪಕ್ಕದಲ್ಲಿ ಯಾರು ಬರುತ್ತಾರೆಂಬ ಕುತೂಹಲವೇನೂ ಇರಲಿಲ್ಲ. ಆಗ ಎಕ್ಸಾಂ ಹಾಲ್‌ನೊಳಗೆ ಬಂದವಳು ನೀನು!

  ಹಾಲ್‌ ಟಿಕೆಟ್‌ನ ನಂಬರ್‌ ಇರುವ ಡೆಸ್ಕ್ ಯಾವುದೆಂದು ಆ ಕಡೆ, ಈ ಕಡೆ ಕಣ್ಣು ಹೊರಳಿಸುತ್ತಾ ಗಡಿಬಿಡಿಯಲ್ಲಿ ಹುಡುಕಲಾರಂಭಿಸಿದ್ದೆ ನೀನು. ನಿನ್ನ ಕಣ್ಣಿನ ಕೊಳದಲ್ಲಿ ಕಣ್ಣುಗುಡ್ಡೆಗಳು ಮೀನಿನಂತೆ ಆಕಡೆಯಿಂದ ಈ ಕಡೆ ಓಡಾಡುತ್ತಿದ್ದುದನ್ನು ನೋಡಿ ಒಂದು ಕ್ಷಣ ಮೂಕನಾಗಿ ಹೋದೆ. “ದೇವರೇ, ಈ ಚೆಲುವೆಯೇ ನನ್ನ ಪಕ್ಕ ಬರಲಿ’ ಎಂದು ಮೊರೆ ಇಟ್ಟೆ. ದೇವರಿಗೆ ನನ್ನ ಮೇಲೆ ಕರುಣೆ ಬಂದು, “ತಥಾಸ್ತು’ ಅಂದನೇನೋ, ನೀನು ನನ್ನ ಪಕ್ಕದ ಸೀಟಿನ ಕಡೆಗೇ ನಡೆದು ಬಂದೆ. “ಅಬ್ಟಾ, ಇದೇ ಜಾಗ’ ಅಂತ ನಿಟ್ಟುಸಿರುಬಿಡುತ್ತಾ, ನನ್ನ ಪಕ್ಕದಲ್ಲಿ ವಧುವಿನಂತೆ ಬಂದು ಕುಳಿತ ಘಳಿಗೆಯನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ. ಮೂರು ಗಂಟೆಯ ಪರೀಕ್ಷೆಯ ದಿನ ಪೂರ್ತಿ ಇರಬಾರದಿತ್ತೇ ಅಂತನ್ನಿಸಿದ್ದು ಅದೇ ಮೊದಲು.

   ಆವತ್ತು ನಾನು ಏನು ಬರೆದೆನೋ, ಬಿಟ್ಟೆನೋ ಗೊತ್ತಿಲ್ಲ. ಆಗಾಗ ನಿನ್ನ ಕೆನ್ನೆಗೆ ಮುತ್ತಿಡುತ್ತಿದ್ದ ಮುಂಗುರುಳನ್ನು ನೀನು ಸರಿಸಿ ಸರಿಸಿ ಪರೀಕ್ಷೆ ಬರೆಯುತ್ತಿದ್ದುದನ್ನು ಮಾತ್ರ ಓರೆಗಣ್ಣಿನಿಂದ ನೋಡುತ್ತಿದ್ದೆ. ನಿನ್ನ ಗುಂಗಲ್ಲಿ ಎಕ್ಸಾಂ ಹಾಳಾಗಿ ಹೋಯ್ತು. ನನಗದರ ಬಗ್ಗೆ ಬೇಸರವಾಗಲಿಲ್ಲ. ಪಕ್ಕದಲ್ಲಿ ತಿಳಿ ಮಂದಹಾಸ ಬೀರುತ್ತಾ ಕುಳಿತಿದ್ದ ನೀನು, ಇನ್ನು ಕೆಲವೇ ಕ್ಷಣಗಳಲ್ಲಿ ಎದ್ದು ಹೋಗಿ ಬಿಡುತ್ತೀಯಲ್ಲಾ ಎಂದೇ ನನಗೆ ಜಾಸ್ತಿ ಬೇಸರವಾಗಿದ್ದು.

ಇದು ಪ್ರೀತಿಯೋ, ಆಕರ್ಷಣೆಯೋ ಗೊತ್ತಿಲ್ಲ. ಆದರೆ, ನನಗೆ ಹೀಗೆಲ್ಲಾ ಆಗಿದ್ದು ಇದೇ ಮೊದಲು. ನಿನ್ನನ್ನು ಕೊನೆಯವರೆಗೂ ಜೀವಕ್ಕೆ ಜೀವವಾಗಿ ಕಾಪಾಡಿಕೊಂಡು, ಜೊತೆಯಲ್ಲೇ ಉಳಿಸಿಕೊಳ್ಳುವ ಆಸೆ ನನ್ನದು. ಹೃದಯ ಸಿಂಹಾಸನದಲ್ಲಿಯೂ ನಿನಗಾಗಿ ಜಾಗವನ್ನು ಕಾಯ್ದಿರಿಸಿದ್ದೇನೆ. ಅಲ್ಲಿಯೂ ನೀನೇ ಬಂದು ಕುಳಿತುಕೊಳ್ಳಬೇಕು. ಬರಿ¤àಯಾ ತಾನೇ?

– ಬಸವರಾಜ ಕಲ್ಲಪ್ಪ ಕೊಪ್ಪದ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.