ಗಗನದಲಿ ಒಂದು ದಿನ…


Team Udayavani, Oct 3, 2019, 9:50 AM IST

x-51

ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇರುವುದಿಲ್ಲ. ಮನುಷ್ಯನ ದೇಹ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಯಂತ್ರಗಳ ರಿಪೇರಿ ಹಾಗೂ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವ ಸಲುವಾಗಿ ವಾರಗಳ ಕಾಲ, ತಿಂಗಳುಗಳ ಕಾಲ ಗಗನಯಾತ್ರಿಗಳು ಅಂತರಿಕ್ಷದಲ್ಲಿ ನೆಲೆಗೊಂಡಿರುವ, ಬಾಹ್ಯಾಕಾಶ ನಿಲ್ದಾಣದಲ್ಲಿ ನೆಲೆಸುತ್ತಾರೆ. ಒಳಗೆ ಆಮ್ಲಜನಕವೇನೋ ಇರುತ್ತದೆ. ಆದರೆ, ಅಲ್ಲಿ ಅಷ್ಟು ದೀರ್ಘ‌ಕಾಲ ಅವರ ದಿನನಿತ್ಯದ ಚಟುವಟಿಕೆಗಳು ಹೇಗಿರುತ್ತವೆ, ಊಟ ತಿಂಡಿ, ನಿತ್ಯಕರ್ಮಗಳ ಹೇಗೆ ಸಾಗುತ್ತವೆ ಎಂಬುದು ಕುತೂಹಲದ ವಿಷಯ.

1 ಹಲ್ಲುಜ್ಜುವುದು
ಭೂಮಿಯಲ್ಲಿ ಇರುವ ತರಹವೇ ಇಲ್ಲಿಯೂ ಬ್ರಷ್‌ ಮತ್ತು ಟೂತ್‌ಪೇಸ್ಟ್ ಇದ್ದು ಗಗನಯಾತ್ರಿಗಳು ಹಲ್ಲುಜ್ಜುತ್ತಾರೆ. ಆದರೆ ಉಗುಳಲು ಸಿಂಕ್‌ ಇರುವುದಿಲ್ಲ! ಉಗುಳಿದರೆ ಅದು ತೇಲತೊಡಗುತ್ತೆ! ಅದಕ್ಕಾಗಿ ಕೆಲವರು ಅದನ್ನು ನುಂಗಿ ಬಿಟ್ಟರೆ ಇನ್ನು ಕೆಲವರು ಅದನ್ನು ಟಿಶ್ಯೂ ಪೇಪರಿನಲ್ಲಿ ಉಗುಳಿ (ತೆಗೆದು!) ಪೇಪರನ್ನು ವಿಸರ್ಜಿಸುತ್ತಾರೆ!

2 ನಿತ್ಯಕರ್ಮ
ಈ ಅತಿ ಮುಖ್ಯವಾದ ಕೆಲಸವನ್ನು ಪೂರೈಸಲು ಬಾಹ್ಯಾಕಾಶ ನೌಕೆಯಲ್ಲಿ ಒಂದು ಚಿಕ್ಕ ಕೋಣೆಯನ್ನು ಮೀಸಲಿಟ್ಟಿರುತ್ತಾರೆ. ಇದರಲ್ಲಿ ಮಲವಿಸರ್ಜನೆಗೆ ಚಿಕ್ಕ ಕಮೋಡ್‌ ಇದ್ದು ಅದಕ್ಕೆ ಸಕ್ಷನ್‌ ಪಂಪ್‌ ಅನ್ನು ಅಳವಡಿಸಿರುತ್ತಾರೆ. ಮೂತ್ರ ವಿಸರ್ಜನೆಗೆ ಒಂದು ಬೇರೆಯದೇ ಪೈಪ್‌ ವ್ಯವಸ್ಥೆಯಿದ್ದು ಇದನ್ನು ದೇಹದ ಮೂತ್ರದ್ವಾರಕ್ಕೆ ಸರಿಯಾಗಿ ಹೊಂದಿಸಿ ಹಿಡಿಯಬೇಕು. ಇದಕ್ಕೂ ಕೂಡ ಸಕ್ಷನ್‌ ಪಂಪ್‌ ಅಳವಡಿಕೆ ಇರುವುದರಿಂದ ವಿಸರ್ಜಿಸಿದ ಮೂತ್ರ ಪೈಪಿನಿಂದ ಮತ್ತೆ ಹೊರಬರುವುದನ್ನು ತಡೆಯುತ್ತದೆ! ಕೈ ತೊಳೆಯಲು ವೆಟ್‌ ವೈಪ್ಸ… (ಹಸಿಯಾದ ಟಿಶ್ಯೂ ಪೇರ್ಪ) ಅನ್ನು ಉಪಯೋಗಿಸಿದರೆ ಮುಗಿಯಿತು!

3 ಸ್ನಾನ
ನೀರು ಮೈ ಮೇಲೆ ಸುರಿದುಕೊಂಡರೂ ಅದು ಗಾಳಿಯಲ್ಲಿ ತೇಲುವುದರಿಂದ ಇಲ್ಲಿಯ ಸ್ನಾನ ಬೇರೆ ರೀತಿಯೇ ಇರುತ್ತದೆ. ಒಂದು ಟವೆಲ್ಲಿನ ಮೇಲೆ ನೀರಿನ ಪೌಚ್‌ (ನೀರಿನ ಪ್ಯಾಕೆಟ್‌ ಗೆ ಒಂದು ಪೈಪ್‌ ಅಳವಡಿಸಿ ಅದರ ಮೂತಿಗೆ ಮುಚ್ಚಳವನ್ನು ಹಾಕಿ, ಅದನ್ನು ತೆಗೆಯುವ ಅವಕಾಶ ನೀಡಿರುತ್ತಾರೆ. ಇದರಿಂದ ಎಷ್ಟು ಬೇಕೋ ಅಷ್ಟು ಮಾತ್ರ ನೀರನ್ನು ಹಿಸುಕಿ ಹೊರತೆಗೆಯಲು ಅನುಕೂಲವಾಗುತ್ತದೆ!)ನಿಂದ ನೀರನ್ನು ಹಿಸುಕಿ ಟವೆಲ್ಲನ್ನೆಲ್ಲ ಒ¨ªೆ ಮಾಡಿ ಬಳಸುತ್ತಾರೆ. ದ್ರವರೂಪದಲ್ಲಿರುವ ಸಾಬೂನು ಅಥವಾ ಶಾರ್ವ ಜೆಲ್ಲನ್ನು ಅದೇ ಒ¨ªೆಯಾದ ಟವೆಲ್‌ ಗೆ ಹಾಕಿ ಆ ಟವೆಲ್‌ ನಿಂದ ಮೈಯನ್ನು ಒರೆಸಿಕೊಂಡರೆ ಸ್ನಾನ ಮುಗಿದಂತೆ. ತಲೆಗೂದಲನ್ನು ಶುಚಿಗೊಳಿಸುವಾಗಲೂ ನೊರೆ ಬಾರದ ವಿಶೇಷ ಶ್ಯಾಂಪೂವನ್ನು ನೀಡುತ್ತಾರೆ.

4 ಊಟ
ಇಲ್ಲಿ ಅನ್ನ ಸಾರು ಕಲಸಿ ತಿನ್ನುವ ದೃಶ್ಯವೇ ಕಾಣುವುದಿಲ್ಲ. ಏಕೆಂದರೆ ಎಲ್ಲವೂ ಗಾಳಿಯಲ್ಲಿ ತೇಲುವುದು ಖಚಿತ. ಅದಕ್ಕಾಗಿಯೇ ಹೆಚ್ಚಿನ ಆಹಾರ ಪದಾರ್ಥಗಳನ್ನು ವಿಶೇಷ ಪ್ಯಾಕೆಟ್‌ ನಲ್ಲಿ ಪ್ಯಾಕ್‌ ಮಾಡಿರುತ್ತಾರೆ. ಈ ಪ್ಯಾಕುಗಳನ್ನು ಕತ್ತರಿಸಲು ಬಳಸುವ ಕತ್ತರಿ/ಚಾಕು ಮುಂತಾದವುಗಳನ್ನು ಒಂದು ಬೋರ್ಡ್‌ ಗೆ ತಂತಿಯಿಂದ ಬಿಗಿದಿರುತ್ತಾರೆ. ಈ ಆಹಾರದ ಪ್ಯಾಕೆಟ್‌ಗಳನ್ನು ಕತ್ತರಿಸಿ ತುದಿಯನ್ನು ನೇರವಾಗಿ ಬಾಯೊಳಗೆ ಹಾಕಿಕೊಳ್ಳಬಹುದು. ಇದೇ ತರಹ ನೀರನ್ನು ಸಹ ಕುಡಿಯುತ್ತಾರೆ. ಈ ಆಹಾರವನ್ನು ತಯಾರಿಸಲು ವಿಶೇಷ ಪರಿಣಿತಿ ಪಡೆದ ಪೋಷಕಾಂಶ ತಜ್ಞರು ಹಗಲಿರುಳು ದುಡಿದಿರುತ್ತಾರೆ.

5 ನಿದ್ದೆ
ಮಲಗಲು ಹಾಸಿಗೆಯೇನೋ ಇರಬಹುದು. ಆದರೆ ಗುರುತ್ವಾಕರ್ಷಣೆಯೇ ಇಲ್ಲವೆಂದ ಮೇಲೆ ನಿಂತೂ ಮಲಗಬಹುದು, ತೇಲಿಕೊಂಡು ಕೂಡ ಮಲಗಬಹುದು. ಮಲಗಲೆಂದು ಚಿಕ್ಕ ಚಿಕ್ಕ ಫೋನ್‌ ಬೂತ್‌ ತರಹದ ಕೋಣೆಗಳಿದ್ದು ಅದರಲ್ಲಿ ಸ್ಲಿàಪಿಂಗ್‌ ಬ್ಯಾಗ್‌ ಗಳನ್ನು ನೆಲಕ್ಕೆ (ಬಾಹ್ಯಾಕಾಶ ನೌಕೆಯ ತಳ!) ಕಟ್ಟಿ ಬಿಗಿದಿರುತ್ತಾರೆ! ಅದರೊಳಗೆ ತೂರಿಕೊಂಡು ನಿದ್ರಿಸಬಹುದು. ಆಗ ನಿದ್ದೆಯಲ್ಲಿ ತೇಲುತ್ತಾ ಎಲ್ಲೆಲ್ಲೋ ಹೋಗುವುದನ್ನು ತಪ್ಪುವುದು.

– ಅನುಪಮಾ ಬೆಣಚಿನಮರ್ಡಿ

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.