ಹೇಳು, ನಮ್ಮ ಪ್ರೀತಿಯ ಕತ್ತು ಹಿಸುಕಿದ್ದು ಯಾರು?


Team Udayavani, Jan 8, 2019, 10:58 AM IST

helu.jpg

ನಾವು ಪಾರ್ಕ್‌, ಸಿನಿಮಾ, ಮಾಲ್‌ ಅಂತ ಸುತ್ತಲಿಲ್ಲ. ಎಳ್ಳಷ್ಟೂ ಕಲ್ಮಶವಿಲ್ಲದ, ಪ್ರಬುದ್ಧ ಪ್ರೇಮವನ್ನು ಕಾಪಿಟ್ಟುಕೊಂಡಿದ್ದೆವು.

ಆ ಹುಬ್ಬಳ್ಳಿ ಎಕ್ಸ್‌ಪ್ರೆಸ್‌ ಟ್ರೈನಿನ ಮೂರನೇ ಬೋಗಿಯ ಕಿಟಕಿಯಂಚಿನ ಬದಿಗೆ ಕುಳಿತು, ಮುಂಬರುವ ಬದುಕಿನ ಬಗ್ಗೆ ಅದೆಷ್ಟು ಕನಸುಗಳನ್ನು ಹೆಣೆದಿರಲಿಲ್ಲ ಹೇಳು? ನಾಲ್ಕು ದಿನದ ಈ ಜೀವನದಲ್ಲಿ ಬಂಡೆಗಲ್ಲಿನಂತೆ ಎದುರಾಗುವ ಸಮಸ್ಯೆಗಳಿಗೆ ಎದೆಯೊಡ್ಡಬೇಕು, ನಾವೇನು ಎಂಬುದನ್ನು ಸಮಾಜಕ್ಕೆ ತೋರಿಸಬೇಕು ಎಂದೆÇÉಾ ಮಾತಾಡಿಕೊಂಡಿದ್ದೆವು… 

ಪ್ರಿತಿ ಕುರುಡು ಅಂತಾರೆ. ಆದರೆ, ನಮ್ಮ ಪ್ರೀತಿ ಹುಟ್ಟಿದ್ದೇ ಕಣ್ಣಿನಿಂದ ಅನ್ನುವುದು ನಮ್ಮಿಬ್ಬರಿಗೂ ಗೊತ್ತಿರದ ವಿಷಯವೇನಲ್ಲ. ಕಣ್ಣಿನ ತಪ್ಪಿಗೆ ಶಿಕ್ಷೆ ಅನುಭವಿಸಿದ್ದು ಮಾತ್ರ ನನ್ನ ಹೃದಯ ಎಂಬುದು ದುರಂತ.

ನಮ್ಮ ಪ್ರತಿದಿನದ ಭೇಟಿಗೆ ವೇದಿಕೆಯಾಗಿದ್ದು ಅದೇ ಕಿಲಿಕಿಲಿ ನಗುವ ಕಾಲೇಜು. ಅದ್ಯಾವಾಗ ನಾನು ಪುರುಸೊತ್ತು ಮಾಡಿಕೊಂಡು ನಿನ್ನನ್ನು ನೋಡಿದೆನೋ, ಆ ಕ್ಷಣದಲ್ಲಿ ಹೃದಯದಲ್ಲಿ ಮಿಂಚೊಂದು ಹರಿದಾಡಿದ್ದು ಸುಳ್ಳಲ್ಲ. ಆ ನಿನ್ನ ಮುಂಗುರುಳು, ಮುಗುಳ್ನಗೆ, ವಾರೆನೋಟ; ಆಹಾ! ಇಷ್ಟು ಸಾಕು ಹುಡುಗನಿಗೆ ಪ್ರೇಮದ ನಶೆ ಏರಲು, ಪ್ರೀತಿಯೆಂಬ ಬೀಜ ಮೊಳಕೆಯೊಡೆಯಲು.

ಹದಿಹರೆಯದ ಸುಳಿಗೆ ಸಿಲುಕಿದ್ದ ನನ್ನ ಮನಸಿನಲ್ಲಿ ನಿನ್ನ ಹೆಸರು ಅಚ್ಚೊತ್ತಲು ಜಾಸ್ತಿ ಸಮಯ ಹಿಡಿಯಲಿಲ್ಲ.
ಜೀವನದ ಜಂಜಾಟದಲ್ಲಿ ನನ್ನೊಳಗೆ ಮೂಡುವ ಭಾವನೆಗಳಿಗೆ ಸ್ಪಂದಿಸುವ ಜೀವ ನೀನಾಗಬೇಕೆಂಬ ಬಯಕೆ ಆರಂಭವಾಯಿತು. ನಿನ್ನ ಬೆಚ್ಚನೆಯ ಉಸಿರಿಗೆ ನಾನು ಪ್ರತಿ ಉಸಿರಾಗ್ಬೇಕು, ಜಗತ್ತನ್ನೇ ಮೆಚ್ಚಿಸುವ ಪ್ರೇಮ
ನಮ್ಮದಾಗಬೇಕೆಂಬ ತುಮುಲ. ನಿನ್ನನ್ನು ಮೆಚ್ಚಿಸುವ ಬಯಕೆಯೇನೋ ಆಯ್ತು. ಆದರೆ, ಆ ಪಯಣ ಹೂವಿನ
ಹಾಸಿಗೆಯಾಗಿರದೆ, ಹಗ್ಗದ ಮೇಲಿನ ನಡಿಗೆಯಾಗಿತ್ತು. ಇಂದಿನ ಸ್ಮಾರ್ಟ್‌ಫೋನ್‌ ಜಮಾನದಲ್ಲಿ, ಫೇಸುºಕ್‌
-ವಾಟ್ಸಾéಪ್‌ನಲ್ಲಿ ಕತೆ, ಕವನ, ಕವಿತೆಗಳನ್ನು ಗೀಚಿ, ನಿನ್ನ ಹೃದಯದಲ್ಲಿ ಪುಟ್ಟ ಜಾಗ ಮೀಸಲಿರಿಸಲು ಅದೆಷ್ಟು
ಒದ್ದಾಡಿದ್ದೇನೆ. ನೀನು ಸಿಕ್ಕಾಗ, ಆ ಸಂಭ್ರಮದ ಏಣಿ ಅನಂತದವರೆಗೂ ಚಾಚಿತ್ತು. ಈಗಿನ ಪ್ರೇಮಿಗಳಂತೆ ನಾವೇನು ಪಾರ್ಕ್‌, ಸಿನಿಮಾ, ಮಾಲ್‌ ಅಂತ ಸುತ್ತಲಿಲ್ಲ.

ಎಳ್ಳಷ್ಟೂ ಕಲ್ಮಶವಿಲ್ಲದ, ಪ್ರಬುದ್ಧ ಪ್ರೇಮವನ್ನು ಕಾಪಿಟ್ಟುಕೊಂಡವರು ನಾವು. ಆ ಹುಬ್ಬಳ್ಳಿ ಎಕ್ಸ್‌ಪ್ರೆಸ್‌ ಟ್ರೈನಿನ
ಮೂರನೇ ಬೋಗಿಯ ಕಿಟಕಿಯಂಚಿನ ಬದಿಗೆ ಕುಳಿತು, ಮುಂಬರುವ ಬದುಕಿನ ಬಗ್ಗೆ ಅದೆಷ್ಟು ಕನಸುಗಳನ್ನು
ಹೆಣೆದಿರಲಿಲ್ಲ ಹೇಳು? ನಾಲ್ಕು ದಿನದ ಈ ಜೀವನದಲ್ಲಿ ಬಂಡೆಗಲ್ಲಿನಂತೆ ಎದುರಾಗುವ ಸಮಸ್ಯೆಗಳಿಗೆ
ಎದೆಯೊಡ್ಡಬೇಕು, ನಾವೇನು ಎಂಬುದನ್ನು ಸಮಾಜಕ್ಕೆ ತೋರಿಸಬೇಕು ಎಂದೆÇÉಾ ಮಾತಾಡಿಕೊಂಡಿದ್ದೆವು.
ಆದರೆ ಈ ಅನಿರೀಕ್ಷಿತ ಬದುಕಿನಲ್ಲಿ ನಾವು ಎಣಿಸಿದಂತೆ ಏನೂ ಆಗುವುದಿಲ್ಲವಲ್ಲ. ನಾನು ಸ್ನೇಹದ ಹಂಗು ತೊರೆದು
ಪ್ರೀತಿಯ ಗುಂಗು ಹಿಡಿದಾಗ ನನ್ನ ಗೆಳೆಯ ಒಂದು ಮಾತು ಹೇಳಿದ್ದ- “ಪ್ರೀತಿಯಲ್ಲಿ ಮೊಗೆದಷ್ಟೂ ಸುಖ
ಇರುವುದಕ್ಕಿಂತ, ಅದರಾಚೆಗೆ ಕೊನೆಯಿರದ ದುಃಖದ ಕರಿ ಛಾಯೆ ಇರುತ್ತೆ ಕಣೋ’. ಪ್ರೀತಿಯ ಅಮಲಿನಲ್ಲಿ
ತೇಲುತ್ತಿದ್ದ ನನಗೆ ಅವನ ಮಾತು ಮನದಲ್ಲಿ ನಾಟಲೇ ಇಲ್ಲ.

ದಿನ ಕಳೆದಂತೆ ನಮ್ಮಿಬ್ಬರ ನಡುವೆ ಹುಸಿಕೋಪ, ಮುನಿಸು, ಜಗಳ ಒಂದೊಂದಾಗಿ ಪ್ರವೇಶ ಮಾಡಿದವು. ಬಹುಶಃ ಆ ವಿಧಿ ನಮ್ಮ ಕತೆಯನ್ನು ಬೇರೆಯದೇ ರೀತಿಯಲ್ಲಿ ಬರೆದಿರಬೇಕು ಅಥವಾ ನಮ್ಮ ಅನ್ಯೋನ್ಯ ಸಾಂಗತ್ಯವೇ ಅದಕ್ಕೆ ಹೊಟ್ಟೆಕಿಚ್ಚು ಮಾಡಿರಬೇಕು. ಪೂರ್ತಿ ಬದುಕು ಯೂಟರ್ನ್ ಆಗಿದ್ದು ಇಲ್ಲೇ ನೋಡು. ಎಲ್ಲರ ಪ್ರೀತಿಯಲ್ಲಿ ಇಣುಕುವಂತೆ ಜಾತಿ, ಅಂತಸ್ತು ಎಂಬ ಭೂತ ನಮ್ಮನ್ನೂ ಚೂರಿಯಂತೆ ಇರಿಯಿತು. ಅದ್ಯಾವ ಘಳಿಗೆಯಲ್ಲಿ ಗೆಳೆಯ ಭವಿಷ್ಯ ನುಡಿದಿದ್ದನೋ, ಕೊನೆಗೂ ಅದೇ ದಿಟವಾಗಿ ಪ್ರೀತಿಯ ಉಸಿರುಗಟ್ಟಿಸಿತು. ದಂಡೆಗೆ ಪದೇ ಪದೆ ಮುತ್ತಿಕ್ಕುವ ಸಮುದ್ರದ ಅಲೆಗಳಂತೆ ನನ್ನ ಹೃದಯಕ್ಕೆ ಬರೀ ದುಃಖದ ಅಲೆಗಳೇ ಕೊನೆಯಾಯಿತು.

ಚೂರಾದ ಗಾಜಿನಂತಾಗಿದೆ ಹೃದಯವೀಗ. ಭರವಸೆಯ ಕಿರಣವಾಗಿದ್ದ ತಂದೆ ತಾಯಿಗೆ, ಗೆಳೆಯರಿಗೆ ನನ್ನಿಂದ
ಸಿಕ್ಕಿದ್ದಾದರೂ ಏನು? ಸೋಲು, ಅಪಮಾನ, ನೋವು, ಕಣ್ಣೀರು! ಕೊನೆಯದಾಗಿ ಕೇಳ್ತಿದ್ದೀನಿ ಹೇಳು, ನಮ್ಮಿಬ್ಬರ
ಪ್ರೀತಿಯ ಕತ್ತು ಹಿಸುಕಿದ್ದು ಯಾರು?

– ಅಂಬಿ ಎಸ್‌. ಹೈಯ್ನಾಳ್‌

ಟಾಪ್ ನ್ಯೂಸ್

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.