ಹಸಿವು ಕಲಿಸಿದ ಪಾಠ


Team Udayavani, Dec 27, 2018, 6:00 AM IST

23.jpg

ರಾಜಕುಮಾರ ರಾಜ್ಯಪರ್ಯಟನೆಗೆ ಹೊರಟನೆಂದರೆ ಆತನ ಜೊತೆ ಒಬ್ಬ ಅಂಗರಕ್ಷಕ ಆಹಾರ, ನೀರನ್ನು ಮನೆಯಿಂದ ಕಟ್ಟಿಕೊಂಡು ಹೋಗಬೇಕಾಗಿತ್ತು. ಏಕೆಂದರೆ ಅಪ್ಪಿತಪ್ಪಿಯೂ ರಾಜಕುಮಾರ ದಾರಿಯಲ್ಲಿ ಸಿಗುವ ಹೊಳೆಯ ನೀರು ಅಥವಾ ಅರಣ್ಯದಲ್ಲಿ ಸಿಗುವ ಹಣ್ಣುಹಂಪಲನ್ನು ಸೇವಿಸುತ್ತಿರಲಿಲ್ಲ. 

ಕಾಶಂಭಿ ರಾಜ್ಯದಲ್ಲಿ ಸುಶ್ರುತನೆಂಬ ರಾಜಕುಮಾರನಿದ್ದ. ಅವನಿಗೆ ಸ್ವಚ್ಛತೆ ಮತ್ತು ಸೌಂದರ್ಯದ ಮೇಲೆ ಅತಿಯಾದ ಕಾಳಜಿ. ಒಂದು ವಸ್ತುವನ್ನು ಮುಟ್ಟುವುದಕ್ಕೂ ಆತ ಹಿಂದೆ ಮುಂದೆ ನೋಡುತ್ತಿದ್ದ. ಮುಟ್ಟಿದರೆ ಎಲ್ಲಿ ತನಗೆ ಯಾವುದಾದರೂ ರೋಗ ಅಂಟಿಬಿಡುವುದೋ ಎಂಬ ಭಯ ಅವನದ್ದು. ರಾಜನಿಗೆ ವಯಸ್ಸಾಗಿತ್ತು. ವಯಸ್ಸಿಗೆ ಬಂದ ರಾಜಕುಮಾರ ತನ್ನ ಜಾಗ ತುಂಬಿ ಪ್ರಜೆಗಳ ಯೋಗಕ್ಷೇಮ ವಿಚಾರಿಸಲಿ ಎಂಬುದು ಅವನ ಯೋಚನೆಯಾಗಿತ್ತು. ಹೀಗಾಗಿ “ರಾಜನಾದವನು ಪ್ರಜೆಗಳ ಕಷ್ಟ ಸುಖಗಳನ್ನು ವಿಚಾರಿಸಬೇಕಾದುದು ನ್ಯಾಯ. ಹೀಗಾಗಿ ಇನ್ನು ಮುಂದೆ ತಿಂಗಳಿಗೊಮ್ಮೆ ರಾಜ್ಯ ಪರ್ಯಟನೆ ಮಾಡಿ ಬಾ’ ಎಂದ. ಅದರಂತೆ ರಾಜಕುಮಾರ ಪ್ರಜೆಗಳ ಬಳಿ ಹೊರಟ. 

ರಾಜಕುಮಾರನ ಜೊತೆ ಅಂಗ ರಕ್ಷಕರೂ ಇದ್ದರು. ಅವರಿಗೆ ಪ್ರಜೆಗಳ ಯೋಗ ಕ್ಷೇಮ ವಿಚಾರಿಸುವ ಬದಲು ರಾಜಕುಮಾರನ ಯೋಗಕ್ಷೇಮ ನೋಡುವುದೇ ದೊಡ್ಡ ಸಾಹಸವಾಯಿತು. ರಾಜಕುಮಾರ ಹೊರಟನೆಂದರೆ ಆತನ ಜೊತೆ ಒಬ್ಬ ಆಹಾರ-ನೀರು ಎಲ್ಲವನ್ನೂ ಮನೆಯಿಂದ ಕಟ್ಟಿಕೊಂಡು ಹೋಗಬೇಕಾಗಿತ್ತು. ಯಾಕೆಂದರೆ, ಅಪ್ಪಿತಪ್ಪಿಯೂ ರಾಜಕುಮಾರ ದಾರಿಯಲ್ಲಿ ಸಿಗುವ ಹೊಳೆಯ ನೀರು ಅಥವಾ ಅರಣ್ಯದಲ್ಲಿ ಸಿಗುವ ಹಣ್ಣು-ಹಂಪಲನ್ನು ಸೇವಿಸುತ್ತಿರಲಿಲ್ಲ. ಅತಿಯಾದರೆ ಅಮೃತ ಕೂಡಾ ವಿಷವಾದಂತೆ ರಾಜಕುಮಾರನ ವರ್ತನೆ ದಿನ ದಿನಕ್ಕೂ ಮಿತಿ ಮೀರಿತು. ಇದು ರಾಜನಿಗೆ ದೊಡ್ಡ ಸಮಸ್ಯೆ ಆಯಿತು. ಹೀಗೇ ಆದರೆ ರಾಜ್ಯದ ಗತಿ ಏನು? ರಾಜ್ಯ ಪರ್ಯಟನೆ ಮಾಡಿ ಪ್ರಜೆಗಳನ್ನು ನೋಡಿಕೊಳ್ಳುವುದು ಹೇಗೆಂದು ತನ್ನ ದುಃಖವನ್ನು ಮಂತ್ರಿಯ ಬಳಿ ತೋಡಿಕೊಂಡ. ಆಗ ಮಂತ್ರಿಯು ಇದಕ್ಕೊಂದು ಉಪಾಯ ಸೂಚಿಸಿದ. 

ರಾಜಕುಮಾರ ಮುಂದಿನ ಬಾರಿ ರಾಜ್ಯ ಪರ್ಯಟನೆಗೆ ಹೋದಾಗ ಯಥಾ ಪ್ರಕಾರ ಅವನ ಜೊತೆ ಒಬ್ಬ ಅಂಗರಕ್ಷಕ ನೀರು ಮತ್ತು ಆಹಾರವನ್ನು ತೆಗೆದುಕೊಂಡು ಹೊರಟ. ದಾರಿಯಲ್ಲಿ ಕಾಡು ಎದುರಾಯಿತು. ರಾಜಕುಮಾರ ಮುಂದೆ ಸಾಗುತ್ತಿದ್ದಂತೆ ಅವನ ಆಪ್ತ ಅಂಗರಕ್ಷಕ, ಮಂತ್ರಿ ಹೇಳಿ ಕೊಟ್ಟಿದ್ದ ಉಪಾಯದಂತೆ ಮರದ ಹಿಂದೆ ಅವಿತು ಕುಳಿತ. ಉಳಿದವರು ರಾಜಕುಮಾರನೊಂದಿಗೆ ಮುಂದೆ ಸಾಗಿದರು.

ರಾಜಕುಮಾರ ಹಿಂದೆ ಉಳಿದ ಅಂಗರಕ್ಷಕನಿಗಾಗಿ ಕಾದ. ಹೊತ್ತು ಉರುಳುತ್ತಿದ್ದಂತೆ ಹಸಿವು ಮತ್ತು ಬಾಯಾರಿಕೆ ತಡೆಯಲಾಗಲಿಲ್ಲ. ಆತ ಬರುವ ಸೂಚನೆಯೂ ಕಾಣಲಿಲ್ಲ. ಮತ್ತೂಬ್ಬ ಅಂಗರಕ್ಷಕ, “ಇಲ್ಲೇ ಹತ್ತಿರದಲ್ಲಿ ಹಳ್ಳಿಯೊಂದಿದೆ. ರಾತ್ರಿ ಅಲ್ಲೇ ಬಿಡಾರ ಹೂಡಬಹುದು’ ಎಂದ. ಕತ್ತಲಾಗುವ ಮೊದಲು ರಾಜಕುಮಾರ ಹಳ್ಳಿ ತಲುಪಿದ. ಹಳ್ಳಿಯ ಜನರು ರಾಜ ಪರಿವಾರವನ್ನು ಆದರದಿಂದ ಬರಮಾಡಿಕೊಂಡರು. ಜನರು ತಮಗಾಗಿ ತಯಾರಿಸಿದ ಊಟದಲ್ಲೇ ಇವರಿಗೂ ಪಾಲು ನೀಡಿದರು. ರಾಜಕುಮಾರನ ಹಸಿವು ಮಿತಿ ಮೀರಿತ್ತು. “ಹಸಿದವನೇ ಬಲ್ಲ ಅನ್ನದ ರುಚಿ’ ಅನ್ನೋ ಹಾಗೆ ರಾಜಕುಮಾರ ಹೊಟ್ಟೆ ತುಂಬಾ ಊಟ ಮಾಡಿದ. ನಂತರ ಸ್ವಲ್ಪ ಹೊತ್ತು ನೆಲಕ್ಕೆ ತಲೆ ಊರಿದ. ದಣಿದಿದ್ದ ಆತನಿಗೆ ಕಣ್ಣು ತುಂಬಾ ನಿದ್ದೆ ಬಂತು. 

ಮರುದಿನ ಹಳ್ಳಿಗೆ ಒಂದು ಸುತ್ತು ಬಂದ. ಅಲ್ಲಿನ ಜೀವನ, ಶ್ರಮದ ಕೆಲಸ, ಅವರ ನೆಮ್ಮದಿ ಎಲ್ಲವನ್ನೂ ಕಣ್ಣಾರೆ ಕಂಡ. ನಂತರ ಕೆಲವೇ ದಿನಗಳಲ್ಲಿ ರಾಜಕುಮಾರ ಬದಲಾದ. ಅಲ್ಲಿನ ವಾತಾವರಣ ಅವನನ್ನು ಬದಲಾಯಿಸಿತು. ಕೊಳದಲ್ಲಿ ನೀರು ಕುಡಿದ, ಅರಣ್ಯದಲ್ಲಿ ಸಿಗುವ ಹಣ್ಣನ್ನು ತಿಂದ. ಮಂತ್ರಿಯ ಉಪಾಯ ಫ‌ಲಿಸಿತ್ತು. ರಾಜಕುಮಾರ ಬದಲಾಗಿದ್ದನ್ನು ಕಂಡು ರಾಜನಿಗೆ ಸಂತೋಷವಾಯಿತು.

 ಪ್ರೇಮಾ ಲಿಂಗದಕೋಣ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.