ಕೈ ಕೊಟ್ಟ ಹುಡುಗಿಯರೇ, ನಿಮಗೆ ಧನ್ಯವಾದ…!


Team Udayavani, Jun 11, 2019, 6:00 AM IST

b-10

ಗುಣ, ನಡತೆ, ಸೌಂದರ್ಯ, ಒಲವು-ನಿಲುವುಗಳೆಲ್ಲದರಲ್ಲೂ ನಿಮಗಿಂತಲೂ ಒಂದು ಕೈ ಮೇಲಿರುವ ಹುಡುಗಿ ಈಗ ನನ್ನ ಜೊತೆಯಾಗಿದ್ದಾಳೆ, ಬಾಳು ಬೆಳಗುತ್ತಿದ್ದಾಳೆ. ನಿಮ್ಮೆಲ್ಲರ ಹಾರೈಕೆಯ ಫ‌ಲವಿರಬಹುದೇನೋ; ಅದ್ಕೆ ಹೇಳ್ತಿದ್ದೀನಿ- ಥ್ಯಾಂಕ್ಸ್ ಕಣ್ರೆ!

ನನ್ನ ಜೀವನದಲ್ಲಿ ಹೀಗೆ ಬಂದು, ಹಾಗೆ ಹೋದ ಹುಡುಗಿಯರೇ, ಮತ್ತೆ ನಿಮ್ಮನ್ನು ನಾನು ನೆನಪಿಸಿಕೊಳ್ಳುತ್ತಿದ್ದೇನೆ. ದೂರಾದರೆಂಬ ಕೊರಗಿನಿಂದಾಗಲಿ, ಉಳಿಸಿ ಹೋದ ನೆನಪುಗಳಿಂದಾಗಲಿ ಅಲ್ಲ; ನನ್ನ ಭಾವಿ ಜೀವನಕ್ಕೆ ಕಾಟಾಚಾರಕ್ಕೋ, ಕೈ ಕೊಟ್ಟು ಹೋಗುತ್ತಿರುವ ಅಪರಾಧಿ ಪ್ರಜ್ಞೆಯಿಂದಲೋ, ಸಾಂತ್ವನದ ನುಡಿಯಾಗಿಯೋ, ಬದುಕಲು ಭರವಸೆ ತುಂಬಲೋ ಒಂದು ಸಾಲಿನಲ್ಲಿ ಹಾರೈಸಿದಿರಲ್ಲ, ಆ ಕಾರಣಕ್ಕೆ. ಅದಕ್ಕೆ ನಿಮಗೆಲ್ಲ ಧನ್ಯವಾದ ಹೇಳಬೇಕೆನಿಸುತ್ತಿದೆ!

ಆ ದಿನ ನೆನಪಿದೆಯಾ? ನಿಮ್ಮಿಂದ ದೂರವಾಗಿ ಜೀವನ ಪೂರ್ತಿ ನಿಮ್ಮ ಕೊರಗಲ್ಲೇ ಇರ್ತೀನೇನೋ ಅನ್ನೋ ದೂರಾಲೋಚನೆಯಿಂದ- “ಸಾರಿ ಕಣೋ, ನೀನೇನೂ ಯೋಚನೆ ಮಾಡಬೇಡ. ನಿನ್ನ ಮುಗ್ಧತೆ, ಒಳ್ಳೇತನ, ಪ್ರಾಮಾಣಿಕ ಪ್ರೀತಿಗೆ ಖಂಡಿತವಾಗಿಯೂ ನನಗಿಂಥ ಒಳ್ಳೇ ಹುಡುಗಿ ಸಿಕ್ಕೇ ಸಿಗ್ತಾಳೆ’ ಅಂತ ಹಾರೈಸಿದ್ದಿರಲ್ಲ, ಅದು ಈಗ ನಿಜವಾಗಿದೆ.

ಮೊದಲ ನೋಟದಲ್ಲೇ ಎದೆಯಲ್ಲಿ ಅಲ್ಲೋಲ-ಕಲ್ಲೋಲ ಎಬ್ಬಿಸಿದ್ದ ಕುಳ್ಳಿಯ ಲವಲವಿಕೆ, ನನಗೂ ನೋವಾಗದಂತೆ ತನಗೂ ಅಪರಾಧಿ ಭಾವ ಕಾಡದಂತೆ ಜಾಣ ಕಾರಣ ಹೇಳಿ ಜಾರಿಕೊಂಡ ಜಮುನಾಳ ಗುಳಿ ಕೆನ್ನೆ, ಇನ್ನೇನು ಮದುವೆ ಹಂತಕ್ಕೆ ಬಂದು ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ “ತಾಳಿದವನು ಬಾಳಿಯಾನು’ ಎಂದು ಕಾಯಿಸುತ್ತಲೇ ಸತಾಯಿಸಿದ ಸರಸ್ವತಿಯ ಸರಳತೆ, ನನ್ನ ಕವಿತ್ವವನ್ನು ಕೆಣಕಿ, ಕಾವ್ಯ ರಚನೆಗೆ ತಳ್ಳುತ್ತಿದ್ದ ಕಾವ್ಯಕನ್ನಿಕೆ ಕಮಲಾಳ ಕೋಮಲ ಮೈಮಾಟ, ಸೌಂದರ್ಯದ ಶಿಖರವೇ ಧರೆಗಿಳಿದಂತಿದ್ದ ಚೆಲುವೆ ಸನ್ಮತಿಯ ಸೌಂದರ್ಯ… ಎಲ್ಲವನ್ನೂ ತಾನೇ ಹೊತ್ತುಕೊಂಡು ನನಗಾಗಿಯೇ ಹುಟ್ಟಿದ ಚೆಲುವೆ ಈಗ ನನಗೆ ಸಿಕ್ಕಿದ್ದಾಳೆ; ದಕ್ಕಿದ್ದಾಳೆ.

ಹಳೆ ಹುಡುಗಿಯರೇ, ಗುಣ, ನಡತೆ, ಸೌಂದರ್ಯ, ಒಲವು-ನಿಲುವುಗಳೆಲ್ಲದರಲ್ಲೂ ನಿಮಗಿಂತಲೂ ಒಂದು ಕೈ ಮೇಲಿರುವ ಹುಡುಗಿ ಈಗ ನನ್ನ ಜೊತೆಯಾಗಿದ್ದಾಳೆ, ಬಾಳು ಬೆಳಗುತ್ತಿದ್ದಾಳೆ. ನಿಮ್ಮೆಲ್ಲರ ಹಾರೈಕೆಯ ಫ‌ಲವಿರಬಹುದೇನೋ; ಅದ್ಕೆ ಹೇಳ್ತಿದ್ದೀನಿ- ಥ್ಯಾಂಕ್ಸ್ ಕಣ್ರೆ!
ಇಂತಿ ನಿಮ್ಮವನಾಗದ

-ಅಶೋಕ ವಿ. ಬಳ್ಳಾ

ಟಾಪ್ ನ್ಯೂಸ್

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

1-eqewqe

JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.