ನೀ ಬಲು ದೊಡ್ಡ ಮಾಯಾವಿ


Team Udayavani, Nov 5, 2019, 3:45 AM IST

zz-9

ಇನ್ನೇನು ಮದುವೆ ಎಂಬ ಬಂಧನದಲ್ಲಿ ಬಂಧಿಯಾಗುವೆ ಎನ್ನುವ ಆಸೆಯೂ ತುದಿಗಾಲಿನಲ್ಲಿತ್ತು. ನನ್ನ ಬದುಕಿಗೆ ನೀ ಜೊತೆಗಾರನಾಗುವೆ ಅನ್ನೋ ಕನಸು ನನ್ನ ಕಣ್ಣ ತುಂಬ. ತಾಯಿಯ ಪ್ರೀತಿಯ ನಿನ್ನ ಅಮ್ಮನಲ್ಲಿ ಕಂಡೆ. ಆದರೆ ವಿಧಿಯು ನನ್ನ ಮುಂದೆ ತಿರುಗಿ ನಿಂತಿತ್ತು ಎಂದು ನನಗೆ ಅರಿವಿಗೇ ಬರಲೇ ಇಲ್ಲ.

ನನ್ನದು ರಂಗುರಂಗಿನ ಬದುಕು. ಕಣ್ಣ ತುಂಬಾ ಸಾವಿರ ಕನಸು, ತಾಳ್ಮೆಯೇ ನನಗಿರುವ ಬಹುದೊಡ್ಡ ಆಸ್ತಿ. ಜೀವನದ ಪ್ರತಿ ಹೆಜ್ಜೆಯಲ್ಲಿ ನಾನು ಒಂಟಿ. ತಂದೆ ತಾಯಿಯ ಪ್ರೀತಿಯಿಂದ ವಂಚಿತಳಾದವಳು. ಬಂಧುಗಳ ಆಸರೆಯೂ ಸಿಗಲಿಲ್ಲ. ಆದರೂ, ಅದು ಹೇಗೋ ಜೀವನದ ಹಾದಿ ಸಾಗುತ್ತಿತ್ತು. ಅಂಥ ಸಂದರ್ಭದಲ್ಲೇ ಒಂದೇ ಸಮನೆ ಸುರಿಯುವ ಮಳೆಯಂತೆ ನನ್ನ ಬದುಕಿನ ಅಂಗಳಕ್ಕೆ ನೀ ಲಗ್ಗೆ ಇಟ್ಟೆ. ಹಿಡಿ ಪ್ರೀತಿಗಾಗಿ ದಿನವೂ ಹಂಬಲಿಸಿದ್ದವಳಿಗೆ ನೀ ಕೈ ಚಾಚಿದಾಗ ಒಲ್ಲೆ ಎನ್ನುವ ಮನಸ್ಸು ಬರಲಿಲ್ಲ.

ಬದುಕಿನ ದಾರಿಯಲ್ಲಿ ಒಂಟಿಯಾಗಿ ಸಾಗುತ್ತಿದ್ದ ನನಗೆ ಒಂದು ಜೀವದ ಅವಶ್ಯಕತೆ ಇತ್ತು. ನೀ ಸಿಕ್ಕಾಗ ನನಗೆ ಇಷ್ಟು ವರ್ಷದ ಕಾಳಜಿ, ನಂಬಿಕೆ, ಸ್ನೇಹ, ಪ್ರೀತಿಯನ್ನು ನಿನ್ನಲ್ಲಾದರೂ ಕಾಣಬಹುದು ಎಂಬ ಹೆಬ್ಬಯಕೆ. ಒಂದಲ್ಲ, ಎರಡಲ್ಲ ಸುಮಾರು ಆರು ವರ್ಷಗಳು ಜೊತೆಯಾಗಿ ಸಾಗಿದೆವು.

ಇನ್ನೇನು ಮದುವೆ ಎಂಬ ಬಂಧನದಲ್ಲಿ ಬಂಧಿಯಾಗುವೆ ಎನ್ನುವ ಆಸೆಯೂ ತುದಿಗಾಲಿನಲ್ಲಿತ್ತು. ನನ್ನ ಬದುಕಿಗೆ ನೀ ಜೊತೆಗಾರನಾಗುವೆ ಅನ್ನೋ ಕನಸು ನನ್ನ ಕಣ್ಣ ತುಂಬ. ತಾಯಿಯ ಪ್ರೀತಿಯ ನಿನ್ನ ಅಮ್ಮನಲ್ಲಿ ಕಂಡೆ. ಆದರೆ ವಿಧಿಯು ನನ್ನ ಮುಂದೆ ತಿರುಗಿ ನಿಂತಿತ್ತು ಎಂದು ನನಗೆ ಅರಿವಿಗೇ ಬರಲೇ ಇಲ್ಲ. ಬದುಕಿನಲ್ಲಿ ಎಲ್ಲರೂ ಸಿಕ್ಕರು ಎಂದುಕೊಳ್ಳುವಷ್ಟರಲ್ಲಿ ನೀನು ನಿನ್ನವರು ನನಗರಿವಿಲ್ಲದೇನೇ ದೂರವಾಗಲು ತುದಿಗಾಲಲ್ಲಿ ನಿಂತಿದ್ದಿರಿ. ಕಾಲ ಕಳೆದ ಹಾಗೆ ನಾನು ನಿನ್ನ ಮನೆಯವರಿಗೆ ಬೇಡವಾದೆ ಅಲ್ವಾ?

ನನ್ನ ಬದುಕಿನಲ್ಲಿ ಸಂಬಂಧದ ಕೊರತೆ ಇಂಚಿಂಚು ಕಾಡಿದ್ದನ್ನು ಬಿಟ್ಟರೆ, ದುಡ್ಡಿಗೇನೂ ಕೊರತೆ ಇಲ್ಲವಾಗಿತ್ತು. ಕೈ ತುಂಬ ಸಂಬಳ ಸಿಗುವ ಕೆಲಸ. ಆದರೆ, ಬದುಕಲ್ಲಿ ಹಣವೇ ಎಲ್ಲವೂ ಅಲ್ಲವಲ್ಲ; ಹಣಕ್ಕಾಗಿ ನಾನು ಆಸೆ ಪಟ್ಟವಳೂ ಅಲ್ಲವಲ್ಲ… ನಾನು ಬಯಸಿದ್ದು ಪ್ರೀತಿ ಮತ್ತು ವಾತ್ಸಲ್ಯ, ಪ್ರೀತಿ ಮತ್ತು ಬಾಂಧವ್ಯ. ಪ್ರೀತಿ ಮತ್ತು ಪರಿಣಯ. ಆದರೆ, ನನಗೆ ಅದು ಸಿಗಲೇ ಇಲ್ಲ.

ಇವತ್ತಿಗೂ ನಿನ್ನ ಪ್ರೀತಿಯ ಸೋನೆ ಮಳೆ ಮತ್ತೆ ಬೀಳಬಹುದೆಂಬ ನಿರೀಕ್ಷೆ ಎನಗೆ.
ನನ್ನ ಕನಸಿನ ಮಹಾಪೂರ ಒಡೆದು ಚೂರಾಗಿದೆ, ಜೋಡಿಸುವ ಮನಸ್ಸು ನನಗೆ ಇಲ್ಲ. ನೀ ಬಂದರೆ ಮಾತ್ರ, ಬಾಳಿನ ಈ ರೈಲು ಸುಲಭವಾಗಿ ಸಾಗಬಹುದು. ಇಲ್ಲದಿದ್ದರೆ, ಒಂಟಿ ಹೆಜ್ಜೆಯಿಟ್ಟು ಯಾರ ಹಂಗಿಲ್ಲದೇ ಸಾಗುವಳು ನಾನು…

ಸಾಯಿನಂದಾ ಚಿಟ್ಪಾಡಿ

ಟಾಪ್ ನ್ಯೂಸ್

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.