ತಂಗಾಳಿಯಾಗಿ ಬಂದವಳು ಬಿರುಗಾಳಿಯಾಗಿ ಹೋದೆಯೇಕೆ?


Team Udayavani, May 23, 2017, 10:43 AM IST

tangali.jpg

ಹಾಯ್‌ ಮೈ ಡಿಯರ್‌ ಸ್ವೀಟ್‌ ಹಾರ್ಟ್‌…
ನಿನಗೆ ನಾನೀಗ ಬಿಲ್‌ಕುಲ್ಲಾಗಿ ಬೇಡವಾಗಿರೋನು. ಕಣ್ಮುಚ್ಚಿ ಕಣ್ಣಬಿಟ್ಟರೂ ನೀನೇ… ಕಣ್‌ಬಿಟ್ಟು ಕಣ್‌ ಮುಚ್ಚಿದರೂ ನೀನೇ… ನೆನಪಿನ ಬುತ್ತಿಯಲ್ಲಿ ಬರೀ ನಿನದೇ ನೆನಪು ಕಣೆ. ಸಂತಸ, ಸಂಭ್ರಮ, ಸಡಗರ ಎಲ್ಲವೂ ಒಟ್ಟೊಟ್ಟಿಗೆ ತುಂಬಿ ತುಳುಕಾಡುತ್ತಿದ್ದ ನನ್ನ ಹೃದಯದ ಕಪಾಟಿನಲ್ಲಿ ನೀ ನನ್ನ ತೊರೆದಾಗಿನಿಂದ ಉಳಿದಿರೋದು ಮೌನವೊಂದೇ. ನೀನಂದು ಹಚ್ಚಿದ ಹಣತೆಯೂ ಆರಿದೆ. ನೀನಂದು ಗಟ್ಟಿಯಾಗಿ ತಬ್ಬಿಕೊಂಡು ನೀಡಿದ ಸಿಹಿಮುತ್ತು ಇಂದೇತಕೋ ಕಹಿಯಾಗುತ್ತಿದೆ. ನೀನಂದು ನನ್ನ ಕೈ ಮೇಲೆ ಕೈ ಇಟ್ಟು ಮಾಡಿದ ಆಣೆ ಪ್ರಮಾಣಗಳು ನೆನೆಗುದಿಗೆ ಬಿದ್ದು ಉಪಯೋಗಕ್ಕೆ ಬಾರದಾಗಿವೆ.

ನನ್ನ ಪತ್ರವಾಗಿರೋ ಪ್ರೀತಿಗೆ ನೀನು ಮುನ್ನುಡಿಯೂ ಆಗಲಿಲ್ಲ… ಬೆನ್ನುಡಿಯೂ ಆಗಲಿಲ್ಲ… ಬದುಕು ಕಟ್ಟಿಕೊಳ್ಳುವ ಆತುರದಲ್ಲಿ ನೀನು ಎಲ್ಲವನ್ನೂ ಮರೆತುಹೋದೆ. ಕಡಲ ತೀರದಲ್ಲಿ ಕುಳಿತು ಅಲೆಗಳನ್ನು ಲೆಕ್ಕಿಸುವ ಖಾಯಂ ಕೆಲಸವನ್ನು ಕೇಳದೇ ಹೋದರೂ ಕೊಟ್ಟು ಹೋದೆ. ರಾತ್ರಿಯ ಬಾನಂಗಳದಲ್ಲಿ ಫ‌ಳಫ‌ಳನೆ ಹೊಳೆಯುವ ನಕ್ಷತ್ರಗಳ ತಿಳಿ ಬೆಳಕಿನಲ್ಲಿ ಕಣ್ಣೀರ ಹನಿ ಹರಿಸುವ ಭಾವುಕ ಲೋಕಕ್ಕೆ ದಬ್ಬಿ ಹೋದೆ. ಇಷ್ಟು ದಿನ ಜೊತೆಗಿದ್ದು ಈಗ ಕೊಂಚವೂ ಕನಿಕರ ತೋರದೇ ಕಗ್ಗತ್ತಲಲ್ಲಿ ನನ್ನನ್ನು ಒಂಟಿಯಾಗಿ ಬಿಟ್ಟು ದೂರ ಹೋದೆ.

ನನ್ನ ಬದುಕಿನಲ್ಲಿ ನೀನು ಸದ್ದಿಲ್ಲದೆ ಸರಿದು ಹೋಗಿರುವೆ. ಬರಿದಾಗಿದ್ದ ಬಾಳಲ್ಲಿ ತಂಗಾಳಿಯಂತೆ ಬಂದು ಬಿರುಗಾಳಿಯಾಗಿ ಹೋದೆ. ನೀನೇತಕೆ ನನ್ನನ್ನು ತೊರೆದು ದೂರ ಸರಿದೆ ಎನ್ನುವ ಘೋರ ಪ್ರಶ್ನೆಯೊಂದಕ್ಕೆ ಉತ್ತರವೆಂದಿಗೂ ಸಿಗಲಾರದೆಂದು ಈ ಹುಚ್ಚು ಮನಸ್ಸಿಗೆ ಈಗ ಮನವರಿಕೆಯಾಗಿದೆ. ನಿನ್ನನ್ನು ಪ್ರೀತಿಸುವ ಯೋಗ್ಯತೆಯೂ ನನಗಿಲ್ಲ. ನಿನ್ನೊಂದಿಗೆ ಪ್ರೀತಿ ಹಂಚಿಕೊಳ್ಳುವ ಪಾಲುದಾರಿಕೆಯನ್ನು ಕಳೆದುಕೊಂಡಿರುವೆ. 

ಆದರೆ ನಿನ್ನನ್ನು ಕಣ್ತುಂಬ ನೋಡಿ…. ಮನಸ್‌ ತುಂಬ ತುಂಬಿಕೊಳ್ಳಬೇಕೆಂಬ ಬಯಕೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಎಲ್ಲೇ ಇರು…. ಹೇಗೇ ಇರು… ಎಂದೆಂದಿಗೂ ನಗುನಗುತ್ತಾ ನೂರು ಕಾಲ ಸುಖವಾಗಿರೆಂದು ತುಂಬು ಹೃದಯದಿಂದ ಹಾರೈಸುತ್ತೇನೆ. ನಿನಗೆ ನಾನು ಬೇಡವಾಗಿರೋನು… ಇನ್ನುಮುಂದೆ ಕನಸು ಮನಸಲ್ಲೂ ನನ್ನನ್ನು ನೆನಪಿಸಿಕೊಳ್ಳಬೇಡ.
                                                                                      ಇಂತಿ ನಿನ್ನ ಸುಖಾಭಿಲಾಷಿ

– ರಂಗನಾಥ ಎಸ್‌. ಗುಡಿಮನಿ, ಬಾಗಲಕೋಟ

ಟಾಪ್ ನ್ಯೂಸ್

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.