ಜಿರಾಫೆ ಜೊತೆ ಊಟ ಮಾಡ್ತೀರಾ?


Team Udayavani, Jul 18, 2019, 5:00 AM IST

u-5

ಪ್ರಾಣಿಗಳ ಜೊತೆ ಆಹಾರ ಸ್ವೀಕರಿಸುವ ವ್ಯವಸ್ಥೆಯಿರುವ ಹೋಟೆಲ್‌ ಬೇರೆಲ್ಲೂ ಇಲ್ಲ. ಆದರೆ ಈ ಹೋಟೆಲ್‌ನಲ್ಲಿ ಜಿರಾಫೆಯೊಂದಿಗೆ ಆಟವಾಡಿ, ಅದರ ಜೊತೆ ಆಹಾರ ಸ್ವೀಕರಿಸುವ ಅವಕಾಶ ಒದಗಿಸಲಾಗಿದೆ. ಈ ಹೋಟೆಲ್‌ನ ಹೆಸರು “ಜಿರಾಫೆ ಮ್ಯಾನರ್‌’!

ಕೀನ್ಯಾದ ನೈರೋಬಿಯ ಲ್ಯಾಂಗ್‌ಟಾ ಉಪನಗರದಲ್ಲಿರುವ ಜಿರಾಫೆ ಮ್ಯಾನರ್‌ ಹೋಟೆಲ್‌ನಲ್ಲಿ ಗ್ರಾಹಕರು ಜಿರಾಫೆಯ ಜೊತೆ ಭೋಜನ ಸವಿಯಬಹುದು. ಒಂದು ಶರತ್ತು ಏನೆಂದರೆ ಇಲ್ಲಿ ಊಟ ಮಾಡಲು, ತಂಗಲು ಒಂದು ವರ್ಷ ಮೊದಲೇ ಕಾಯ್ದಿರಿಸಬೇಕು. ಅಷ್ಟು ಬೇಡಿಕೆ ಈ ಹೋಟೆಲ್‌ಗೆ. ಬೇರೆ ಬೇರೆ ದೇಶಗಳಿಂದ ಜಿರಾಫೆಗಳ ಜೊತೆಗೆ ಉಪಾಹಾರ ಸ್ವೀಕರಿಸಲು ಪ್ರವಾಸಿಗರು ಸಾಲುಸಾಲಾಗಿ ಬರುತ್ತಿದ್ದರೂ ಇಲ್ಲಿ ಇರುವುದು ಕೇವಲ ಹನ್ನೆರಡು ಕೊಠಡಿಗಳು ಮಾತ್ರ.

ಇದು ಹೊಸತೇನಲ್ಲ
1930ರ ದಶಕದಲ್ಲಿ ಇಲ್ಲಿ ಹನ್ನೆರಡು ಎಕರೆ ಜಾಗ ಖರೀದಿ ಮಾಡಿ ಹೋಟೆಲ್‌ ನಿರ್ಮಿಸಿದರೂ ಅಷ್ಟೊಂದು ವ್ಯಾಪಾರ ಇರಲಿಲ್ಲ. 1960ರ ಬಳಿಕ ಹಲವು ಮಂದಿಗೆ ಅದು ಮಾರಾಟವಾದರೂ ಯಾರೂ ಲಾಭ ಮಾಡಿಕೊಳ್ಳಲಿಲ್ಲ. 1974ರಲ್ಲಿ ಜಾಕ್‌ ಲೆಸ್ಲಿ ಮೆಲ್ವಿಲೆ ಎಂಬವನು ತನ್ನ ಅಮೆರಿಕನ್‌ ಪತ್ನಿ ಜೆಟ್ಟಿಯ ಜೊತೆಗೂಡಿ ಹೋಟೆಲನ್ನು ಖರೀದಿಸಿದ. ವ್ಯಾಪಾರದಲ್ಲಿ ಲಾಭವಾಗಬೇಕಿದ್ದರೆ ಏನಾದರೂ ಹೊಸತು ಮಾಡಬೇಕೆಂಬ ಯೋಚನೆಯಿಂದ ಎರಡು ರೋಥ್‌ ಚೈಲ್ಡ್‌ ತಳಿಯ ಜಿರಾಫೆ ಮರಿಗಳನ್ನು ತಂದ. ಅಳಿವಿನಂಚಿನಲ್ಲಿರುವ ಅಪರೂಪದ ತಳಿಯಾದ್ದರಿಂದ ಅದನ್ನು ನೋಡಲು ಜನರು ಬರತೊಡಗಿದರು. ಈಗ ಹೋಟೆಲಿನ ಜಿರಾಫೆ ಸಂಸಾರ ಹತ್ತರ ಸಂಖ್ಯೆ ತಲುಪಿದೆ.

ಸನಿಹದಲ್ಲೇ ಅಭಯಾರಣ್ಯ
ಈಗ ವನ್ಯಜೀವಿ ಸಂರಕ್ಷಣೆಯ ಇಲಾಖೆ ಈ ಜಿರಾಫೆ ಹೋಟೆಲಿನ ಬಳಿ 140 ಎಕರೆ ಅರಣ್ಯ ಬೆಳೆಸಿ ವಿವಿಧ ಪ್ರಾಣಿ, ಪಕ್ಷಿಗಳಿರುವ ಅಭಯಾರಣ್ಯವನ್ನು ರೂಪಿಸಿದೆ. ಹೋಟೆಲ್‌ನಲ್ಲಿ ಒಂದು ದಿನ ಮಾತ್ರ ತಂಗಲು ಅವಕಾಶವಿರುವ ಕಾರಣ ಜಿರಾಫೆಗಳೊಂದಿಗೆ ಇನ್ನಷ್ಟು ಕಾಲ ಇರಬೇಕೆಂದು ಬಯಸುವವರು ಮತ್ತೆ ಮತ್ತೆ ಅಲ್ಲಿಗೆ ಬರುತ್ತಲೇ ಇರುತ್ತಾರೆ. ಜಿರಾಫೆಗಳ ಜೀವನಕ್ರಮವನ್ನು ಅಧ್ಯಯನ ಮಾಡುವವರು ಕೂಡ ಬರುತ್ತಾರೆ.

ಜಿರಾಫೆಗಳ ಮೋಜಿನ ಆಟ
ಇಲ್ಲಿನ ಜಿರಾಫೆಗಳು ಮನುಷ್ಯನನ್ನು ತುಂಬ ಪ್ರೀತಿಸುತ್ತವೆ. ಕಿಟಕಿ, ಬಾಗಿಲುಗಳ ಒಳಗೆ ನೀಳವಾದ ಕೊರಳು ತೂರಿಸಿ ತಿಂಡಿಗಾಗಿ ನಾಲಗೆ ಚಾಚುತ್ತವೆ. ಪ್ರವಾಸಿ ಬಯಸಿದರೆ ಅವನ ತಟ್ಟೆಯಲ್ಲಿರುವ ಆಹಾರವನ್ನು ಜೊತೆಗೆ ಹಂಚಿಕೊಳ್ಳಬಹುದು ಅಥವಾ ಅವುಗಳಿಗಾಗಿ ತಯಾರಿಸಿದ ಹುಲ್ಲಿನ ಉಂಡೆಗಳನ್ನು ಖರೀದಿ ಮಾಡಿ ತಿನ್ನಲು ಕೊಡಬಹುದು. ಬೆಳಗ್ಗೆ ಮತ್ತು ಮಧ್ಯಾಹ್ನ ಜಿರಾಫೆಗಳು ಹೋಟೆಲಿನ ಊಟದ ಕೋಣೆಯ ಕಿಟಕಿಯ ಬಳಿ ತಪ್ಪದೆ ಹಾಜರಾಗಿ, ಅತಿಥಿಗಳು ಕೊಡುವ ಸತ್ಕಾರವನ್ನು ಸ್ವೀಕರಿಸುತ್ತವೆ. ಮಾಲೀಕ ಸನ್ನೆ ಮಾಡಿದರೆ ಮುತ್ತನ್ನೂ ಕೊಡುತ್ತವೆ ಇವು.

– ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.