ಯೂಟ್ಯೂಬ್‌ ಟೀಚರ್‌


Team Udayavani, Oct 24, 2017, 9:52 AM IST

24-24.jpg

ಯಾವುದೇ ಐಎಎಸ್‌- ಕೆಎಎಸ್‌ ಟಾಪರ್‌ಗಳನ್ನು ನೀವು “ನಿಮ್ಮ ಸಕ್ಸಸ್ಸಿನ ಗುಟ್ಟೇನು?’ ಅಂತ ಕೇಳಿ. ಅವರಲ್ಲಿ ಬಹುತೇರು ಯೂ ಟ್ಯೂಬ್‌ನ ಪ್ರಸ್ತಾಪ ಮಾಡಿಯೇ ಮಾಡುತ್ತಾರೆ. ಆದರೆ, ಕೇವಲ ಲೋಕ ಸೇವಾ ಆಯೋಗ ಪರೀಕ್ಷೆಗಷ್ಟೇ ಅಲ್ಲ. ಬೇರೆ ಬೇರೆ ತರಗತಿಗಳ ಪಾಠಗಳೂ ಯೂ ಟ್ಯೂಬ್‌ನ ಬುಟ್ಟಿಯಲ್ಲಿವೆ…

ಯುವಕರಿಗೆ ಯೂಟ್ಯೂಬ್‌ ಆನ್ನೋದು ಒಂದು ಟಾಕೀಸು. ಹೊಚ್ಚ ಹೊಸ ಸಿನಿಮಾದ ಟ್ರೈಲರು, ರಂಜಿಸುವ ಹಾಡುಗಳು, ಮನ ತಣಿವ ಸಿನಿಮಾಗಳು- ಇವುಗಳಿಗೆ ಅವರ ಮೊದಲ ಆದ್ಯತೆ. ಅದು ಬಿಟ್ಟರೆ ಹಾಸ್ಯದ ವಿಡಿಯೋಗಳನ್ನು ನೋಡಿ ಅನೇಕರು “ಹೊಟ್ಟೆ’ ತುಂಬಿಸಿಕೊಳ್ಳುವುದುಂಟು! ಆದರೆ, ಯೂ ಟ್ಯೂಬ್‌ ಅನ್ನು ಮನರಂಜನೆಯ ವಾಹಿನಿಯಾಗಿ ನೋಡುವುದಕ್ಕಿಂತ, ಟೀಚರ್‌ ಆಗಿ, ಗೈಡ್‌ ಆಗಿ ನೋಡಿದರೆ, ಮುಂದೊಂದು ದಿನ ಯಶಸ್ಸೊಂದು ನಿಮ್ಮನ್ನು ಎವರೆಸ್ಟ್‌ಗೆ ಏರಿಸುತ್ತೆ! ನೀವು ಬೇಕಾದರೆ, ಯಾವುದೇ ಐಎಎಸ್‌- ಕೆಎಎಸ್‌ ಟಾಪರ್‌ಗಳನ್ನು ನೀವು “ನಿಮ್ಮ ಸಕ್ಸಸ್ಸಿನ ಗುಟ್ಟೇನು?’ ಅಂತ ಕೇಳಿ. ಅವರಲ್ಲಿ ಬಹುತೇಕರು ಯೂಟ್ಯೂಬ್‌ನ ಪ್ರಸ್ತಾಪ ಮಾಡಿಯೇ ಮಾಡುತ್ತಾರೆ. ಆದರೆ, ಕೇವಲ ಲೋಕಸೇವಾ ಆಯೋಗ ಪರೀಕ್ಷೆಗಷ್ಟೇ ಅಲ್ಲ. ಬೇರೆ ಬೇರೆ ತರಗತಿಗಳ ಪಾಠಗಳೂ  ಯೂಟ್ಯೂಬ್‌ನ ಬುಟ್ಟಿಯಲ್ಲಿವೆ.

1.  ಅನ್‌ ಅಕಾಡೆಮಿ
ಬಹುತೇಕ ಐಎಎಸ್‌ ಟಾಪರ್‌ಗಳಿಗೆ ಈ ಚಾನೆಲ್‌, ರ್‍ಯಾಂಕ್‌ ಹೊಂದಲು ನೆರವಾಗಿದೆ. ರೋಮನ್‌ ಸೈನಿ ಮತ್ತು ಗೌರವ್‌ ಮಂಜಾಲ್‌ ಎಂಬವರು ಐಎಎಸ್‌ ಪರೀಕ್ಷೆಯನ್ನು ಮುಂದಿಟ್ಟುಕೊಂಡೇ ಈ ಚಾನೆಲ್‌ ಆರಂಭಿಸಿದರು. ಇತಿಹಾಸ, ಗಣಿತ, ವಿಜ್ಞಾನ, ಅರ್ಥಶಾಸ್ತ್ರಗಳಿಂದ ಹಿಡಿದು ಸಾಮಾನ್ಯ ಜ್ಞಾನದ ಮಾಹಿತಿ ನೀಡುವ ಹಲವು ವಿಡಿಯೋಗಳು ಇಲ್ಲಿವೆ.  
ಸಬ್  ಸ್ಕ್ರೈಬ್: 11.15 ಲಕ್ಷ

2. ಟ್ಯುಟೋರ್‌ ವಿಸ್ತಾ
ಇದು ಆನ್‌ಲೈನ್‌ ಟ್ಯೂಶನ್‌ ಸಂಸ್ಥೆ. ಶಿಕ್ಷಣಕ್ಕೆ ಸಂಬಂಧಿಸಿದ ಗುಣಮಟ್ಟದ ವಿಡಿಯೋಗಳನ್ನು ಚಾನೆಲ್‌ ಮೂಲಕ ತಲುಪಿಸುತ್ತಿದೆ. ಒಟ್ಟಾರೆ 2 ಸಾವಿರ ಶಿಕ್ಷಕರು ಇಲ್ಲಿ ತರಗತಿ ನಡೆಸುತ್ತಾರೆ. 60 ಲಕ್ಷ ವೀಕ್ಷಣೆ ಪಡೆದಿರುವ ಈ ಚಾನೆಲ್‌, ಸಾಕಷ್ಟು ವಿದ್ಯಾರ್ಥಿಗಳಲ್ಲಿ ಭರವಸೆ ಮೂಡಿಸಿದೆ. ಗಣಿತ, ವಿಜ್ಞಾನ ಪಾಠಗಳು ಈ ಚಾನೆಲ್‌ನ ಹೈಲೈ ಟ್‌. 
ಸಬ್  ಸ್ಕ್ರೈಬ್: 88,950

3. ಮೆರಿಟ್‌ನೇಶನ್‌
1ರಿಂದ 12 ತರಗತಿಯ ವಿದ್ಯಾರ್ಥಿಗಳಿಗೆ ಅತ್ಯುಪಯುಕ್ತ ಚಾನೆಲ್‌ ಇದು. ಮೆರಿಟ್‌ನೇಶನ್‌ ಕೂಡ ಗಣಿತ, ವಿಜ್ಞಾನಕ್ಕೆ ಹೆಚ್ಚು ಜನಪ್ರಿಯ. ಈ ಚಾನೆಲ್‌ ಆರಂಭವಾಗಿ ಕೇವಲ ಒಂದು ವರುಷವಾಗಿದ್ದರೂ, ದೇಶದಾದ್ಯಂತ ಸಾಕಷ್ಟು ವಿದ್ಯಾರ್ಥಿಗಳು ತಮ್ಮ ಯಶಸ್ಸಿನ ಹಾದಿಯಲ್ಲಿ ಇದನ್ನು ನೆನೆಸಿಕೊಳ್ಳುತ್ತಿದ್ದಾರೆ.
ಸಬ್  ಸ್ಕ್ರೈಬ್: 29,100

4. ದಿಕ್ಯೂರಿಯಸ್‌ ಎಂಜಿನಿಯರ್‌
ಓಂಕಾರ್‌ ಭಗತ್‌ ಎಂಬ ಕಂಪ್ಯೂಟರ್‌ ಎಂಜಿನಿಯರ್‌ ವಿದ್ಯಾರ್ಥಿ ಆರಂಭಿಸಿದ ಈ ಚಾನೆಲ್‌ ಅನ್ನು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಹೆಚ್ಚು ಇಷ್ಟಪಡುತ್ತಾರೆ. ಎಂಜಿನಿಯರಿಂಗ್‌ ಪದವಿ ಮೇಲಿರುವ ಮಿಥ್‌ಗಳನ್ನು ಹೇಳುವುದರೊಂದಿಗೆ, ವಿಡಿಯೋ ಮೂಲಕ ಸರವಾಗಿ ಪಾಠಗಳನ್ನು ಕಲಿಸುತ್ತದೆ.
ಸಬ್  ಸ್ಕ್ರೈಬ್: 72,510

5. ಅರುಣ್‌ ಕುಮಾರ್‌
ಇಲ್ಲು ಸ್ಟ್ರೇಟರ್‌ ಟ್ಯುಟೋರಿಯಲ್‌ ಅಂತಲೇ ಈ ಚಾನೆಲ್‌ ಜನಪ್ರಿಯ. ಅಲ್ಲದೇ, ಫೋಟೋಶಾಪ್‌ ಬಳಸಿ ಕೊಂಡು, ಹಲವು ವಿನ್ಯಾಸಗಳ ಮೂಲಕ ಪಠ್ಯವನ್ನು ತಲುಪಿಸುತ್ತದೆ.  ”ನೆನಪಿನಲ್ಲಿ ಉಳಿಯುವಂಥ ಮಾದರಿಗಳಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ’ ಎನ್ನುತ್ತಾರೆ ಈ ಚಾನೆಲ್‌ ಮುಖ್ಯಸ್ಥ ಅರುಣ್‌ ಕುಮಾರ್‌.
ಸಬ್  ಸ್ಕ್ರೈಬ್: 4 ಲಕ್ಷ

6. 7 ಆ್ಯಕ್ಟಿವ್‌ ಸ್ಟುಡಿಯೋ
ಇದು ಇತರೆ ಚಾನೆಲ್‌ಗಳಿಗಿಂತ ತುಸು ಭಿನ್ನ. ಆಯಾ ಕಾಲೇಜು, ವಿದ್ಯಾರ್ಥಿಗಳಿಗೆ ಬೇಡಿಕೆಗೆ ಅನುಗುಣವಾಗಿ ಅಗತ್ಯವಿರುವ ವಿಡಿಯೋಗಳನ್ನು ವಿನ್ಯಾಸಿಸುತ್ತದೆ. 3ಡಿ ಎಫೆಕ್ಟ್ನಲ್ಲಿರುವ ಈ ವಿಡಿಯೋಗಳು 2.5ಕೋಟಿ ವೀಕ್ಷಣೆ ಪಡೆದು ದಾಖಲೆ ನಿರ್ಮಿಸಿವೆ.
ಸಬ್  ಸ್ಕ್ರೈಬ್: 1.11 ಲಕ್ಷ

ಟಾಪ್ ನ್ಯೂಸ್

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.