ನಿನ್ನದೇ ದನಿಯಿದೆ ಮಳೆಯ ಹನಿಯಲಿ…


Team Udayavani, Sep 19, 2017, 3:10 PM IST

19-JOSH-9.jpg

ನೀ ಸಿಗುತ್ತೀಯೋ ಇಲ್ಲವೋ ಅನ್ನೋ ಯೋಚನೆಯನ್ನು ನಾನು ಯಾವತ್ತೂ ಮಾಡಿಲ್ಲ. ಯಾಕೆಂದರೆ ಒಂದು ಚಂದದ ನೆನಪನ್ನು ಯೋಚನೆಗಳ ಆಯುಧದಿಂದ, ಯೋಜನೆಗಳ ಚೂಪಿನಿಂದ ಇರಿಯಲಾರೆ. 

ಉದ್ದ ಜಡೆಯ ಹುಡುಗಿ,
ನನ್ನ ದಾಟಿ ಹೋಗಿ ಯಾಕೆ ಒಮ್ಮೆ ತಿರುಗಿ ನೋಡಿದೆ ಹಾಗೆ, ನನ್ನ ಜೀವವೇ ನವಿರಾಗಿ ಕಂಪಿಸುವ ಹಾಗೆ. ನನಗೇ ಅರಿವಿಲ್ಲದೆ ನಡೆದುಹೋದ ಈ ಘಟನೆ. ಮತ್ತೆ ಮತ್ತೆ ಘಟಿಸಲಿ ಅಂತ ಮುಗಿಯದ ಹಂಬಲ ಒಳಗೊಳಗೇ ಬೆಳೆಯುತ್ತಲೇ ಇದೆ. ಕೆನ್ನೆ ನುಣುಪು, ಕಣ್ಣ ಹೊಳಪು, ನಿಂತ ಭಂಗಿ , ನಡೆವ ಲಯ, ನಕ್ಕಾಗ ಗುಳಿ ಬೀಳುವ ಗಲ್ಲ, ಸಂಭ್ರಮದ ಒಡ್ಡೋಲಗ ನಡೆಸುವ ಕಂಗಳು. ಗಾಳಿಯಲ್ಲಿ ಜಾಲಿಯಾಗಿ ಹಾರುವ ಲಿಂಬೆ ಬಣ್ಣದ ನಿನ್ನ ಪಲ್ಲು, ನಿನ್ನ ಹಿಂದೆ ಹೆಜ್ಜೆಗೆ ಹೆಜ್ಜೆ ಇಟ್ಟು ನಡೆಯುವ ಆಮೋದ. ಆ ಘಳಿಗೆಯಲ್ಲಿ ನೀ ಒಮ್ಮೆಯಾದರೂ ತಿರುಗಿ ನೋಡಬಾರದೇ ಎಂದು ಉದ್ವಿಗ್ನಗೊಳ್ಳೋ ಮನಸ್ಸು. ಎಲ್ಲಿ ತಿರುಗಿ ನೋಡಿ ಬಿಡುತ್ತೇನೋ ಅನ್ನೋ ನಿನ್ನೊಳಗಿನ ದಿಗಿಲು. ನೋಡದೇ ಹೋದರೆ ಮತ್ತೆ ಕಾಣುತ್ತಾನೋ ಇಲ್ಲವೋ ಅನ್ನೋ ನಿನ್ನೊಳಗಿನ ಹಳಹಳಿಕೆ. ಯಾವ ಮಾತೂ ಇಲ್ಲದೇ ಬಿಗುಮಾನದ ಸೇತುವೆ ದಾಟಿದ ಆ ಮೌನದಾಟ.

ನನ್ನೊಳಗೆ ಸಾವಿರ ಮಾತುಗಳಿವೆ, ನಿನ್ನೊಳಗಿರುವಂತೆಯೇ. ಆದರೆ ತಾಳ್ಮೆ ನನಗೆ ಕಲಿಸಿದ ಮೊದಲ ಪಾಠವೆಂದರೆ, ನಿನ್ನ ಮೌನವನ್ನು ನನ್ನೊಳಗೇ ನಾನೇ ಹಾಡಿಕೊಳ್ಳುವುದು. ಅದೊಂದು ಹಿತದ ಅನುಭವ ಕಣೇ ಹುಡುಗಿ. ಅಲ್ಲೆಲ್ಲೋ ಒಬ್ಬಂಟಿಯಾಗಿ ಕಾಡೊಳಗೆ ಅಲೆವಾಗ, ಥಟ್ಟನೆ ನಿನ್ನ ನೆನಪು . ಆ ಕಾಡೊಳಗೆ ಅನಾಮಿಕ ಸುಂದರ ಹೂವಿಗೆ ನಿನ್ನದೇ ಹೆಸರಿಟ್ಟು ಕೂಗಿದರೆ, ತಂಗಾಳಿಯಲ್ಲಿ ಅದರ ಪರಿಮಳ ತೇಲಿ ಬಂದು ನನ್ನ ಕರೆಗೆ ಓಗೊಡುತ್ತದೆ.

ನಿನ್ನದೇ ದನಿಯಿದೆ ಮಳೆಯ ಹನಿಯಲಿ!
ಕೇಳುತಾ ನಿಂತೆನು ಸುಮ್ಮನೆ ಬಯಲಲಿ !!
ನಿನ್ನ ನೆನಪುಗಳ ಮಳೆಯ ಹೊಳೆಯಲಿ, ನನ್ನ ಇರುಳುಗಳ ಕಾಗದದ ದೋಣಿ ತೇಲಿ, ದಿಕ್ಕು ದೆಸೆಗಳ ಪರಿವಿಲ್ಲದೇ ನೀ ಹರಿದತ್ತ ನನ್ನ ಪಯಣ. ತುಂಬಾ ಪ್ಲಾನ್‌ ಮಾಡಿ ಬದುಕುವ ಬದುಕು ತುಂಬಾ ಬೋರಿಂಗ್‌ ಅಂತ ಅನ್ಸಿದ್ದು, ಅವತ್ತು ತಟ್ಟನೆ ನೀ ಎದುರಿಗೆ ಬಂದು ನನ್ನ ದಾಟಿ ನಾಲ್ಕು ಹೆಜ್ಜೆ ಹೋಗಿ ಒಮ್ಮೆ ತಿರುಗಿ ನೋಡಿ, ನನ್ನ ಚಿತ್ತಭಿತ್ತಿಯ ಚಿತ್ರವಾಗಿ ಹೋದೆಯಲ್ಲ ಅವತ್ತೇ. ಅನೂಹ್ಯತೆಯಲ್ಲಿ ಧಕ್ಕುವ ಅಪ್ಯಾಯಮಾನತೆ ಕೊಡುವ ಸಂಭ್ರಮಕ್ಕೆ ಮುಪ್ಪೇ ಕಾಡುವುದಿಲ್ಲ. ಅದರ ನೆನಪೂ ಕೂಡ ನಿತ್ಯ ನೂತನ. ಹೀಗಾಗಿ ನಾನೀಗ ನೆನಪುಗಳ ಆಟಿಕೆಯ ಮುಂದೆ ಕೂತ ಮಗುವಾಗಿದ್ದೇನೆ. ಲೋಕದ ನಂಟಿನ ಜಂಜಡದಿಂದ ನನ್ನನ್ನ ಪಾರು ಮಾಡಿ, ನನ್ನ ಏಕಾಂತದ ಕ್ಯಾನ್ವಾಸಿನ ಏಕೈಕ ಚಿತ್ರವಾದ ನಿನಗೆ ಎಷ್ಟು ಥ್ಯಾಂಕ್ಸ್  ಹೇಳಿದರೂ ಕಡಿಮೆಯೇ. ನೀ ಸಿಗುತ್ತೀಯೋ ಇಲ್ಲವೋ ಅನ್ನೋ ಯೋಚನೆಯನ್ನು ನಾನು ಯಾವತ್ತೂ ಮಾಡಿಲ್ಲ. ಯಾಕೆಂದರೆ ಒಂದು ಚಂದದ ನೆನಪನ್ನು ಯೋಚನೆಗಳ ಆಯುಧದಿಂದ, ಯೋಜನೆಗಳ ಚೂಪಿನಿಂದ ಇರಿಯಲಾರೆ. ಈ ಬದುಕಿಗೆ ಇಷ್ಟೇ ಸಾಕು. 

ಸದಾ ನಿನ್ನ ನೆನಪಿನಲ್ಲಿರುವ ಹುಡುಗ
 ಜೀವ ಮುಳ್ಳೂರು

ಟಾಪ್ ನ್ಯೂಸ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.