ಸ್ಮೈಲ್‌ ಜೊತೆಗೆ ಫೋನ್‌ ನಂಬರನ್ನೂ ಕೊಡಬಾರದಿತ್ತಾ?


Team Udayavani, Feb 26, 2019, 12:30 AM IST

x-7.jpg

ನನ್ನ ಎಲ್ಲ ಅಪ್ಲಿಕೇಷನ್‌ಗಳನ್ನು ರಿಜೆಕ್ಟ್ ಮಾಡುತ್ತಿದ್ದ ದೇವರು, ಅವತ್ಯಾಕೋ ನನ್ನ ಮೇಲೆ ಕರುಣೆ ತೋರಿಬಿಟ್ಟ. ಅವಳು ನನ್ನ ಪಕ್ಕದ ಸೀಟ್‌ನಲ್ಲಿಯೇ ಬಂದು ಕುಳಿತಳು. 

ಆಹಾ, ಆವತ್ತು ಯಾರ ಮುಖ ನೋಡ್ಕೊಂಡು ಬಸ್‌ ಹತ್ತಿದ್ದೊ, ಯಾವತ್ತೂ ಸಿಗದೇ ಇದ್ದ ಅದೃಷ್ಟ ಅವತ್ತು ಒಲಿದಿತ್ತು. 
ಬೆಂಗಳೂರಿನಿಂದ ಉತ್ತರ ಕರ್ನಾಟಕದ ಕಡೆಗೆ ಬರುವುದೇ ಒಂದು ದೊಡ್ಡ ಸಂತಸ. ಪ್ರಯಾಣದ ಮಧ್ಯೆ ಸಿಗುವ ಕೃಷ್ಣಾ , ಭೀಮಾ, ತುಂಗಭದ್ರಾ ನದಿಗಳನ್ನೆಲ್ಲ ಕಣ್ತುಂಬಿಕೊಳ್ಳೋ ಖುಷಿ ಒಂದೆಡೆಯಾದರೆ, ಜೀನ್ಸ್‌ಪ್ಯಾಂಟು ಟಿ-ಶರ್ಟ್‌, ಲಿಪ್‌ಸ್ಟಿಕ್‌ ಹಚ್ಚಿದ ಹುಡುಗಿಯರನ್ನು ನೋಡಿ ನೋಡಿ ಬೇಜಾರಾಗಿದ್ದ ಮನಸ್ಸಿಗೆ ಹಳ್ಳಿ ಹುಡುಗಿಯರನ್ನು ನೋಡುವ ಸಂಭ್ರಮ ಇನ್ನೊಂದೆಡೆ. 

ಬೆನ್ನಿಗೆ ಒಂದು ಬ್ಯಾಗ್‌ ಹಾಕ್ಕೊಂಡು ಬೆಳ್ಳಂಬೆಳಗ್ಗೆ ಯಾದಗಿರಿಯಲ್ಲಿ ಇಳಿದು, ಅಲ್ಲಿಂದ ನಮ್ಮೂರಿಗೆ ಹೋಗುವ ಬಸ್‌ ಹತ್ತಿದೆ. ಕೆಂಭಾವಿಗೆ ಟಿಕೆಟ್‌ ತೆಗೆಸಿ ಜೇಬಲ್ಲಿ ಇಡೋ ಅಷ್ಟರಲ್ಲಿ ಹಿಂದಿನಿಂದ ಯಾವುದೋ ಹುಡುಗಿ “ಗೋಗಿ’ ಅಂದ ಹಾಗಾಯ್ತು. ಅದು ನಮ್ಮೂರಿಗಿಂತ ಮೊದಲ ಬರುವ ಊರು. ಯಾರು ನೋಡೋಣ ಅಂತ ಹಿಂದೆ ತಿರುಗಿದ್ರೆ, ಹಾಲ್ಗೆನ್ನೆಯ ಸುಂದರಿ ನಿಂತಿದ್ದಳು. 

ದೇವರೇ, ನನ್ನ ಪಕ್ಕದ ಸೀಟ್‌ನಲ್ಲೇ ಆ ಹುಡುಗಿ ಬಂದು ಕುಳಿತುಕೊಳ್ಳಲಿ ಎಂದು ದೇವರಿಗೊಂದು ನಮಸ್ಕಾರ ಹಾಕಿದೆ. ನನ್ನ ಎಲ್ಲ ಅಪ್ಲಿಕೇಷನ್‌ಗಳನ್ನು ರಿಜೆಕ್ಟ್ ಮಾಡುತ್ತಿದ್ದ ದೇವರು, ಅವತ್ಯಾಕೋ ನನ್ನ ಮೇಲೆ ಕರುಣೆ ತೋರಿಬಿಟ್ಟ. ಅವಳು ನನ್ನ ಪಕ್ಕದ ಸೀಟ್‌ನಲ್ಲಿಯೇ ಬಂದು ಕುಳಿತಳು. 

ಮುದ್ದು ಮುಖಕ್ಕೆ ಆಗಲೇ ಮನಸೋತಿದ್ದ ನಾನು, ಅವಳ ಒಂದು ಮುಗುಳ್ನಗೆಗೆ ಕಾಯುತ್ತಿದ್ದ. ಒಂದೇ ಒಂದು ಸಲ ಸೆ¾„ಲ್‌ ಕೊಟ್ಟರೆ ಸಾಕು; ಮಾತಾಡಿಸಿ, ನಂಬರ್‌ ಕೇಳಿಬಿಡೋಣ ಅಂತ ಆಕೆಯತ್ತ ಕದ್ದುಮುಚ್ಚಿ ನೋಡುತ್ತಿದ್ದೆ. ಆಕೆಯ ಕಡೆಯಿಂದ ಸರಿಯಾದ ರಿಯಾಕ್ಷನ್‌ ಸಿಗಲಿಲ್ಲ. ಈ ಹುಡುಗಿಯ ಸಹವಾಸವೇ ಬೇಡ ಅಂತ ಅಲ್ಲಿಂದ ಎದ್ದು, ಲಾಸ್ಟ್‌ ಸೀಟ್‌ಗೆ ಬಂದು ಕುಳಿತೆ.  

ನನ್ನ ಪಾಡಿಗೆ ನಾನು ಕಿಟಕಿಯಾಚೆಗಿನ ಸೌಂದರ್ಯ ಸವಿಯುತ್ತಾ, ಇಯರ್‌ಫೋನ್‌ನಲ್ಲಿ ಹಾಡು ಕೇಳುತ್ತಾ ಕುಳಿತಿದ್ದೆ. ಅಷ್ಟರಲ್ಲಿ ಆಕೆಯ ಊರು ಬಂತು. ಛೇ, ಇಳಿದು ಹೋಗ್ತಾಳಲ್ಲ ಅಂತ ಬೇಜಾರಾಯ್ತು. ಬಸ್‌ನಿಂದ ಇಳಿಯಲು ಹಿಂದಿನ ಬಾಗಿಲಿನತ್ತ ಬಂದ ಆ ಹುಡುಗಿ, ನನ್ನೆಡೆಗೆ ಕಿರುನಗೆಯೊಂದನ್ನು ಎಸೆದು, ಇಳಿದು ಹೋದಳು! ನನಗೋ ಸ್ವರ್ಗ ರಪ್ಪಂತ ಕಣ್ಮುಂದೆ ಪಾಸಾದ ಹಾಗಾಯ್ತು! ಆದರೂ, ಡೌಟಾಗಿ ಅಕ್ಕಪಕ್ಕ ನೋಡಿದೆ. ಯಾರೂ ಇರಲಿಲ್ಲ. ಅಂದ್ರೆ, ಅವಳು ನನಗೇ ಸ್ಮೈಲ್‌ ಕೊಟ್ಟಿದ್ದು! ಚೆಲುವೇ, ಇಳಿಯುವ ಮೊದಲು ನಗುವಿನ ಜೊತೆಗೆ ನಂಬರ್‌ ಅನ್ನೂ ಕೊಡಬಾರದಿತ್ತೇನೇ? ಮತ್ತೆ ಯಾವಾಗ ಸಿಗ್ತಿàಯಾ ಹೇಳು? 

ವೀರೇಶ ಕೆಂಭಾವಿ, ಕಲಬುರಗಿ            
                                

ಟಾಪ್ ನ್ಯೂಸ್

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.